ಕಾರು ಅಪಘಾತದಲ್ಲಿ ಗಾಯಗೊಂಡು ಗಂಭೀರವಸ್ಥೆಯಲ್ಲಿದ್ದ ಉಡುಪಿ ಜಿಲ್ಲೆಯ ಕಾಪು ನಿವಾಸಿ,ರಿಯಾಝ್ ಕಾಪು ಜುಬೈಲ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಿಯಾಝ್ ಅವರು ಮಾರ್ಚ್ 25 ರಂದು ಜುಬೈಲ್ ನಲ್ಲಿ ರಸ್ತೆ ಅಪಘಾತಕ್ಕಿಡಾಗಿ ಗಂಭೀರವಾದ ಗಾಯದಿಂದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.ಯಾವುದೇ ಚೇತರಿಕೆ ಕಾಣದೆ ಇಂದು ರಿಯಾಝ್ ಕಾಪುರವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.ರಿಯಾಝ್ ರವರ ಅಂತ್ಯಸಂಸ್ಕಾರ ಸೌದಿ ಅರೇಬಿಯಾದಲ್ಲೆ ನಡೆಯುವ ಸಾಧ್ಯತೆ ಇದೆ.