ಬೈಕ್ ಡಿಕ್ಕಿ ಹೊಡೆದು ಆಟೋ ಪಲ್ಟಿ.. ಬೈಕ್ ಸವಾರರು ಬಚಾವ್. ಆಟೋ ಪ್ರಯಾಣಿಕ ಸಾವು.

ಕರಾವಳಿ

ಬಂಟ್ವಾಳ: ಪಾಣೆಮಂಗಳೂರು ಕೆನರಾ ಬ್ಯಾಂಕ್ ಮುಂಭಾಗ ಮಿತಿಮೀರಿದ ವೇಗದಲ್ಲಿ ಬಂದ ಬೈಕ್ ಡಿಕ್ಕಿ ಹೊಡೆದು ಆಟೋ ಪಲ್ಟಿಯಾಗಿದೆ. ಈ ಸಂದರ್ಭ ಆಟೋದಲ್ಲಿದ್ಜ ಪ್ರಯಾಣಿಕ ಸಜಿಪ ಕಂಚಿನಡ್ಕ ಪದವು ನಿವಾಸಿ ಅಲ್ತಾಫ್ ( 20)ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಕೆಲ ಕ್ಷಣದಲ್ಲೇ ಚಿಕಿತ್ಸೆ ಫಲಕಾರಿಯಾಗದೇ ಅಲ್ತಾಫ್ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರು ರಸ್ತೆಗೆಸೆಯಲ್ಪಟ್ಟಿದ್ಜರೂ ಅದೃಷ್ಟವಶಾತ್ ಪಾರಾಗಿದ್ದಾರೆ. ಬೈಕ್ ಸವಾರರ ಪ್ರಾಣ ಉಳಿಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಆಟೋ ರಸ್ತೆಯಲ್ಲೇ ಪಲ್ಟಿಹೊಡೆದು ಪ್ರಯಾಣಿಕ ಅಲ್ತಾಫ್ ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.