ಮುಡಿಪು ಬಳಿ ದುರ್ಘಟನೆ. ಸ್ಟೇರಿಂಗ್ ಕಟ್ಟಾಗಿ ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್; ಸಿಬ್ಬಂದಿಗಳು, ಪ್ರಯಾಣಿಕರು ಅದೃಷ್ಟವಶಾತ್ ಬಚಾವ್.

ಕರಾವಳಿ

ಸಾಲೆತ್ತೂರು-ಮುಡಿಪು-ಮಂಗಳೂರು ರಸ್ತೆಯ ಮುಡಿದು ಸಮೀಪದ ಪಾತೂರು ಎಂಬಲ್ಲಿ ಸಂಚರಿಸುತ್ತಿದ್ದ ‘ಅದ್ದಾದಿಯಾ’ ಹೆಸರಿನ ಖಾಸಗಿ ಬಸ್ ಸ್ಟೇರಿಂಗ್ ತುಂಡಾಗಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ತಾಂತ್ರಿಕ ಅಪಘಾತದ ಸಂದರ್ಭ ಚಾಲಕನ ಸಮಯ ಪ್ರಜ್ಞೆ ಯಿಂದಾಗಿ ಬಸ್ಸಿನಲ್ಲಿದ್ದ ಸಿಬ್ಬಂದಿಗಳು ಮತ್ತು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೇ ಬಚಾವಾಗಿದ್ದಾರೆ.