ಮಾಲ್ಡೀವ್ಸ್: ಸ್ಪೀಡ್ ಬೋಟ್ ಅಪಘಾತ; ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಪಾರು, ಇಬ್ಬರು ಭಾರತೀಯರು ನಾಪತ್ತೆ

ಮಾಲ್ಡೀವ್ಸ್ ಸಮೀಪ ನಡೆದ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಶುಕ್ರವಾರ ಮುಂಜಾನೆ ಮಾಲ್ಡೀವ್ಸ್‌ನ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಮಗುಚಿ ಬಿದ್ದಿದೆ. ಈ ದುರಂತದಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಕರು ಇದ್ದರು. ಅವರಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಸಿಂಘಾನಿಯಾ ಕೂಡ […]

Continue Reading

ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ, ನೀಡಲಿರುವ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾಕೃತಿಗಳಿಗೆ ಆಹ್ವಾನ

ಉಡುಪಿ : ಆದರ್ಶ ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ. ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯಲ್ಲಿ ಉಡುಪಿ ರಂಗಭೂಮಿಯು, ಅಂಬಾತನಯ ಮುದ್ರಾಡಿಯವರ ಹೆಸರಿನ ಪುಸ್ತಕ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ನೀಡುತ್ತಾ ಬಂದಿದೆ. ‘ಅಂಬಾತನಯ ಮುದ್ರಾಡಿಯವರ ಸಂಸ್ಕರಣೆಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ಪುಸ್ತಕ ಪ್ರಶಸ್ತಿಯು ಪ್ರತಿವರ್ಷ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ […]

Continue Reading

ಮೂಲಸೌಕರ್ಯದ ಮೇಲಿನ ದಾಳಿಗೆ ಇರಾನ್ ಆಕ್ರೋಶ; ಇಂತಹ ದಾಳಿ ನಡೆದರೆ ನಿಮ್ಮ ಮಿತ್ರ ರಾಷ್ಟ್ರಗಳನ್ನು ಸಂಪೂರ್ಣ ನಾಶ ಮಾಡದೆ ಬಿಡುವುದಿಲ್ಲ: ಇರಾನ್ ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಮ್ಮೆ ಇಂತಹ ದಾಳಿ ನಡೆದರೆ ಯಾವುದೇ ಒತ್ತಡಕ್ಕೂ ಮಣಿಯದೆ “ಅನಿಯಂತ್ರಿತ ಪ್ರತಿದಾಳಿ” ನಡೆಸುವುದಾಗಿ ಇರಾನ್ ಸ್ಪಷ್ಟ ಎಚ್ಚರಿಕೆ ನೀಡಿದೆ. ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿ ನಡೆಸಿದರೆ ಗಲ್ಫ್ ಪ್ರದೇಶದ ತೈಲ ಹಾಗೂ ಅನಿಲ ವಲಯವನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಇಸ್ರೇಲ್’ಗೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ […]

Continue Reading

ಕಾನೂನು ಕೈಗೆತ್ತಿಕೊಂಡು ಅನೈತಿಕ ಗೂಂಡಾಗಿರಿ ನಡೆಸಿದ ಕೋಮುವಾದಿಗಳನ್ನು, ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಬೇಕು: ಶೇಖರ್ ಲಾಯಿಲ

ಉಜಿರೆ: ಸರ್ವಧರ್ಮದ ಭಾವೈಕ್ಯತೆಯಿಂದ ನಡೆದ ಉಜಿರೆಯ ಬ್ರಹ್ಮಕಲಶಕ್ಕೆ ಸ್ನೇಹಿತರ ಜೊತೆಗೂಡಿ ತೆರಳಿದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯ ಮೇಲೆ ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ನಡೆಸಿದ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ಅತ್ಯಂತ ಖಂಡನೀಯ. ಸರ್ವಜನಾಂಗದ ಶಾಂತಿಯ ತೋಟವನ್ನು ಹಾಳುಗೇಡುವುವ ಸಂಘಪರಿವಾರದ ಕುತಂತ್ರ ಮತ್ತು ಶಾಸಕರ ದ್ವೇಷಕೋರತನದ ಭಾಗವಾಗಿ ಸಂಘಿ ಗೂಂಡಾಗಳು ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಉಜಿರೆ ಬ್ರಹ್ಮಕಲಶವು ಹಿಂದೂ , ಮುಸ್ಲಿಂ, ಕ್ರೈಸ್ತ ಸಮುದಾಯದ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಇದನ್ನು ಸಹಿಸದ ಸಂಘಪರಿವಾರ ಕಾರ್ಯಕ್ರಮಕ್ಕೆ […]

Continue Reading

ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ: ಆರೋಪಿಗಳು ಪರಾರಿ, ಸ್ವತ್ತು ವಶ, ಪ್ರಕರಣ ದಾಖಲು

ಎಡಪದವು ಸಾಸ್ತಾವು ದೇವಸ್ಥಾನದ ಬಳಿ ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ನಾಲ್ಕು ದನಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಬಜಪೆ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 18 ರಂದು ಮುಂಜಾನೆ 4:45 ರ ವೇಳೆಗೆ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಬಳಿ ದನಕಳವು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಫಾರ್ಚೂನರ್ […]

Continue Reading

ಕೆ.ಎಂ ಇಬ್ರಾಹಿಂ ಮಾಸ್ಟರ್ ಎಂಬ ಸಮುದಾಯದ ದ್ವನಿ; ಸರ್ವದರ್ಮೀಯರ ದೋತಕ– ಕೆ.ಎಂ. ಇಬ್ರಾಹಿಂ ಮಾಸ್ಟರ್ ಅವರ ರಾಜಕೀಯ ಪಯಣ

ಕೆ.ಎಂ ಇಬ್ರಾಹಿಂ ಮಾಸ್ಟರನ್ನು ಚಿವುಟಿದ ಬಂಟ್ವಾಳದ ಜಾತ್ಯತೀತ ಎಂಬ ಹಣೆಪಟ್ಟಿಯ ನಾಯಕ ಯಾರು? ಎಂಬ ಪ್ರಶ್ನೆಗಳು ಇನ್ನೂ ಚರ್ಚೆಯಾಗುತ್ತಿವೆ ಕೆ.ಎಂ.ಇಬ್ರಾಹಿಂ ಮಾಸ್ಟರ್ ಎಂಬ ಸಮುದಾಯದ ದ್ವನಿ, ಸರ್ವದರ್ಮೀಯರ ಪ್ರೀತಿಯ ದೋತಕ ಎಂದೇ ಗುರುತಿಸಿಕೊಂಡ ನಾಯಕತ್ವ ವಿಟ್ಲ ಪ್ರದೇಶದಲ್ಲಿ ವಿಶಿಷ್ಟ ಗುರುತು ಮೂಡಿಸಿತು. ಧರ್ಮ, ಜಾತಿ, ವರ್ಗ ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಅವರಲ್ಲಿತ್ತು. ಅವರ ಸೌಹಾರ್ದ ರಾಜಕೀಯವೇ ಜನಮನ ಗೆದ್ದ ಪ್ರಮುಖ ಅಸ್ತ್ರವಾಗಿತ್ತು. ವಿಟ್ಲ ಪೇಟೆಯ ಪರಿವರ್ತನೆಗೆ ಚಾಲನೆವಿಟ್ಲ ಪೇಟೆಯೆಂಬ ಇಕ್ಕಟ್ಟಿನ ರಸ್ತೆಯನ್ನು ಖಾಸಗೀತ್ವದ ಕಾಲಘಟ್ಟದಲ್ಲಿ […]

Continue Reading

ಯುದ್ಧದ ಅಮಾನವೀಯ ಮುಖ. ಇರಾನ್ ಯುದ್ಧ, ಗಾಝಾ ಯುದ್ಧ, ಮುಗ್ಧ ಜನರ ಹತ್ಯೆ, ಮತ್ತು ಅಣುಯುದ್ಧದ ಭೀತಿ

ಅಮೆರಿಕಾದ ಮೂರ್ಖತನ, ಇಸ್ರೇಲಿನ ರಕ್ತದಾಹ, ಮತ್ತು ಮುಗ್ಧ ಜನರ ಹತ್ಯಾಕಾಂಡ ಲೇಖಕರು: ಇಸ್ಮಾಯಿಲ್ ಎಸ್., ವಕೀಲರು, ಮಂಗಳೂರು ಇತಿಹಾಸದ ಪುಟಗಳಲ್ಲಿ ಸಾವಿರಾರು ಯುದ್ಧಗಳು ದಾಖಲೆಗಳಾಗಿವೆ. ಈ ಯುದ್ಧಗಳ ಪಟ್ಟಿಗೆ ಹೊಸದಾಗಿ ಸೇರಿರುವುದೇ 2023ರ ಅಕ್ಟೋಬರ್ 7ರಿಂದ ಪ್ರಾರಂಭವಾದ ಗಾಝಾ ಯುದ್ಧ ಮತ್ತು 2026ರ ಫೆಬ್ರವರಿ 28ರಿಂದ ಆರಂಭವಾದ ಅಮೇರಿಕ – ಇಸ್ರೇಲ್ – ಇರಾನ್ ಯುದ್ಧ – ಈ ಎರಡು ಯುದ್ಧಗಳು ಮತ್ತೊಮ್ಮೆ ಅಮಾಯಕ ಜನರನ್ನು ವಿಶೇಷತಃ ಮುಗ್ಧ ಮಕ್ಕಳನ್ನು ಮತ್ತು ಮಹಿಳೆಯರನ್ನು ರಕ್ತದ ಮಡುವಿನಲ್ಲಿ ಮುಳುಗಿಸಿವೆ, […]

Continue Reading

ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ನಿರಾಧಾರ; ಲಂಚ, ದುಷ್ಕೃತ್ಯದ ಬಗ್ಗೆ ಸುಳ್ಳಾರೋಪ; ಇಲಾಖೆ ತನಿಖೆಯಿಂದ ಸಾಬೀತು

ಫೋನ್ ಸಂಭಾಷಣೆಯಲ್ಲಿ ಅಸಭ್ಯ ವರ್ತನೆ: ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್ ಭಾರೀ ಚರ್ಚೆಗೆ ಕಾರಣವಾಗಿದ್ದ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಬಿ.ಜಿ . ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಆಡಿಯೋ ಮತ್ತು ವಿಡಿಯೋಗಳು ದೃಢಪಡಿಸುವುದರಿಂದ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಇನ್ ಸ್ಪೆಕ್ಟರ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಉತ್ತರ […]

Continue Reading

ಮೂಡಬಿದ್ರೆ: ಇನ್ಸ್ ಪೆಕ್ಟರ್ ಸಂದೇಶ್ ಸಂಚಿಗೆ ಬಲಿಯಾದ್ರ.? ದುಷ್ಟ ಕೂಟಗಳು ಹೆಣೆಯಿತಾ ಖೆಡ್ಡಾ.!

ಕೋಮು ದ್ವೇಷಿಗಳ, ಮತೀಯವಾದಿ ಗೂಂಡಾಗಳ ನಟ್ಟು ಬೋಲ್ಟ್ ಟೈಟ್ ಮಾಡಿದ ಅಧಿಕಾರಿಗೆ ತೋಡಿದರಾ… ಖೆಡ್ಡಾ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಡಕ್, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದು ಪೊಲೀಸ್ ಅಧಿಕಾರಿ ಆಗಿರಲಿ, ಸರಕಾರಿ ಅಧಿಕಾರಿ ಆಗಿರಲಿ ಇಲ್ಲಿ ಪ್ರಾಮಾಣಿಕ ಸೇವೆ ಮಾಡುವವರನ್ನು ಹೇಗಾದರೂ ಸಿಲುಕಿಸಿ ಮಜಾ ಕಾಣುವ ದುಷ್ಠ ಕೂಟ ಸಕ್ರೀಯವಾಗಿದೆ. ಆದರೆ ಅಡ್ಜೆಸ್ಟ್ ಮೆಂಟ್ ಅಧಿಕಾರಿಗಳಿಗೆ ಮಾತ್ರ ಇಲ್ಲಿ ಬೆಲೆ, ನೆಲೆ ಎಲ್ಲಾ ಇರುವುದು. ಒಬ್ಬ ಮಹಿಳೆ ಜೊತೆಗೆ […]

Continue Reading

ಬಂಟ್ವಾಳದಲ್ಲಿ ಕಲ್ಲಡ್ಕ ಭಟ್ರು ವರ್ಸಸ್ ನಾಯಕ್; ಯಾರ ಕೈ ಮೇಲಾಗಲಿದೆ..?

ಅಭ್ಯರ್ಥಿತನಕ್ಕೆ ಟವೆಲ್ ಹಾಕಿ ಕೂತವರು ಯಾರು ಗೊತ್ತೇ..? ಬಂಟ್ವಾಳದ ಬಿಜೆಪಿ ಚಿತ್ತ ಎತ್ತ.! ಶಿಸ್ತಿನ ಪಕ್ಷ ಎಂದು ಸ್ವಯಂಗೊಶಿಸಿಕೊಂಡಿರುವ ಬಿಜೆಪಿಯಲ್ಲಿ ಅಶಿಸ್ತು ಮೇಳೈಸುತ್ತಿದೆ. ಹಾಲಿ ಶಾಸಕರು ಇರುವಾಗಲೇ ಬಿಜೆಪಿಯಲ್ಲಿ ಮುಂದಿನ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ತಿರುಗಾಡುವವರ ಸಂಖ್ಯೆ ಬೆಳೆಯುತ್ತಿದೆ. ಸಂಘ ಕಲಿಸಿದ ಶಿಸ್ತು ಮರೆಯಾಗಿ ಅಧಿಕಾರವೇ ಮುಖ್ಯವಾಯಿತಲ್ಲ ಅನ್ನುವ ಮಾತುಗಳು ಬಿಜೆಪಿಯ ನಿಷ್ಠಾವಂತರೊಳಗಡೆ ಕೇಳಿ ಬರುತ್ತಿದೆ. ಬಂಟ್ವಾಳ ಬಿಜೆಪಿ ಪಡಸಾಲೆಯಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಶಾಸಕ ರಾಜೇಶ್ ನಾಯಕರು ಈ ರಾಜಕಾರಣದ […]

Continue Reading