ಕರಾವಳಿ
ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಖಾಸಗೀಕರಣ; ಮೇ 26 ರಂದು ಮಂಗಳೂರಿನಲ್ಲಿ ದುಂಡು ಮೇಜಿನ ಸಭೆ
ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ, ಆರೋಗ್ಯ ಕ್ಷೇತ್ರದ ಖಾಸಗೀಕರಣದ ನೀತಿಯ ಕುರಿತು ಚರ್ಚಿಸಲು, ಮುಂದಿನ ಹೋರಾಟವನ್ನು ತೀರ್ಮಾನಿಸಲು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯು ಮೇ 26 ರಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರು ನಗರದ ಸಹೋದಯ ಸಭಾಂಗಣದಲ್ಲಿ ದುಂಡು ಮೇಜಿನ ಸಭೆಯನ್ನು ಆಯೋಜಿಸಿದೆ. ಸಭೆಯಲ್ಲಿ ಎಡಪಕ್ಷಗಳು, ರೈತ, ದಲಿತ, ಕಾರ್ಮಿಕ, ಯುವಜನ, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಬರಹಗಾರರು, ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಪ್ರಕಟನೆ ತಿಳಿಸಿದೆ. ಇಂದು ಜಿಲ್ಲಾ ಪ್ರವಾಸದಲ್ಲಿದ್ದ […]
ಬೆಳ್ತಂಗಡಿ: ಮಡಿವಾಳ ಕುಟುಂಬದ ಪಡಿತರ ಚೀಟಿಯಲ್ಲಿ ಬಂಟ ಸಮುದಾಯದ ಹೆಸರು ಸೇರ್ಪಡೆ..!
ವಿಕಲಚೇತನ ಹೆಸರಿನಲ್ಲಿ ಮಂಜೂರಾಗಿರುವ ನ್ಯಾಯಬೆಲೆ ಅಂಗಡಿ ಮುಕ್ಕಲು ಷಡ್ಯಂತ್ರ.. ಆಹಾರ ಇಲಾಖೆ ಅಧಿಕಾರಿಗಳು ಸಾಥ್. ಬೆಳ್ತಂಗಡಿ ತಾಲೂಕಿನ ಕೋಡಿಬೆಟ್ಟು ನಿವಾಸಿಯಾಗಿರುವ ತ್ಯಾಂಪಣ್ಣ ಮಡಿವಾಳರ ಪತ್ನಿಯಾಗಿರುವ ಅಮಿತಾ ಎಂಬವರು ನಂ. 110100157404 ನ ಆದ್ಯತಾ ಕುಟುಂಬಕ್ಕೆ ಮೀಸಲಾಗಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದು, ಪಡಿತರ ಚೀಟಿಯಲ್ಲಿ ಅವರ ಮಗಳಾದ ಕೆ.ನಿಕ್ಷಿತಾ ಳ ಹೆಸರು ಇದೆ . ಕೆ. ನಿಕ್ಷಿತಾ ಎಂಬಾಕೆ ವಿಕಲಚೇತನಳಾಗಿದ್ದು , ಮನೆಯಲ್ಲಿಯೇ ಇರುತ್ತಾಳೆ. ಆಕೆಯ ಹೆಸರಿನಲ್ಲಿ 21 ಎಂವಿಎಸ್ಎಸ್ ಗುರುವಾಯನಕೆರೆ ನ್ಯಾಯಬೆಲೆ ಅಂಗಡಿಯ ಪರವಾನಗಿ ಇರುತ್ತದೆ. […]
ರಾಜ್ಯ
ಫೈನಲ್ ಸೆಟ್ಲ್ ಮೆಂಟಿಗೆ ಸಿದ್ರಾಮಯ್ಯ ರೆಡಿ; ರಾಹುಲ್ ಗೆ ಕಾಡುತ್ತಿರುವ ಚಿಂತೆ, ಕೈ ಪಾಳಯದಿಂದ ದಿಲ್ಲಿ ಅಭ್ಯರ್ಥಿ.?
ಕೆ.ಸಿ.ವೇಣು ಮುನಿಸು, ಸಂತೈಸುವ ರಾಹುಲ್ ಯತ್ನಕ್ಕೆ ಮನ್ಸೂರ್ ಅಲಿ ಖಾನ್ ಆಸರೆ ✍️. ಆರ್.ಟಿ.ವಿಠ್ಠಲಮೂರ್ತಿ ಸಿಎಂ ಸಿದ್ಧರಾಮಯ್ಯ ಈ ಬಾರಿ ಫೈನಲ್ ಸೆಟ್ಲ್ ಮೆಂಟ್ ಗೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ‘ನಿಮ್ಮ ಜತೆ ಮಾತನಾಡಬೇಕು ಟೈಮು ಕೊಡಿ’ ಅಂತ ರಾಹುಲ್ ಗಾಂಧಿಯವರನ್ನು ಕೇಳಿಕೊಂಡಿದ್ದಾರೆ. ಅಂದ ಹಾಗೆ ಸಿದ್ಧರಾಮಯ್ಯ ಅವರು ಸೆಟ್ಲ್ ಮಾಡಿಕೊಳ್ಳಲು ನಿರ್ಧರಿಸಿರುವ ವಿಷಯ ಯಾವುದು ಎಂಬುದು ರಹಸ್ಯವೇನಲ್ಲ. ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ವೆಂಕಟೇಶ್ವರ ಸ್ತೋತ್ರದಂತಾಗಿರುವ ಅಧಿಕಾರ ಹಂಚಿಕೆಯ ಮಾತನ್ನು ಸೆಟ್ಲ್ ಮಾಡಿಕೊಳ್ಳುವುದು ಸಿದ್ಧರಾಮಯ್ಯ […]
ಮಹಾ ವಂಚಕ, ಅವತಾರ ಪುರುಷ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಜೈಲು ಪಾಲು
ಸಿನಿಮಾ ಸ್ಟೈಲ್ನಲ್ಲಿ ಅಬ್ಬರಿಸುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ. ಮುಗ್ಧ ಜನರಿಗೆ ವಾರ್ಷಿಕ ಬರೋಬ್ಬರಿ 36% ಬಡ್ಡಿಯ ಆಮಿಷ ಒಡ್ಡಿ, ಬರೊಬ್ಬರಿ 4,500 ಕೋಟಿ ರೂಪಾಯಿ ಲೂಟಿ ಹೊಡೆದಿದ್ದ ಈ ಮಹಾ ವಂಚಕನ ಸಾಮ್ರಾಜ್ಯದ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸರು ನಡುರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ ಸಿಕ್ಕ ರಹಸ್ಯ ದಾಖಲೆಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಹಣ ವಂಚನೆ ಆರೋಪದಡಿ ಅವತಾರ ಪುರುಷ ಶಿವಾನಂದ ನೀಲಣ್ಣವರ್ ವಿರುದ್ಧ […]
ರಾಷ್ಟ್ರೀಯ
ಮಾಡೆಲಿಂಗ್ ಹೆಸರಲ್ಲಿ ಚರ್ಮ ದಂಧೆ.!, ಭೂಗತ ಗ್ಯಾಂಗ್ಸ್ಟರ್ ಗಳು, ತಾರೆಯರು ಭಾಗಿ ಶಂಕೆ.
ವಿದೇಶದ ಉದ್ಯೋಗ ಹಾಗೂ ಮಾಡೆಲಿಂಗ್ ಆಸೆ ಹುಟ್ಟಿಸಿ, ಯುವತಿಯರನ್ನು ವಿದೇಶಕ್ಕೆ ಕರೆಸಿಕೊಂಡು ಲೈಂಗಿಕ ದಂಧೆಗೆದೂಡುತ್ತಿದ್ದ ತನಿಖೆಯನ್ನು ಇದೀಗ ತಾರೆಗಳು ಮತ್ತು ಪ್ರಭಾವಿ ಗ್ಯಾಂಗ್ಗಳಿಗೂ ವಿಸ್ತರಿಸಲಾಗಿದೆ.ಈ ಪ್ರಕರಣದ ಮುಖ್ಯ ಆರೋಪಿ ಆಲುವಾದ ತೈನಾಟ್ ನಿವಾಸಿ ಸಿಂಧು ಅವರ ಮಗ ಹಾಗೂ ಮಗಳು ನಡೆಸುತ್ತಿರುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯು ಚಿತ್ರರಂಗದ ಹಲವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದ್ದು, ಯುವತಿಯರನ್ನು ಸೆಳೆಯುವಲ್ಲಿ ಇವರ ಪ್ರಭಾವ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣದ ಎರಡನೇ ಆರೋಪಿ ತಿರುವನಂತಪುರ ನಿವಾಸಿ ಅಲೀನಾ ಪ್ರಸ್ತುತ […]
ಭಾರತಕ್ಕೂ ಎಬೋಲಾ ಭೀತಿ.! ಮತ್ತೊಮ್ಮೆ ಆಗುತ್ತಾ ಲಾಕ್ ಡೌನ್.?
ಆಫ್ರಿಕಾ ದೇಶದಲ್ಲಿ ಕಂಡು ಬಂದಿರುವ ಎಬೋಲಾ ವೈರಸ್ಗೆ ಯಾವುದೇ ಅಧಿಕೃತ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಈ ವೈರಸ್ ಸೋಂಕು ತಗುಲಿದರೆ ಸಾವಿನ ಪ್ರಮಾಣ ಅತ್ಯಂತ ಹೆಚ್ಚಾಗಿರುತ್ತದೆ. ಇದು ಕೋವಿಡ್ ನಂತೆ ಅತಿ ವೇಗವಾಗಿ ಹರಡುವ ಸಾಧ್ಯತೆ ತೀರಾ ಕಡಿಮೆಯಂತೆ. ಈ ವೈರಸ್ ಮೂಲತಃ ಫ್ರೂಟ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇನ್ನು ಮನುಷ್ಯರಿಂದ ಮನುಷ್ಯರಿಗೆ ಹರಡಲು ಸೋಂಕಿತರ ರಕ್ತ ಅಥವಾ ಶರೀರದ ದ್ರವಗಳ ನೇರ ಸಂಪರ್ಕ ಅಗತ್ಯವಾಗಿರುತ್ತದೆ. ಸದ್ಯಕ್ಕೆ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೂ, […]
ಅಂತಾರಾಷ್ಟ್ರೀಯ
ಸೌದಿ ಅರೇಬಿಯಾ: ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ
ರಿಯಾದ್: ಕರ್ನಾಟಕ ಅನಿವಾಸಿ ಒಕ್ಕೂಟದ ಪ್ರಥಮ ಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್ನಲ್ಲಿರುವ ಬತಫನ ರೆಸ್ಟೋರೆಂಟ್ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಿಯಾಝ್ ಇನೋಳಿ ಕರ್ನಾಟಕದ ಅನಿವಾಸಿಗಳನ್ನು ಒಟ್ಟುಗೂಡಿಸುತ್ತಿರುವ ಉದ್ದೇಶ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಉದ್ಯೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಸರಕಾರವು ಅನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು. ಕರ್ನಾಟಕ ಸರಕಾರದ ಆರ್ಥಿಕ ಬೆನ್ನೆಲುಬಾಗಿರುವ ಅನಿವಾಸಿಗಳ ಬಗ್ಗೆ ಕರ್ನಾಟಕ ಸರಕಾರ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಗಲ್ಪ್ ಜೀವನದಿಂದ […]
ಪೊನ್ನಂ ಪೇಟೆ ಕುಟ್ಟಂ ಸಮೀಪದ ದೇವಿ ವಿಲ್ಲಾ ಹೋಂಸ್ಟೇ ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ
ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ಹೋಮ್ಸ್ಟೇ ಕೆಲಸಗಾರ ಅತ್ಯಾಚಾರ ಎಸಗಿದ್ದು, ಬಳಿಕ ಮಾಲೀಕ ಸೇರಿ ಆಕೆಯನ್ನು ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕಾದಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಲ್ಲಿನ ‘ದೇವಿ ವಿಲ್ಲಾ’ ಎಂಬ ಹೋಮ್ಸ್ಟೇನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ, ಮಹಿಳೆಗೆ ಡ್ರಿಂಕ್ಸ್ ನೀಡಿ ಅಮಲೇರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಮಹಿಳೆಯ ಸಹಾಯಕ್ಕೆ […]
