Breaking News

ಕರಾವಳಿ

ಮಂಗಳೂರು, ಬಂಟ್ವಾಳ ಆಡಳಿತ ಸೌಧ; ಹೇಳೋರಿಲ್ಲ.. ಕೇಳೋರಿಲ್ಲ.. ಇವರು ಆಡಿದ್ದೇ ಆಟ, ಆಧಿಕಾರಿಗಳದ್ದೇ ದರ್ಬಾರ್

‘ಸರಕಾರಿ ಕೆಲಸ ದೇವರ ಕೆಲಸ ‘ ಅನ್ನಲಾಗುತ್ತಿದೆ. ಇದೆಲ್ಲ ಈಗ ಮರೀಚಿಕೆಯಾಗಿಬಿಟ್ಟಿದೆ. ಜನರಿಗೆ ಸೇವೆ ನೀಡಲು ಸರಕಾರಿ ಕೆಲಸಕ್ಕೆ ಸೇರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಎಷ್ಟು ಸಿಗುತ್ತೋ ಅಷ್ಟು ಬಾಚಿ ತಿನ್ನುವುದನ್ನೇ ಸರಕಾರಿ ಕೆಲಸ ಅಂದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಜನಸಾಮಾನ್ಯರು ಕೆಲಸಕ್ಕಾಗಿ ಸರಕಾರಿ ಕಚೇರಿಗೆ ಬಂದರೆ ಅಲೆದಾಡುವುದೇ ಆಗಿ ಬಿಟ್ಟಿದೆ. ಅದರಲ್ಲೂ ಮಂಗಳೂರಿನ ಮಿನಿ ವಿಧಾನಸೌಧ, ಬಂಟ್ವಾಳದ ಮಿನಿ ವಿಧಾನಸೌಧದ ಕಥೆಯೇ ಖರಾಬ್ ಆಗಿ ಬಿಟ್ಟಿದೆ. ಬಂಟ್ವಾಳ ಮಿನಿ ವಿಧಾನಸೌಧದ ಖದರ್ರೆ ಕರಕಲಾಗಿದೆ. ಇಲ್ಲಿನ ಮಿನಿ ವಿಧಾನಸೌಧದ […]

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸಮರ್ಥನೆ ಹಾಸ್ಯಾಸ್ಪದ. ನೈತಿಕತೆ ಇದ್ದಲ್ಲಿ ಹರೀಶ್ ಕುಮಾರ್ ಬಹಿರಂಗ ಚರ್ಚೆಗೆ ಬರಲಿ: ಸಿಪಿಐಎಂ

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ರಾಜ್ಯ ಸರಕಾರದ ತೀರಾ ಜನವಿರೋಧಿ, ಖಾಸಗೀಕರಣದ ಆದೇಶವನ್ನು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಮರ್ಥಿಸಿರುವುದು,ಖಾಸಗೀಕರಣ ವಿರೋಧಿಸುತ್ತಿರುವವರನ್ನು ಅವಹೇಳನಗೈದಿರುವುದು ವಿಷಾದನೀಯ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ. ಖಾಸಗೀ ಮೆಡಿಕಲ್ ಕಾಲೇಜುಗಳು ಸರಕಾರಿ ಆಸ್ಪತ್ರೆಗಳನ್ನು ಯಾವುದೆ ಫಲಾಪೇಕ್ಷೆ ಇಲ್ಲದೆ ತಳಮಟ್ಟದಿಂದಲೆ ಉದ್ದಾರ ಮಾಡುವ ಕುರಿತು ಹರೀಶ್ ಕುಮಾರ್ ಅವರಿಗೆ ಅಷ್ಟೊಂದು ನಂಬಿಕೆ ಇದ್ದಲ್ಲಿ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಸಿಪಿಐಎಂ […]

ರಾಜ್ಯ

ಫೈನಲ್ ಸೆಟ್ಲ್ ಮೆಂಟಿಗೆ ಸಿದ್ರಾಮಯ್ಯ ರೆಡಿ; ರಾಹುಲ್ ಗೆ ಕಾಡುತ್ತಿರುವ ಚಿಂತೆ, ಕೈ ಪಾಳಯದಿಂದ ದಿಲ್ಲಿ ಅಭ್ಯರ್ಥಿ.?

ಕೆ.ಸಿ.ವೇಣು ಮುನಿಸು, ಸಂತೈಸುವ ರಾಹುಲ್ ಯತ್ನಕ್ಕೆ ಮನ್ಸೂರ್ ಅಲಿ ಖಾನ್ ಆಸರೆ ✍️. ಆರ್.ಟಿ.ವಿಠ್ಠಲಮೂರ್ತಿ ಸಿಎಂ ಸಿದ್ಧರಾಮಯ್ಯ ಈ ಬಾರಿ ಫೈನಲ್ ಸೆಟ್ಲ್ ಮೆಂಟ್ ಗೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ‘ನಿಮ್ಮ ಜತೆ ಮಾತನಾಡಬೇಕು ಟೈಮು ಕೊಡಿ’ ಅಂತ ರಾಹುಲ್ ಗಾಂಧಿಯವರನ್ನು ಕೇಳಿಕೊಂಡಿದ್ದಾರೆ. ಅಂದ ಹಾಗೆ ಸಿದ್ಧರಾಮಯ್ಯ ಅವರು ಸೆಟ್ಲ್ ಮಾಡಿಕೊಳ್ಳಲು ನಿರ್ಧರಿಸಿರುವ ವಿಷಯ ಯಾವುದು ಎಂಬುದು ರಹಸ್ಯವೇನಲ್ಲ. ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ವೆಂಕಟೇಶ್ವರ ಸ್ತೋತ್ರದಂತಾಗಿರುವ ಅಧಿಕಾರ ಹಂಚಿಕೆಯ ಮಾತನ್ನು ಸೆಟ್ಲ್ ಮಾಡಿಕೊಳ್ಳುವುದು ಸಿದ್ಧರಾಮಯ್ಯ […]

ಮಹಾ ವಂಚಕ, ಅವತಾರ ಪುರುಷ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಜೈಲು ಪಾಲು

ಸಿನಿಮಾ ಸ್ಟೈಲ್‌ನಲ್ಲಿ ಅಬ್ಬರಿಸುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ. ಮುಗ್ಧ ಜನರಿಗೆ ವಾರ್ಷಿಕ ಬರೋಬ್ಬರಿ 36% ಬಡ್ಡಿಯ ಆಮಿಷ ಒಡ್ಡಿ, ಬರೊಬ್ಬರಿ 4,500 ಕೋಟಿ ರೂಪಾಯಿ ಲೂಟಿ ಹೊಡೆದಿದ್ದ ಈ ಮಹಾ ವಂಚಕನ ಸಾಮ್ರಾಜ್ಯದ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸರು ನಡುರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ ಸಿಕ್ಕ ರಹಸ್ಯ ದಾಖಲೆಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಹಣ ವಂಚನೆ ಆರೋಪದಡಿ ಅವತಾರ ಪುರುಷ ಶಿವಾನಂದ ನೀಲಣ್ಣವರ್ ವಿರುದ್ಧ […]

ರಾಷ್ಟ್ರೀಯ

ಜಾತ್ಯತೀತ ಪಕ್ಷ ಬಿಟ್ಟು ಬಿಜೆಪಿ ಸೇರಿ ‘ಕಟ್ಟರ್ ಹಿಂದುತ್ವ ನಾಯಕ’ರಾದರು; ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕರೇ ಮುಖ್ಯಮಂತ್ರಿಗಳು

ನೀವು ನಂಬಿದರೆ ನಂಬಿ, ಇಲ್ಲದಿದ್ದರೆ ಬಿಡಿ. ಕಾಂಗ್ರೆಸ್ ಆದಿಯಾಗಿ ಜಾತ್ಯತೀತ ಪಕ್ಷದಲ್ಲಿ ನಾಯಕರಾಗಿ ಗುರುತಿಸಿ ಬಿಜೆಪಿ ಸೇರಿದ ಬಹುತೇಕ ನಾಯಕರು ಇಂದು ರಾಜಕಾರಣದಲ್ಲಿ ಕಟ್ಟರ್ ಹಿಂದುತ್ವ ನಾಯಕರಾಗಿ ಮಿಂಚುತ್ತಿದ್ದಾರೆ. ಅದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಬಹುನಿರೀಕ್ಷಿತ ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಕಮಲ ಕಮಾಲ್ ಮಾಡಿದೆ. ಕೇರಳದಲ್ಲಿ ಎಡಪಕ್ಷಗಳ ಆಟ ಮುಕ್ತಾಯವಾಗಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ಗಳಿಸಿದೆ. ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಿದ ಎರಡೇ ವರ್ಷದಲ್ಲಿ ಜೋಸೆಫ್ ವಿಜಯ್ ರ […]

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟದಲ್ಲಿ ಭಾರತದ ಐತಿಹಾಸಿಕ ಯಶಸ್ಸು; 182 ಕೋಟಿ ರೂಪಾಯಿ ಮೌಲ್ಯದ 227.7 ಕೆಜಿ ತೂಕದ ಕ್ಯಾಪ್ಟಗನ್ ವಶ

ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟದಲ್ಲಿ ಭಾರತದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಐತಿಹಾಸಿಕ ಯಶಸ್ಸು ಸಾಧಿಸಿದೆ. ರಹಸ್ಯ ಕಾರ್ಯಾಚರಣೆ ಆಪರೇಷನ್ ರೇಜ್‌ಪಿಲ್ ಅಡಿಯಲ್ಲಿ ಎನ್‌ಸಿಬಿ ಅಧಿಕಾರಿಗಳು ಭೀಕರ ಉಗ್ರಗಾಮಿ ಕೃತ್ಯಗಳಿಗೆ ಲಿಂಕ್ ಹೊಂದಿರುವ ಸುಮಾರು 227.7 ಕೆಜಿ ತೂಕದ ಕ್ಯಾಪ್ಟಗನ್ ಮಾತ್ರೆ ಹಾಗೂ ಪೌಡರ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದರ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 182 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಜಾಲದ ಹಿಂದಿದ್ದ ಸಿರಿಯಾ ಮೂಲದ ವಿದೇಶಿ ಪ್ರಜೆಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಬೃಹತ್ […]

ಅಂತಾರಾಷ್ಟ್ರೀಯ

ಸೌದಿ ಅರೇಬಿಯಾ: ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ

ರಿಯಾದ್: ಕರ್ನಾಟಕ ​ಅನಿವಾಸಿ ಒಕ್ಕೂಟದ ಪ್ರಥಮ‌ ಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಬತಫನ ರೆಸ್ಟೋರೆಂಟ್‌ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಿಯಾಝ್ ಇನೋಳಿ ಕರ್ನಾಟಕದ ಅನಿವಾಸಿಗಳನ್ನು ಒಟ್ಟುಗೂಡಿಸುತ್ತಿರುವ ಉದ್ದೇಶ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಉದ್ಯೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಸರಕಾರವು ಅನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು. ಕರ್ನಾಟಕ ಸರಕಾರದ ಆರ್ಥಿಕ ಬೆನ್ನೆಲುಬಾಗಿರುವ ಅನಿವಾಸಿಗಳ ಬಗ್ಗೆ ಕರ್ನಾಟಕ ಸರಕಾರ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಗಲ್ಪ್ ಜೀವನದಿಂದ […]

ಪೊನ್ನಂ ಪೇಟೆ ಕುಟ್ಟಂ ಸಮೀಪದ ದೇವಿ ವಿಲ್ಲಾ ಹೋಂಸ್ಟೇ ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ಹೋಮ್‌ಸ್ಟೇ ಕೆಲಸಗಾರ ಅತ್ಯಾಚಾರ ಎಸಗಿದ್ದು, ಬಳಿಕ ಮಾಲೀಕ ಸೇರಿ ಆಕೆಯನ್ನು ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕಾದಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಲ್ಲಿನ ‘ದೇವಿ ವಿಲ್ಲಾ’ ಎಂಬ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ, ಮಹಿಳೆಗೆ ಡ್ರಿಂಕ್ಸ್ ನೀಡಿ ಅಮಲೇರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಮಹಿಳೆಯ ಸಹಾಯಕ್ಕೆ […]

ಮಂಗಳೂರು, ಬಂಟ್ವಾಳ ಆಡಳಿತ ಸೌಧ; ಹೇಳೋರಿಲ್ಲ.. ಕೇಳೋರಿಲ್ಲ.. ಇವರು ಆಡಿದ್ದೇ ಆಟ, ಆಧಿಕಾರಿಗಳದ್ದೇ ದರ್ಬಾರ್

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸಮರ್ಥನೆ ಹಾಸ್ಯಾಸ್ಪದ. ನೈತಿಕತೆ ಇದ್ದಲ್ಲಿ ಹರೀಶ್ ಕುಮಾರ್ ಬಹಿರಂಗ ಚರ್ಚೆಗೆ ಬರಲಿ: ಸಿಪಿಐಎಂ

ಫೈನಲ್ ಸೆಟ್ಲ್ ಮೆಂಟಿಗೆ ಸಿದ್ರಾಮಯ್ಯ ರೆಡಿ; ರಾಹುಲ್ ಗೆ ಕಾಡುತ್ತಿರುವ ಚಿಂತೆ, ಕೈ ಪಾಳಯದಿಂದ ದಿಲ್ಲಿ ಅಭ್ಯರ್ಥಿ.?

ಜಾತ್ಯತೀತ ಪಕ್ಷ ಬಿಟ್ಟು ಬಿಜೆಪಿ ಸೇರಿ ‘ಕಟ್ಟರ್ ಹಿಂದುತ್ವ ನಾಯಕ’ರಾದರು; ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕರೇ ಮುಖ್ಯಮಂತ್ರಿಗಳು

ಆರೋಗ್ಯ ಕ್ಷೇತ್ರ ಸುಧಾರಣೆ ಎಂಬ ನೆಪದಲ್ಲಿ ಖಾಸಗೀಕರಣದ ಪರ ವಾದಿಸುವ ಕಾಂಗ್ರೇಸ್ ಪಕ್ಷದ ಹತಾಶೆಯುತ ಹೇಳಿಕೆ: ಡಿವೈಎಫ್ಐ

error: Content is protected !!