ಕರಾವಳಿ

ಮಂಗಳೂರು: ಸಂಡೆ ಬಜಾರ್ ಮೇಲೆ ಮುಂದುವರಿದ ನಗರಪಾಲಿಕೆ ಧಾಳಿ; ಸಿಐಟಿಯು ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ

ಮಂಗಳೂರು: ನಗರದ ಪುರಭವನದ ಬಳಿ ಭಾನುವಾರ ರಜಾದಿನ ವ್ಯಾಪಾರ ಮಾಡುವ ಸಂಡೆ ಬಜಾರ್ ವ್ಯಾಪಾರಿಗಳ ವಿರುದ್ಧ ನಗರಪಾಲಿಕೆ ಕಾರ್ಯಾಚರಣೆ ಮುಂದುವರಿಸಿದೆ. ಇಂದು ಬೀದಿವ್ಯಾಪಾರಿಗಳು ವ್ಯಾಪಾರ ಆರಂಭಿಸಲು ಮುಂದಾಗುತ್ತಿದ್ದಂತೆ ನಗರಪಾಲಿಕೆ ಆಯುಕ್ತರು ಕಾರ್ಯಾಚರಣೆ ಆರಂಭಿಸಲು ಆದೇಶ ನೀಡಿದರು. ಪಾಲಿಕೆ ಆಯುಕ್ತರ ಆದೇಶಕ್ಕೆ ಬೀದಿ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ಪಾದಚಾರಿಗಳ ಓಡಾಟಕ್ಕೆ ಬೇಕಾದಷ್ಟು ಜಾಗ ಇದ್ದರೂ ತೆರವುಗೊಳಿಸುವುದು ಸರಿಯಲ್ಲ ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಆಯುಕ್ತರು ಧಾಳಿ ಮುಂದುವರಿಸಿದಾಗ ಬೀದಿಬದಿ ವ್ಯಾಪಾರಿಗಳು ಘೋಷಣೆ ಕೂಗುತ್ತ ರಸ್ತೆ ತಡೆಸಿ ಪ್ರತಿಭಟನೆ ನಡೆಸಿದರು. […]

ಮಲ್ಪೆ ಉದ್ಯಮಿ ಸಂದೀಪ್​ ಸಾಲಿಯಾನ್​ ನಿಗೂಢ ಸಾವಿನ ಪ್ರಕರಣ; ಗೋವಾ ಪೊಲೀಸರ ಕಾರ್ಯಚರಣೆ; ಮಂಗಳೂರು ಮೂಲದ ಅಕ್ಷತಾ ಬಂಧನ

ಮಲ್ಪೆ ಉದ್ಯಮಿ ಸಂದೀಪ್​ ಸಾಲಿಯಾನ್​ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಪ್ರಮುಖ ಆರೋಪಿ ಮಂಗಳೂರು ಮೂಲದ ಅಕ್ಷತಾ ಎಂ.ಕೆ. ಅಲಿಯಾಸ್​ ರೂಪಶ್ರೀ ಎಂಬ ಮಹಿಳೆಯನ್ನು ಗೋವಾ ಪೊಲೀಸರು ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಜಲಕ್ರೀಡಾ ದೋಣಿಗಳ ಉದ್ಯಮಿಯಾಗಿದ್ದ ಸಂದೀಪ ಸಾಲಿಯಾನ್​ ಮಲ್ಪೆ ನಿವಾಸಿಯಾಗಿದ್ದು, ಈ ಹಿಂದೆ ಮಾಜಿ ಸಚಿವರೊಬ್ಬರ ಕಾರು ಚಾಲಕರಾಗಿದ್ದರು. ನಂತರ ಚಾಲಕ ವೃತ್ತಿ ತೊರೆದು ಮಲ್ಪೆಯಲ್ಲಿ ಜಲಕ್ರೀಡಾ ದೋಣಿಯ ವ್ಯವಹಾರ ಆರಂಭಿಸಿದ್ದರು. ಜಲಕ್ರೀಡೆ ವ್ಯವಹಾರದಲ್ಲಿ ಉತ್ತಮ ಯಶಸ್ಸು ಸಾಧಿಸಿ ಪ್ರಮುಖ ಉದ್ಯಮಿಯಾಗಿ […]

ರಾಜ್ಯ

ಮಕ್ಕಳು ಶಾಲಾ ಬಸ್ ಹತ್ತಿದ ಮೇಲೆ ಮನೆ ತಲುಪುವವರೆಗೂ ಶಾಲೆಯೇ ಹೊಣೆ. ಶಾಲಾ ಬಸ್ಸಿನಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ದಾಕ್ಷಿಣ್ಯ ವಿಷಯವಲ್ಲ: ಹೈಕೋರ್ಟ್

ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪೊಂದನ್ನು ನೀಡಿದೆ. ಶಾಲಾ ಬಸ್ ಕೇವಲ ಶಾಲಾ ಆವರಣದಲ್ಲಿದ್ದಾಗ ಮಾತ್ರವಲ್ಲ, ಮಗು ಬಸ್ ಹತ್ತಿದಾಗಿನಿಂದ ಹಿಡಿದು ಸಂಜೆ ಸುರಕ್ಷಿತವಾಗಿ ಪೋಷಕರ ಕೈ ಸೇರುವವರೆಗೂ ಮಗುವಿನ ಸಂಪೂರ್ಣ ರಕ್ಷಣೆಯ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಶಾಲಾ ಬಸ್‌ನಲ್ಲಿ ನಡೆದ ಅಪಘಾತವೊಂದರಲ್ಲಿ ನಾಲ್ಕನೇ ತರಗತಿಯ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು […]

ರಾಜ್ಯದಲ್ಲಿ ಅರ್ಹ ವ್ಯಕ್ತಿಗಳಿಗೆ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ವಿತರಿಸಿರುವ ಸಂಬಂಧ ಕಂದಾಯ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಪ್ರಕಟ

ರಾಜ್ಯದಲ್ಲಿ ಅರ್ಹ ವ್ಯಕ್ತಿಗಳಿಗೆ ಕರ್ನಾಟಕ ಶಾಶ್ವತ ವಾಸಸ್ಥಳ ಪ್ರಮಾಣಪತ್ರ ವಿತರಿಸಿರುವ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹಾಗೂ ನಿರ್ವಹಣಾ ಚೌಕಟ್ಟು ಪ್ರಕಟಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಯಿಂದ ಅಧಿಕೃತಗೊಳಿಸಲಾದ ಉಪ ತಹಸಿಲ್ದಾರ್‌ ಅಥವಾ ತಹಸೀಲ್ದಾರ್‌, ಇತರೆ ಯಾವುದೇ ಅಧಿಕಾರಿಯನ್ನು ಶಾಶ್ವತ ನಿವಾಸ ಪ್ರಮಾಣಪತ್ರ ಹಾಗೂ ಡೊಮಿಸೈಲ್‌ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವನ್ನಾಗಿ ನಿಯೋಜಿಸಲಾಗಿದೆ. ಸಹಾಯಕ ಆಯುಕ್ತರಿಗೆ ಮೇಲ್ಮನವಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ-ಪುನರ್‌ ಪರಿಶೀಲನಾ ಪ್ರಾಧಿಕಾರ ಆಗಿ ವ್ಯವಹರಿಸಲಿದ್ದಾರೆ. ಪ್ರಮಾಣಪತ್ರ ನೀಡುವ ಪ್ರಾಧಿಕಾರವು ಅಗತ್ಯ ವಿಚಾರಣೆ ಹಾಗೂ ಪರಿಶೀಲನೆ […]

ರಾಷ್ಟ್ರೀಯ

ಪಾರ್ಕಿಂಗ್‌ ದೀಪ, ಸೂಚನಾ ಫಲಕ ಇಲ್ಲದೆ ನಿಲ್ಲಿಸಲಾಗಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಮಾತ್ರಕ್ಕೆ, ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ, ಆತನೇ ತಪ್ಪಿತಸ್ಥ ಎಂಬ ವಾದವನ್ನು ಒಪ್ಪಲಾಗದು: ಸುಪ್ರೀಂ ಕೋರ್ಟ್

ರಾತ್ರಿ ವೇಳೆ ಜನನಿಬಿಡ ರಸ್ತೆಯಲ್ಲಿ ಪಾರ್ಕಿಂಗ್‌ ದೀಪ, ಪ್ರತಿಫಲಕ ಅಥವಾ ಸೂಚನಾ ಫಲಕಗಳಿಲ್ಲದೆ ನಿಲುಗಡೆ ಮಾಡಲಾದ ಟ್ರಕ್‌ಗೆ ಕಾರು ಚಾಲಕನೊಬ್ಬ ಹಿಂದಿನಿಂದ ಡಿಕ್ಕಿ ಹೊಡೆದರೆ, ಆ ಅಪಘಾತಕ್ಕೆ ಟ್ರಕ್ ಚಾಲಕ ಮತ್ತು ಅದರ ಮಾಲೀಕರೇ ಪ್ರಾಥಮಿಕ ಹೊಣೆಗಾರರಾಗುತ್ತಾರೆ. ಇದರಲ್ಲಿ ಕಾರು ಚಾಲಕನ ತಪ್ಪೇನೂ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೆಹಲಿಯಲ್ಲಿ 2013ರಲ್ಲಿ 20 ವರ್ಷದ ಚಾರ್ಟರ್ಡ್‌ ಅಕೌಂಟೆನ್ಸಿ ವಿದ್ಯಾರ್ಥಿಯೊಬ್ಬನ ಸಾವಿಗೆ ಕಾರಣವಾಗಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ, ಓರಿಯಂಟಲ್‌ ಇನ್ಶುರೆನ್ಸ್‌ ಕಂಪನಿ ಸಲ್ಲಿಸಿದ್ದ […]

ಪ್ರೀತಿಯ ನಾಟಕವಾಡಿ, ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ; ಆರೋಪ ಸಾಬೀತು, ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಹೈದರಾಬಾದ್‌ಗೆ ಕರೆದೊಯ್ದು ಹಲವಾರು ದಿನಗಳ ಕಾಲ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದರಿಂದ ಸೇಡಂ ತಾಲ್ಲೂಕಿನ ನಿವಾಸಿ ನವೀನ್ ಕುಮಾರ್ ದಸ್ತಪ್ಪ ದುದ್ಯಾಲ ಎಂಬಾತನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿದೆ. 2025ರ ಮಾರ್ಚ್ 30ರಂದು ಬಾಲಕಿಗೆ ಕರೆ ಮಾಡಿ ಮಾತನಾಡುವುದಿದೆ ಎಂದು ಕರೆಸಿಕೊಂಡು ಪ್ರೀತಿಸುವುದಾಗಿ ಹೇಳಿ ಪಾಳು ಬಿದ್ದ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಜುಲೈ […]

ಅಂತಾರಾಷ್ಟ್ರೀಯ

ಸೌದಿ ಅರೇಬಿಯಾ: ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ

ರಿಯಾದ್: ಕರ್ನಾಟಕ ​ಅನಿವಾಸಿ ಒಕ್ಕೂಟದ ಪ್ರಥಮ‌ ಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಬತಫನ ರೆಸ್ಟೋರೆಂಟ್‌ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಿಯಾಝ್ ಇನೋಳಿ ಕರ್ನಾಟಕದ ಅನಿವಾಸಿಗಳನ್ನು ಒಟ್ಟುಗೂಡಿಸುತ್ತಿರುವ ಉದ್ದೇಶ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಉದ್ಯೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಸರಕಾರವು ಅನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು. ಕರ್ನಾಟಕ ಸರಕಾರದ ಆರ್ಥಿಕ ಬೆನ್ನೆಲುಬಾಗಿರುವ ಅನಿವಾಸಿಗಳ ಬಗ್ಗೆ ಕರ್ನಾಟಕ ಸರಕಾರ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಗಲ್ಪ್ ಜೀವನದಿಂದ […]

ಪೊನ್ನಂ ಪೇಟೆ ಕುಟ್ಟಂ ಸಮೀಪದ ದೇವಿ ವಿಲ್ಲಾ ಹೋಂಸ್ಟೇ ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ಹೋಮ್‌ಸ್ಟೇ ಕೆಲಸಗಾರ ಅತ್ಯಾಚಾರ ಎಸಗಿದ್ದು, ಬಳಿಕ ಮಾಲೀಕ ಸೇರಿ ಆಕೆಯನ್ನು ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕಾದಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಲ್ಲಿನ ‘ದೇವಿ ವಿಲ್ಲಾ’ ಎಂಬ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ, ಮಹಿಳೆಗೆ ಡ್ರಿಂಕ್ಸ್ ನೀಡಿ ಅಮಲೇರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಮಹಿಳೆಯ ಸಹಾಯಕ್ಕೆ […]

ಮಂಗಳೂರು: ಸಂಡೆ ಬಜಾರ್ ಮೇಲೆ ಮುಂದುವರಿದ ನಗರಪಾಲಿಕೆ ಧಾಳಿ; ಸಿಐಟಿಯು ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ

ಮಲ್ಪೆ ಉದ್ಯಮಿ ಸಂದೀಪ್​ ಸಾಲಿಯಾನ್​ ನಿಗೂಢ ಸಾವಿನ ಪ್ರಕರಣ; ಗೋವಾ ಪೊಲೀಸರ ಕಾರ್ಯಚರಣೆ; ಮಂಗಳೂರು ಮೂಲದ ಅಕ್ಷತಾ ಬಂಧನ

ವಿಟ್ಲ ಪೊಲೀಸರ ಕಾರ್ಯಾಚರಣೆ: ಅಕ್ರಮ ಬಾಕ್ಸೈಟ್ ಗಣಿಗಾರಿಕೆ ಸ್ಥಳಕ್ಕೆ ಧಾಳಿ; ಆರೋಪಿಗಳು ಪರಾರಿ, ಯಂತ್ರೋಪಕರಣಗಳ ವಶ.

ಬೈಕಂಪಾಡಿ ಹೈವೇ ದರೋಡೆ ಗ್ಯಾಂಗ್ ಲಾಕ್.. ಮಂಗಳೂರನ್ನು ಬೆಚ್ಚಿಬೀಳಿಸಿದ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು

ಮಕ್ಕಳು ಶಾಲಾ ಬಸ್ ಹತ್ತಿದ ಮೇಲೆ ಮನೆ ತಲುಪುವವರೆಗೂ ಶಾಲೆಯೇ ಹೊಣೆ. ಶಾಲಾ ಬಸ್ಸಿನಲ್ಲಿ ಮಕ್ಕಳ ಸುರಕ್ಷತೆ ಎನ್ನುವುದು ದಾಕ್ಷಿಣ್ಯ ವಿಷಯವಲ್ಲ: ಹೈಕೋರ್ಟ್

error: Content is protected !!