ಕರಾವಳಿ

ಅಕ್ರಮ ಜಾನುವಾರು ಸಾಗಾಟ ಪ್ರಕರಣ: ವಾಹನ ಚಾಲಕ ಚಂದ್ರು, ಕ್ಲೀನರ್ ಮೋಹನ ಇಬ್ಬರ ಬಂಧನ; ಜಾನುವಾರು ವಶ

ಕಡಬ: ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ, ದಿನಾಂಕ:13.06.2026 ರಂದು ಬೆಳಗ್ಗಿನ ಜಾವ ಪಿಕಪ್ ವಾಹನವೊಂದು ಆಯತಪ್ಪಿ ಬಿದ್ದಿರುವ ವಾಹನದಲ್ಲಿ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪ-ನಿರೀಕ್ಷಕರಿಗೆ ಬಂದ ಮಾಹಿತಿ ಆಧರಿಸಿ, ಪಿಕಪ್ ವಾಹನದ ಚಾಲಕ ಹಾಸನ ಅರಕಲಗೂಡು ನಿವಾಸಿಗಳಾದ ಚಂದ್ರು @ ಚಂದ್ರಶೇಖರ ಮತ್ತು ಕ್ಲೀನರ್ ಮೋಹನ ಎಂಬವರುಗಳನ್ನು ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆತಂದು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಸದ್ರಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಚಾಲಕ ಹಾಗೂ […]

ಜೂನ್ 16 ರಂದು ಸಂಜೆ 4.30 ಕ್ಕೆ ಸುರತ್ಕಲ್ ನಲ್ಲಿ ಸರಕಾರಿ ಆಸ್ಪತ್ರೆಗಳನ್ನು ಉಳಿಸಿ, ಬಲಗೊಳಿಸಲು ಒತ್ತಾಯಿಸಿ ಮಾನವ ಸರಪಳಿ

ಸರಕಾರಿ ಆಸ್ಪತ್ರೆಗಳನ್ನು ಉಳಿಸುವುದು, ಬಲಗೊಳಿಸಲು ಒತ್ತಾಯಿಸುವುದು ಇಂದಿನ ತುರ್ತು. ಬನ್ನಿ ಸುರತ್ಕಲ್ ನಲ್ಲಿ ನಡೆಯುವ ಮಾನವ ಸರಪಳಿಗೆ ಕೊಂಡಿಯಾಗಿ, ಹೋರಾಟಕ್ಕೆ ಬಲ ತುಂಬಿ. ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವುವ ಆರೋಗ್ಯ ಇಲಾಖೆಯ ಆದೇಶ ಅತ್ಯಂತ ಆಘಾತಕಾರಿ. ಖಾಸಗಿ ವೈದ್ಯಕೀಯ ಸೇವೆಯು ವ್ಯಾಪಾರವನ್ನು ದಾಟಿ ದಂಧೆಯಾಗಿರುವ ಈ ಕಾಲದಲ್ಲಿ ಸರಕಾರಿ ಆಸ್ಪತ್ರೆಗಳ ಬಲವರ್ಧನೆಯೆ ಜನಸಾಮಾನ್ಯರ ಪಾಲಿಗೆ ಆಶಾಕಿರಣ.ಸರಕಾರಿ ಆರೋಗ್ಯ ಸೇವೆಯ ಖಾಸಗೀಕರಣದ ವಿರುದ್ಧ ದೊಡ್ಡ ಪ್ರತಿರೋಧವನ್ನು ನಾವು ತೋರಬೇಕಿದೆ. ಜೊತೆಗೆ ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು […]

ರಾಜ್ಯ

ಟೇಕ್ ಆಫ್ ಆಗುತ್ತಿದೆ ‘ಡಿಕೆ’ ಫ್ಲೈಟ್; ರಾಹುಲ್ ಗಾಂಧಿ ಚೀಟಿ ರಹಸ್ಯ.!, ಅಹಿಂದ ಪಿಲ್ಲರುಗಳೇ ಇಲ್ಲ

ಸಂಪುಟಕ್ಕೆ ಸೇರುವವರು ಯಾರು?; ಸ್ಪೀಕರ್ ಹುದ್ದೆಗೆ ಹೆಚ್ಕೆ ಇಲ್ಲವೇ ದಿನೇಶ್? ✍️.ಅರ್.ಟಿ.ವಿಠ್ಢಲಮೂರ್ತಿ ಕಳೆದ ವಾರ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಒಂದು ಚೀಟಿ ಹೊರತೆಗೆದರಂತೆ. ಅವರೇನು ಮಾಡುತ್ತಾರೆ ಅಂತ ಮುಖ್ಯಮಂತ್ರಿಗಳು ನೋಡುತ್ತಿದ್ದಂತೆಯೇ ಅವರ ಕೈಗೆ ರಾಹುಲ್ ಗಾಂಧಿ ಈ ಚೀಟಿಯನ್ನು ಕೊಟ್ಟಿದ್ದಾರೆ. ಅವರು ಕೊಟ್ಟ ಚೀಟಿಯನ್ನು ಡಿ.ಕೆ.ಶಿವಕುಮಾರ್ ಅವರು ಬಿಚ್ಚಿ ನೋಡಿದರೆ ಅದರಲ್ಲಿ ಕೃಷ್ಣ ಭೈರೇಗೌಡರ ಹೆಸರು ಕಾಣಿಸಿದೆ.ಅದನ್ನು ಅವರು ನೋಡುತ್ತಿದ್ದಂತೆಯೇ ರಾಹುಲ್ ಗಾಂಧಿ […]

ಕೋಕಾ ಪ್ರಕರಣ: ಬಂಧಿತ ಆರೋಪಿಗಳಿಗೆ ಮೈಸೂರಿನ KCOCA ವಿಶೇಷ ನ್ಯಾಯಾಲಯದಿಂದ ಜಾಮೀನು ಮಂಜೂರು

ಕೋಕಾ ಪ್ರಕರಣದಲ್ಲಿ ಬಂದಿತರಾಗಿದ್ದ ಶ್ಯಾಮ್ ಸುಂದರ್ ಶೆಟ್ಟಿ, ಸುವಿನ್ ಕಾಂಚನ್ @ ಮುನ್ನ ಹಾಗೂ ಅಕ್ಷಯ್ ಎಂಬುವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಮೈಸೂರಿನ KCOCA ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ದಿನಾಂಕ 01-01-2026 ರಂದು ಸಂಜೆ ಸುಮಾರು 5:30ರ ಸಮಯಕ್ಕೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿಮಂತೂರು ಗ್ರಾಮದ ಅಂಗಾರಗುಡ್ಡೆ ಎಂಬಲ್ಲಿ ಸಹಜುದ್ದೀನ್ ಆತನ ತಂದೆಯೊಂದಿಗೆ ಜಗ್ಗು ಶೆಟ್ಟಿ ಎಂಬವರ ಕೊಟ್ಟಿಗೆಯಲ್ಲಿ ಸಾಕುತ್ತಿದ್ದ ಕಂಬಳದ ಕೋಣಗಳ ಚಕಾರಿ ಮಾಡುತ್ತಿರುವ […]

ರಾಷ್ಟ್ರೀಯ

ಜೈಪುರ: ಲಂಚ ಪ್ರಕರಣ; ಜೈಪುರದ ಭ್ರಷ್ಟಾಚಾರ ನಿಗ್ರಹ ದಳದ (ACB) ಬಲೆಗೆ ಬಿದ್ದ ಬೆಂಗಳೂರು ಪೊಲೀಸರು

ರಾಜಸ್ಥಾನದ ಜೈಪುರದಲ್ಲಿ ಬೆಂಗಳೂರು ಮೂಲದ ಪೊಲೀಸ್ ಸಿಬ್ಬಂದಿಯೇ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ದೂರುದಾರರೊಬ್ಬರಿಂದ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆಯ ಮೂವರು ಪೊಲೀಸರು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅನಿತಾ ಹಾಗೂ ಮುಖ್ಯ ಪೇದೆಗಳಾದ ಯತೀಶ್ ಕುಮಾರ್ ಮತ್ತು ಉಳುವಪ್ಪ ಎಂದು ಗುರುತಿಸಲಾಗಿದೆ. ಕರ್ತವ್ಯದ ನಿಮಿತ್ತ ಜೈಪುರಕ್ಕೆ ತೆರಳಿದ್ದ ಈ ಮೂವರು ಪೊಲೀಸ್ ಅಧಿಕಾರಿಗಳು ಅಲ್ಲಿಯೇ […]

ಪೊಲೀಸರ ಒಂದು ಸಣ್ಣ ಎಡವಟ್ಟು, ಜೈಲು ಪಾಲಾಗಿ, ಶಿಕ್ಷೆ ಅನುಭವಿಸಿದ ಅಮಾಯಕ

ಜೈಲಲ್ಲೇ ಕೂತು ಕಾನೂನು ಪುಸ್ತಕ ಓದಿ, ಹೈಕೋರ್ಟಲ್ಲಿ ತನ್ನ ಪರ ತಾನೇ ವಾದ ಮಾಡಿ ಗೆದ್ದ ಶೆಟ್ಟಿ ಪೊಲೀಸರ ಒಂದು ಸಣ್ಣ ಎಡವಟ್ಟಿನ ಬೇಜವಾಬ್ದಾರಿ, ನಿರ್ಲಕ್ಷತನದಿಂದ ಒಬ್ಬ ಅಮಾಯಕನ ಬದುಕನ್ನೇ ಹೇಗೆ ನರಕ ಮಾಡಬಹುದು ಅನ್ನೋದಕ್ಕೆ ಈ ಘಟನೆ ಒಂದು ಜೀವಂತ ಉದಾಹರಣೆ. ಹೆಸರಿನ ಸಾಮ್ಯತೆ ಇದೆ ಅನ್ನೋ ಒಂದೇ ಒಂದು ಕಾರಣಕ್ಕೆ ಪೊಲೀಸರು ಮಾಡಿದ ಮಹಾ ಎಡವಟ್ಟಿನಿಂದಾಗಿ, ಒಬ್ಬ ವ್ಯಕ್ತಿ ತನ್ನ ಯೌವನದ ಪ್ರಮುಖ ಏಳು ವರ್ಷಗಳನ್ನು ಜೈಲಿನ ಕತ್ತಲ ಕೋಣೆಯಲ್ಲಿ ಕಳೆಯಬೇಕಾಗಿ ಬಂತು. ಜೈಲಿನಿಂದ […]

ಅಂತಾರಾಷ್ಟ್ರೀಯ

ಸೌದಿ ಅರೇಬಿಯಾ: ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ

ರಿಯಾದ್: ಕರ್ನಾಟಕ ​ಅನಿವಾಸಿ ಒಕ್ಕೂಟದ ಪ್ರಥಮ‌ ಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಬತಫನ ರೆಸ್ಟೋರೆಂಟ್‌ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಿಯಾಝ್ ಇನೋಳಿ ಕರ್ನಾಟಕದ ಅನಿವಾಸಿಗಳನ್ನು ಒಟ್ಟುಗೂಡಿಸುತ್ತಿರುವ ಉದ್ದೇಶ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಉದ್ಯೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಸರಕಾರವು ಅನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು. ಕರ್ನಾಟಕ ಸರಕಾರದ ಆರ್ಥಿಕ ಬೆನ್ನೆಲುಬಾಗಿರುವ ಅನಿವಾಸಿಗಳ ಬಗ್ಗೆ ಕರ್ನಾಟಕ ಸರಕಾರ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಗಲ್ಪ್ ಜೀವನದಿಂದ […]

ಪೊನ್ನಂ ಪೇಟೆ ಕುಟ್ಟಂ ಸಮೀಪದ ದೇವಿ ವಿಲ್ಲಾ ಹೋಂಸ್ಟೇ ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ಹೋಮ್‌ಸ್ಟೇ ಕೆಲಸಗಾರ ಅತ್ಯಾಚಾರ ಎಸಗಿದ್ದು, ಬಳಿಕ ಮಾಲೀಕ ಸೇರಿ ಆಕೆಯನ್ನು ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕಾದಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಲ್ಲಿನ ‘ದೇವಿ ವಿಲ್ಲಾ’ ಎಂಬ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ, ಮಹಿಳೆಗೆ ಡ್ರಿಂಕ್ಸ್ ನೀಡಿ ಅಮಲೇರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಮಹಿಳೆಯ ಸಹಾಯಕ್ಕೆ […]

error: Content is protected !!