ಕರಾವಳಿ

ಕುಂದಾಪುರ ಪುರಸಭೆ: ರಣ ಹಸಿವಿನ ಭ್ರಷ್ಟ ಅಧಿಕಾರಿಗಳು; ಅಧಿಕಾರಿಗಳು ಲಂಚ ತಿಂದು ದುಂಡಗಾಗಿದ್ದಾರೆ

ರಣ ಹಸಿವಿನ ಅಧಿಕಾರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಕುಂದಾಪುರ ಪುರಸಭೆ. ಇಲ್ಲಿ ಹೇಳೋರಿಲ್ಲ. ಕೇಳೋರಿಲ್ಲ.. ಚೀಫ್ ಆಫೀಸರ್ಸ್ ನದ್ದೇ ಅಂಧಾ ದರ್ಬಾರ್. ಉಡುಪಿ ಜಿಲ್ಲೆಯಲ್ಲಿ ಕುಂದಾಪುರಕ್ಕೊಂದು ಮಹತ್ವದ ಸ್ಥಾನವಿದೆ. ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕಾಪು ತಾಲೂಕಿಗಿಂತ ಕುಂದಾಪುರ ತಾಲೂಕೇ ಹೆಚ್ಚು ಸಮೃದ್ಧಿಯಾದ ತಾಲೂಕು. ಕೆಲವು ಆಫೀಸರ್ಸ್ ಗಳಂತೂ ಕುಂದಾಪುರಕ್ಕೆ ಲಾಬಿ ಮಾಡಿಕೊಂಡೇ ಬರುವವರು ಹೆಚ್ಚು. ಮೇಯಲು ಸಮೃದ್ಧಭರಿತ ತಾಲೂಕು ಅನ್ನುವ ಅನ್ವರ್ಥನಾಮವಿದೆ. ಕುಂದಾಪುರ ಶಾಸ್ತ್ರೀ ಸರ್ಕಲ್ ರಾಜ್ಯದಲ್ಲೇ ಹೆಸರುವಾಸಿ. ಹಲವಾರು ಉದ್ದಿಮೆಗಳು, ಪ್ರವಾಸೋದ್ಯಮ ತಾಣಗಳು, ತಲೆ ಎತ್ತುತ್ತಿರುವ […]

ಬೃಹತ್ ಪ್ರಮಾಣದ MDMA ಮಾದಕ ವಸ್ತು ಮಾರಾಟ ಜಾಲದ ಡ್ರಗ್ ಪೆಡ್ಲರ್ ಗಳ ಬಂಧನ; ಮಾದಕ ವಸ್ತು ವಶ

ಮಂಗಳೂರು ನಗರ ಜೆಪ್ಪಿನಮೊಗರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ದೊಡ್ಡ ಪ್ರಮಾಣದ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವುದಾಗಿ ಕಂಕನಾಡಿ ನಗರ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಕೆಎ 70 ಕೆ 3333 ನಂಬರ್ ನ ಬಜಾಜ್ ಫ್ರೀಡಂ ಬೈಕ್ ನಲ್ಲಿ MDMA ಅನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿಗಳಾದ ಪರ್ವೇಜ್ @ ದಾವೂದ್ ಪರ್ವೇಜ್, ಪಿಲಾರು ಹೊಸಗದ್ದೆ ಮನೆ, ಪೆರ್ಮಾನ್ನೂರು ಹಾಗೂ ನಜರತ್ ಅಲಿ ಪಿಲಾರು ಪೆರ್ಮಾನ್ನೂರು ಅಂಚೆ ಮಂಗಳೂರು ತಾಲೂಕು ಎಂಬವರನ್ನು ವಶಕ್ಕೆ ಪಡೆದು ಅವರು […]

ರಾಜ್ಯ

ರಾಜ್ಯದಲ್ಲಿ ಇನ್ನು ಭೂ ಪರಿವರ್ತನೆಗೆ ಕಾಯಬೇಕಾಗಿಲ್ಲ; 30 ದಿನಗಳೊಳಗೆ ‘ಪರಿಭಾವಿತ ಭೂ ಪರಿವರ್ತನೆ’ ಎಂದು ಪರಿಗಣಿಸಿ ಸ್ವಯಂಚಾಲಿತವಾಗಿ ಅನುಮೋದನೆ: ಕಂದಾಯ ಇಲಾಖೆ

ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲು ಸಲ್ಲಿಸುವ ‘ಅಫಿಡವಿಟ್ ಆಧಾರಿತ ಭೂ ಪರಿವರ್ತನೆ’ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ನಿಗದಿತ 30 ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ, ಅದನ್ನು ‘ಪರಿಭಾವಿತ ಭೂ ಪರಿವರ್ತನೆ’ ಎಂದು ಪರಿಗಣಿಸಿ ಸ್ವಯಂಚಾಲಿತವಾಗಿ ಅನುಮೋದನೆ ನೀಡಲು ಕಂದಾಯ ಇಲಾಖೆ ಆದೇಶಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯ […]

ಭಾರತವು ಈಗ ‘ವಿಶ್ವಗುರು’ ಆಗಿ ಉಳಿದಿಲ್ಲ; ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ

ಭಾರತವು ಈಗ ‘ವಿಶ್ವಗುರು’ ಆಗಿ ಉಳಿದಿಲ್ಲ. ಆ ಪದವನ್ನು ಬಳಸಬಾರದು ಎಂದು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೋಮವಾರ ಹೇಳಿದ್ದಾರೆ. ಸಂಸ್ಕೃತದ ಹೆಚ್ಚಿನ ಪ್ರಚಾರ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿಯೂ ಸಂಸ್ಕೃತ ಬಳಕೆಯ ಕುರಿತು ಪ್ರತಿಪಾದಿಸಿ ಅವರು ಈ ಮಾತನ್ನು ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕರು ಈ ಹಿಂದೆ ಇದಕ್ಕಾಗಿ ಪ್ರಯತ್ನಿಸಿದ್ದರು, ಆದರೆ ಆ ಪ್ರಸ್ತಾವನೆಗಳು ಅಂಗೀಕಾರವಾಗಲಿಲ್ಲ […]

ರಾಷ್ಟ್ರೀಯ

ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಸಜ್ಜು; ಲೋಕಸಭೆಯಲ್ಲಿರುವ 543 ಸದಸ್ಯರ ಬಲವನ್ನು 850ಕ್ಕೆ ಏರಿಸಲು ಸರ್ಕಾರ ಪ್ರಸ್ತಾವನೆ

ಭಾರತೀಯ ಸಂಸದೀಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಪ್ರಸ್ತುತ ಲೋಕಸಭೆಯಲ್ಲಿರುವ 543 ಸದಸ್ಯರ ಬಲವನ್ನು ಬರೋಬ್ಬರಿ 850ಕ್ಕೆ ಏರಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ದಶಕಗಳಿಂದ ಬಾಕಿ ಉಳಿದಿರುವ ‘ಮಹಿಳಾ ಮೀಸಲಾತಿ’ ಕಾನೂನನ್ನು ಜಾರಿಗೊಳಿಸಲು ಮತ್ತು ಹೊಸ ಕ್ಷೇತ್ರ ಪುನರ್ ವಿಂಗಡಣೆಗೆ ಹಾದಿ ಸುಗಮಗೊಳಿಸಲು ಮೋದಿ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯಂತೆ ಲೋಕಸಭೆಯ ಒಟ್ಟು ಬಲ 850 ಆಗಲಿದೆ. ಇದರಲ್ಲಿ 815 ಸ್ಥಾನಗಳನ್ನು ವಿವಿಧ ರಾಜ್ಯಗಳಿಗೆ […]

ಗೊಂದಲದ ಗೂಡಾದ ಬೆಳ್ತಂಗಡಿ ಅಂಬೇಡ್ಕರ್ ಜಯಂತಿ: ದಿನಕ್ಕೊಬ್ಬ ಮುಖ್ಯ ಭಾಷಣಕಾರರ ಬದಲಾವಣೆ

ಪ್ರತಿವರ್ಷದಂತೆ ನಡೆಯುವ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಈ ವರ್ಷ ಗೊಂದಲದ ಗೂಡಾಗಿ ಪರಿಣಮಿಸಿದೆ. ದಿನಕ್ಕೊಬ್ಬರಂತೆ ಮುಖ್ಯ ಭಾಷಣಕಾರರು ಬದಲಾವಣೆಗೊಂಡು ಇದೀಗ ಕೊನೆಗಳಿಗೆಯಲ್ಲಿಯೂ ಬದಲಾವಣೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಇತ್ತೀಚೆಗೆ ದಲಿತ ನಾಯಕರ ಸಭೆ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ದಲಿತ ನಾಯಕರು ಸರ್ವಾನುಮತದಿಂದ ಹಿರಿಯ ತುಳು ಸಾಹಿತಿ ಆತ್ರಾಡಿ ಅಮೃತ ಶೆಟ್ಟಿಯವರ ಹೆಸರನ್ನು ಸೂಚಿಸಿದರು. ಆದರೆ […]

ಅಂತಾರಾಷ್ಟ್ರೀಯ

ಮಾಲ್ಡೀವ್ಸ್: ಸ್ಪೀಡ್ ಬೋಟ್ ಅಪಘಾತ; ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಪಾರು, ಇಬ್ಬರು ಭಾರತೀಯರು ನಾಪತ್ತೆ

ಮಾಲ್ಡೀವ್ಸ್ ಸಮೀಪ ನಡೆದ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಶುಕ್ರವಾರ ಮುಂಜಾನೆ ಮಾಲ್ಡೀವ್ಸ್‌ನ ವಿ ಫೆಲಿಧೂ ಪ್ರದೇಶದ ಸಮೀಪ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಏಕಾಏಕಿ ಮಗುಚಿ ಬಿದ್ದಿದೆ. ಈ ದುರಂತದಲ್ಲಿ ಒಟ್ಟು ಏಳು ಮಂದಿ ಪ್ರಯಾಣಿಕರು ಇದ್ದರು. ಅವರಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೌತಮ್ ಸಿಂಘಾನಿಯಾ ಕೂಡ […]

ಮೂಲಸೌಕರ್ಯದ ಮೇಲಿನ ದಾಳಿಗೆ ಇರಾನ್ ಆಕ್ರೋಶ; ಇಂತಹ ದಾಳಿ ನಡೆದರೆ ನಿಮ್ಮ ಮಿತ್ರ ರಾಷ್ಟ್ರಗಳನ್ನು ಸಂಪೂರ್ಣ ನಾಶ ಮಾಡದೆ ಬಿಡುವುದಿಲ್ಲ: ಇರಾನ್ ಎಚ್ಚರಿಕೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮತ್ತೊಮ್ಮೆ ಇಂತಹ ದಾಳಿ ನಡೆದರೆ ಯಾವುದೇ ಒತ್ತಡಕ್ಕೂ ಮಣಿಯದೆ “ಅನಿಯಂತ್ರಿತ ಪ್ರತಿದಾಳಿ” ನಡೆಸುವುದಾಗಿ ಇರಾನ್ ಸ್ಪಷ್ಟ ಎಚ್ಚರಿಕೆ ನೀಡಿದೆ. ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿ ನಡೆಸಿದರೆ ಗಲ್ಫ್ ಪ್ರದೇಶದ ತೈಲ ಹಾಗೂ ಅನಿಲ ವಲಯವನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಇಸ್ರೇಲ್’ಗೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ […]

error: Content is protected !!