ಕರಾವಳಿ

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈ ಬಿಡಲು ಒತ್ತಾಯಿಸಿ, ಹೋರಾಟ ಸಮಿತಿಯಿಂದ ಬಜ್ಪೆಯಲ್ಲಿ ಬೃಹತ್ ಮಾನವ ಸರಪಳಿ

ಜಿಲ್ಲೆಯ ಶಾಸಕರು ಕಾರ್ಪೊರೇಟ್ ವೈದ್ಯಕೀಯ ಲಾಬಿಯ ಸೂತ್ರದ ಗೊಂಬೆಗಳು: ಮುನೀರ್ ಕಾಟಿಪಳ್ಳ ಆರೋಪ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸುವ ಆದೇಶ ರದ್ದುಗೊಳಿಸಬೇಕು, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು, ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬಜ್ಪೆ ಪೇಟೆಯಲ್ಲಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಮಾನವ ಸರಪಳಿಗೆ […]

ಗುರುಪುರ ಬೆಳ್ಳಿಬೆಟ್ಟುವಿನಲ್ಲಿ ಕುಸಿಯುವ ಭೀತಿಯಲ್ಲಿ ಐದಾರು ಮನೆಗಳು.. ದುರಂತ ನಡೆದರೆ ಯಾರು ಹೊಣೆ.?

ಮಂಜನಾಡಿ, ನಾಗುರಿ ರೀತಿಯ ದುರಂತ ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಲಿ ಮಂಗಳೂರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ಹಲವು ಅನಾಹುತಗಳು ನಡೆದಿದೆ. ಜಿಲ್ಲಾಡಳಿತ ಅನಾಹುತ ನಡೆಯುವ ಮುನ್ನ ಎಚ್ಚೆತ್ತುಕೊಳ್ಳದೆ ಇರುವುದರಿಂದ ಹಲವು ಸಾವು ನೋವುಗಳು ಸಂಭವಿಸಿದೆ. ಜನಪ್ರತಿನಿಧಿಗಳು ದುರಂತ ನಡೆದ ನಂತರ ತಂಡೋಪತಂಡವಾಗಿ ಬಂದು ಕಣ್ಣೀರು ಸುರಿಸಿ ಸಹಾಯಧನ ನೀಡುತ್ತಾ ತಮ್ಮ ಕರ್ತವ್ಯ ಮುಗಿಯಿತು ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಪಾಯ ನಡೆಯಲಿದೆ ಅನ್ನುವ ಖಾತರಿ ಇದ್ದಾಗ ಸಂಬಂಧಪಟ್ಟ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಪರ್ಯಾಯ ವ್ಯವಸ್ಥೆ […]

ರಾಜ್ಯ

ಅನಿವಾಸಿ ಕನ್ನಡಿಗರಿಗೊಂದು ಸಚಿವಾಲಯ; ಸೂಟು-ಬೂಟು ಕಾಕಾಗಳ ಆರತಿ ಮಂತ್ರ.!

ಸಾಮಾನ್ಯ ಕನ್ನಡಿಗರ ಸಂಕಷ್ಟಕ್ಕೆ ಮಿಡಿಯುವ ಸಚಿವಾಲಯ ರಚನೆಯಾಗಲಿ ಕಾರ್ಮಿಕರ ಬೆವರಿನ ಮೂಲಕವೇ ಕೋಟ್ಯಾಧಿಪತಿಗಳಾದ ಕೆಲವು ಅನಿವಾಸಿ ಉದ್ಯಮಿಗಳು ಸೂಟು ಬೂಟು ಧರಿಸಿ ಅನಿವಾಸಿ ಕನ್ನಡಿಗರಿಗೆ ಹೊಸ ಸಚಿವಾಲದ ಬೇಡಿಕೆಗಳನ್ನು ಇಟ್ಟಿದ್ದು, ಸಚಿವಾಲಯಕ್ಕೆ ಆರತಿ ಮಾಡಿ, ಗೂಟದ ಕಾರು ಕೊಡಿಸಲು ಪ್ರಯತ್ನ ಪಡುತ್ತಿದ್ದಾರೆ. ಅನಿವಾಸಿ ಕನ್ನಡಿಗರಿಗೆ ಸಚಿವಾಲಯ ಖಂಡಿತ ಬೇಕು. ಅದಕ್ಕೆ ಆರತಿ ಬೇಕೇ.? ಎಂಬುದೇ ಈಗಿನ ಪ್ರಶ್ನೆ. ದೀರ್ಘ ಕಾಲ ಅನಿವಾಸಿ ಕನ್ನಡಿಗರ ಉಸ್ತುವಾರಿಯಾಗಿ ಬಡ ಹಾಗೂ ಮಧ್ಯಮ ವರ್ಗದ ಅನಿವಾಸಿಗಳ ಉದ್ಧಾರಕ್ಕಾಗಿ ಏನು ಕೆಲಸ ಮಾಡಿದ್ದಾರೆ. […]

ಅಲ್ರೀ, ಬಿಕೆ-ಪಿಕೆ ಚಿಂತೆ ನಿಮಗೇಕ್ರೀ.?, ಆಪರೇಷನ್ ವಿಜಯೇಂದ್ರ ಮುಂದಕ್ಕೆ?

ಧನ್ಯವಾದ ಹೇಳಿದ್ರು ಕುಮಾರದ್ವಾಮಿ.?, ಡಿಕೆ ಮುಂದಿದೆ ರಿಯಲ್ ಸವಾಲು ✍️. ಆರ್.ಟಿ.ವಿಠ್ಢಲಮೂರ್ತಿ ಕಳೆದ ವಾರ ಬಿಜೆಪಿಯ ಪ್ರಮುಖರನ್ನು ಕರೆಸಿಕೊಂಡಿದ್ದ ರಾಜ್ಯದ ಆರೆಸ್ಸೆಸ್ ನಾಯಕರು ಹಲವು ವಿಷಯಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಪೈಕಿ ಮುಖ್ಯವಾದುದು ಬಿಕೆ-ಪಿಕೆ ಚಿಂತೆ ನಿಮಗೇಕೆ.? ಎಂಬುದು. ಇದೇ ರೀತಿ ಅವರು ಆಕ್ಷೇಪ ವ್ಯಕ್ತಪಡಿಸಿದ ಎರಡನೇ ಸಂಗತಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ್ದು.ಅಂದ ಹಾಗೆ ಆರೆಸ್ಸೆಸ್ ನಾಯಕರ ಆಕ್ಷೇಪಕ್ಕೆ ಕಾರಣವಾದ ಮೊದಲ ವಿಷಯವಿದೆಯಲ್ಲ? ಆ್ಯಕ್ಚುವಲಿ, ಈ ವಿಷಯದ ಬಗ್ಗೆ ಬಿಜೆಪಿಯ ರಾಜ್ಯ ನಾಯಕರು […]

ರಾಷ್ಟ್ರೀಯ

ಪಾರ್ಕಿಂಗ್‌ ದೀಪ, ಸೂಚನಾ ಫಲಕ ಇಲ್ಲದೆ ನಿಲ್ಲಿಸಲಾಗಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಮಾತ್ರಕ್ಕೆ, ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ, ಆತನೇ ತಪ್ಪಿತಸ್ಥ ಎಂಬ ವಾದವನ್ನು ಒಪ್ಪಲಾಗದು: ಸುಪ್ರೀಂ ಕೋರ್ಟ್

ರಾತ್ರಿ ವೇಳೆ ಜನನಿಬಿಡ ರಸ್ತೆಯಲ್ಲಿ ಪಾರ್ಕಿಂಗ್‌ ದೀಪ, ಪ್ರತಿಫಲಕ ಅಥವಾ ಸೂಚನಾ ಫಲಕಗಳಿಲ್ಲದೆ ನಿಲುಗಡೆ ಮಾಡಲಾದ ಟ್ರಕ್‌ಗೆ ಕಾರು ಚಾಲಕನೊಬ್ಬ ಹಿಂದಿನಿಂದ ಡಿಕ್ಕಿ ಹೊಡೆದರೆ, ಆ ಅಪಘಾತಕ್ಕೆ ಟ್ರಕ್ ಚಾಲಕ ಮತ್ತು ಅದರ ಮಾಲೀಕರೇ ಪ್ರಾಥಮಿಕ ಹೊಣೆಗಾರರಾಗುತ್ತಾರೆ. ಇದರಲ್ಲಿ ಕಾರು ಚಾಲಕನ ತಪ್ಪೇನೂ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೆಹಲಿಯಲ್ಲಿ 2013ರಲ್ಲಿ 20 ವರ್ಷದ ಚಾರ್ಟರ್ಡ್‌ ಅಕೌಂಟೆನ್ಸಿ ವಿದ್ಯಾರ್ಥಿಯೊಬ್ಬನ ಸಾವಿಗೆ ಕಾರಣವಾಗಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ, ಓರಿಯಂಟಲ್‌ ಇನ್ಶುರೆನ್ಸ್‌ ಕಂಪನಿ ಸಲ್ಲಿಸಿದ್ದ […]

ಪ್ರೀತಿಯ ನಾಟಕವಾಡಿ, ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ; ಆರೋಪ ಸಾಬೀತು, ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಹೈದರಾಬಾದ್‌ಗೆ ಕರೆದೊಯ್ದು ಹಲವಾರು ದಿನಗಳ ಕಾಲ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದರಿಂದ ಸೇಡಂ ತಾಲ್ಲೂಕಿನ ನಿವಾಸಿ ನವೀನ್ ಕುಮಾರ್ ದಸ್ತಪ್ಪ ದುದ್ಯಾಲ ಎಂಬಾತನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿದೆ. 2025ರ ಮಾರ್ಚ್ 30ರಂದು ಬಾಲಕಿಗೆ ಕರೆ ಮಾಡಿ ಮಾತನಾಡುವುದಿದೆ ಎಂದು ಕರೆಸಿಕೊಂಡು ಪ್ರೀತಿಸುವುದಾಗಿ ಹೇಳಿ ಪಾಳು ಬಿದ್ದ ಮನೆಯೊಂದಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಜುಲೈ […]

ಅಂತಾರಾಷ್ಟ್ರೀಯ

ಸೌದಿ ಅರೇಬಿಯಾ: ಅನಿವಾಸಿ ಕನ್ನಡಿಗರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ಸರಕಾರಕ್ಕೆ ಒತ್ತಾಯ

ರಿಯಾದ್: ಕರ್ನಾಟಕ ​ಅನಿವಾಸಿ ಒಕ್ಕೂಟದ ಪ್ರಥಮ‌ ಸಭೆಯು ಇತ್ತೀಚೆಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಬತಫನ ರೆಸ್ಟೋರೆಂಟ್‌ನಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ರಿಯಾಝ್ ಇನೋಳಿ ಕರ್ನಾಟಕದ ಅನಿವಾಸಿಗಳನ್ನು ಒಟ್ಟುಗೂಡಿಸುತ್ತಿರುವ ಉದ್ದೇಶ, ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಸಾಮಾನ್ಯ ಉದ್ಯೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕರ್ನಾಟಕ ಸರಕಾರವು ಅನಿವಾಸಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು. ಕರ್ನಾಟಕ ಸರಕಾರದ ಆರ್ಥಿಕ ಬೆನ್ನೆಲುಬಾಗಿರುವ ಅನಿವಾಸಿಗಳ ಬಗ್ಗೆ ಕರ್ನಾಟಕ ಸರಕಾರ ಗಮನ ಹರಿಸುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಸರಕಾರ ಕಿವಿಯಾಗುತ್ತಿಲ್ಲ. ಗಲ್ಪ್ ಜೀವನದಿಂದ […]

ಪೊನ್ನಂ ಪೇಟೆ ಕುಟ್ಟಂ ಸಮೀಪದ ದೇವಿ ವಿಲ್ಲಾ ಹೋಂಸ್ಟೇ ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ

ಅಮೆರಿಕಾ ಮೂಲದ ಮಹಿಳೆಯೊಬ್ಬರ ಮೇಲೆ ಹೋಮ್‌ಸ್ಟೇ ಕೆಲಸಗಾರ ಅತ್ಯಾಚಾರ ಎಸಗಿದ್ದು, ಬಳಿಕ ಮಾಲೀಕ ಸೇರಿ ಆಕೆಯನ್ನು ಮೂರು ದಿನಗಳ ಕಾಲ ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕಾದಿಂದ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಇಲ್ಲಿನ ‘ದೇವಿ ವಿಲ್ಲಾ’ ಎಂಬ ಹೋಮ್‌ಸ್ಟೇನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ, ಮಹಿಳೆಗೆ ಡ್ರಿಂಕ್ಸ್ ನೀಡಿ ಅಮಲೇರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಮಹಿಳೆಯ ಸಹಾಯಕ್ಕೆ […]

error: Content is protected !!