ಕರಾವಳಿ
ಅಪ್ಪಟ ಜಾತ್ಯಾತೀತವಾದಿ, ಕೋಮುವಾದಿಗಳಿಗೆ ಸಿಂಹ ಸ್ವಪ್ನ, ನೇರ ನಡೆನುಡಿಯ ದಲಿತ ನಾಯಕ ಶೇಖರ್ ಕುಕ್ಕೇಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ
ಮೃದು ಹಿಂದುತ್ವವಾದಿಗಳನ್ನು ದೂರ ಇಟ್ಟು ಅರ್ಹರನ್ನು ಪರಿಗಣಿಸಲಿ; ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತ ಮತ್ತು ಇಂದಿನ ಕಾಲಘಟ್ಟಕ್ಕೆ ಅತ್ಯಂತ ತುರ್ತು ಅಗತ್ಯವಾಗಿ ಮುಂಚೂಣಿಯಲ್ಲಿ ಕಾಣಿಸುವ ಏಕೈಕ ವ್ಯಕ್ತಿ ಶೇಖರ್ ಕುಕ್ಕೇಡಿ. ಸಾಮಾಜಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಯುವ ನಾಯಕ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, […]
ರೈಲ್ವೆ ವಿಭಾಗ ಬದಲಾವಣೆ ಐತಿಹಾಸಿಕ ಸಾಧನೆ ಎಂದು ಹೇಳಿಕೊಳ್ಳುವ ನೈತಿಕ ಹಕ್ಕು ಬಿಜೆಪಿಗಿಲ್ಲ; ಇದು ಸಾಧನೆಯಲ್ಲ—ಜನರ ಕಣ್ಣಿಗೆ ಮಣ್ಣು ಎರಚುವ ರಾಜಕೀಯ ಪ್ರಚಾರ: ಸಂತೋಷ್ ಬಜಾಲ್
ಮಂಗಳೂರು ರೈಲ್ವೆಯನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವುದನ್ನೇ ಬಿಜೆಪಿ ತನ್ನ ಅತೀ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ಳುವುದು ದಕ್ಷಿಣ ಕನ್ನಡದ ಜನತೆಗೆ ಮಾಡುವ ಮತ್ತೊಂದು ರಾಜಕೀಯ ಮೋಸ. ಸತತ ಹಲವು ಅವಧಿಗಳಲ್ಲಿ ದಕ್ಷಿಣ ಕನ್ನಡದಿಂದ ಬಿಜೆಪಿಯ ಸಂಸದರನ್ನು ನಿರಂತರವಾಗಿ ಆಯ್ಕೆ ಮಾಡಿ ಕಳುಹಿಸಿದರೂ, ಜಿಲ್ಲೆಯ ರೈಲ್ವೆ ಮೂಲಸೌಕರ್ಯಕ್ಕೆ ಅಗತ್ಯವಾದ ಅಭಿವೃದ್ಧಿಯನ್ನು ತರುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಮಂಗಳೂರು ಸೆಂಟ್ರಲ್ನಂತಹ ಪ್ರಮುಖ ರೈಲು ನಿಲ್ದಾಣಕ್ಕೆ ಸಮರ್ಪಕ ಪ್ಲಾಟ್ಫಾರಂ ವಿಸ್ತರಣೆ, ಹೆಚ್ಚಿನ ರೈಲುಗಳ ನಿಲುಗಡೆ, ಹೊಸ ರೈಲು ಸೇವೆಗಳು ಹಾಗೂ ಮಂಗಳೂರು ಕೇಂದ್ರವಾಗಿರುವ […]
ರಾಜ್ಯ
ಪೊಲೀಸ್ ಇಲಾಖೆಯಲ್ಲಿ ಡೀಲ್ ಮಾಸ್ಟರ್.. ಇಲಾಖೆಯೊಳಗಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರತಂದ ಆಡಿಯೋ.!
ಖಡಕ್ ಗೃಹ ಮಂತ್ರಿ ಇದ್ದರೂ ಪೋಸ್ಟಿಂಗ್ ಗೆ ನಡೆಯುತ್ತೆ ಡೀಲಿಂಗ್.. ಆಡಿಯೋ ಬಿಚ್ಚಿಟ್ಟ ಸತ್ಯ! ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಬ್ರಹ್ಮಾಂಡ ಗಾತ್ರದ ಭ್ರಷ್ಟಾಚಾರ ನಡೆಯುತ್ತಿದೆ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರ ಮೇಳೈಸುತ್ತಿದೆ ಅನ್ನುವ ಸುದ್ದಿ ಇದ್ದರೂ ಅದಕ್ಕೆ ಪುಷ್ಟಿ ನೀಡುವಂತ ಆಡಿಯೋ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಠಾಣೆಯ ಪ್ರಮುಖ ಹುದ್ದೆ ಹಾಗೂ ಪೋಸ್ಟಿಂಗ್ ಪಡೆಯಲು ದುಡ್ಡೇ ಪ್ರಮುಖ ಮಾನದಂಡವಾಗುತ್ತಿದೆ ಅನ್ನುವ ಸುದ್ದಿ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಹಳಿಯಾಳದ ಹಿಂದಿನ […]
‘ನಾಗೇಂದ್ರ’ ಬಿಜೆಪಿಗೆ ಕ್ರೆಡಿಟ್ಟು, ಕಾಂಗ್ರೆಸ್ಸಿಗೆ ಕ್ಯಾಶು’
✍️ ಆರ್.ಟಿ.ವಿಠ್ಠಲಮೂರ್ತಿ ಸಚಿವ ನಾಗೇಂದ್ರ ರಾಜೀನಾಮೆ ಎಪಿಸೋಡಿನ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮುಗಿಬೀಳಲು ಸಿಎಂ ಡಿ.ಕೆ.ಶಿವಕುಮಾರ್ ಸಜ್ಜಾಗಿದ್ದಾರೆ.ಅಂದ ಹಾಗೆ ವಾಲ್ಮೀಕಿ ಹಗರಣದ ಹೆಸರಿನಲ್ಲಿ ಸಚಿವ ನಾಗೇಂದ್ತ ಅವರ ವಿರುದ್ಧ ಬಿಜೆಪಿ ತಿರುಗಿ ಬಿತ್ತಲ್ಲ? ಹೀಗೆ ಅ ತಿರುಗಿ ಬಿದ್ದರೂ ಕಾಂಗ್ರೆಸ್ ಅದನ್ನು ನಿರಾಯಾಸವಾಗಿ ಎದುರಿಸಬಹುದಿತ್ತು.ಯಾಕೆಂದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಂತೆಂತಹ ಹಗರಣಗಳ ಆರೋಪ ಬಂದು ರಣ ರಾದ್ಧಾಂತವಾದರೂ ಸಿದ್ದು-ಡಿಕೆಶಿ ನೇತೃತ್ವದ ಕಾಂಗ್ರೆಸ್ಸು ಅದಕ್ಕೆ ಕ್ಯಾರೇ ಎನ್ನಲಿಲ್ಲ. ಅದು ಸಿದ್ದರಾಮಯ್ಯ ವಿರುದ್ದದ ಮೂಡಾ […]
ರಾಷ್ಟ್ರೀಯ
2029 ಕ್ಕೆ ದೇಶದಲ್ಲಿ ಜೆನ್ ಝೀ ಗಳದ್ದೇ ಕಾರುಬಾರು.. ಜೆನ್ ಝೀ ಗಳ ಹೃದಯ ಗೆದ್ದವರಿಗೆ ಗದ್ದುಗೆ ಫಿಕ್ಸ್!
ಹಿಂದೂ -ಮುಸ್ಲಿಂ ಖೇಲ್ ಖತಂ.. ಜೆನ್ ಝೀ -ಮಿಲೇನಿಯಲ್ಸ್ ತೀರ್ಪೆ ಫೈನಲ್ 2029 ಕ್ಕೆ ಚುನಾವಣೆಯ ಇಶ್ಯೂ ಯಾವುದೆಂದರೆ ಒಳ್ಳೆಯ ಗುಣಮಟ್ಟದ ಶಿಕ್ಷಣ, ಉಜ್ವಲ ಭವಿಷ್ಯಕ್ಕಾಗಿ ಯುವಜನತೆಗೆ ಉದ್ಯೋಗ, ಪರಿಸರದ ಬಗ್ಗೆ ಕಾಳಜಿ, ಆರೋಗ್ಯಕರ ಜೀವನ, ಬೆಲೆ ಏರಿಕೆಗೆ ಕಡಿವಾಣ, ಸ್ವಾಭಿಮಾನದ ಬದುಕು ಇದೇ ಮುಖ್ಯ ಅಸ್ತ್ರ ವಾಗುವ ಸಾಧ್ಯತೆಗಳಿವೆ. ದೇಶದೆಲ್ಲೆಡೆ ಜೆನ್ ಝೀ ಗಳ ಸಂಖ್ಯೆ ಗಣನೀಯ ಮಟ್ಟದಲ್ಲಿರುವುದರಿಂದ ಈ ತಲೆಮಾರನ್ನು ರಾಜಕಾರಣಿಗಳು ಭಾವನಾತ್ಮಕ ಅಂಶಗಳನ್ನು ಮುಂದಿಟ್ಟು ಮಂಕು ಮರುಳು ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಒಟ್ಟು […]
ಡೇತ್ ನೋಟಲ್ಲಿ ದೋಷಿತನಾದ ಮಾತ್ರಕ್ಕೆ ಪ್ರಚೋದನೆಯ ಅಪರಾಧವಾಗಲ್ಲ
FIR ದಾಖಲಿಸಿದ ಮಾತ್ರಕ್ಕೆ ಆತ್ಮಹತ್ಯೆಗೆ ಕುಮ್ಮಕ್ಕು ಎನ್ನಲಾಗದು: ಸುಪ್ರೀಂ ಕೋರ್ಟ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದ ಮಾತ್ರಕ್ಕೆ ಆತನನ್ನು ಕ್ರಿಮಿನಲ್ ಅಪರಾಧಕ್ಕೆ ಹೊಣೆಗಾರನನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನಿನಡಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ದೃಢ ಹಕ್ಕನ್ನು ಹೊಂದಿದ್ದಾರೆ ಎಂದು ಅದು ಒತ್ತಿ ಹೇಳಿದೆ. ಯಾರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೋ ಅವರು ನಂತರ ಆತ್ಮಹತ್ಯೆ ಮಾಡಿಕೊಂಡರು ಎಂಬ ಕಾರಣಕ್ಕೆ […]
ಅಂತಾರಾಷ್ಟ್ರೀಯ
ಇರಾನ್ – ಅಮೇರಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆ. ಸೌದಿ ಕಳವಳ; ಟ್ರಂಪ್ ಜೊತೆ ಸೌದಿ ಯುವರಾಜ ಮಾತುಕತೆ
ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ನಡೆಸಿದ್ದು, ಇರಾನ್ ಜೊತೆಗಿನ ಸಂಘರ್ಷವನ್ನು ಅಮೆರಿಕ ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕವು ಇರಾನ್ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡರೆ ಅಥವಾ ಇತರ ಪ್ರಮುಖ ಮೂಲಸೌಕರ್ಯಗಳ ಮೇಲೆ ಭಾರಿ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್, ಸೌದಿ ಅರೇಬಿಯಾ ಹಾಗೂ ಇತರ ಕೊಲ್ಲಿ ದೇಶಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಬಹುದು ಎಂದು ಸೌದಿ ಅರೇಬಿಯಾ ಆತಂಕಗೊಂಡಿದೆ ಎಂದು […]
ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿಗೆ ಯಾವುದೇ ಬೆಲೆ ಇಲ್ಲ; ದಾಳಿಯನ್ನು ಮುಂದುವರಿಸಿದರೆ, ತಕ್ಕಪಾಠ: ಖಮೇನಿ ಎಚ್ಚರಿಕೆ
ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿಗೆ ಯಾವುದೇ ಬೆಲೆ ಇಲ್ಲ, ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು 14 ಅಂಶಗಳ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಂದು ವೇಳೆ ಅಮೆರಿಕ ದಾಳಿಯನ್ನು ಮುಂದುವರಿಸಿದರೆ, ಎಂದಿಗೂ ಮರೆಯಲಾಗದ ಪಾಠ ಕಲಿಸುವುದಾಗಿ ಖಮೇನಿ ಎಚ್ಚರಿಕೆ ನೀಡಿದ್ದಾರೆ. ಇರಾನ್ ದೇಶವನ್ನು ಉದ್ದೇಶಿಸಿ ಸಂದೇಶ ರವಾನಿಸಿರುವ ಖಮೇನಿ, ಅಮೆರಿಕ ಪದೇ ಪದೇ ಒಪ್ಪಂದಗಳ ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು. ಇದರಿಂದ ಅಮೆರಿಕದ ನೈಜ ಬಣ್ಣ ಬಯಲಾಗಿದೆ. ಒಪ್ಪಂದವನ್ನು ಉಲ್ಲಂಘಿಸುವ ಹಳೇ ಚಾಳಿಯನ್ನು ಅಮೆರಿಕ […]
