ಕರಾವಳಿ
ಕರಾವಳಿ ಜಿಲ್ಲೆಗಳ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು, ಪ್ರವಾಸೋದ್ಯಮ ಸಹಿತ ಅಭಿವೃದ್ದಿ ನೀತಿಯಲ್ಲಿ ಕಾರ್ಪೊರೇಟ್ ಪರವಾದ ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ ಘೋಷಣೆ
ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ದಿಯ ಉದ್ದೇಶದೊಂದಿಗೆ ಸಚಿವ ಸಂಪುಟದ ವಿಶೇಷ ಸಭೆಯನ್ನು 18.09.2026 ರಂದು ಮಂಗಳೂರಿನಲ್ಲಿ ನಡೆಸುವುದಾಗಿ ಕರ್ನಾಟಕ ಸರಕಾರ ಘೋಷಿಸಿದೆ. ಕರಾವಳಿ ಕರ್ನಾಟಕವು ಪರಿಸರ ಸೂಕ್ಷ್ಮವಾದ ಪಶ್ಚಿಮ ಘಟ್ಟ, ಅರಬಿ ಸಮುದ್ರ, ಹಲವಾರು ನದಿಗಳಿಂದ ಸಮೃದ್ದವಾದ ಪ್ರದೇಶ. ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ವಿಶಾಲವಾದ ರಸ್ತೆ ಜಾಲಗಳಿಂದಾಗಿ ಅಭಿವೃದ್ದಿಯ ವಿಫುಲ ಅವಕಾಶಗಳನ್ನು ಹೊಂದಿರುವುದು ಹೌದು. ಉದ್ಯಮಶೀಲ ಹಾಗು ಶ್ರಮಜೀವಿ, ವಿದ್ಯಾವಂತ, ಬುದ್ದಿವಂತ ಜನರ ನೆಲೆಯೂ ಆಗಿರುವ ಕರಾವಳಿ ಜಿಲ್ಲೆಗಳು ಸಾಧಿಸಬೇಕಾದಷ್ಟು ಅಭಿವೃದ್ಧಿ ಸಾಧಿಸಿಲ್ಲ. […]
ಪೊಲೀಸರ ಡ್ಯಾಶಿಂಗ್ ರೀತಿಯ ಭಾಷೆಯನ್ನು ಕರಾವಳಿಯ ಜನ ಒಪ್ಪಿಕೊಳ್ಳಲ್ಲ. ಘಟ್ಟದಾಚೆಗಿನ ಪೊಲೀಸರ ಕಟು ಭಾಷೆ ಇಲ್ಲಿ ವರ್ಕೌಟ್ ಆಗಲ್ಲ.!
ಸಂಚಾರಿ ಪೊಲೀಸಪ್ಪನ ರೌದ್ರಾವತಾರ.. ವಿಡಿಯೋ ವೈರಲ್.. ಕರಾವಳಿ ಪೊಲೀಸರು ಅನುಸರಿಸಬೇಕಾದ ಮಾನದಂಡವೇನು.? ಪೊಲೀಸರಷ್ಟು ಟೀಕೆಗೆ ಗುರಿಯಾಗುವ ವ್ಯಕ್ತಿ ಈ ಜಗತ್ತಿನಲ್ಲಿ ಬೇರೆ ಯಾರೂ ಇರಲಿಕ್ಕಿಲ್ಲ. ಗಲಾಟೆ, ದೊಂಬಿ, ಕೋಮುಗಲಭೆ ನಡೆದರೆ ಮೊದಲು ಟೀಕೆಗೊಳಗಾಗುವುದು ಪೊಲೀಸರು. ಗಲಾಟೆಯನ್ನು ಸಮರ್ಥವಾಗಿ ನಿಭಾಯಿಸಿದರೆ ಅಮಾಯಕರ ಮೇಲೆ ದೌರ್ಜನ್ಯ ಅನ್ನುವ ಮತ್ತೊಂದು ಹೊಸ ಕೂಗು ಕೇಳಿ ಬರುತ್ತದೆ. ದಿನದ 24 ತಾಸು ಮಳೆ, ಬಿಸಿಲು ಅನ್ನದೆ ಕಾರ್ಯನಿರ್ವಹಿಸಬೇಕಾದವರು ಪೊಲೀಸರು. ಕೆಲವೊಮ್ಮೆ ನಡುಬೀದಿಯ ರಸ್ತೆಯ ಬಸ್ಸು ನಿಲ್ದಾಣ ಪೊಲೀಸರಿಗೆ ರಾತ್ರಿಯ ನಿದ್ರಿಸುವ ಸ್ಥಳವೂ ಆಗಿರುತ್ತದೆ. […]
ರಾಜ್ಯ
ಸಿದ್ದು ಕೊರಳಿಗೆ ಗಂಟೆ ಕಟ್ಟುವವರು ಯಾರು.?, ಬೇರೆ ದಾರಿಯತ್ತ ರಾಜಣ್ಣ?, ಯಡಿಯೂರಪ್ಪ ಖುಷಿಗೆ ಏನು ಕಾರಣ?
✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಗೆ ಹೋದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ತುಂಬ ಕಕ್ಕುಲತೆ ತೋರಿಸಿದರಂತೆ. ‘ಸಿದ್ಧರಾಮಯ್ಯಾಜೀ, ನೀವು ನಮ್ಮ ಪಕ್ಷದ ಆಸ್ತಿ. ಮುಂದಿನ ದಿನಗಳಲ್ಲಿ ನಾವು ಮರಳಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲು ನಿಮ್ಮ ಶಕ್ತಿ ಮುಖ್ಯ. 2029 ರ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಮಿತ್ರಕೂಟವನ್ನು ಎದುರಿಸಬೇಕು ಎಂದರೆ 2028 ರ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಕರ್ನಾಟಕವನ್ನು ಗೆಲ್ಲಲೇಬೇಕು. […]
ರಾಜ್ಯದಲ್ಲೂ SIR ಕರಾಳ ಮುಖದ ದರ್ಶನ.. ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದ ಹೆಮ್ಮೆಯ ಪುತ್ರರನ್ನೇ ಅನುಮಾನಿಸುವ ಚುನಾವಣಾ ಆಯೋಗ
ಐಎಎಸ್, ಭಾರತ ರತ್ನ, ಪದ್ಮಶ್ರೀ ಅಂತಹ ಉನ್ನತ ಪ್ರಶಸ್ತಿ, ಪದವಿ ಪಡೆದರೂ ಅನುಮಾನ.! SIR ಕರಾಳ ಮುಖದ ದರ್ಶನ ರಾಜ್ಯದಲ್ಲೂ ಬೆಳಕಿಗೆ ಬರುತ್ತಿದೆ. SIR ಜಾರಿಯಾದರೆ ತಪ್ಪೇನು..? ಪಾಕಿಸ್ತಾನ, ಬಾಂಗ್ಲಾದೇಶದ ನುಸುಳುಕೋರರ ಪತ್ತೆಯಾಗುತ್ತದೆ ಅನ್ನುವ ಕಥೆ ಕಟ್ಟಿ ಜಾರಿಗೆ ಬಂದ SIR ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದ ಹೆಮ್ಮೆಯ ಪುತ್ರರನ್ನೇ ಅನುಮಾನದ ದೃಷ್ಟಿಯಿಂದ ನೋಡುವ ಹಂತಕ್ಕೆ ಬಂದು ನಿಂತಿದೆ ಅನ್ನುವುದು ಸುಳ್ಳಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದಲ್ಲಿ ನಡೆದ ಕೆಲವೊಂದು ಘಟನಾವಳಿಗಳೇ ಇದಕ್ಕೆ ಸಾಕ್ಷಿ. ಡಿಸಿಯಾಗಿದ್ದವರನ್ನೇ ಅನುಮಾನಿಸಿದ […]
ರಾಷ್ಟ್ರೀಯ
ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್
ಶಿಕ್ಷಣ ಸಂಸ್ಥೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ. 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಅಥವಾ ಧಾರ್ಮಿಕ ಬೋಧನೆ ನೀಡುವ ಎಲ್ಲ ಸಂಸ್ಥೆಗಳನ್ನು ನಿಯಂತ್ರಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಶಿಕ್ಷಣ ಸಚಿವಾಲಯಕ್ಕೆ ಸೂಚಿಸಿತ್ತು. ಆದರೆ ಈ ಆದೇಶವನ್ನು ಸಚಿವಾಲಯ ಪಾಲಿಸಿಲ್ಲ ಎಂಬುದನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಶೀಲ್ ನಾಗೂ ಅವರಿದ್ದ […]
ಲೈಂಗಿಕ ದುರುದ್ದೇಶವಿರದ ದೈಹಿಕ ಶಿಕ್ಷೆಯನ್ನು ಪೋಕ್ಸೋ ಎಂದು ಪರಿಗಣಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಲೈಂಗಿಕ ದುರುದ್ದೇಶವಿರದ ದೈಹಿಕ ಶಿಕ್ಷೆಯನ್ನು ಪೋಕ್ಸೋ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪಾಠವನ್ನು ಪೂರ್ಣ ಗೊಳಿಸಲು ವಿಫಲರಾದ ವಿದ್ಯಾರ್ಥಿನಿಯರಿಗೆ ಹೊಡೆಯುವುದು, ಅವರ ಕೈಗಳನ್ನು ಹಿಡಿಯುವುದು, ಬೆನ್ನು ಅಥವಾ ಸೊಂಟವನ್ನು ಮುಟ್ಟುವುದು ಸೇರಿ ಲೈಂಗಿಕ ಉದ್ದೇಶವಿಲ್ಲದೆ ಶಿಕ್ಷಕರು ನೀಡುವ ದೈಹಿಕ ಶಿಕ್ಷೆಯು ಪೋಕ್ಸೊ ಅಪರಾಧವಲ್ಲ, ಇದು ಪೋಕ್ಸೊ ಕಾಯ್ದೆಯ ಸೆಕ್ಷನ್ 10ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶಿಕ್ಷಕರ ಇಂತಹ ನಡವಳಿಕೆಯು ಅನುಚಿತವಾದ ಶಿಕ್ಷೆಯ ಸ್ವರೂಪವಾಗಿದೆ. ಎಳೆಯ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಶಿಕ್ಷಕರು ಹೆಚ್ಚು ಸಂವೇದನಾಶೀಲರಾಗಿ ಇರಬೇಕು’ […]
ಅಂತಾರಾಷ್ಟ್ರೀಯ
ಬಹುರಾಷ್ಟ್ರಿಯ ಶೃಂಗಸಭೆಗಳಿಂದ ದೇಶಕ್ಕೆ ಏನು ಪ್ರಯೋಜನ: ಚಿದಂಬರಂ
ಭಾರತದ ರಾಜತಾಂತ್ರಿಕತೆ, ಒಗ್ಗೂಡಿಸುವಿಕೆ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ: ತರೂರು ಬ್ರಿಕ್ಸ್ ಶೃಂಗಸಭೆಯ ಪ್ರಸ್ತುತತೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಸಮರ್ಥಿಸಿಕೊಂಡಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಬ್ರಿಕ್ಸ್ ಶೃಂಗಸಭೆಯಿಂದ ಭಾರತ ಪಡೆದಿರುವ ಸ್ಪಷ್ಟ ಪ್ರಯೋಜನಗಳನ್ನು ಪ್ರಶ್ನಿಸಿದ ನಂತರ, ಈ ಗುಂಪು ಜಾಗತಿಕ ದಕ್ಷಿಣಕ್ಕೆ ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಮತ್ತು ಭಾರತದ ರಾಜತಾಂತ್ರಿಕ ಸಮಾವೇಶದ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ವರದಿಯೊಂದು ತಿಳಿಸಿದೆ. ಬ್ರಿಕ್ಸ್ ಶೃಂಗಸಭೆಯ ಮೊದಲು ಮಾತನಾಡಿದ ತರೂರ್, 11 ದೇಶಗಳ ಗುಂಪು ವಿಶ್ವದ ಜನಸಂಖ್ಯೆ ಮತ್ತು ಜಾಗತಿಕ […]
ಇರಾನ್ – ಅಮೇರಿಕ ಸಂಘರ್ಷ ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆ. ಸೌದಿ ಕಳವಳ; ಟ್ರಂಪ್ ಜೊತೆ ಸೌದಿ ಯುವರಾಜ ಮಾತುಕತೆ
ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ನಡೆಸಿದ್ದು, ಇರಾನ್ ಜೊತೆಗಿನ ಸಂಘರ್ಷವನ್ನು ಅಮೆರಿಕ ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕವು ಇರಾನ್ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡರೆ ಅಥವಾ ಇತರ ಪ್ರಮುಖ ಮೂಲಸೌಕರ್ಯಗಳ ಮೇಲೆ ಭಾರಿ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್, ಸೌದಿ ಅರೇಬಿಯಾ ಹಾಗೂ ಇತರ ಕೊಲ್ಲಿ ದೇಶಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಬಹುದು ಎಂದು ಸೌದಿ ಅರೇಬಿಯಾ ಆತಂಕಗೊಂಡಿದೆ ಎಂದು […]
