ಸಿದ್ದು ಕೊರಳಿಗೆ ಗಂಟೆ ಕಟ್ಟುವವರು ಯಾರು.?, ಬೇರೆ ದಾರಿಯತ್ತ ರಾಜಣ್ಣ?, ಯಡಿಯೂರಪ್ಪ ಖುಷಿಗೆ ಏನು ಕಾರಣ?

✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಗೆ ಹೋದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ತುಂಬ ಕಕ್ಕುಲತೆ ತೋರಿಸಿದರಂತೆ. ‘ಸಿದ್ಧರಾಮಯ್ಯಾಜೀ, ನೀವು ನಮ್ಮ ಪಕ್ಷದ ಆಸ್ತಿ. ಮುಂದಿನ ದಿನಗಳಲ್ಲಿ ನಾವು ಮರಳಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲು ನಿಮ್ಮ ಶಕ್ತಿ ಮುಖ್ಯ. 2029 ರ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಮಿತ್ರಕೂಟವನ್ನು ಎದುರಿಸಬೇಕು ಎಂದರೆ 2028 ರ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಕರ್ನಾಟಕವನ್ನು ಗೆಲ್ಲಲೇಬೇಕು. […]

Continue Reading

ರಾಜ್ಯದಲ್ಲೂ SIR ಕರಾಳ ಮುಖದ ದರ್ಶನ.. ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದ ಹೆಮ್ಮೆಯ ಪುತ್ರರನ್ನೇ ಅನುಮಾನಿಸುವ ಚುನಾವಣಾ ಆಯೋಗ

ಐಎಎಸ್, ಭಾರತ ರತ್ನ, ಪದ್ಮಶ್ರೀ ಅಂತಹ ಉನ್ನತ ಪ್ರಶಸ್ತಿ, ಪದವಿ ಪಡೆದರೂ ಅನುಮಾನ.! SIR ಕರಾಳ ಮುಖದ ದರ್ಶನ ರಾಜ್ಯದಲ್ಲೂ ಬೆಳಕಿಗೆ ಬರುತ್ತಿದೆ. SIR ಜಾರಿಯಾದರೆ ತಪ್ಪೇನು..? ಪಾಕಿಸ್ತಾನ, ಬಾಂಗ್ಲಾದೇಶದ ನುಸುಳುಕೋರರ ಪತ್ತೆಯಾಗುತ್ತದೆ ಅನ್ನುವ ಕಥೆ ಕಟ್ಟಿ ಜಾರಿಗೆ ಬಂದ SIR ದೇಶಕ್ಕೆ, ರಾಜ್ಯಕ್ಕೆ ಕೀರ್ತಿ ತಂದ ಹೆಮ್ಮೆಯ ಪುತ್ರರನ್ನೇ ಅನುಮಾನದ ದೃಷ್ಟಿಯಿಂದ ನೋಡುವ ಹಂತಕ್ಕೆ ಬಂದು ನಿಂತಿದೆ ಅನ್ನುವುದು ಸುಳ್ಳಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದಲ್ಲಿ ನಡೆದ ಕೆಲವೊಂದು ಘಟನಾವಳಿಗಳೇ ಇದಕ್ಕೆ ಸಾಕ್ಷಿ. ಡಿಸಿಯಾಗಿದ್ದವರನ್ನೇ ಅನುಮಾನಿಸಿದ […]

Continue Reading

ಬೆಳ್ತಂಗಡಿ: ಲವ್, ಸೆಕ್ಸ್ ದೋಖಾ; ಮಹಿಳೆಗೆ ಮಾರಣಾಂತಿಕ ಹಲ್ಲೆ. ಯುವ ವಕೀಲನ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಬೆಂಗಳೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಬೆಳ್ತಂಗಡಿ ಮೂಲದ ಯುವ ವಕೀಲರೊಬ್ಬರು ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಮದುವೆಯಾಗುವುದಿಲ್ಲವೆಂದು ವಂಚಿಸಿದ್ದಲ್ಲದೆ ಮಹಿಳೆ ಮೇಲೆ ಮಾರಣಾಂತಿಕವಾಗಿ‌ ಹಲ್ಲೆ ನಡೆಸಿರುವ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಬೆಂಗಳೂರು ನಗರದ ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಆರೋಪಿ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲ್ಕೊಡಿ ನಿವಾಸಿ, ವಕೀಲ ವೃತ್ತಿ ನಡೆಸುತ್ತಿರುವ ಜಿತಿನ್ ಜಿಜೋ ಎಂಬಾತ ಮೇಲೆ ಪ್ರಕರಣ ದಾಖಲಾಗಿದೆ. ಸಂತ್ರಸ್ತ […]

Continue Reading

ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ. ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’; ಇವರದ್ದು ಅರ್ಥಪೂರ್ಣ ಅನುಭವ ಕಥನ.

ಬೆಂಗಳೂರು: ಪೊಲೀಸ್ ಸಮವಸ್ತ್ರ ಕಂಡಾಗ ಸಾಮಾನ್ಯವಾಗಿ ನೆನಪಾಗುವುದು ಶಿಸ್ತು, ಕಾನೂನು ಮತ್ತು ಕಠಿಣ ಕ್ರಮ. ಆದರೆ ಅದೇ ಸಮವಸ್ತ್ರದೊಳಗೆ ಮಿಡಿಯುವ ಮಾನವೀಯ ಹೃದಯವೊಂದಿದೆ. ಅಪರಾಧಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ನಿಷ್ಠುರತೆ ತೋರುವ ಪೊಲೀಸ್ ಅಧಿಕಾರಿ, ಮತ್ತೊಂದೆಡೆ ಯುವಜನರ ಮುಂದೆ ನಿಂತು ಬದುಕಿನ ಪಾಠ ಹೇಳುವ ಆತ್ಮೀಯ ಶಿಕ್ಷಕಿಯಾಗಬಹುದು ಎಂಬುದಕ್ಕೆ ರೀನಾ ಸುವರ್ಣ ಅವರ ಸೇವಾ ಪಯಣ ಒಂದು ಉದಾಹರಣೆ. ಹಿರಿಯ KSPS ಅಧಿಕಾರಿ ರೀನಾ ಸುವರ್ಣ ಅವರು ಪೊಲೀಸ್ ಇಲಾಖೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕಳ್ಳರ ಬೆನ್ನತ್ತುವುದರಿಂದ ಹಿಡಿದು […]

Continue Reading

ಕುಮಾರಣ್ಣ ಬಾಂಬು ಹಾಕುವ ಟೈಮು ಬಂತು; ವಿಜಯ ಯಾತ್ರೆ ಲಾಭ ಯಾರಿಗೆ.?

ಕೈ ಪಾಳಯದಲ್ಲಿ ಬಣ ಸಂಘರ್ಷ, ಜಮೀರ್ ರಾಜೀನಾಮೆ ಕೊಡ್ತಾರಾ.? ಅರ್.ಅಶೋಕ್ ಅವರ ತಾಕತ್ ಕೀ ದವಾ; ‘ಏಕ್ ಮಾರ್ ದೋ ತುಕಡಾ’ ✍️. ಅರ್.ಟಿ.ವಿಠ್ಠಲಮೂರ್ತಿ ಜೆಡಿಎಸ್ ನಾಯಕ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಈ ವಾರ ಬಾಂಬು ಸಿಡಿಸಲಿದ್ದಾರೆಯೇ.? ಮತ್ತು ಅದರ‌ ಹೊಡೆತಕ್ಕೆ‌ ಕರ್ನಾಟಕದ ರಾಜಕೀಯ ಚಿತ್ರ ಬದಲಾಗಲಿದೆಯೇ.?ಇಂತದೊಂದು ಪ್ರಶ್ನೆ‌ ಇದೀಗ ಎಲ್ಲರ‌ ಕೌತುಕಕ್ಕೆ‌ ಕಾರಣವಾಗಿದೆ. ಮತ್ತು ಸೆಪ್ಟೆಂಬರ್ 12 ನೇ ತಾರೀಕನ್ನು ಎದುರು ನೋಡುವಂತೆ ಮಾಡಿದೆ. ಅಂದ ಹಾಗೆ ಇಂತಹದೊಂದು‌ ಕೌತುಕ ಮೂಡಿಸಿರುವ ಕುಮಾರಸ್ವಾಮಿ ಅವರು ಸಧ್ಯಕ್ಕೆ […]

Continue Reading

ರಾತ್ರಿಪಾಳಿ ಕೆಲಸದಲ್ಲಿ ಪತಿ, ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಪ್ರಿಯಕರನ ಜೊತೆ ರಾಸಲೀಲೆ; ಸಿಕ್ಕಿ ಬಿದ್ದ ಪತ್ನಿ, ಕುಕ್ಕರ್ ಪ್ರಯೋಗಕ್ಕೆ ಪತಿ ಮಾಟಾಶ್.!

ದಾಂಪತ್ಯ ಸಂಬಂಧಕ್ಕೆ ಕಳಂಕ ತರುವಂತಹ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಬೀನಾ ಕಾಲೋನಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಎನ್‌ಸಿಎಲ್ ಸಂಸ್ಥೆಯಲ್ಲಿ ಸೀನಿಯರ್ ಓವರ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮಾ ಶಂಕರ್ ಮಿಶ್ರಾ ಅವರನ್ನು ಅವರ ಪತ್ನಿ ಪ್ರಿಯಾಂಕಾ ಮಿಶ್ರಾ ಹಾಗೂ ಆಕೆಯ ಪ್ರಿಯಕರ ವಿಕಾಸ್ ಚೌಹಾಣ್ ಮತ್ತು ಸಹಚರರು ಸೇರಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಎನ್‌ಸಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಮಾ ಶಂಕರ್ ಅವರಿಗೆ ರಾತ್ರಿ ಪಾಳಿಯ ಕೆಲಸವಿರುತ್ತಿತ್ತು. ಗಂಡ ಕೆಲಸಕ್ಕೆ ತೆರಳಿದ ತಕ್ಷಣ, ಪತ್ನಿ ಪ್ರಿಯಾಂಕಾ […]

Continue Reading

ಮನೆಗೆ ಬೆಂಕಿ‌ ಹಚ್ಚಿ ಒಂದೇ ಕುಟುಂಬದ ಆರು ಮಂದಿಯ ಸಜೀವ ದಹನ; ಆರೋಪಿ ಅಬ್ದುಲ್‌ ಷರೀಫ್‌ ಗೆ ಜೀವಾವಧಿ: ಹೈಕೋರ್ಟ್‌

ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ಬೆಂಕಿ‌ ಹಚ್ಚಿ ಒಂದೇ ಕುಟುಂಬದ 6 ಮಂದಿಯ ಜೀವಂತ ದಹನಕ್ಕೆ ಕಾರಣಕರ್ತನಾದ ಅಬ್ದುಲ್‌ ಷರೀಫ್‌ ಅಲಿಯಾಸ್‌ ಅಮೀರ್ ಜಾನ್‌ಗೆ ಕರ್ನಾಟಕ ಹೈಕೋರ್ಟ್‌ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಮೈಸೂರಿನ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2018ರ ಏಪ್ರಿಲ್‌ 28ರಂದು ನೀಡಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠ ರದ್ದುಗೊಳಿಸಿದೆ. ದುರ್ಘಟನೆಯು ಅನಿಲ ಸಿಲಿಂಡರ್‌ನಿಂದ ಸ್ಫೋಟಗೊಂಡ ಪ್ರಕರಣವಲ್ಲ. ಆರೋಪಿಯು ಪೆಟ್ರೋಲ್ ಸುರಿದು ಉದ್ದೇಶಪೂರ್ವಕವಾಗಿ ನಡೆಸಿರುವ ದುಷ್ಕೃತ್ಯ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯಾಧಾರ ಮತ್ತು ಎಫ್‌ಎಸ್‌ಎಲ್‌ […]

Continue Reading

ಪೊಲೀಸ್ ಇಲಾಖೆಯಲ್ಲಿ ಡೀಲ್ ಮಾಸ್ಟರ್.. ಇಲಾಖೆಯೊಳಗಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರತಂದ ಆಡಿಯೋ.!

ಖಡಕ್ ಗೃಹ ಮಂತ್ರಿ ಇದ್ದರೂ ಪೋಸ್ಟಿಂಗ್ ಗೆ ನಡೆಯುತ್ತೆ ಡೀಲಿಂಗ್.. ಆಡಿಯೋ ಬಿಚ್ಚಿಟ್ಟ ಸತ್ಯ! ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಬ್ರಹ್ಮಾಂಡ ಗಾತ್ರದ ಭ್ರಷ್ಟಾಚಾರ ನಡೆಯುತ್ತಿದೆ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರ ಮೇಳೈಸುತ್ತಿದೆ ಅನ್ನುವ ಸುದ್ದಿ ಇದ್ದರೂ ಅದಕ್ಕೆ ಪುಷ್ಟಿ ನೀಡುವಂತ ಆಡಿಯೋ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಠಾಣೆಯ ಪ್ರಮುಖ ಹುದ್ದೆ ಹಾಗೂ ಪೋಸ್ಟಿಂಗ್ ಪಡೆಯಲು ದುಡ್ಡೇ ಪ್ರಮುಖ ಮಾನದಂಡವಾಗುತ್ತಿದೆ ಅನ್ನುವ ಸುದ್ದಿ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಹಳಿಯಾಳದ ಹಿಂದಿನ […]

Continue Reading

‘ನಾಗೇಂದ್ರ’ ಬಿಜೆಪಿಗೆ ಕ್ರೆಡಿಟ್ಟು, ಕಾಂಗ್ರೆಸ್ಸಿಗೆ ಕ್ಯಾಶು’

✍️ ಆರ್.ಟಿ.ವಿಠ್ಠಲಮೂರ್ತಿ ಸಚಿವ ನಾಗೇಂದ್ರ ರಾಜೀನಾಮೆ‌ ಎಪಿಸೋಡಿನ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮುಗಿಬೀಳಲು ಸಿಎಂ ಡಿ.ಕೆ.ಶಿವಕುಮಾರ್ ಸಜ್ಜಾಗಿದ್ದಾರೆ.ಅಂದ ಹಾಗೆ ವಾಲ್ಮೀಕಿ ಹಗರಣದ ಹೆಸರಿನಲ್ಲಿ ಸಚಿವ ನಾಗೇಂದ್ತ ಅವರ ವಿರುದ್ಧ ಬಿಜೆಪಿ ತಿರುಗಿ ಬಿತ್ತಲ್ಲ? ಹೀಗೆ ಅ ತಿರುಗಿ ಬಿದ್ದರೂ ಕಾಂಗ್ರೆಸ್ ಅದನ್ನು ನಿರಾಯಾಸವಾಗಿ ಎದುರಿಸಬಹುದಿತ್ತು.ಯಾಕೆಂದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಂತೆಂತಹ ಹಗರಣಗಳ ಆರೋಪ ಬಂದು ರಣ ರಾದ್ಧಾಂತವಾದರೂ ಸಿದ್ದು-ಡಿಕೆಶಿ ನೇತೃತ್ವದ ಕಾಂಗ್ರೆಸ್ಸು ಅದಕ್ಕೆ ಕ್ಯಾರೇ ಎನ್ನಲಿಲ್ಲ. ಅದು ಸಿದ್ದರಾಮಯ್ಯ ವಿರುದ್ದದ ಮೂಡಾ […]

Continue Reading

ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಬಂಧನ, ನೋಟಿಸ್​ ನೀಡುವಿಕೆಗೆ ಸಂಬಂಧ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸದೇ ಹೋದರೆ ಗಂಭೀರ ಪರಿಣಾಮ ಎದುರಿಸಬೇಕು: ಹೈಕೋರ್ಟ್

ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವ ಹಾಗೂ ನೋಟಿಸ್​ ನೀಡುವಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸದೇ ಹೋದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಹೈಕೋರ್ಟ್ ಪೊಲೀಸರಿಗೆ ಕಠಿಣ ಎಚ್ಚರಿಕೆ ನೀಡಿದೆ. ಮೋಹನ್ ಗೌಡ ಎಂಬವರ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ದಾಖಲಿಸಿರುವ ಎ‍ಫ್‌ಐಆರ್‌ ರದ್ದುಗೊಳಿಸಬೇಕು ಎಂದು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪೊಲೀಸರ ವರ್ತನೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಕಾಣಿಸುತ್ತಿಲ್ಲವೇ ಎಂದು […]

Continue Reading