ರಾಜ್ಯದ ವಿದ್ಯುತ್ ಗ್ರಾಹಕರಿಗೆ ಭಾರಿ ಶಾಕ್, ವಿದ್ಯುತ್ ದರ ಹೆಚ್ಚಳಕ್ಕೆ ಚಿಂತನೆ; KERC ಮೊರೆ

ವಿದ್ಯುತ್ ಸರಬರಾಜು ಕಂಪನಿಗಳ ಆದಾಯದಲ್ಲಿ 4,900 ಕೋಟಿ ರೂಪಾಯಿಯಷ್ಟು ನಷ್ಟ ಆಗಿದ್ದು, ಇದನ್ನು ಸರಿದೂಗಿಸಲು ವಿದ್ಯುತ್ ದರ ಏರಿಕೆಗೆ ತಯಾರಿ ನಡೆದಿದೆ. ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(KERC)ಕ್ಕೆ ವಾರ್ಷಿಕ ಕಾರ್ಯಕ್ಷಮತೆ ವರದಿ ಸಲ್ಲಿಸಿವೆ.2024- 25 ನೇ ಸಾಲಿನ ವಾರ್ಷಿಕ ಕಾರ್ಯಕ್ಷಮತೆ ವರದಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಸಲ್ಲಿಸಿದ್ದು, ಆದಾಯದಲ್ಲಿ 4900 ಕೋಟಿ ರೂ. ಖೋತಾ ಆಗಿದೆ. ಸಮತೋಲನ ಕಾಯ್ದುಕೊಳ್ಳಲು ವಿದ್ಯುತ್ ದರ ಪರಿಷ್ಕರಣೆ ಅಗತ್ಯವಿದೆ ಎಂದು ಎಸ್ಕಾಂ ಗಳು ಕೆಇಆರ್‌ಸಿಗೆ […]

Continue Reading

ಕುಂಬಳೆ ಟೋಲ್ ಗೇಟ್ ತೆರವು ಹೋರಾಟಕ್ಕೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬೆಂಬಲ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಯೂ ಅಂತರದ ನಿಯಮ ಪಾಲಿಸಲು ಆಗ್ರಹ: ಮುನೀರ್ ಕಾಟಿಪಳ್ಳ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಆರಂಭಿಸಿರುವುದು ಜನತೆಯ ತೀವ್ರ ಆಕ್ರೋಶಕ್ಕೆ‌ ಕಾರಣವಾಗಿದೆ.‌ ಪ್ರತಿಭಟನೆಗಳು ಭುಗಿಲೆದ್ದಿವೆ.‌ ಮಂಜೇಶ್ವರದ ಶಾಸಕರೂ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ‘ಕರ್ನಾಟಕದ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ತಲಪಾಡಿ ಟೋಲ್ ಗೇಟ್ ನಿಂದ ಕುಂಬಳೆ ಟೋಲ್ ಗೇಟ್ ಗೆ ಇರುವ ಅಂತರ ಕೇವಲ 26 ಕಿ ಮೀ ಮಾತ್ರ, ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ ಎರಡು ಟೋಲ್ ಗೇಟ್ ಗಳ […]

Continue Reading

ಜಿಲ್ಲೆಯಲ್ಲಿ ಮತ್ತೆ ಚಿಗಿತುಕೊಳ್ಳುತ್ತಿರುವ ಅನೈತಿಕ ಪೊಲೀಸ್ ಗಿರಿ.!

ಗಂಜಿಮಠ ಗೂಡಂಗಡಿಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ ದುರ್ಷ್ಕರ್ಮಿಗಳು; ಎಫ್ ಐ ಆರ್ ದಾಖಲು ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಚಿಗಿತುಕೊಳ್ಳುತ್ತಿದ್ದು, ಬಾಲ ಬಿಚ್ಚುವ ದುರ್ಷ್ಕರ್ಮಿಗಳ ಬಾಲ ಕಟ್ ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಖಡಕ್ ಆಫೀಸರ್ಸ್ ಇಲ್ಲದೇ ಇದ್ದರೆ ಇಂತಹ ಕ್ಷುಲ್ಲಕ ಘಟನೆಗಳು ಕೋಮು ಗಲಭೆಗಳಿಗೆ ಕಾರಣವಾಗುತ್ತಿತ್ತು. ಆ ಮಟ್ಟಿಗೆ ಇಲ್ಲಿನ ಪೊಲೀಸ್ ಇಲಾಖೆಯ ಸ್ಥೈರ್ಯವನ್ನು ಮೆಚ್ಚಲೇಬೇಕು. ಗಂಜಿಮಠ ಗಾಂಧಿನಗರ ಬಳಿಯಲ್ಲಿ ಗೂಡಂಗಡಿ ಇಟ್ಟು ವ್ಯಾಪಾರ ಮಾಡುವ, ಜಾತ್ರೆ, ಕಾರ್ಯಕ್ರಮಗಳಿಗೆ […]

Continue Reading

ನಾಯಿ ಕಚ್ಚಿದರೆ ರಾಜ್ಯ ಸರಕಾರವೇ ಹೊಣೆ, ಪರಿಹಾರ ನೀಡಲಿ; ಬೀದಿ ನಾಯಿಗಳ ಬಗ್ಗೆ ಪ್ರೀತಿ, ಕಾಳಜಿ ಇದ್ದರೆ ಮನೆಗೊಯ್ದು ಸಾಕಿ: ಸುಪ್ರೀಂ ಕೋರ್ಟ್

ದೇಶಾದ್ಯಂತ ಅನೇಕ ನಗರಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿ ಹೆಚ್ಚುತ್ತಿದೆ. ಜನವರಿ 13ರಂದು ಈ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಾಗರಿಕರು ನಾಯಿ ಕಡಿತದಿಂದ ಸತ್ತರೆ ಅಥವಾ ಗಾಯಗೊಂಡರೆ, ರಾಜ್ಯ ಸರ್ಕಾರಗಳು ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಿತು. 75 ವರ್ಷಗಳಿಂದ ಸರ್ಕಾರಗಳು ಬೀದಿ ನಾಯಿ ಸಮಸ್ಯೆಯನ್ನು ನಿಭಾಯಿಸಲು ಏನೂ […]

Continue Reading

ಬುದ್ದಿವಂತರ ಜಿಲ್ಲೆಯಲ್ಲಿ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳು; ಬೀದಿ ವಿಚಾರಣೆ, ನ್ಯಾಯ ತೀರ್ಮಾನ ಅತೀ ಅಪಾಯಕಾರಿ: ಸಿಪಿಐಎಂ ಖಂಡನೆ

ಮಂಗಳೂರು ನಗರದ ಕೂಳೂರು ಬಳಿ ಜಾರ್ಖಂಡ್ ನ ವಲಸೆ ಕಾರ್ಮಿಕ ದಿಲ್ ಜಾನ್ ಅನ್ಸಾರಿಯನ್ನು “ಬಾಂಗ್ಲಾ ನುಸುಳುಕೋರ” ಎಂದು ಆಪಾದಿಸಿ ಹಲ್ಲೆ ನಡೆಸಿರುವುದು, ಈ ಸಂದರ್ಭ ಆತನಿಂದ ಹಲವು ಬಾರಿ “ಜೈ ಶ್ರೀರಾಮ್” ಘೋಷಣೆ ಹಾಕಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಕಟುವಾಗಿ ಖಂಡಿಸುತ್ತದೆ. ಈ ಹಲ್ಲೆಕೋರರು ಸಂಘಪರಿವಾರದ “ಹಿಂದು ಜಾಗರಣ ವೇದಿಕೆ” ಗುಂಪಿಗೆ ಸೇರಿದವರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಈ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳ ಮೇಲೆ ಕೊಲೆಯತ್ನ ಸಹಿತ ಗಂಭೀರ ಸೆಕ್ಷನ್ […]

Continue Reading

ಮೂಲ್ಕಿ: ಕಂಬಳದ ಕೋಣ ಮಾಲೀಕರಿಗೆ ಹಲ್ಲೆ, ಸುಲಿಗೆ ಪ್ರಕರಣ; ಮೂವರು ಆರೋಪಿಗಳ ವಿರುದ್ಧ ಕೆಕೋಕಾ ಪ್ರಕರಣ ದಾಖಲು

ಪಡು ಪಣಂಬೂರು ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ 2 ನೇ ಬಹುಮಾನ ಗೆದ್ದ ಸಂಶುದ್ದೀನ್ ಅವರ ಬಳಿ ಸುಲಿಗೆ ಮಾಡಲು ಯತ್ನಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೆಕೋಕಾ (ಕರ್ನಾಟಕ ಕಂಟ್ರೋಲ್ ಅರ್ಗನೈಸ್ಡ್ ಕ್ರೈಂ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲು ಆದೇಶ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾದ ಸುವಿನ್ ಕಾಂಚನ್ ಹೆಜಮಾಡಿ, ಅಕ್ಷಯ್ ಪೂಜಾರಿ ಕಾರ್ನಾಡ್ […]

Continue Reading

ವಲಸೆ ಕಾರ್ಮಿಕನ ರಾಷ್ಟ್ರೀಯತೆ ಪ್ರಶ್ನಿಸಿ, ಗುರುತಿನ ದಾಖಲೆ ತೋರಿಸುವಂತೆ ಒತ್ತಾಯ; ಗಂಭೀರ ಹಲ್ಲೆ, ಪ್ರಕರಣ ದಾಖಲು

ಹಲ್ಲೆ.ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣ ಕೂಳೂರು ಸಮೀಪ ನಡೆದಿದೆ. ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿರುವ ಸಂತ್ರಸ್ತನನ್ನು ಆತನ ರಾಷ್ಟ್ರೀಯತೆ ಯಾವುದೆಂದು ಪ್ರಶ್ನಿಸಿ, ಗುರುತಿನ ದಾಖಲೆಗಳನ್ನು ತೋರಿಸುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ತಾನು ಭಾರತೀಯ ಪ್ರಜೆ ಎಂದು ಪದೇ ಪದೆ ಹೇಳುತ್ತಿದ್ದರೂ, ಆರೋಪಿಗಳು ಆತನಿಗೆ ಕಿರುಕುಳ ನೀಡುತ್ತ, ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಸಂತ್ರಸ್ತನಿಗೆ ಸೇರಿದ ಉಪಕರಣಗಳಿಂದಲೇ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಇದರ […]

Continue Reading

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ, ರಾಜ್ಯ ಸರ್ಕಾರ ಆದೇಶ

2025-26ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು ಎಂದಿದ್ದಾರೆ. ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ), ಯಶಸ್ವಿನಿ ಟ್ರಸ್ಟ್ ಇವರ ಪತ್ರದಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ […]

Continue Reading

ಹಿಜಾಬ್ ಬ್ಯಾನ್ ವಾಪಾಸ್ ಮತ್ತು 2ಬಿ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಮುಸ್ಲಿಂ ಶಾಸಕರುಗಳು ಸರಕಾರವನ್ನು ಒತ್ತಾಯಿಸಬೇಕು: ಸಿರಾಜ್ ಬಜ್ಪೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಧರ್ಮಗಳಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ, ಸರಕಾರದಿಂದ ಆಗಬೇಕಾಗಿದೆ. ಹಿಂದಿನ ಬಿಜೆಪಿ ಸರಕಾರ ಅವಧಿಯಲ್ಲಿ ಬ್ಯಾನ್ ಮಾಡಿರುವ ಹಿಜಾಬ್ ಮತ್ತು 2ಬಿ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ನೀಡಿರುವ ಭರವಸೆಯಿಂದ ಈ ರಾಜ್ಯದ ಮುಸ್ಲಿಮರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇಟ್ಟು, ಶೇಕಡ 88% ರಷ್ಟು ಜನ ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸಿ ವಿಜಯದ ಪತಾಕೆ ಹಾರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಈ ರಾಜ್ಯದ ಮುಸ್ಲಿಂ […]

Continue Reading

ಡಿ. ಕೆ ಶಿವಕುಮಾರ್ ಅವರ ತುಳುನಾಡಿನ ಕುರಿತಾದ ಕಾಳಜಿಯು, ಜನಸಾಮಾನ್ಯರಲ್ಲಿ ಮೂಡಿರುವ ಆತಂಕಗಳೂ…

ಬಂಡವಾಳಶಾಹಿಗಳನ್ನು ಮತ್ತಷ್ಟು ಕೊಬ್ಬಿಸುವ, ಸೂಕ್ಷ್ಮವಾದ ಪ್ರಕೃತಿಯನ್ನು ನುಂಗಿ ಹಾಳುಗೆಡಹುವ, ತುಳುನಾಡಿನ ಮಣ್ಣಿನ ಮಕ್ಕಳನ್ನು ಮತ್ತಷ್ಟು ಅಸಹಾಯಕತೆಗೆ ತಳ್ಳುವ ಬಣ್ಣದ ಮಾತುಗಳು ಮಾತ್ರ ಆಗಿ ಉಳಿಯುವುದಿಲ್ಲವೆ: ಮುನೀರ್ ಕಾಟಿಪಳ್ಳ ಮಂಗಳೂರಿನಲ್ಲಿ ಇಂದು ‘ಪ್ರವಾಸೋದ್ಯಮ ಸಮಾವೇಶ’ ನಡೆದಿದೆ. ಇತ್ತೀಚಿಗಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳ, ಸಮಸ್ಯೆ, ಅಭಿವೃದ್ದಿಯ ಕುರಿತು ಪದೇ ಪದೆ ಬಹಳ ಕಾಳಜಿಯಿಂದ ಮಾತಾಡುತ್ತಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈ ಸಮಾವೇಶದಲ್ಲಿ ಮತ್ತೆ ಕರಾವಳಿಯ ಹಿಂದುಳಿಯುವಿಕೆಯ ಕುರಿತು ಮಹತ್ವದ ಅಂಶಗಳನ್ನು ಎತ್ತಿ ಮಾತಾಡಿದ್ದಾರೆ. ಪ್ರವಾಸೋದ್ಯಮದ ಮೂಲಕ ಅಭಿವೃದ್ದಿಯ […]

Continue Reading