ಗೊಂದಲದ ಗೂಡಾದ ಬೆಳ್ತಂಗಡಿ ಅಂಬೇಡ್ಕರ್ ಜಯಂತಿ: ದಿನಕ್ಕೊಬ್ಬ ಮುಖ್ಯ ಭಾಷಣಕಾರರ ಬದಲಾವಣೆ

ಪ್ರತಿವರ್ಷದಂತೆ ನಡೆಯುವ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಈ ವರ್ಷ ಗೊಂದಲದ ಗೂಡಾಗಿ ಪರಿಣಮಿಸಿದೆ. ದಿನಕ್ಕೊಬ್ಬರಂತೆ ಮುಖ್ಯ ಭಾಷಣಕಾರರು ಬದಲಾವಣೆಗೊಂಡು ಇದೀಗ ಕೊನೆಗಳಿಗೆಯಲ್ಲಿಯೂ ಬದಲಾವಣೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಇತ್ತೀಚೆಗೆ ದಲಿತ ನಾಯಕರ ಸಭೆ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ದಲಿತ ನಾಯಕರು ಸರ್ವಾನುಮತದಿಂದ ಹಿರಿಯ ತುಳು ಸಾಹಿತಿ ಆತ್ರಾಡಿ ಅಮೃತ ಶೆಟ್ಟಿಯವರ ಹೆಸರನ್ನು ಸೂಚಿಸಿದರು. ಆದರೆ […]

Continue Reading

ಮಂಗಳೂರು: ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ದಿಶಾ ರವರಿಗೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಸನ್ಮಾನ

ಮಂಗಳೂರು: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಇದರ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಕಾಲೇಜಿ ವಿದ್ಯಾರ್ಥಿನಿ ಕುಮಾರಿ ದಿಶಾ ಮೂಡಬಿದ್ರಿ ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಮಲಬಾರ್ ಗೋಲ್ಡ್ ಮಂಗಳೂರು ಇದರ ಗ್ರಾಹಕರಾದ ಗಂಗಾಧರ ಪೂಜಾರಿ ಮತ್ತು ರಶ್ಮಿ ಜಿ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸನ್ಮಾನ ಸ್ವೀಕರಿಸಿದ ಕು. ದಿಶಾರವರು ಮಾತನಾಡಿ, ನನಗೆ ತುಂಬಾ ಖುಷಿಯಾಗುತ್ತದೆ ಹಾಗೂ ತನ್ನ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು. ದಿಶಾ ಅವರ ಪಾಲಕರಾದ […]

Continue Reading

ಗಂಜಿಮಠ: ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ; ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ಮಾಲಿಕರ ಮತ್ತು ಆಯೋಜಕರ ವಿರುದ್ದ ಪ್ರಕರಣ ದಾಖಲು.

ಗಂಜಿಮಠ: ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಗಂಜಿಮಠ ಒಂಡೇಲಾ ಬಳಿಯ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಿಕರು ಮತ್ತು ಆಯೋಜಕರ ವಿರುದ್ದ ಪ್ರಕರಣ ದಾಖಲು. ದಿನಾಂಕ 12-04-2026 ರಂದು ಮದ್ಯಾಹ್ನ 12 ಗಂಟೆಯಿಂದ 2-00 ಗಂಟೆಯ ಮಧ್ಯೆ ಗಂಜಿಮಠದ ಮುಚ್ಚೂರು ಕ್ರಾಸ್ ಬಳಿ ರಾಯಲ್ ಪ್ಯಾಲೇಸ್ ಮತ್ತು ಒಂಡೆಲಾ ಹಾಲ್ ನ ಮಾಲಿಕರು ಮದುವೆಗೆ ಕಾರ್ಯಕ್ರಮಕ್ಕೆ ಬಂದ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೆ ಮದುವೆ ಕಾರ್ಯಕ್ರಮಕ್ಕೆ ಹಾಲ್ ನ್ನು ಬಾಡಿಗೆ […]

Continue Reading

ಶಾಮನೂರು ಕೋಟೆಯಲ್ಲಿ ‘ಸಂಪತ್ತಿಗೆ ಸವಾಲ್’; ವಿಜಯೇಂದ್ರ ಪಾಳಯದ ಲೆಕ್ಜಾಚಾರ; ಸಲೀಂ-ಹ್ಯಾರೀಸ್ ಹೊಸ ಜೋಡೆತ್ತುಗಳು.?

✍️. ಆರ್.ಟಿ.ವಿಠ್ಠಲಮೂರ್ತಿ ಅವತ್ತು ರಾಜ್ಯದಲ್ಲಿ ಜೆ.ಹೆಚ್.ಪಟೇಲ್ ನೇತೃತ್ವದ ಜನತಾದಳ ಸರ್ಕಾರ ಅಸ್ತಿತ್ವದಲ್ಲಿತ್ತು. ಜನತಾದಳದ ಸುಪ್ತಿಮೋ ದೇವೇಗೌಡರು ಪ್ರಧಾನಿ ಗದ್ದುಗೆ ಏರಿ ವಾಪಸ್ಸು ಬಂದಿದ್ದರು. ಈ ಸಂದರ್ಭದಲ್ಲೇ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಯಿತು.ಹೀಗೆ ಉಪಚುನಾವಣೆ ನಡೆದ ಎರಡು ಕ್ಷೇತ್ರಗಳ ಪೈಕಿ ಒಂದು ರಾಮನಗರ. ಮತ್ತೊಂದು ಮೊಳಕಾಲ್ಮೂರು.ಅವತ್ತು ರಾಜಕೀಯ ಬಲಾಬಲದ ದೃಷ್ಟಿಯಿಂದ ಜನತಾದಳ ಭರ್ಜರಿ ಗೆಲುವು ಸಾಧಿಸವೇಕಿತ್ತು. ಆದರೆ ಉಪಚುನಾವಣೆಯಲ್ಲಿ ಜನತಾದಳದ ಲೆಕ್ಕಾಚಾರ ಉಲ್ಟಾ ಆಗಿ ಪ್ರತಿಪಕ್ಷ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಅವತ್ತು ರಾಮನಗರ ಕ್ಷೇತ್ರದಲ್ಲಿ […]

Continue Reading

ಕುತ್ಲೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸೇತುವೆ ನಿರ್ಮಾಣಕ್ಕೆ ಮತ್ತೆ ವಿಘ್ನ; ಸದ್ಯಕಿಲ್ಲ ಕಾಮಗಾರಿ ಭಾಗ್ಯ

ಒಟ್ಟಾರೆ ಕಾನೂನು, ಸರ್ಕಾರ, ಇಲಾಖೆಗಳ ನಡುವೆ ಅಮಾಯಕ ಆದಿವಾಸಿ ಕಾಡಿನ ಮಕ್ಕಳು ಹೈರಾಣು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಕಾಡಬಾಗಿಲು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡು, ಶಂಕುಸ್ಥಾಪನೆಯಾದರೂ, ಕಾಮಗಾರಿಗೆ ಬ್ರೇಕ್ ಬಿದ್ದಿದ್ದು, ಸದ್ಯ ಕಾಮಗಾರಿ ನಿಲ್ಲಿಸಲಾಗಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಶತಮಾನಗಳಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಭಿವೃದ್ಧಿಗಾಗಿ ಜನರ ನಿರಂತರ ಮೂರು ದಶಕಗಳ ಹೋರಾಟ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 79 ವರ್ಷ ಕಳೆದರೂ ಇಂದಿಗೂ ಇಲ್ಲಿ ವಿದ್ಯುತ್, […]

Continue Reading

ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು; KIADB ಭೂಸ್ವಾಧೀನ ರದ್ದು, ದಯಾನಂದ್ ಪೈಗೆ ಭಾರೀ ದಂಡ, ಸಿಬಿಐ ತನಿಖೆಗೆ ನಿರ್ದೇಶನ

ಬೆಂಗಳೂರು: ಕೈಗಾರಿಕೆ ಹೆಸರಲ್ಲಿ ಭೂಸ್ವಾಧೀನ ಮಾಡಿಸಿ ವೈಯಕ್ತಿಕ ಬ್ಯುಸಿನೆಸ್ ನಡೆಸುವ ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ್ ಪೈ ಪ್ರಯತ್ನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಮಹತ್ವದ ಆದೇಶವೊಂದರಲ್ಲಿ ಬೆಂಗಳೂರಿನ ಹೆಬ್ಬಾಳ ಬಳಿ ಲೇಕ್ ವ್ಯೂ ಪ್ರವಾಸೋದ್ಯಮ ನಿಗಮಕ್ಕೆ ನೂರಾರು ಕೋಟಿ ಬೆಲೆಬಾಳುವ ಜಾಮೀನು ಸ್ವಾಧೀನ ಅಧಿಸೂಚನೆಯನ್ನೇ ಹೈಕೋರ್ಟ್ ರದ್ದುಪಡಿಸಿದೆ. ಅಷ್ಟೇ ಅಲ್ಲ ಉದ್ಯಮಿ ದಯಾನಂದ್ ಪೈ ಅವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೆ, ಸಿಬಿಐ ತನಿಖೆಗೂ ಆದೇಶಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ. ಹೆಬ್ಬಾಳದಲ್ಲಿ ಸ್ಥಳೀಯರ ಆಕ್ಷೇಪದ […]

Continue Reading

ಬ್ಯಾರಿ ಮುಸ್ಲಿಂ ಸಮಾಜದಲ್ಲಿ ಶಿಕ್ಷಣ ಅಸಮಾನತೆ, ಕುಟುಂಬ ವ್ಯವಸ್ಥೆಯ ಶಿಥಿಲತೆ ಮತ್ತು ವಿವಾಹ ಬಿಕ್ಕಟ್ಟು; ಒಂದು ಆಳವಾದ ಸಾಮಾಜಿಕ ಅಧ್ಯಯನ ಪ್ರಾಸ್ತಾವಿಕ

✍️. ಇಸ್ಮಾಯಿಲ್ ಎಸ್. ವಕೀಲರು, ಲೇಖಕರು. ಮಂಗಳೂರು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಕರಾವಳಿ ನಾಡಿನಲ್ಲಿ ಶತಮಾನಗಳ ಕಾಲ ವ್ಯಾಪಾರ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಬ್ಯಾರಿ ಮುಸ್ಲಿಂ ಸಮಾಜ ಇಂದು ಒಂದು ನಿರ್ಣಾಯಕ ಸಂಕ್ರಮಣ ಕಾಲದಲ್ಲಿ ನಿಂತಿದೆ. ಈ ಸಮಾಜ ಹಿಂದೊಮ್ಮೆ ವರದಕ್ಷಿಣೆ ಎಂಬ ಪಿಡುಗು ಅನುಭವಿಸಿ, ಧಾರ್ಮಿಕ ಮತ್ತು ಸಾಮಾಜಿಕ ನೇತೃತ್ವದ ಮೂಲಕ ಅದರಿಂದ ಹೊರಬಂದ ಇತಿಹಾಸ ಹೊಂದಿದೆ. ಆ ಗೆಲುವು ನಿಜಕ್ಕೂ ಅಭಿಮಾನಾರ್ಹ. ಆದರೆ ಹಳೆಯ ಒಂದು […]

Continue Reading

ಸುಳ್ಯ: ಚಿನ್ನಾಭರಣ ಕಳ್ಳತನ ಪ್ರಕರಣ; ಆರೋಪಿಗಳಿಂದ ಚಿನ್ನಾಭರಣ ವಶ, ಪ್ರಕರಣ ದಾಖಲು

ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರು ನೀಡಿರುವ ದೂರಿನಂತೆ, ಪ್ರಕರಣದ ಆರೋಪಿತೆಯಾದ ಶೃತಿ @ ವಿಶ್ಮೀತ ಎಂಬಾಕೆಯೊಂದಿಗೆ ನನ್ನ ತಂದೆಗೆ ಸಂಪರ್ಕವಿದ್ದು, ಆಕೆಗೆ ಪುಣ್ಯಶ್ರೀಯವರ ತಂದೆ ಸಾಲವಾಗಿ ಸರಿ-ಸುಮಾರು 6 ಲಕ್ಷ ರೂಪಾಯಿ ಹಣವನ್ನು ನೀಡಿರುವುದಾಗಿದೆ. ಪಿರ್ಯಾದಿದಾರರು ಸದ್ರಿ ಹಣವನ್ನು ಹಿಂತಿರುಗಿಸುವಂತೆ ಆರೋಪಿತೆ ಶೃತಿ ಯಾನೆ ವಿಶ್ಮೀತರವರಿಗೆ ತಿಳಿಸಿದ ಮೇರೆಗೆ ಆಕೆಯು ಹಣವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಂಡು ದಿನಾಂಕ: 07.04.2026 ರಂದು ಪಿರ್ಯಾದಿದಾರರ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರ ಮನೆಗೆ ಬಂದಿರುತ್ತಾರೆ. ದೂರುದಾರರು ಆ ಬಳಿಕ ಕೆಲಸಕ್ಕೆ ತೆರಳಿದ್ದು, […]

Continue Reading

ಮುಸ್ಲಿಂ ಸಮುದಾಯ ಓದಲೇಬೇಕಾದ ಸ್ಟೋರಿ

ಬಂಟ, ಬ್ರಾಹ್ಮಣರಂತೆ ಬ್ಯಾರಿ ಹುಡುಗರಿಗೂ ವಧು ಸಿಗುತ್ತಿಲ್ಲ.! ಮಸೀದಿ, ಮೊಹಲ್ಲಾ, ಸಂಘ ಸಂಸ್ಥೆಗಳ ಕರ್ತವ್ಯವೇನು.? ಸಮುದಾಯ ಇನ್ನಾದರೂ ಚಿಂತಿಸಲಿ ಮುಸ್ಲಿಂ ಸಮುದಾಯದಲ್ಲಿ ಅದರಲ್ಲೂ ಬ್ಯಾರಿ ಜನಾಂಗದಲ್ಲಿ ಈ ಹಿಂದೆ ವರದಕ್ಷಿಣೆಯ ಪಿಡುಗು ದೊಡ್ಡ ಸಮಸ್ಯೆಯಾಗಿ ತಲೆದೋರಿತ್ತು . ವಿವಾಹವಾಗುವ ಹೆಣ್ಣು ಕುಟುಂಬಗಳು ವರದಕ್ಷಿಣೆ ನೀಡಲು ಸಾಧ್ಯವಾಗದೇ 30-35 ವರ್ಷ ಮೀರಿದರೂ ಮದುವೆ ಮಾಡಲು ಸಾಧ್ಯವಾಗದೇ ಮನೆಯಲ್ಲೇ ಉಳಿಯುವಂತಾಗುತ್ತಿತ್ತು. ಇಸ್ಲಾಂ ನಲ್ಲಿ ಮಹರ್ ಪದ್ಧತಿ ಜಾರಿಯಲ್ಲಿದ್ದರೂ ಅನಪೇಕ್ಷಿತವಾಗಿ ನುಸುಳಿಕೊಂಡ ವರದಕ್ಷಿಣೆ ಪಿಡುಗು ಸಮುದಾಯವನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿತ್ತು. ಇದರ […]

Continue Reading

ಮುಸ್ಲಿಮರು ಪತ್ನಿಯರನ್ನು ಸಮಾನವಾಗಿ ನೋಡಿಕೊಂಡರೆ, ಬಹುಪತ್ನಿತ್ವಕ್ಕೆ ಅವಕಾಶ ಇದೆ: ಅಲಹಾಬಾದ್ ಹೈಕೋರ್ಟ್

ಇಸ್ಲಾಂ ಧರ್ಮದ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಮುಸ್ಲಿಂ ಪುರುಷರು ಪಡೆಯಬಹುದಾದ ವಿವಾಹದ ಹಕ್ಕುಗಳ ಕುರಿತು ಇತ್ತೀಚೆಗೆ ಅಲಹಾಬಾದ್ ನ್ಯಾಯಾಲಯವು ಪ್ರಮುಖ ತೀರ್ಪೊಂದನ್ನು ನೀಡಿದೆ. ಮೊದಲ ಪತ್ನಿ ಜೀವಂತವಾಗಿದ್ದರೂ ಅಥವಾ ಆಕೆಯೊಂದಿಗೆ ವಿಚ್ಛೇದನವಾಗದಿದ್ದರೂ ಸಹ, ಮುಸ್ಲಿಂ ಪುರುಷನು ಎರಡನೇ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪು ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಡಿಯಲ್ಲಿ ಬರುವ ಹಕ್ಕುಗಳನ್ನು ಎತ್ತಿಹಿಡಿದಿದೆ. ಧಾರ್ಮಿಕ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ನಾಲ್ಕು ವಿವಾಹಗಳವರೆಗೆ ಮಾಡಿಕೊಳ್ಳಲು ಅವಕಾಶವಿರುವುದರಿಂದ, ಇದನ್ನು ಕಾನೂನುಬಾಹಿರ ಎಂದು […]

Continue Reading