ಕೊಲೆ ಆರೋಪಿಗೆ ಆಶ್ರಯ ನೀಡಿ, ಹಣಕಾಸಿನ ನೆರವು, ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ್ ಬಂಧನ

ಜೆಡಿಎಸ್ ನಾಯಕ ಟಿ. ಅಸ್ಗರ್ ಎಂಬವರ ಕೊಲೆಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಅಜಾದ್ ನಗರ ಠಾಣೆಯ ಪೊಲೀಸರು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ ಅವರನ್ನು ಬಂಧಿಸಿದ್ದಾರೆ. ಸವಿತಾ ಅವರನ್ನು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಾಷಾ ನಗರದಲ್ಲಿ ನವೆಂಬರ್ 10ರಂದು ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದ ಅಸ್ಗರ್ ಮೇಲೆ ಕಾಂಗ್ರೆಸ್ ಮುಖಂಡ ಖಾಲೀದ್ ಪೈಲ್ವಾನ್ ದಾಳಿ […]

Continue Reading

ಮೋ.. ಶಾ.. ಆಟ ಬಲ್ಲವರ್ಯಾರು.?

ಮುಂದಿನ ಟಾರ್ಗೆಟ್ ಪಶ್ಚಿಮ ಬಂಗಾಳ, ತಮಿಳುನಾಡು; ಪ್ರಾದೇಶಿಕ ಪಕ್ಷಗಳ ವಿನಾಶ.. ಬಿಜೆಪಿ ಜಯಭೇರಿಯ ರಹಸ್ಯ.! ಪ್ರಾದೇಶಿಕ ಪಕ್ಷಗಳು ಉಸಿರಾಡುತ್ತಿರುವ ಕಾರಣ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ಇದ್ದರೂ ಭಾರತ ಗೆಲ್ಲಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷಗಳ ವಿನಾಶವೊಂದೇ ಬಿಜೆಪಿಯ ಅಜೆಂಡಾ ಬಿಹಾರದಲ್ಲಿ ಮತದಾರ ಎನ್ ಡಿಎ ಕೂಟಕ್ಕೆ ಜೈ ಅಂದಿದ್ದಾನೆ. ಮಹಾ ಘಟಬಂದನ್ ಅನ್ನು ಮಕಾಡೆ ಮಲಗಿಸಿದ್ದಾರೆ. 2014 ರ ನಂತರ ಬಿಜೆಪಿ ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಮೋದಿ -ಶಾ ಜುಗಲ್ ಬಂಧಿ ಬಿಜೆಪಿಗೆ ಬೂಸ್ಟ್ ಕೊಟ್ಟಿದೆ. ವೋಟ್ ಚೋರಿ, […]

Continue Reading

ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ, ಸಂರಕ್ಷಿತ ಅರಣ್ಯ ಬಳಿ ಗಣಿಗಾರಿಕೆ ನಿಷೇಧ: ಸುಪ್ರೀಂ ಕೋರ್ಟ್

ರಾಷ್ಟ್ರೀಯ ಉದ್ಯಾನ, ಅಭಯಾರಣ್ಯ, ಸಂರಕ್ಷಿತ ಅರಣ್ಯ ಪ್ರದೇಶಗಳ ಒಂದು ಕಿ.ಮೀ ಸುತ್ತಳತೆಯಲ್ಲಿ ಗಣಿಗಾರಿಕೆ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆಸುವ ಗಣಿಗಾರಿಕೆ ವನ್ಯಜೀವಿಗಳಿಗೆ ಅಪಾಯಕಾರಿಯಾಗಿದೆ ಎಂಬ ಸಂಗತಿ ಗಮನಿಸಿದ ಸುಪ್ರೀಂ ಕೋರ್ಟ್, ಈ ಹಿಂದೆ ಜಾರ್ಖಂಡ್ ನ ಸರಂಡಾ ವನ್ಯಜೀವಿ ಅಭಯಾರಣ್ಯ ಹಾಗೂ ಸಸಂಗದಾಬುರು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶಕ್ಕೆ ನೀಡಿದ ಆದೇಶವನ್ನು ದೇಶವ್ಯಾಪಿ ಅನ್ವಯಗೊಳಿಸುವಂತೆ ಆದೇಶ ನೀಡಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ಸಿಜೆಐ ಬಿ.ಆರ್ […]

Continue Reading

‘ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಮುಂದುವರೆಯಲು ಹಾದಿ ಸುಲಭ’; ಅಡ್ವೋಕೇಟ್ ಕೆ. ಜನೆರಲ್ ಶಶಿ ಕಿರಣ್ ಶೆಟ್ಟಿ

ನವದೆಹಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದಿದೆ. ಯೋಜನೆ ವಿರೋಧಿಸಿ ನೆರೆಯ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ದೊಡ್ಡ ಗೆಲುವು ಲಭಿಸಿದಂತಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಸರ್ಕಾರದ ಅಡ್ವೋಕೇಟ್ ಜನೆರಲ್ ಕೆ ಶಶಿಕಿರಣ್ ಶೆಟ್ಟಿ, ರಾಜ್ಯದ ಪಾಲಿಗೆ ಇದೊಂದು ಅಭೂತಪೂರ್ವ ಗೆಲುವಾಗಿದೆ. ಸರ್ಕಾರದ ದಿಟ್ಟ ನಿಲುವು, ಕಾನೂನು ತಜ್ಞರ ನಿರಂತರ ಪರಿಶ್ರಮದಿಂದಾಗಿ […]

Continue Reading

ಕೆಂಪು ಕೋಟೆ ಸ್ಫೋಟ: ಶಂಕಿತರೊಂದಿಗೆ ಸಂಪರ್ಕ ಹೊಂದಿದ ಮೂರನೇ ಕಾರಿಗಾಗಿ ಹುಡುಕಾಟ

ನವದೆಹಲಿ: (ನವೆಂಬರ್ 13) ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ನಂಬಲಾದ ಮೂರನೇ ಕಾರನ್ನು ಬಹು ಭದ್ರತಾ ಸಂಸ್ಥೆಗಳು ಹುಡುಕುತ್ತಿವೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಬಿಳಿ ಬಣ್ಣದ ಹುಂಡೈ ಐ20 ಸ್ಫೋಟಗೊಂಡು 12 ಜನರು ಸಾವನ್ನಪ್ಪಿ 30 ಜನರು ಗಾಯಗೊಂಡಿದ್ದರೂ, ತನಿಖಾಧಿಕಾರಿಗಳು ನಂತರ ಎರಡನೇ ವಾಹನ – ಕೆಂಪು ಫೋರ್ಡ್ ಇಕೋಸ್ಪೋರ್ಟ್ – ಫರಿದಾಬಾದ್‌ನಲ್ಲಿ ಪತ್ತೆಯಾಗಿದೆ. ಆದಾಗ್ಯೂ, ಮಾರುತಿ ಬ್ರೆಝಾ ಎಂದು ಶಂಕಿಸಲಾದ ಮೂರನೇ ಕಾರು […]

Continue Reading

ದೆಹಲಿ ಬಾಂಬ್ ಸ್ಫೋಟ – ಮಾನವತೆಗೆ ವಿರುದ್ಧವಾದ ಕ್ರೂರ ಅಪರಾಧ; ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿ, ಇಂತಹ ಕೃತ್ಯ ಮತ್ತೆ ಮರುಕಳಿಸದಿರಲಿ

✍️. ಇಸ್ಮಾಯಿಲ್ ಸುಣ್ಣಾಲ್ ವಕೀಲರು, ಮಂಗಳೂರು. 2025ರ ನವೆಂಬರ್ 10ರ ಸಂಜೆಯ ವೇಳೆಗೆ, ದೆಹಲಿಯ ಇತಿಹಾಸ ಪ್ರಸಿದ್ಧ ಕೆಂಪುಕೋಟೆಯ ಸಮೀಪ ಸಂಭವಿಸಿದ ಭೀಕರ ಕಾರ್ ಬಾಂಬ್ ಸ್ಫೋಟವು ರಾಷ್ಟ್ರವನ್ನೇ ನಡುಗಿಸಿದೆ. ಈ ಘಟನೆಯಲ್ಲಿ ಕನಿಷ್ಠ 12 ನಿರಪರಾಧಿಗಳು ಪ್ರಾಣ ಕಳೆದುಕೊಂಡಿದ್ದು, 20 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕ್ರೂರ ಕೃತ್ಯ ಕೇವಲ ಭಯೋತ್ಪಾದನೆಯಲ್ಲ- ಇದು ಮಾನವತೆಯ ವಿರುದ್ಧ ನಡೆದ ಪಾಶವಿಕ ದಾಳಿಯಾಗಿದೆ ಎನ್ನದೆ ವಿಧಿಯಿಲ್ಲ. ಮನುಷ್ಯತ್ವ ಇರುವ ಯಾವುದೇ ವ್ಯಕ್ತಿ ಆತ ಯಾವ ಧರ್ಮದವನೇ, […]

Continue Reading

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿದ ಆರೋಪದ ಮೇಲೆ ನಿವೃತ್ತ ಸೇನಾ ಅಧಿಕಾರಿಯ ಬಂಧನ

ತಮ್ಮ ನೆರೆಯ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ 59 ವರ್ಷದ ನಿವೃತ್ತ ಸೇನಾ ಅಧಿಕಾರಿಯನ್ನು ಸೋಮವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಕರೆದೊಯ್ದು ತಾಪಸಣೆ ನಡೆಸಿದಾಗ, ಅಲ್ಲಿ ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ತಾನು ಗರ್ಭಿಣಿ ಎಂದು ತಿಳಿದು ಆಘಾತಕ್ಕೊಳಗಾದ ಬಾಲಕಿ ತನ್ನ ಪೋಷಕರ ಬಳಿ ಮಾಜಿ ಸೇನಾಧಿಕಾರಿ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಶನಿವಾರ ಸಂಜೆ ಪೋಷಕರು ಮುಂಬೈನ […]

Continue Reading

ಕುಟುಂಬದಲ್ಲಿ ಆಸ್ತಿ ಒಪ್ಪಂದವು ವಿಭಜನೆಯನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ಮಾನ್ಯವಾಗಿದೆ: ಸುಪ್ರೀಂ ಕೋರ್ಟ್

ವಿವಾದ ಪರಿಹರಿಸಲು ಕುಟುಂಬ ಸದಸ್ಯರ ನಡುವೆ ಲಿಖಿತ ಅಥವಾ ಮೌಖಿಕ ಒಪ್ಪಂದ, ಕುಟುಂಬದೊಳಗೆ ಶಾಂತಿಯನ್ನು ಕಾಪಾಡಿ, ವ್ಯಾಜ್ಯಗಳಿಂದ ಮುಕ್ತ ಇದರ ಉದ್ದೇಶವಾಗಿದೆ ಕುಟುಂಬದ ಆಸ್ತಿಯ ವಿಭಜನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನೋಂದಾಯಿಸದ ಕುಟುಂಬ ಒಪ್ಪಂದವು ವಿಭಜನೆಯನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನೋಂದಾಯಿಸದ ಕುಟುಂಬ ಒಪ್ಪಂದವು ಶೀರ್ಷಿಕೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ, ಆದರೆ ಅದನ್ನು ಪುರಾವೆಯಾಗಿ ಒಪ್ಪಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.ಕೆಳ ನ್ಯಾಯಾಲಯಗಳು ಕಾನೂನನ್ನು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು […]

Continue Reading

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಸೋಲು ಒಪ್ಪಿಕೊಂಡಿದೆ. ಅದರ ನಾಯಕರು ಈಗಾಗಲೇ ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುತ್ತಿದ್ದಾರೆ: ಪವನ್ ಖೇರಾ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಸೋಲನ್ನು ಒಪ್ಪಿಕೊಂಡಿದೆ, ಮತ್ತು ಅದರ ಅನೇಕ ನಾಯಕರು ಈಗಾಗಲೇ ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಎನ್‌ಡಿಎ ನಾಯಕರ ಸೂಚನೆಯಂತೆ ಅಧಿಕಾರಿಗಳು ‘ಸೋಲನ್ನು ಗ್ರಹಿಸಿ’ ಪ್ರಮುಖ ಕಡತಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಆರೋಪಿಸಿದರು. ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನ ಮತ್ತು ನವೆಂಬರ್ 11 ರಂದು ನಡೆಯುವ ಅಂತಿಮ ಹಂತದ ಮತದಾನಕ್ಕೆ ಇಂಡಿಯಾ ಬಣದ […]

Continue Reading

“ಪ್ರಜಾಪ್ರಭುತ್ವದ ಕೊಲೆ”ಯ ಪ್ರಮುಖ ಅಪರಾಧಿಗಳು, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು: ರಾಹುಲ್ ಗಾಂಧಿ

ನವದೆಹಲಿ: ಬಿಹಾರದಿಂದ “ವೋಟ್ ಚೋರಿ”ಯ ಪುರಾವೆಗಳನ್ನು ಬಲಪಡಿಸುವ ವರದಿಗಳು ಬಂದಿವೆ ಎಂದು ಹೇಳಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ “ಪ್ರಜಾಪ್ರಭುತ್ವದ ಕೊಲೆ”ಯ ಪ್ರಮುಖ ಅಪರಾಧಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರು “ಸಂವಿಧಾನದ ವಿರುದ್ಧದ ಅತಿದೊಡ್ಡ ದ್ರೋಹ” ಮಾಡುತ್ತಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಇತರ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮತ ಚಲಾಯಿಸಿದ ಅನೇಕ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬಿಹಾರದಲ್ಲಿಯೂ ಮತ ಚಲಾಯಿಸುತ್ತಿದ್ದಾರೆ ಎಂದು ಗಾಂಧಿ ಆರೋಪಿಸಿದರು. ಮತದಾನದ ಹಕ್ಕನ್ನು ರಕ್ಷಿಸುವ ಜವಾಬ್ದಾರಿಯನ್ನು […]

Continue Reading