ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಸುಲಿಗೆ ಮಾಡಿದ ಆರೋಪಿಯ ಬಂಧನ; 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ವಶ.

ದಿನಾಂಕ: 25-12-2025 ರಂದು ಸಂಜೆ ಗುರುನಗರ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಯ ಕಡೆಗೆ ಶಂಕರಭವನ ಹೊಟೇಲ್ ಬಳಿಯ ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಸಂಜೆ ಸುಮಾರು 6.30 ಗಂಟೆಗೆ ಹಿಂದಿನಿಂದ ಬಂದ ಓರ್ವ ಅಪರಿಚಿತ ವ್ಯಕ್ತಿ ಏಕಾಏಕಿ ರತ್ನಾವತಿಯವರ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಬೆಲೆ ಬಾಳುವ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಓಡಿ ಹೋಗಿರುತ್ತಾನೆ. ಈ ಬಗ್ಗೆ ಅದೇ ದಿನ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 128/2025 ರಂತೆ […]

Continue Reading

ಮಳಲಿ: ಅನೈತಿಕ ಪೊಲೀಸ್ ಗಿರಿ; ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು; ಪ್ರತ್ಯೇಕ ಪ್ರಕರಣ ದಾಖಲು

ಅಮಾಯಕರ ಪೋಟೋ ವೈರಲ್ ಮಾಡಿದರೆ ಕ್ರಮ ಎಂದ ಪೊಲೀಸ್ ಕಮಿಷನರ್ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ಎಂಬಲ್ಲಿ ತಂದೆ ಮಗಳ ಮೇಲೆ ಅನೈತಿಕ ಪೊಲೀಸ್ ಗಿರಿ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಎರಡೂ ಕಡೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮೂಲರಪಟ್ನ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತನ್ನ ಅಪ್ರಾಪ್ತ ವಯಸ್ಸಿನ ಮಗಳ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನದಲ್ಲಿ ಬಂದ ಇಬ್ಬರು ಬೈಕನ್ನು ಅಡ್ಡಗಟ್ಟಿ, […]

Continue Reading

ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ: ಮಾಜಿಗಳದ್ದೇ ದರ್ಬಾರ್.!

ಅಧಿಕಾರ ಅವಧಿ ಮುಗಿದರೂ ಅಧಿಕಾರ ಗುಂಗಿನಿಂದ ಹೊರಬರದ ಸದಸ್ಯರು; ಪ್ರತಿಭೆಗಳ ‘ಮಾಸ್ಟರ್’ ಪೀಸ್.! ಅಬ್ಬಬ್ಬಾ..ಅಧಿಕಾರದ ಅವಧಿ ಮುಗಿದು ಹತ್ತಿರ ಹತ್ತಿರ ಆರು ತಿಂಗಳಾಗುತ್ತಾ ಬಂದರೂ ಅಧಿಕಾರದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಫ್ಲೆಕ್ಸ್, ಸಮಾರಂಭಗಳಲ್ಲಿ ಇವರದ್ದೇ ರಾರಾಜಿಸುವ ಪೋಟೋಗಳು. ಸರಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದರೂ ತಾವಿನ್ನೂ ಮಾಜಿಗಳು ಎಂಬುದನ್ನು ಮರೆತು ಹಾಲಿ ರೀತಿ ವರ್ತಿಸುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸಲಹಾ ಸಮಿತಿಯ ಕಥೆ ವ್ಯಥೆಯ ಕಥೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ […]

Continue Reading

ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಕೋಡಿಕೆರೆ ಗ್ಯಾಂಗಿನ ನಾಲ್ವರು ಆರೋಪಿಗಳು ಅಂಧರ್

ಅಧಿಕ ಬಡ್ಡಿಗೆ ಸಾಲ ನೀಡಿ, ಬಳಿಕ ಸಾಲ ಪಡೆದವರನ್ನು ಬೆದರಿಸಿ ಬಲವಂತವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದ ಪ್ರಕರಣದಲ್ಲಿ ಕೋಡಿಕೆರೆ ಗ್ಯಾಂಗಿನ ನಾಲ್ವರು ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗಜೇಂದ್ರ ಬಜಿಲಕೇರಿ, ಶರತ್ ಗಟ್ಟಿ, ಪ್ರದೀಪ್ ಮತ್ತು ಧನರಾಜ್ ವಳಚ್ಚಿಲ್ ಎಂದು ಗುರುತಿಸಲಾಗಿದ್ದು, ಇವರು ಮನೋಜ್ ಕೋಡಿಕೆರೆ ಗ್ಯಾಂಗ್ ನ ಸದಸ್ಯರು. ಬಡ್ಡಿಗೆ ಹಣ ನೀಡಿ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಗಳು ಬೆದರಿಸಿ ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ […]

Continue Reading

ಸುರತ್ಕಲ್: ಆರೋಗ್ಯದ ಹಕ್ಕಿನ ಹೋರಾಟವನ್ನು ಜನತೆಯ ನಡುವೆ ವಿಸ್ತಾರಗೊಳಿಸಲು ನಿರ್ಧಾರ; ಯಶಸ್ವಿ ಸಮಾಲೋಚನಾ ಸಭೆ

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ಸರಕಾರಿ ಆಸ್ಪತ್ರೆಗಳ ಬಲವರ್ಧನೆಯ ಬೇಡಿಕೆಗಳ ಮೇಲೆ ನಡೆಯುತ್ತಿರುವ ಹೋರಾಟದ ಮುಂದಿನ ಹಂತದ ಕುರಿತು ಚರ್ಚಿಸಲು ಚೊಕ್ಕಬೆಟ್ಟು MJM ಸಭಾಂಗಣದಲ್ಲಿ‌ ಆಯೋಜಿಸಿದ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ ಯಶಸ್ವಿಯಾಗಿ ನಡೆಯಿತು. ಮುಂದಿನ‌ ಹಂತದಲ್ಲಿ ಸುರತ್ಕಲ್ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಸಂಘ ಸಂಸ್ಥೆಗಳನ್ನು‌ ಸಂಪರ್ಕಿಸುವುದು, ಸಮುದಾಯ ಆಸ್ಪತ್ರೆ, ಕ್ಯಾನ್ಸರ್, ಹೃದಯದ ಆಸ್ಪತ್ರೆಗಳ ಸ್ಥಾಪನೆ ಸಹಿತ ಹೋರಾಟ ಸಮಿತಿ ಮುಂದಿಟ್ಟಿರುವ […]

Continue Reading

ಡಿ. 29, 30 : ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ

ಡಿ. 31 ಹಾಗೂ ಜನವರಿ 1 ರಂದು ದಿ| ನಿ.ಬೀ.ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ಅಂಬಲಪಾಡಿ ನಾಟಕೋತ್ಸವ ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಈ ವರ್ಷದ “ರಂಗಭೂಮಿ ರಂಗ ಶಿಕ್ಷಣ” ಅಭಿಯಾನದಲ್ಲಿ ಉಡುಪಿ ನಗರದ ಆಯ್ದ 11 ಪ್ರೌಢಶಾಲೆಗಳ 250 ಕ್ಕೂ ಅಧಿಕ ಮಕ್ಕಳ ಭಾಗವಹಿಸುವಿಕೆಯಲ್ಲಿ 11 ಹೆಸರಾಂತ ನಿರ್ದೇಶಕರಿಂದ ತಯಾರಾದ 11 ಕಿರು ನಾಟಕಗಳ ಪ್ರದರ್ಶನ `ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ ‘ ಡಿ.29 ಮತ್ತು ಡಿ.30 ರಂದು ಬೆಳಗ್ಗೆ 9.30 ರಿಂದ ಸಂಜೆ 5.30 […]

Continue Reading

ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ

ಕಾಂಗ್ರೆಸ್ ನಾಯಕತ್ವದ ಸ್ವಯಂಕೃತ ಅಪರಾಧಗಳಿಂದ ಉಂಟಾದ ಈ ಸ್ಥಿತಿಗೆ ಈಗ ಅನುಕಂಪ ತೋರುವವರು ಯಾರೂ ಉಳಿದಿಲ್ಲ: ಮುನೀರ್ ಕಾಟಿಪಳ್ಳ ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ (ಕಲಿಯಲು/ಅರ್ಥ ಮಾಡಿಕೊಳ್ಳಲು ಸಿದ್ದರಿರುವುದು ಅನುಮಾನ) ಅಲ್ಪ ಸಂಖ್ಯಾತ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದ ಈ ಪಟ್ಟಣ ಪಂಚಾಯತ್ ಗಳು ಎಲ್ಲಾ ಕಾಲದಲ್ಲೂ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಈ ಸಲದ ಚುನಾವಣೆಯಲ್ಲಿ‌ ಮಾತ್ರ ಯಾವ ಅಡತಡೆಯೂ ಇಲ್ಲದೆ ಗೆಲುವಿನ ಗೆರೆ ದಾಟಿದ್ದಾರೆ. ಈ ಸೋಲು […]

Continue Reading

ಬೆಳ್ತಂಗಡಿ: ಕುತ್ಲೂರು ಮಲೆಯಲ್ಲಿ ಪ್ರಥಮ ಮಲೆಕುಡಿಯ ಆದಿವಾಸಿ ಸಮಾವೇಶ

ಶೋಷಣೆಗೊಳಗಾದ ಸಮುದಾಯಗಳು ಸಮಾನತೆಯ ತತ್ವದ ಅಡಿಯಲ್ಲಿ ಒಂದಾಗಿ ನಿಲ್ಲಬೇಕು: ನವೀನ್ ಸೂರಿಂಜೆ ಬೆಳ್ತಂಗಡಿ: ಮಲೆಕುಡಿಯ ಸಮುದಾಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳ್ತಂಗಡಿಯ ಕುತ್ಲೂರು ಮಲೆಯಲ್ಲಿ ‘ಮಲೆಕುಡಿಯ ಆದಿವಾಸಿ ಸಮಾವೇಶ’ ಡಿಸೆಂಬರ್ 25 ಗುರುವಾರದಂದು ನಡೆಯಿತು. ನಕ್ಸಲ್ ಚಳವಳಿಯಿಂದ ಮುಕ್ತಗೊಂಡ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಗ್ರಾಮದಲ್ಲಿ ನಡೆದ ಮೊದಲ ಮಹತ್ವದ ಸಮಾವೇಶ ಇದಾಗಿದ್ದು, ಹಲವು ಗ್ರಾಮಗಳ ಮಲೆಕುಡಿಯ ಮುಖಂಡರು ಭಾಗವಹಿಸಿದ್ದರು. ಸಮಾವೇಶವನ್ನು ಪತ್ರಕರ್ತ ನವೀನ್ ಸೂರಿಂಜೆ ಉದ್ಘಾಟಿಸಿದರು. ದಮನಿತ ಸಮುದಾಯಗಳು […]

Continue Reading

ಸತ್ಯ, ನ್ಯಾಯದ ಪರ ಧ್ವನಿ ಎತ್ತಿದರೆ ಗೆಲುವು ಖಚಿತ; ಕಾಂಗ್ರೆಸಿನಲ್ಲಿ ಬಕೆಟ್ ಹಿಡಿಯುವ ಮುಸ್ಲಿಂ ರಾಜಕಾರಣಿಗಳಿಗೆ ದೊಡ್ಡ ಮೆಸೇಜ್ ಕೊಟ್ಟ ಬಜಪೆ ರಿಸಲ್ಟ್

ಅಂತೂ ಇಂತೂ ಬಜಪೆ ಪಟ್ಟಣ ಪಂಚಾಯತ್ ರಿಸಲ್ಟ್ ಹೊರಬಿದ್ದು 24 ಗಂಟೆ ಕಳೆದಿದೆ. ಆದರೆ ಈ ರಿಸಲ್ಟ್ ಜಿಲ್ಲೆಯ ಅಲ್ಪ ಸಂಖ್ಯಾತ ರಾಜಕಾರಣಕ್ಕೊಂದು ಹೊಸ ಸಂದೇಶ ಕಳುಹಿಸಿದೆ ಅಂದರೆ ತಪ್ಪಲ್ಲ. ಅದರಲ್ಲೂ ಜಿಲ್ಲೆಯ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರಿಗೆ, ಕಾರ್ಯಕರ್ತರಿಗೆ ಸಿರಾಜ್ ಗೆಲುವು ದೊಡ್ಡ ಮೆಸೇಜ್ ಅನ್ನು ರವಾನಿಸಿದೆ. ಅಷ್ಟಕ್ಕೂ ಆ ಮೆಸೇಜ್ ಯಾವುದು ಗೊತ್ತಾ.? ಸಮುದಾಯದ ಪರ, ಸತ್ಯದ ಪರ, ನ್ಯಾಯದ ಪರ,ಅನ್ಯಾಯದ ವಿರುದ್ದ ಗಟ್ಟಿಯಾಗಿ ನಿಂತ ಕಾರಣಕ್ಕೆ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ ಸಿರಾಜ್ ಬಜಪೆ ಅವರನ್ನು […]

Continue Reading

ಬಂಡಾಯ ಅಭ್ಯರ್ಥಿಯ ಕುಕ್ಕರ್ ‘ಸೀಟಿ’ ಗೆ ಬೆವರಿಳಿದ ‘ಕೈ’.! ಬಜಪೆ, ಕಿನ್ನಿಗೋಳಿ ಕಮಲ ಅಧಿಪತ್ಯ: ಕಾಂಗ್ರೆಸ್ ಯುವ ನಾಯಕನಿಗೆ ಮುಖಭಂಗ

ಲೋಕಲ್ ಫೈಟಿಂಗ್ ನಲ್ಲಿ SDPI ಮಿಂಚಿಂಗ್.! ಈ ಪಲಿತಾಂಶ ಜಿಲ್ಲೆಯ ಕಾಂಗ್ರೆಸಿಗೊಂದು ಎಚ್ಚರಿಕೆ ಬಹು ನಿರೀಕ್ಷಿತ ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ರಿಸಲ್ಟ್ ಕೊನೆಗೂ ಹೊರಬಿದ್ದಿದೆ. ಎರಡೂ ಪಟ್ಟಣ ಪಂಚಾಯತ್ ಬಿಜೆಪಿ ವಶವಾಗಿದೆ. ಕಾಂಗ್ರೆಸ್ ಗಟ್ಟಿ ಧ್ವನಿ, ನ್ಯಾಯದ ಪರ ಧ್ವನಿ ಎತ್ತುತ್ತಿದ್ದ ಸಿರಾಜ್ ಬಜಪೆ ಗೋಪಲ್ಕೆ ವಾರ್ಡ್ ನಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ಕಾಂಗ್ರೆಸ್ ನಾಯಕರ ಬೆವರಿಳಿಸಿದ್ದಾರೆ. ಕಾಂಗ್ರೆಸ್ ಸ್ವಾರ್ಥ ನಾಯಕರ, ಬಕೆಟ್ ವೀರರಿಗೆ ಬಲಿಪಶುವಾಗಿದ್ದ ಸಿರಾಜ್ ಬಜಪೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ […]

Continue Reading