ರಂಝಾನ್ ಉಪವಾಸದ ನಡುವೆಯೂ ಮಾನವೀಯತೆಯ ಸಂದೇಶ ಸಾರಿದ ನೇತ್ರಾವತಿ ವೀರರು.!

ಕರಾವಳಿ

ನೇತ್ರಾವತಿ ನದಿಗೆ ಬಿದ್ದವನ ರಕ್ಷಿಸಲು ಹರಸಾಹಸ ಪಟ್ಟರೂ ವಿಧಿಯ ಕ್ರೂರ ಲೀಲೆಗೆ ಬಲಿಯಾದ ಅನೂಶ್.

ನರಿಕೊಂಬು ಗ್ರಾಮದ ಅಂತರ ಕಲ್ಯಾರು ನಿವಾಸಿ ಪೈಂಟರ್ ಯೋಗೀಶ ಅವರ ಪುತ್ರ ಅನೂಶ್ ತನ್ನ ಸ್ನೇಹಿತರ ಜೊತೆ ನೇತ್ರಾವತಿ ನದಿಗೆ ಸ್ನಾನಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ. ಮಾಹಿತಿ ತಿಳಿದು ನೂರಾರು ಜನರ ಪ್ರಾಣ ರಕ್ಷಿಸಿದ ಪಾಣೆಮಂಗಳೂರು ಗೂಡಿನಬಳಿಯ ನೇತ್ರಾವತಿ ಮುಳುಗುತಜ್ಞರಾದ ಮುಹಮ್ಮದ್ @ಮಮ್ಮ. ಹನೀಫ್ ಬಾಯ್. ಇಂತಿಯಾಜ್. ರಹಿಮಾನ್ ಕೀಳಂಗಡಿ. ಅಶ್ಫಾಕ್ ಅಕ್ಕರಂಗಡಿ ತಂಡ ನದಿ ನೀರಿನಲ್ಲಿ ಹುಡುಕಾಡಿ ಮೇಲಕ್ಕೆತ್ತಿದ್ದರೂ ಅಷ್ಟರಲ್ಲಾಗಲೇ ಯುವಕ ಮೃತಪಟ್ಟಿದ್ದಾನೆ.

ರಂಝಾನಿನ ಪುಣ್ಯ ತಿಂಗಳಲ್ಲೂ ಮಾನವೀಯತೆಯ ಸಂದೇಶವನ್ನು ಸಾರಿ, ಇಡೀ ನಾಡಿನ ಜನರ ಮೆಚ್ಚುಗೆಗೆ ನೇತ್ರಾವತಿ ತಂಡದ ವೀರರು ಪಾತ್ರರಾಗಿದ್ದಾರೆ.