ಹೊಸದಿಲ್ಲಿ: ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು 100 ದಿನಗಳಲ್ಲಿ ಒಂದು ಲಕ್ಷ ಯುವ ಅಥ್ಲೀಟ್ಗಳನ್ನು ಗುರುತಿಸುವ ಗುರಿಯೊಂದಿಗೆ ಕೀರ್ತಿ ಯೋಜನೆಯ ಎರಡನೇ ಹಂತಕ್ಕೆ ಶುಕ್ರವಾರ ಚಾಲನೆ ನೀಡಿದರು.
ಖೇಲೋ ಇಂಡಿಯಾ ರೈಸಿಂಗ್ ಟ್ಯಾಲೆಂಟ್ ಐಡೆಂಟಿಫಿಕೇಶನ್ (ಕೀರ್ತಿ) ಅಡಿಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಾ ಹುಡುಕಾಟವು 2047 ರ ವೇಳೆಗೆ ಭಾರತವನ್ನು ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡಲು ಒಂದು ಮೆಟ್ಟಿಲು ಎಂದು ಅವರು ಭಾವಿಸಿದರು.
ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಎರಡನೇ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಂಡವಿಯಾ ಮಾತನಾಡಿ, “ಭಾರತವು ವೈವಿಧ್ಯತೆ ಮತ್ತು ಸಾಮರ್ಥ್ಯದಿಂದ ತುಂಬಿದೆ. ಭಾರತದಲ್ಲಿ ಬುದ್ಧಿಶಕ್ತಿ, ಮಾನವಶಕ್ತಿ ಅಥವಾ ಪ್ರತಿಭೆಗಳ ಕೊರತೆ ಎಂದಿಗೂ ಕಂಡುಬಂದಿಲ್ಲ.
