ರಾಹುಲ್ ಗಾಂಧಿ ಈ ದೇಶದ ಪರಮೋಚ್ಚ ನಾಯಕ, ರಾಹುಲ್ ಗಾಂಧಿ ಕೆನ್ನೆಗೆ ಬಾರಿಸುವುದು ಬಿಡಿ, ನಮ್ಮ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನ ಮೈ ಮುಟ್ಟುವ ತಾಕತ್ತು ನಿಮಗಿದೆಯೆ ಭರತ್ ಶೆಟ್ಟಿಯವರೇ.? ಎಂದು ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಗಿರೀಶ್ ಆಳ್ವ ಕಿಡಿಕಾರಿದ್ದಾರೆ.
ನೀವು ಶಾಸಕರಾಗಲು ನಾಲಾಯಕ್, ಸಂವಿಧಾನದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನೀವು ರಸ್ತೆ ಬದಿ ಪುಡಿ ರೌಡಿಗಳ ರೀತಿ ವರ್ತಿಸುತ್ತೀರಿ. ನಿಮ್ಮ ಚೇಲಾಗಳನ್ನು ಖುಷಿಪಡಿಸಲು ಈ ರೀತಿ ಅಸಂವಿಧಾನಿಕ ಮಾತುಗಳನ್ನಾಡುವುದನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ. ಈ ಜಿಲ್ಲೆಯ ಬಿಜೆಪಿ ಶಾಸಕರುಗಳು ತನ್ನ ಪಕ್ಷದೊಳಗೆ ನಾಯಕರಾಗಳು ಪೈಪೋಟಿಯಲ್ಲಿದ್ದಾರೆ. ನಿಮ್ಮ ಪೈಪೋಟಿ ನಿಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ತೋರಿಸಿ. ಈ ರೀತಿ ವಿವಾದಾತ್ಮಕ ಹೇಳಿಕೆಗಳಿಂದ ಅಲ್ಲ. ನಮ್ಮ ಯುವ ಕಾರ್ಯಕರ್ತರಿಗೂ ನಿಮ್ಮದೇ ದಾಟಿಯಲ್ಲಿ ಉತ್ತರ ನೀಡಲು ಗೊತ್ತಿದೆ. ಆದರೆ ಇದು ನಮ್ಮ ಕಾಂಗ್ರೆಸ್ ಸಂಸ್ಕೃತಿಯಲ್ಲ. ಎಂದು ಟಾಂಗ್ ನೀಡಿದ್ದಾರೆ.
