ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ.ಸಂ:09/2005, ಕಲಂ 457,380 r/w 34 IPC ಪ್ರಕರಣದಲ್ಲಿ ಆರೋಪಿಯಾದ ತಮಿಳುನಾಡು ಮೂಲದ ತಿರುಣವೇಲಿ ನಿವಾಸಿ ಮಾಡಸ್ವಾಮಿ ಎಂಬಾತನು ಸುಮಾರು 16 ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಪೊಲೀಸರ ಕಣ್ಣು ತಪ್ಪಿಸಿ, ತಲೆಮರೆಸಿಕೊಂಡಿದ್ದ.
ಈತನನ್ನು ಉಪ್ಪಿನಂಗಡಿ ಪೊಲೀಸರು ಬೆನ್ನುಹತ್ತಿ ಕೃಷ್ಣ ನಗರ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿ ಮಾಡಸ್ವಾಮಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
