ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ‌.ಪಿ.ನಡ್ಡಾ ಬದಲಿಗೆ ಹೊಸ ಅಧ್ಯಕ್ಷರ ಆಯ್ಕೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ

ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ‌.ಪಿ.ನಡ್ಡಾ ಬದಲಿಗೆ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. 2020 ರ ಫೆಬ್ರವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರಾಗಿ ಆಯ್ಕೆಯಾದ ನಡ್ಡಾ ಪ್ರಸ್ತುತ ಕೇಂದ್ರ ಸಚಿವರೂ ಆಗಿದ್ದಾರೆ. ಅವರ ಅವಧಿ ಮುಗಿದಿದ್ದರೂ 2024ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ವಿಸ್ತರಿಸಲಾಗಿತ್ತು. ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಗುತ್ತದೆಯೋ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೋ ಎಂದು ಮುಂದಷ್ಟೇ ಗೊತ್ತಾಗಬೇಕು. ಇಲ್ಲಿಯವರೆಗೆ ಬಹುತೇಕ ಅವಿರೋಧ ಆಯ್ಕೆಯೇ […]

Continue Reading

ಧಾರ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿ ಹೊಸ ಕೇಸು ದಾಖಲಿಸುವಂತಿಲ್ಲ. ಸುಪ್ರೀಂ ಕೋರ್ಟ್

ಆಗಸ್ಟ್ 15, 1947 ರಂದು ಇದ್ದಂತೆ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು ಬದಲಾಗದೆ ಉಳಿಯುತ್ತದೆ ಎಂದು ಪೂಜಾ ಸ್ಥಳಗಳ ಕಾಯಿದೆಯು ಸೂಚಿಸುತ್ತದೆ. 1991 ರ ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಉತ್ತರ ಬರುವವರೆಗೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಲಾಗುವುದಿಲ್ಲ ಎಂದು ಕೋರ್ಟ್​ ಹೇಳಿದೆ. ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪ್ರಕರಣವನ್ನು […]

Continue Reading

2019 ರಿಂದ ವಕ್ಫ್ ಮಂಡಳಿಗೆ ಕೇಂದ್ರದಿಂದ ಭೂಮಿ ನೀಡಿಲ್ಲ: ರಾಜ್ಯಸಭೆಗೆ ಸರ್ಕಾರ ನೀಡಿದ ಮಾಹಿತಿ

ನವದೆಹಲಿ: 2019 ರಿಂದ ಕೇಂದ್ರ ಸರ್ಕಾರವು ವಕ್ಫ್ ಮಂಡಳಿಗೆ ಯಾವುದೇ ಭೂಮಿಯನ್ನು ನೀಡಿಲ್ಲ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೋಮವಾರ ರಾಜ್ಯಸಭೆಗೆ ತಿಳಿಸಿದೆ. 2019 ರಿಂದ ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕ್ಫ್ ಬೋರ್ಡ್‌ಗೆ ಒದಗಿಸಿದ ಒಟ್ಟು ಭೂಮಿಯ ವಿಸ್ತೀರ್ಣ ಕುರಿತು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಎಂಒಎಸ್ ತೋಖಾನ್ ಸಾಹು ಅವರು ಭೂಮಿ ರಾಜ್ಯದ ವಿಷಯವಾಗಿದೆ ಮತ್ತು ಆದ್ದರಿಂದ ರಾಜ್ಯ ಸರ್ಕಾರಗಳು ಒದಗಿಸಿದ ಭೂಮಿಯ ಡೇಟಾ ಇಲ್ಲ ಎಂದು ಹೇಳಿದರು. […]

Continue Reading

ರಂಜಾನ್ 25 ಶುಕ್ರವಾರ ಉದ್ಯಮಿಗೆ ಖೆಡ್ಡಾ ತೋಡಿ 596 ಪವನ್ ಚಿನ್ನಾಭರಣ ಲೂಟಿದ ಮಾಟಗಾತಿ ಜಿನ್ನುಮ್ಮ!

ಹನಿಟ್ರ್ಯಾಪ್, ಮಾಟ ಮಂತ್ರದಲ್ಲಿ ನಿಸ್ಸೀಮಳು ಈಕೆ ಭಾರೀ ಸಂಚಲನ ಸೃಷ್ಟಿಸಿದ ಪ್ರಕರಣ.. ಆರೋಪಿಗಳು ಅಂದರ್ ಗಲ್ಫ್ ರಾಷ್ಟ್ರಗಳಲ್ಲಿ ಹಲವಾರು ಸೂಪರ್ ಮಾರ್ಕೆಟ್ ಗಳು ಮತ್ತು ಇತರ ಉದ್ಯಮಗಳನ್ನು ಹೊಂದಿದ್ದ ಅನಿವಾಸಿ ಉದ್ಯಮಿ ಕಾಸರಗೋಡು ಫಾರೂಖಿಯ ನಿವಾಸಿ ಎಂ.ಸಿ ಅಬ್ದುಲ್ ಗಫೂರ್ ಹಾಜಿ ಏಪ್ರಿಲ್ 14, 2023 ರಂದು ಮುಂಜಾನೆ ಅವರ ಮನೆಯ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅದು ಮುಸ್ಲಿಮರ ಪವಿತ್ರ ಮಾಸ ರಂಜಾನ್ 25 ನೇ ಶುಕ್ರವಾರದ ದಿನವಾಗಿತ್ತು. ರಂಜಾನ್ ತಿಂಗಳಾಗಿದ್ದರಿಂದ ಅದು ಸಹಜ ಸಾವು […]

Continue Reading

ಗೋವುಗಳ ಕಳ್ಳಸಾಗಾಟ ಸುಳ್ಳು ಆರೋಪ; ಪೊಲೀಸ್‌ ಸಿಬ್ಬಂದಿ ಸೇರಿ ಗೋ ರಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನ್ಯಾಯಾಲಯ ಆದೇಶ

ಗೋವುಗಳ ಕಳ್ಳಸಾಗಾಟ ನಡೆಸುತ್ತಿದ್ದಾರೆ ಎಂಬ ಸುಳ್ಳು ದೂರಿನಲ್ಲಿ ಇಬ್ಬರನ್ನು ಸಿಲುಕಿಸಿದ ಪ್ರಕರಣ ಸಂಬಂಧ ಮೂವರು ಪೊಲೀಸ್‌ ಸಿಬ್ಬಂದಿ ಮತ್ತು ‘ಗೋ ರಕ್ಷಕ’ ಸೇರಿ ಇತರ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಗುಜರಾತ್‌ನ ನ್ಯಾಯಾಲಯವೊಂದು ಆದೇಶಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪರ್ವೇಜ್‌ ಅಹಮ್ಮದ್‌ ಮಾಳವೀಯ ಅವರು ಮಂಗಳವಾರ, ಗೋವುಗಳ ಮಾಲೀಕ ಇಲಿಯಾಸ್‌ ದೇವಾಳ್‌ ಮತ್ತು ಚಾಲಕ ನಾಜಿರ್ ಮಲಿಕ್‌ ಅವರನ್ನು ಖುಲಾಸೆಗೊಳಿಸಿದರು. ಆರೋಪಿಗಳು ಗೋವುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರು ಎಂದು ಸಾಬೀತು ಮಾಡುವ ಯಾವುದೇ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್‌ ಒದಗಿಸಿಲ್ಲ ಎಂದು […]

Continue Reading

ಭೀಕರ ರಸ್ತೆ ಅಪಘಾತ; ಕೇರಳ ಸಾರಿಗೆ ಸಂಸ್ಥೆಯ ಬಸ್ ಗೆ ಕಾರು ಡಿಕ್ಕಿ, ಐವರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೇರಳ ಸಾರಿಗೆ ಸಂಸ್ಥೆಯ ಬಸ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಲಪ್ಪುರದಲ್ಲಿ ನಡೆದಿದೆ. ಆಲಪ್ಪುಳದ ಕಲಾರ್‌ಕೋಡ್ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಭೀಕರ ಅಪಘಾತದಲ್ಲಿ, ಕೆಎಸ್‌ಆರ್‌ಟಿಸಿ ಸೂಪರ್-ಫಾಸ್ಟ್ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ವಿದ್ಯಾರ್ಥಿಗಳಲ್ಲದೆ, […]

Continue Reading

ಒಪ್ಪಿಗೆಯ ದೈಹಿಕ ಸಂಬಂಧವನ್ನು ಅಪರಾಧೀಕರಣಗೊಳಿಸುವುದು ಆತಂಕಕಾರಿ ಪ್ರವೃತ್ತಿ

ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿರುವ ಮಹಿಳೆ ಅತ್ಯಾಚಾರದ ಆರೋಪವನ್ನು ಹೊರಿಸುವಂತಿಲ್ಲ: ಸುಪ್ರೀಂ ಕೋರ್ಟ್ ಒಪ್ಪಿಗೆಯ ದೈಹಿಕ ಸಂಬಂಧವನ್ನು ಅಪರಾಧೀಕರಣಗೊಳಿಸುವ ಆತಂಕಕಾರಿ ಪ್ರವೃತ್ತಿಯ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹದ ಸುಳ್ಳು ಭರವಸೆಯ ಮೇಲೆ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ವರ್ಷಗಳ ಕಾಲ ವಿವಾಹೇತರ ಸಂಬಂಧ ಹೊಂದಿರುವ ಮಹಿಳೆ ಅತ್ಯಾಚಾರದ ಆರೋಪವನ್ನು ಹೊರಿಸುವಂತಿಲ್ಲ ಎಂದು ಹೇಳಿದೆ. ಮುಂಬೈನ ಖಾರ್ಘರ್ ಪೊಲೀಸ್ ಠಾಣೆಯಲ್ಲಿ ಮಹೇಶ್ ದಾಮು ಖರೆ ವಿರುದ್ಧ ವನಿತಾ ಎಸ್ ಜಾಧವ್ ಎಂಬುವರು […]

Continue Reading

ದೇಶದಲ್ಲಿ ವಕ್ಫ್ ಮಂಡಳಿಗಳ ಒಟ್ಟು 58,929 ಆಸ್ತಿ, ಕರ್ನಾಟಕದಲ್ಲಿ 869 ಆಸ್ತಿಗಳ ಅತಿಕ್ರಮವಾಗಿದೆ: ಕೇಂದ್ರ ಸರ್ಕಾರ

ದೇಶದಲ್ಲಿ ವಕ್ಫ್ ಮಂಡಳಿಗಳ 58,929 ಆಸ್ತಿಗಳ ಅತಿಕ್ರಮವಾಗಿರುವ ಆರೋಪ ಕೇಳಿಬಂದಿದೆ. ಇದರಲ್ಲಿ ಕರ್ನಾಟಕದ 869 ಆಸ್ತಿಗಳೂ ಸೇರಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಲೋಕಸಭೆಯಲ್ಲಿ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೆಣ್‌ ರಿಜಿಜು, ಕಾಲ ಕಾಲಕ್ಕೆ ವಕ್ಫ್‌ ಆಸ್ತಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕೇಂದ್ರೀಯ ವಕ್ಫ್‌ ಪರಿಷತ್‌ಗೆ ಬಂದಿವೆ. ಅವುಗಳನ್ನು ಆಯಾ ಸಂದರ್ಭದಲ್ಲೇ ರಾಜ್ಯ ವಕ್ಫ್ ಮಂಡಳಿ ಮತ್ತು ಸರ್ಕಾರಕ್ಕೆ ಕಳುಹಿಸಿ ಸೂಕ್ತ ಕ್ರಮಕ್ಕೆ […]

Continue Reading

ಅಜ್ಮೀರ್ ದರ್ಗಾ ಶಿವ ದೇವಾಲಯ ಎಂಬ ತಕರಾರು ಅರ್ಜಿ; ವಿಚಾರಣೆಗೆ ನಡೆಸಲು ನ್ಯಾಯಾಲಯದ ಒಪ್ಪಿಗೆ, ದರ್ಗಾ ಸಮಿತಿ, ಎಎಸ್ಐಗೆ ಸಮನ್ಸ್

ಈ ವಿಚಾರದಲ್ಲಿ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ)ಗೆ ಸಮನ್ಸ್ ಜಾರಿ ಮಾಡಬೇಕು ಎಂದು ನ್ಯಾಯಮೂರ್ತಿ ಚಂದೇಲ್ ನಿರ್ದೇಶಿಸಿದ್ದಾರೆ. ಅಜ್ಮೀರ್ ನ್ಯಾಯಾಲಯವು ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಪ್ರತಿಪಾದಿಸುವ ಅರ್ಜಿಯನ್ನು ಸ್ವೀಕರಿಸಿದೆ, ದರ್ಗಾ ಸಮಿತಿಗೆ ಸಮನ್ಸ್, ASI ನ್ಯಾಯಾಲಯವು ಅಜ್ಮೀರ್ ದರ್ಗಾವನ್ನು ಶಿವ ದೇವಾಲಯವೆಂದು ಹೇಳಿಕೊಳ್ಳುವ ಅರ್ಜಿಯನ್ನು ಆಲಿಸಲು ಸಮ್ಮತಿಸುತ್ತದೆ, ದರ್ಗಾ ಸಮಿತಿ, ASI ಗೆ ಸಮನ್ಸ್. ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಸಮಾಧಿ ಅಥವಾ […]

Continue Reading

ಮಹಾರಾಷ್ಟ್ರ: ಮಹಾ ಆಘಾದಿ ಲಗಾಡಿ.. ಬಿಜೆಪಿ ಸುನಾಮಿ..!

ಮೋದಿ-ಷಾ ಇಲ್ಲದೆಯೂ ರಾಜ್ಯ ಗೆಲ್ಲಬಹುದು ಅನ್ನುವ ಸಂದೇಶ ರವಾನಿಸಿದ ಆರ್ ಎಸ್ ಎಸ್.! ಜಾರ್ಖಂಡ್: ಬಿಜೆಪಿಗೆ ಬಿಗ್ ಶಾಕ್.! ದೇಶದ ಗಮನ ಸೆಳೆದಿದ್ದ ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಇಂಡಿಯಾ ಮೈತ್ರಿಕೂಟ ಮಕಾಡೆ ಮಲಗಿದೆ. ಎನ್ ಡಿಎ ಒಕ್ಕೂಟ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಅದರಲ್ಲೂ ಬಿಜೆಪಿ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ ಸುನಾಮಿಯಂತೆ ಎದ್ದು ನಿಂತಿದೆ. ಮಹಾಯುತಿ ವರ್ಸಸ್ ಮಹಾ ಆಘಾದಿ ಲಡಾಯಿಯಲ್ಲಿ ಬಿಜೆಪಿ ಮೈತ್ರಿಕೂಟ ಕೈ ಮೇಲಾಗಿದೆ. ಮಹಾರಾಷ್ಟ್ರ ದೇಶದ ಫೈನಾನ್ಸಿಯಲ್ ರಾಜಧಾನಿ […]

Continue Reading