ಬ್ಯಾಟರಿಯಲ್ಲಿ ಉಂಟಾದ ತೊಂದರೆಗೆ ಸ್ಪಂದಿಸದ ಕಾರು ಮಾರಾಟ ಕಂಪೆನಿ; ಪರಿಹಾರ ನೀಡುವಂತೆ ಮಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶ

ಕರಾವಳಿ

ಕಾರಿನ ಬ್ಯಾಟರಿಯಲ್ಲಿ ಉಂಟಾದ ತೊಂದರೆಗೆ ಸ್ಪಂದಿಸದ ಕಾರು ಮಾರಾಟ ಕಂಪೆನಿಯು ಕಾರಿನ ಮಾಲಕರಿಗೆ ಪರಿಹಾರ ನೀಡುವಂತೆ ಮಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಪುತ್ತೂರಿನ ವೈದ್ಯೆ ಡಾ| ಉಷಾ ಅವರು ಮಂಗಳೂರಿನ ಬಿಜೈ ಮತ್ತು ಪುತ್ತೂರಿನ ಬೊಳುವಾರಿನಲ್ಲಿರುವ ಕಾರು ಮಾರಾಟ ಸಂಸ್ಥೆಯೊಂದರಿಂದ ಕಾರು ಖರೀದಿಸಿದ್ದರು. ಕಾರಿನ ಗ್ಯಾರಂಟಿ ಅವಧಿಯೊಳಗೆಯೇ ಬ್ಯಾಟರಿಯ ಸಮಸ್ಯೆ ಉಂಟಾಗಿತ್ತು. ಇದನ್ನು ಸಂಸ್ಥೆಯ ಗಮನಕ್ಕೆ ತಂದಿದ್ದರೂ ಸಂಸ್ಥೆಯವರು ಯಾವದೇ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ಇದರಿಂದ ಮೈಲೇಜ್‌, ಪಿಕಪ್‌ ಮತ್ತು ಇತರ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದವು.

ಸಮಸ್ಯೆಗೆ ಸ್ಪಂದಿಸದ ಇದ್ದುದರಿಂದ ಸಂಸ್ಥೆಯ ವಿರುದ್ಧ ಡಾ| ಉಷಾ ಅವರು ನ್ಯಾಯವಾದಿ ವಿಶ್ವನಾಥ್‌ ದೇವಸ್ಯ ಅವರ ಮೂಲಕ ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿದಾರೆ ಡಾ| ಉಷಾ ಅವರಿಗೆ ಪರಿಹಾರ ನೀಡುವಂತೆ ಸಂಸ್ಥೆಗೆ ಆದೇಶ ಮಾಡಿದೆ.