
ಈದ್ ಮೆರವಣಿಗೆ ವಿಚಾರದಲ್ಲಿ ಧಮ್ಕಿ ಹಾಕಿದ ವಿಚಾರವಾಗಿ ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಜಮಾವಣೆಯಾದ ಬಿ.ಸಿ.ರೋಡ್ ಪಟ್ಟಣ ಸಂಪೂರ್ಣ ಪೊಲೀಸ್ ಸುಪರ್ದಿಯಲ್ಲಿದೆ. ಶರಣ್ ಪಂಪ್ ವೆಲ್ ಹಾಗೂ ಸುಮಾರು ನಾಲ್ಕು ಸಾವಿರದಷ್ಟು ಕಾರ್ಯಕರ್ತರು ರಕ್ತೇಶ್ವರಿ ಗುಡಿ ಮುಂಭಾಗ ಸೇರಿದ್ಜಾರೆ. ಹೆಚ್ಚುವರಿ ಪೊಲೀಸ್ ತುಕಡಿಗಳು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

