ಖತರ್ನಾಕ್ ಲೇಡಿ..ಪೊಲೀಸನನ್ನೇ ಹನಿಟ್ರ್ಯಾಪ್ ಗೆ ಕೆಡವಿ 8 ಲಕ್ಷ ಬಾಚಿದ ಸುರಸುಂದರಾಂಗಿ..!

ರಾಜ್ಯ

ಪೊಲೀಸರನ್ನೇ ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿದ ಖತರ್ನಾಕ ಮಹಿಳೆ. ಬರೊಬ್ಬರಿ 8 ಲಕ್ಷ ರೂ. ಹಣ ವಸೂಲು ಮಾಡಿದ
ಆರೋಪಿ ಮಹಿಳೆ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್‌ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಹಿಂದೆ ಕಲಬುರಗಿಯಲ್ಲಿ ನಡೆದ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಈ ಪೂಜಾ ಭಾಗಿಯಾಗಿದ್ದಳು.

ಸಾಮಾನ್ಯವಾಗಿ ಉದ್ಯಮಿ ಗಳು,ರಾಜಕಾರಣಿಗಳು, ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪೊಲೀಸ್ ಕಾನ್ಸಟೇಬಲ್‌ ಒಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ ಖೆಡವಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.

ಕಲಬುರಗಿಯ ಸೆನ್ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್‌ನನ್ನು ಪೂಜಾ ಡೊಂಗರಗಾಂವ್ ಎಂಬ ಮಹಿಳೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಾಳೆ. ಆ ಬಳಿಕ ಕಾನ್ಸಟೇಬಲ್‌ ಪತ್ನಿಯಿಂದ ಎಂಟು ಲಕ್ಷ ಹಣ ವಸೂಲಿ ಮಾಡಿದ್ದಾಳಂತೆ. ಆರೋಪಿ ಪೂಜಾ ಡೊಂಗರಗಾಂವ್ ಕಾಟಕ್ಕೆ ಬೇಸತ್ತು ಕಾನ್ಸಟೇಬಲ್‌ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಪೂಜಾ ಮತ್ತು ಅಮರ್ ಸಿಂಗ್ ಎಂಬುವರಿಂದ 15 ಲಕ್ಷಕ್ಕೆ ಬೇಡಿಕೆ ಇಟ್ಟು 8 ಲಕ್ಷ ಹಣ ವಸೂಲಿ ಮಾಡಿದ್ದಳು. ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಇನ್ನೊಂದು ಹನಿಟ್ರ್ಯಾಪ್ ಪ್ರಕರಣದಲ್ಲೂ ಈ ಪೂಜಾ ಭಾಗಿಯಾಗಿದ್ದಳು. ಈ ಪ್ರಕರಣದಲ್ಲಿ ಪ್ರಭು ಹಿರೇಮಠ, ರಾಜು ಲೇಂಗಟಿ ಪ್ರಮುಖ ಆರೋಪಿ ಗಳಾಗಿದ್ದರು. ಆರೋಪಿಗಳು ಹನಿಟ್ರ್ಯಾಪ್​ ಮೂಲಕ ಉದ್ಯಮಿ ವಿನೋದಕುಮಾರ ಖೇಣಿ ಅವರಿಂದ 34 ಲಕ್ಷ ರೂ. ದೋಚಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರಾಜು ಲೇಂಗಟಿ, ಪ್ರಭು ಹಿರೇಮಠ ಸೇರಿಂದತೆ ಏಳು ಜನರ ವಿರುದ್ಧ ದೂರು ದಾಖಲಾಗಿತ್ತು.

ಉದ್ಯಮಿ ವಿನೋದಕುಮಾರ ಖೇಣಿ ವ್ಯಾಪಾರಿಯಾಗಿದ್ದು, ಇವರ ಅಂಗಡಿಗೆ ಆರೋಪಿ ಪ್ರಭು ಹಿರೇಮಠ ಖಾಯಂ ಬರುತ್ತಿದ್ದನು. ಆರೋಪಿ ಪ್ರಭು ಹಿರೇಮಠ ಖಾಯಂ ಗ್ರಾಹಕನಾಗಿದ್ದರಿಂದ ಉದ್ಯಮಿ ವಿನೋದಕಮಾರ್​ ಆತನ ಜೊತೆ ಗೆಳೆತನ ಬೆಳಸಿದ್ದರು. ಈ ನಡುವೆ, ಇದೇ ವರ್ಷ ಮೇನಲ್ಲಿ ಈ ಪೂಜಾ ವಿನೋದ ಕುಮಾರ್ ಅವರಿಗೆ ಮೆಸೆಜ್​ ಮಾಡಿದ್ದಾಳೆ. ಆದರೆ, ಈ ಮೆಸೆಜ್‌ಗಳಿಗೆ ವಿನೋದ ಕುಮಾರ್​ ರಿಪ್ಲೈ ಮಾಡಿರಲ್ಲ.
ಒಂದು ಮಧ್ಯರಾತ್ರಿ ಪೂಜಾ, ವಿನೋದಕುಮಾರ್ ಅವರಿಗೆ ವಾಟ್ಸ್​ಆ್ಯಪ್​ ಕಾಲ್​ ಮಾಡಿದ್ದಾಳೆ. ಆಗ, ವಿನೋದಕುಮಾರ್​ ಕಾಲ್​ ರಿಸಿವ್​​ ಮಾಡಿ ಮಾತನಾಡಿದ್ದಾರೆ. ನಂತರ, ಇಬ್ಬರು ಪರಿಚಯಸ್ತರಾಗಿದ್ದು, ಸಾಮಾನ್ಯ ಕರೆಗಳನ್ನು ಮಾಡಿ ಮಾತನಾಡಲು ಆರಂಭಿಸಿದ್ದಾರೆ.

ವಿನೋದಕುಮಾರ್ ಹೈದರಾಬಾದ್‌ಗೆ ತೆರಳಿದ್ದಾಗ​ ರಾಣಿಗುಂಜನಲ್ಲಿ ಪೂಜಾಳನ್ನು ಭೇಟಿಯಾಗಿದ್ದಾರೆ. ಬಳಿಕ ಇಬ್ಬರು ಒಟ್ಟಿಗೆ ರಾಣಿಗಂಜನಿಂದ ಹೈದ್ರಾಬಾದನಲ್ಲಿನ ಟೌನ ಹೌಸ್ ಲಾಡ್ಜಿಗೆ ಹೋಗಿದ್ದಾರೆ. ಈ ವೇಳೆ ವಿನೋದಕುಮಾರ್ ನನ್ನ ನಂಬರ್ ನಿನಗೆ ಹೇಗೆ ಸಿಕ್ತು ಎಂದು ಪೂಜಾಗೆ ಕೇಳಿದ್ದಾರೆ. ಆಗ, ಪೂಜಾ ಪ್ರಭು ಹಿರೇಮಠ ನನ್ನ ಸಂಬಂಧಿ, ಅವರು ನಿಮ್ಮ ನಂಬರ್​ ಕೊಟ್ಟರು ಎಂದು ಹೇಳಿದ್ದಾಳೆ. ಬಳಿಕ, ಪೂಜಾ ರೂಮಿನಲ್ಲಿ ಮತ್ತು ಕಾರಿಡಾರನಲ್ಲಿ ವಿನೋದಕುಮಾರ್ ಅವರನ್ನು ತಬ್ಬಿಕೊಂಡು, ಮುತ್ತು ಕೊಟ್ಟು, ತನ್ನ ಮೊಬೈಲನಲ್ಲಿ ಫೋಟೋ ತೆಗೆದುಕೊಂಡಿದ್ದಾಳೆ.

ಪೂಜಾ ಮತ್ತು ವಿನೋದಕುಮಾರ್ ಮತ್ತೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಓರಿಯನ್ ಮಾಲ್ ಎದರುಗಡೆ ಕಟ್ಟಿ ಮೇಲೆ ಮಾತಾಡುತ್ತಾ ಕುಳಿತಾಗ, ಅಲ್ಲಿಯೂ ಕೂಡ ಪೂಜಾ ವಿನೋದಕುಮಾರ್ ಪಕ್ಕದಲ್ಲಿ ಕುಳಿತುಕೊಂಡು ತನ್ನ ಮೊಬೈಲನಲ್ಲಿ ಫೋಟೊಗಳನ್ನು ತೆಗೆದುಕೊಂಡಿದ್ದಾಳೆ. ನಂತರ ಈ ಫೋಟೊಗಳನ್ನು ಪೂಜಾ ಆರೋಪಿಗಳಾದ ಪ್ರಭು ಹಿರೇಮಠ ಮತ್ತು ರಾಜು ಲೇಂಗಟಿಗೆ ಕಳುಹಿಸಿದ್ದಾಳೆ.

ಬಳಿಕ ವಿನೋದಕುಮಾರ್ ಮರಳಿ ಊರಿಗೆ ಬಂದಾಗ ಆರೋಪಿ ಪ್ರಭು ಹಿರೇಮಠ ಈ ಫೋಟೋಗಳನ್ನು ತೋರಿಸಿ ಬ್ಲ್ಯಾಕ್ ​ ಮೇಲ್​ ಮಾಡಿ, ಬೆದರಿಕೆ ಹಾಕಿ ನಗದು, ಚೆಕ್ ಮತ್ತು ಫೋನ್ ಪೇ ಮೂಲಕ 34 ಲಕ್ಷ ರೂ. ದೂಚಿದ್ದಾರೆ ಎಂದು ಎಫ್​ಐಆರ್‌​ನಲ್ಲಿ ದಾಖಲಾಗಿದೆ. ಉದ್ಯಮಿ ವಿನೋದಕುಮಾರ್ ಖೇಣಿ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.