ಎಚ್ಚರ..ಭೀಕರ ಭೂ ಕುಸಿತಕ್ಕೆ ಕಾರಣವಾಗುತ್ತಿದೆ ಮಾನವ ನಿರ್ಮಿತ ಅಜಾಗರೂಕತೆ..!

ಕರಾವಳಿ

ಕರಾವಳಿ ಭಾಗದಲ್ಲಿ ಗುಡ್ಡ, ಬೆಟ್ಟಗಳ ನಾಶ ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ. ಮುಂದಕ್ಕೆ ಇದು ಮಾನವ ನಿರ್ಮಿತ ದುರಂತವಾಗಲಿದೆ.!

ದುರಂತಗಳು ಯಾವಾಗಲೂ ದುರದೃಷ್ಟಕರವೇ. ಸಾವು ನೋವು ಮತ್ತು ವರ್ಷಗಳ ಕಠಿಣ ದುಡಿಮೆಯ ಮೂಲಕ ಸೃಷ್ಟಿಯಾದ ಸೊತ್ತಿನ ನಾಶಕ್ಕೆ ಇವು ಕಾರಣವಾಗುತ್ತವೆ. ದಿಢೀರ್‌ ಮತ್ತು ನಾವು ಊಹಿಸದೇ ಇದ್ದ ಸ್ಥಳದಲ್ಲಿ ಘಟಿಸುತ್ತವೆ. ಭೂಕಂಪ, ಪ್ರವಾಹ, ಭೂಕುಸಿತ, ಚಂಡಮಾರುತ, ಅತಿವೃಷ್ಟಿ, ಸುನಾಮಿಯಂತಹ ದುರಂತಗಳು ಇತಿಹಾಸ ಪೂರ್ವದಿಂದಲೂ ಇದ್ದೇ ಇದ್ದವು. ಇವು ನೈಸರ್ಗಿಕ ಪ್ರಕೋಪಗಳು. ಮನುಷ್ಯ ಕೈಗಾರಿಕೆಯನ್ನು ಶೋಧಿಸುವುದರೊಂದಿಗೆ ಮಾನವ ನಿರ್ಮಿತ ದುರಂತಗಳೂ ಇದಕ್ಕೆ ಸೇರ್ಪಡೆಯಾದವು. ನೈಸರ್ಗಿಕ ದುರಂತಗಳನ್ನು ಮೀರಿಸುವ ರೀತಿಯಲ್ಲಿ ಮಾನವ ನಿರ್ಮಿತ ದುರಂತಗಳು ಹಲವಾರು ಜೀವಗಳನ್ನು ಬಲಿ ಪಡೆದಿವೆ. ಮಾನವ ಕುಲವು ಮರೆಯಲು ಸಾಧ್ಯವಾಗದ ರೀತಿಯ ನೋವಿನ ಗುರುತನ್ನು ಉಳಿಸಿ ಹೋಗಿವೆ.

ನೈಸರ್ಗಿಕ ವಿಕೋಪಗಳು ಮನುಷ್ಯನ ನಿಯಂತ್ರಣದಲ್ಲಿ ಇಲ್ಲ. ಹಠಾತ್‌ ಎರಗುವ ಇವುಗಳ ಪರಿಣಾಮವನ್ನು ಅನುಭವಿಸುವುದೊಂದೇ ಮನುಷ್ಯನಿಗೆ ಇರುವ ದಾರಿ. ಮಾನವ ನಿರ್ಮಿತ ದುರಂತಗಳನ್ನು ಕೂಡ ಮೊದಲೇ ಅಂದಾಜಿಸಿ ಸಿದ್ಧರಾಗುವುದಕ್ಕೆ ಅವಕಾಶ ಸಿಗುವುದಿಲ್ಲ. ಹಾಗಿದ್ದರೂ ಇವುಗಳನ್ನು ತಡೆಯಲು ಸಾಧ್ಯ. ಜಾಗರೂಕತೆ ವಹಿಸಿದರೆ ಈ ದುರಂತಗಳನ್ನು ತಪ್ಪಿಸಬಹುದು. ಇಂತಹ ದುರಂತಗಳನ್ನು ತಪ್ಪಿಸಬೇಕು ಕೂಡ. ಯಾಕೆಂದರೆ, ಮಾನವ ನಿರ್ಮಿತ ದುರಂತಗಳು ನೈಸರ್ಗಿಕ ದುರಂತಗಳಂತೆ ಅಲ್ಲ. ಇವು ಹತ್ತಾರು ವರ್ಷ ಮನುಷ್ಯನನ್ನು ಕಾಡುತ್ತಲೇ ಇರಬಲ್ಲವು.

ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕೊರೆದು ಸಮತಟ್ಟುಗೊಳಿಸಿ, ಗುಡ್ಡವನ್ನು ನಾಶ ಪಡಿಸಿ, ಅದರ ಮಣ್ಣುಗಳನ್ನು ತಂದು ತಗ್ಗು ಪ್ರದೇಶಗಳಿಗೆ ಹಾಕಿ ಸಮತಟ್ಟುಗೊಳಿಸುವ ಕಾರ್ಯ ಕರಾವಳಿ ಭಾಗದಲ್ಲಿ ಯತೇಚ್ಚವಾಗಿ ನಡೆಯುತ್ತಿದೆ. ಗುಡ್ಡ ಅಗೆದ ಪ್ರದೇಶದಲ್ಲಿ ದೊಡ್ಡ, ದೊಡ್ಡ ಬೃಹತ್ ಬಂಗ್ಲೆಗಳು, ಬಹು ಮಹಡಿ ಕಟ್ಟಡಗಳು ನಿರ್ಮಾನವಾಗುತ್ತಿದೆ. ಇದು ಭೂಮಿಯ ಬ್ಯಾಲೆನ್ಸಿಗೆ ಮಾರಕವಾಗಿ ಪರಿಣಮಿಸುತ್ತದೆ. ಗುಡ್ಡ ಅಗೆದು ನಿವೇಶನಕ್ಕೆ ಅಥವಾ ಇತರ ಕೆಲಸ ಕಾರ್ಯಗಳಿಗೆ ಸಮತಟ್ಟು ಗೊಳಿಸುವುದರಿಂದ ಗುಡ್ಡ ಕುಸಿದು, ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ತೊಂದರೆ ಉಂಟಾಗಲಿದೆ. ಭೌಗೋಳಿಕವಾಗಿ ಕೊಂಚ ಭಿನ್ನವಾಗಿರುವ ಕರಾವಳಿಯಲ್ಲಿ ಈ ರೀತಿ ಗುಡ್ಡಗಳನ್ನು ಕೊರೆದು ಸಮತಟ್ಟು ಮಾಡುತ್ತಿರುವುದು ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ ಎನ್ನುವ ಆತಂಕವನ್ನು ಪರಿಸರ ಪ್ರೇಮಿಗಳು ಹೊರಹಾಕುತ್ತಿದ್ದಾರೆ.

ಅಂತರ್ಜಲದ (ಮಳೆನೀರು) ಒತ್ತಡವು ಇಳಿಜಾರಿನ ಅಸ್ಥಿರತೆಗೆ ಕಾರಣವಾಗುತ್ತದೆ
ಸಮಗ್ರ ಸಸ್ಯಕ ರಚನೆ, ಮಣ್ಣಿನ ಪೌಷ್ಟಿಕಗಳು, ಹಾಗು ಮಣ್ಣಿನ ರಚನೆಯ ನಷ್ಟ ಅಥವಾ ಕೊರತೆ
ನದಿಗಳು ಅಥವಾ ಸಾಗರದ ಅಲೆಗಳಿಂದ ಇಳಿಜಾರಿನ ಕೆಳತುದಿಯಲ್ಲಿ ಉಂಟಾಗುವ ಸವೆತ ಹಿಮಕರಗುವಿಕೆ, ಹಿಮನದಿಗಳ ದ್ರವೀಕರಣ, ಅಥವಾ ಭಾರಿ ಮಳೆಯಿಂದ ಆರ್ದ್ರೀಕರಣದ ಮೂಲಕ ಇಳಿಜಾರುಗಳು ದುರ್ಬಲಗೊಳ್ಳುತ್ತದೆ ಸಾಕಷ್ಟು ಸ್ಥಿರತೆಯನ್ನು ಹೊಂದಿರದ ಇಳಿಜಾರುಗಳು ಭೂಕಂಪಗಳನ್ನು ಉಂಟುಮಾಡುತ್ತದೆ. ಭೂಕಂಪಗಳು ದ್ರವೀಕರಣವನ್ನು ಉಂಟುಮಾಡುತ್ತದೆ. ಇದು ಇಳಿಜಾರುಗಳ ಅಸ್ಥಿರತೆಗೆ ಕಾರಣವಾಗುತ್ತದೆ.
ಜ್ವಾಲಾಮುಖಿ ಸ್ಫೋಟಗಳು
ಭೂಕುಸಿತಗಳು ಮಾನವನ ಕಾರ್ಯಚಟುವಟಿಕೆಗಳಿಂದ ಮತ್ತಷ್ಟು ಅಧಿಕಗೊಂಡಿವೆ. ಮನುಷ್ಯನು ಹುಟ್ಟು ಹಾಕುವ ಕಾರಣಗಳಲ್ಲಿ ಅರಣ್ಯನಾಶ, ಕೃಷಿ ಹಾಗು ಕಟ್ಟಡ ನಿರ್ಮಾಣಗಳು ಸೇರಿವೆ, ಇವುಗಳು ಈಗಾಗಲೇ ದುರ್ಬಲವಾಗಿರುವ ಇಳಿಜಾರುಗಳನ್ನು ಮತ್ತಷ್ಟು ಅಸ್ಥಿರಗೊಳಿಸುತ್ತವೆ. ಮಣ್ಣುದಿಬ್ಬವು ಇಳಿಜಾರಿನ ಆಕಾರವನ್ನು ವಿಸ್ತರಿಸುತ್ತದೆ, ಅಥವಾ ಅಸ್ತಿತ್ವದಲ್ಲಿರುವ ಹೊಸ ಹೊರೆಗಳ ಮೇಲೆ ಹೇರುತ್ತದೆ. ಆಳ ಕಡಿಮೆಯಿರುವ ಮಣ್ಣುಗಳು, ಆಳವಾಗಿ-ಬೇರುಬಿಟ್ಟ ಸಸ್ಯಕಗಳನ್ನು ತೆಗೆದುಹಾಕುವುದರಿಂದ, ಇದು ಆಧಾರ ಶಿಲೆಗೆ ಕೊಲ್ಲುವಿಯಂ ಅನ್ನು ಬಂಧಿಸುತ್ತದೆ.

ಮಣ್ಣು ಮತ್ತು ಕಲ್ಲುಗಳನ್ನು ಪರೀಕ್ಷಿಸದೆ ಗುಡ್ಡಗಾಡು ಪ್ರದೇಶಗಳಲ್ಲಿ ಪಟ್ಟಣಗಳು ​​ಮತ್ತು ನಗರಗಳ ಯೋಜಿತವಲ್ಲದ ಬೆಳವಣಿಗೆಯು ಭೂಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ನ್ಯಾನಿತಾಲ್ (ಉತ್ತರಾಖಂಡ್) ನ ಪೂರ್ವದ ಇಳಿಜಾರು ಹೋಟೆಲ್‌ಗಳು ಮತ್ತು ವಸತಿ ರಚನೆಗಳ ಭಾರೀ ಹೊರೆಯಿಂದಾಗಿ ಮುಳುಗಿದೆ. ಅರಣ್ಯನಾಶ ಮತ್ತು ಇತರ ಮಾನವ ಚಟುವಟಿಕೆಗಳು ಸಹ ಭೂಕುಸಿತಗಳನ್ನು ಉಂಟುಮಾಡುತ್ತವೆ. ಪರ್ವತ ಇಳಿಜಾರುಗಳಲ್ಲಿ ಅರಣ್ಯನಾಶವನ್ನು ಪರಿಶೀಲಿಸುವ ಮೂಲಕ, ಅಂತಹ ಪ್ರದೇಶಗಳಿಗೆ ಕಟ್ಟಡ ಸಂಕೇತಗಳನ್ನು ಅನುಸರಿಸುವ ಮೂಲಕ ಮತ್ತು ಕಡಿದಾದ ಇಳಿಜಾರುಗಳಲ್ಲಿ ಕಟ್ಟಡಗಳ ನಿರ್ಮಾಣವನ್ನು ತಪ್ಪಿಸುವ ಮೂಲಕ ಭೂಕುಸಿತದ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಬಹುದು.

ಅರಣ್ಯನಾಶ ಮತ್ತು ಕಾಂಕ್ರಿಟೀಕರಣದ ಮೂಲಕ ಮನುಷ್ಯನ ಕೈವಾಡ, ಮಳೆ ಮೋಡಗಳ ಕೋಪ ಮತ್ತು ಭೂಕಂಪನವು ಕೊಡಗು ಜಿಲ್ಲೆ, ವಯನಾಡುಗಳಲ್ಲಿ ಕಂಡುಬಂದ ಅಪಾರ ವಿನಾಶದಲ್ಲಿ ಪಾತ್ರವನ್ನು ವಹಿಸಿರಬಹುದು. ಅದೇ ಪರಿಸ್ಥಿತಿ ಕರಾವಳಿ ಭಾಗದಲ್ಲೂ ಸಂಭವಿಸಬಹುದು. ಮನೆ, ನಿವೇಶನಗಳ ಬಡಾವಣೆ ನಿರ್ಮಾಣಕ್ಕಾಗಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಕಡಿದಿರುವುದು, ರಸ್ತೆ ವಿಸ್ತರಣೆಗಾಗಿ ಆಗಿರುವ ಭೂ ಭಾಗದ ವ್ಯತ್ಯಾಸ, ಮಣ್ಣಿನ ಸವಕಳಿ, ಸಣ್ಣ ತೊರೆಗಳಿಂದ ಸೃಷ್ಟಿಯಾಗಿರುವ ಇಳಿಜಾರು, ಮಾನವ ನಿರ್ಮಿತ ಒತ್ತಡಗಳಿಂದ ಭೂ ಕುಸಿತದ ಸಾಧ್ಯತೆ ಹೆಚ್ಚಿಸಿವೆ ಎಂದು ಭೂ ವೈಜ್ಞಾನಿಕ ಸಮೀಕ್ಷಾ ತನ್ನ ವರದಿಯಲ್ಲಿ ಹೇಳಿದೆ.

ಈ ರೀತಿ ಗುಡ್ಡ, ಬೆಟ್ಟಗಳನ್ನು ಎಲ್ಲಾ ಶಕ್ತಿ ಬಳಸಿ ನೆಲಸಮಗೊಳಿಸುತ್ತಾ ಹೋದರೆ, ಪ್ರಕೃತಿಯ ಸಮತೋಲನ ಏನಾಗಬಹುದು.? ಕರಾವಳಿ ಭಾಗದಲ್ಲಿ ಅಲ್ಲಲ್ಲಿ ಗುಡ್ಡಗಳನ್ನು ಕೊರೆದು ಸಮತಟ್ಟುಗೊಳಿಸುವುದು, ಹೊರ ರಾಜ್ಯಕ್ಕೆ ಮಣ್ಣು ಅಕ್ರಮ ಸಾಗಾಟದಿಂದ ಗುಡ್ಡವನ್ನು ನಾಶಪಡಿಸುವ ಕಾರ್ಯ ಕರಾವಳಿ ಭಾಗದಲ್ಲಿ ಯಥೇಚ್ಚವಾಗಿ ನಡೆಯುತ್ತಿದೆ. ಗುಡ್ಡ ಅಗೆದ ಪ್ರದೇಶದಲ್ಲಿ ದೊಡ್ಡ, ದೊಡ್ಡ ಹೊಂಡಗಳು ನಿರ್ಮಾಣವಾಗುತ್ತಿದೆ. ಇದು ಭೂಮಿಯ ಬ್ಯಾಲೆನ್ಸಿಗೆ ಮಾರಕವಾಗಿ ಪರಿಣಮಿಸುತ್ತದೆ. ಗುಡ್ಡ ಅಗೆದು ಅಕ್ರಮ ಮಣ್ಣುಸಾಗಾಟ, ಅವೈಜ್ಞಾನಿಕವಾಗಿ ಸಮತಟ್ಟುಗೊಳಿಸುವಿಕೆಯಿಂದ ಭೂ ಸವೆತ ಉಂಟಾಗಿ ಗುಡ್ಡ ಕುಸಿದು, ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ನಾಶ-ನಷ್ಟ ಸಂಭವಿಸಲಿದೆ. ಭೌಗೋಳಿಕವಾಗಿ ಕೊಂಚ ಭಿನ್ನವಾಗಿರುವ ಕರಾವಳಿಯಲ್ಲಿ ಈ ರೀತಿ ಗುಡ್ಡಗಳನ್ನು ಬೇಕಾಬಿಟ್ಟಿ ಕೊರೆದು ಸಮತಟ್ಟು ಮಾಡುತ್ತಿರುವುದು ಕರಾವಳಿಯ ಭೌಗೋಳಿಕತೆಯ ಮೇಲೂ ಪರಿಣಾಮ ಬೀರಲಿದೆ. ಮುಂದಕ್ಕೆ ಇದು ಮಾನವ ನಿರ್ಮಿತ ದುರಂತವಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.