ಕಂಬಳ ಪ್ರೇಮಿ, ಉದ್ಯಮಿ ವಾಮಂಜೂರು ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ ಪುತ್ರ ಅಭಿಷೇಕ್ ಮೃತದೇಹ ನದಿ ಕಿನಾರೆಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ?

ಕರಾವಳಿ

ಕಳೆದೆರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ, ಕಂಬಳ ಪ್ರೇಮಿ, ಉದ್ಯಮಿ ತಿರುವೈಲ್ ಗುತ್ತು ನವೀನ್ ಚಂದ್ರ ಆಳ್ವ ಅವರ ಸುಪುತ್ರ ಅಭಿಷೇಕ್ ಆಳ್ವ ಅವರ ಮೃತದೇಹ ಇಂದು ಮೂಲ್ಕಿ ಬಪ್ಪನಾಡು ನದಿ ತೀರದಲ್ಲಿ ಪತ್ತೆಯಾಗಿದೆ.

ಎರಡು ದಿನಗಳ ಹಿಂದಷ್ಟೇ ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡಿಕೊಂಡಿದ್ದ ಅಭಿಷೇಕ್ ಆಳ್ವ ಆ ನಂತರ ಡಿಢೀರಾಗಿ ನಾಪತ್ತೆಯಾಗಿದ್ದರು. ಮೂಲ್ಕಿ ಬಪ್ಪನಾಡು ಬಳಿ ಕಾರು ಪತ್ತೆಯಾಗಿತ್ತು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರಿನಲ್ಲಿ ಆತ ಬಳಸುತ್ತಿದ್ದ ವಾಚ್ ಪತ್ತೆಯಾಗಿತ್ತು. ಅಭಿಷೇಕ್ ಆಳ್ವ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಆಗಿದ್ದ ಅಭಿಷೇಕ್ ಆಳ್ವ ತನ್ನ ತಂದೆಯ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.