ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ವೈಜ್ಞಾನಿಕವಾಗಿ ನಡೆಸಲು, ಟೋಲ್ ಗೇಟ್ ನಿರ್ಮಾಣದ ಸಂದರ್ಭ ನಿಯಮ ಪಾಲಿಸಲು, ಅಕ್ರಮ, ಸ್ವಜನಪಕ್ಷಪಾತಗಳ ಕುರಿತು ತನಿಖೆ ನಡೆಸಲು ಆಗ್ರಹಿಸಿ ನಿರ್ಣಯ

ಕೆತ್ತಿಕಲ್ ಗುಡ್ಡ ಕಡಿದಿರುವುದು ಅಕ್ರಮ, ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ಅವೈಜ್ಞಾನಿಕ, ಸೂರಲ್ಪಾಡಿ ಟೋಲ್ ಗೇಟ್ ನಿರ್ಮಾಣ ನಿಯಮ ಬಾಹಿರ, ನಂತೂರು – ಮೂಡಬಿದ್ರೆ – ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕೆಲವೆಡೆ ಭೂ ಸ್ವಾಧೀನದ ಸಮಸ್ಯೆಗಳನ್ನು ಇನ್ನೂ ಪರಿಹರಿಸಲಾಗಿಲ್ಲ. ಕೈಕಂಬ ಜಂಕ್ಷನ್ ನಲ್ಲಿ ಮುಚ್ಚಿದ ಮೇಲ್ಸೇತುವೆ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಇಡೀ ಕೈಕಂಬ ಪೇಟೆಯ ವ್ಯಾಪಾರ, ವ್ಯವಹಾರಗಳು ನಷ್ಟ ಹೊಂದುವ ಭೀತಿ ಎದುರಾಗಿದೆ‌. ಗುರುಪುರ ಪೇಟೆಯನ್ನು ಉಳಿಸುವ ಕಾರಣವನ್ನು ಮುಂದಿಟ್ಟು […]

Continue Reading

ವಿಟ್ಲ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಗ್ಯಾಸ್ ಹಂಡೆ, ಮನೆ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಖದೀಮರಿಬ್ಬರ ಬಂಧನ.

ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾಧ ತಂಡದ ಸಿಬ್ಬಂದಿಗಳು 29 ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್‌ ನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು ವಿಚಾರಿಸಲಾಗಿ ವಿಟ್ಲ ಠಾಣೆಯ ಮಿತ್ತೂರು, ಕೊಡಾಜೆ ಮನೆ ಕಳವು ಎರಡು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವು ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮದ ಮಹಮ್ಮದ್‌ ರಿಯಾಜ್‌ ಧರ್ಮನಗರ ನಿವಾಸಿ […]

Continue Reading

ಪುತ್ತೂರು: ಕೋಳಿ ಅಂಕಕ್ಕೆ ಪೊಲೀಸ್ ದಾಳಿ; ಐವರ ವಶ

ಪುತ್ತೂರಿನ ಒಳಮೊಗ್ರು ಗ್ರಾಮದ ಕುಟಿನೋಪಿನಡ್ಕ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಕೋಳಿ ಅಂಕ ಜೂಜು ಅಡುತ್ತಿರುವ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪಿ ಎಸ್ ಐ ಜಂಬೂರಾಜ್ ಮಹಾಜನ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದು, ಪೊಲೀಸ್ ದಾಳಿಗೆ ಹೆದರಿ ಇತರರು ಸ್ಥಳದಿಂದ ಓಡಿ ಹೋಗಿದ್ದಾರೆ. ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜು ಆಡುತ್ತಿರುವುದು ಪತ್ತೆಯಾಗಿದ್ದು, ಆರೋಪಿಗಳಿಂದ ಒಟ್ಟು 7710 ರೂಪಾಯಿ ನಗದು, 5 ಕೋಳಿಗಳು ಮತ್ತು ಕೋಳಿ ಕಾಲಿಗೆ ಕಟ್ಟಲು […]

Continue Reading

ಪುನೀತ್ ಕೆರೆಹಳ್ಳಿ ಬೆಳ್ತಂಗಡಿಯ ಅತಿಥಿಯಾಗೋದು ಸಿರಿ-ಜುಮಾದಿಗೆ ಅವಮಾನ: ನವೀನ್ ಸೂರಿಂಜೆ

ಕಾಂತುಪೂಂಜಾ, ದೇವು ಪೂಂಜಾರಿಂದ ಹರೀಶ್ ಪೂಂಜಾ ಕಲಿಯಬೇಕಿರೋದೇನು.? ಮಹಿಳೆಯನ್ನು ವೇಶ್ಯಾವಾಟಿಕೆಗೆ ದೂಡುವ ವ್ಯಕ್ತಿಯನ್ನು ಕರಾವಳಿಯ ನೆಲದಲ್ಲಿ ಮೆರೆದಾಡಿಸಬಹುದೇ? ಬೆಳ್ತಂಗಡಿಯ ಜನ ಸಿರಿ- ಜುಮಾದಿ ಹಾಕಿಕೊಟ್ಟ ನೈತಿಕತೆಯ ಗೆರೆಯನ್ನು ಮೀರಲಾರರು ಎಂಬ ನಂಬಿಕೆಯನ್ನು ನಿಜಗೊಳಿಸಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅಕ್ಟೋಬರ್ 31 ರಂದು ನಡೆಯುವ ದೀಪಾವಳಿ ಹಬ್ಬದ ಗೋಪೂಜಾ ಕಾರ್ಯಕ್ರಮಕ್ಕೆ ಪುನೀತ್ ಕೆರೆಹಳ್ಳಿಯನ್ನು ಕರೆಸಲಾಗುತ್ತಿದೆ. ಶಾಸಕ ಹರೀಶ್ ಪೂಂಜಾ ಅವರೇ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಈ ಹಿಂದೆ ವೇಶ್ಯಾವಾಟಿಕೆಯ ಆರೋಪಿಯಾಗಿದ್ದ ಪುನೀತ್ ಕೆರೆಹಳ್ಳಿಗೆ ಸ್ವಾಗತ ಕೋರುತ್ತಿದ್ದಾರೆ. […]

Continue Reading

ಯಾರ ಶಾಪವೋ.. ಮತ್ತೆ ಅನಾಥ ಕಾರವಾರ ಕ್ಷೇತ್ರ.!

ವಸಂತ ಅಸ್ನೋಟಿಕರ್ ಹತ್ಯೆ, ಆನಂದ್ ಅನರ್ಹತೆ, ಸೈಲ್ ಜೈಲು.! ಬೆಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಗೆ ಜೈಲು ಶಿಕ್ಷೆಯಾಗಿದ್ದರಿಂದ ಶಾಸಕ ಸ್ಥಾನವೂ ರದ್ದಾಗುತ್ತಿದೆ. ಕ್ಷೇತ್ರ ಮತ್ತೊಮ್ಮೆ ಶಾಸಕರಿಲ್ಲದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. 2009-10 ರ ಅವಧಿಯಲ್ಲಿ ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 11,312 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು 2010 ರಲ್ಲಿ ಬೆಲೆಕೇರಿ ಬಂದರಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಆದರೆ, ಆರೋಪಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಚೀನಾಗೆ ಕಳ್ಳಸಾಗಣೆ ಮಾಡಿದ ಪ್ರಕರಣ […]

Continue Reading

ಗಂಜಿಮಠ ಕೈಗಾರಿಕಾ ವಲಯದಲ್ಲಿ “ಪ್ಲಾಸ್ಟಿಕ್ ಪಾರ್ಕ್” ಘಟಕ ತೊಡಕುಗಳನ್ನು ನಿವಾರಿಸಿ ತಕ್ಷಣ ಆರಂಭಿಸಲು, ಸ್ಥಳೀಯರಿಗೆ ಉದ್ಯೋಗ ಖಾತರಿಗೊಳಿಸಲು ಒತ್ತಾಯಿಸಿ ನಿರ್ಣಯ

ಕುಪ್ಪಪದವಿನಲ್ಲಿ ನಡೆದ ಸಿಪಿಐಎಂ ವಲಯ ಸಮ್ಮೇಳನದಲ್ಲಿ ನಿರ್ಣಯ ಗುರುಪುರ ಹೋಬಳಿಯ ಗಂಜಿಮಠ ಕೈಗಾರಿಕಾ ವಲಯದಲ್ಲಿ “ಪ್ಲಾಸ್ಟಿಕ್ ಪಾರ್ಕ್” ನಿರ್ಮಾಣದ ಘೋಷಣೆಯನ್ನು 2014ರಲ್ಲಿ ಮಾಡಲಾಗಿತ್ತು. ಕೇಂದ್ರ ಸರಕಾರದ ಬಜೆಟ್ ನಲ್ಲೂ ಪ್ರಸ್ಥಾಪ ಮಾಡಲಾಗಿತ್ತು. ಘೋಷಣೆಯಾದ ಪ್ಲಾಸ್ಟಿಕ್ ಪಾರ್ಕ್ ಘಟಕ ಸ್ಥಾಪಿಸಲು 2021ರಲ್ಲಿ ಅಧಿಕೃತ ಅನುಮೋದನೆ ದೊರಕಿತ್ತು. ಮೂರು ವರ್ಷಗಳು ಸಂದರೂ ಕೂಡ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣದ ಕನಿಷ್ಟ ಸಿದ್ದತೆಗಳಾಗಲಿ, ಅಥವಾ ಈ ಪ್ಲಾಸ್ಟಿಕ್ ಪಾರ್ಕ್ ನ ಒಳಗಡೆ ನಿರ್ಮಾಣಗೊಳ್ಳುವ ಕೈಗಾರಿಕೆಗಳು, ಹೂಡಿಕೆ ಆಗುವ ಒಟ್ಟು ಬಂಡವಾಳ, ಅವುಗಳ ಉತ್ಪಾದನೆ, […]

Continue Reading

ಚನ್ನಪಟ್ಟಣ: ಬಿಜೆಪಿಗೆ ಬಿಗ್ ಶಾಕ್; ಯೋಗಿ ಬೆನ್ನಿಗೆ ನಿಂತು ಬಿಜೆಪಿಯ ನೂರಾರು ಪದಾಧಿಕಾರಿಗಳಿಂದ ಸಾಮೂಹಿಕ ಪಕ್ಷಾಂತರ

ಅಭ್ಯರ್ಥಿಗಳ ನಿದ್ದೆಗೆಡಿಸುತ್ತಿದೆ ಡಮ್ಮಿ ಅಭ್ಯರ್ಥಿಗಳು.. ನಾಮಪತ್ರ ವಾಪಸ್ ರೇಟ್ ಫಿಕ್ಸ್.! ಚನ್ನಪಟ್ಟಣ ಉಪ ಚುನಾವಣೆ ಅಖಾಡ ದಿನ ದಿನಕ್ಕೂ ರಂಗೇರುತ್ತಿದೆ. ಜಿದ್ದಾಜಿದ್ದಿನ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಸ್ವತಃ ಆಪರೇಶನ್ ಎಕ್ಸ್ ಫರ್ಟ್ ಎನಿಸಿಕೊಂಡ ಯೋಗೇಶ್ವರ್ ಈ ಬಾರಿ ಚುನಾವಣೆಯಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆ ಮೂಲಕ ಖೆಡ್ಡಾಕ್ಕೆ ಬಿದ್ದಿದ್ದಾರೆ. ಈ ಮೂಲಕ ಎನ್ ಡಿಎ ಮೈತ್ರಿಕೂಟದ ಬಿಜೆಪಿ, ಜೆಡಿಎಸ್ ಗೆ ನಾಮಪತ್ರ ಸಲ್ಲಿಕೆ ಹಂತದಲ್ಲಿ ಬಿಗ್ ಶಾಕ್ ನೀಡಿದ್ದಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಮತ ಬ್ಯಾಂಕ್ ಹೊಂದಿರುವ ಯೋಗೇಶ್ವರ್ […]

Continue Reading

ಕಾಸರಗೋಡು: ತೆಯ್ಯಂ ಕೆಟ್ಟ್ ಮಹೋತ್ಸವದ ವೇಳೆ ಪಟಾಕಿ ಸಿಡಿದು ಬೆಂಕಿ ಹತ್ತಿದ ಪರಿಣಾಮ 150 ಮಂದಿಗೆ ಗಾಯ; ಎಂಟು ಮಂದಿಯ ಸ್ಥಿತಿ ಗಂಭೀರ

ಬೆಳಕಿನ ಹಬ್ಬಕ್ಕೆ ಮುನ್ನವೇ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ನಡೆದಿದೆ. ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕೆಟ್ಟ್ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150 ಕ್ಕೂ ಮಿಕ್ಕ ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಈ ಅವಘಡ […]

Continue Reading

ಸುರತ್ಕಲ್ ಹೆಣ್ಣುಮಗಳ FB ಮೆಸೆಂಜರ್ ಹ್ಯಾಕಿಂಗ್, ಆತ್ಮಹತ್ಯೆ ಯತ್ನ ಪ್ರಕರಣದ ಸಮಗ್ರ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಸುರತ್ಕಲ್ ನ ಹೆಣ್ಣು ಮಗಳೊಬ್ಬಳ FB ಮೆಸೆಂಜರ್ ಹ್ಯಾಕ್ ಮಾಡಿ ಆತನ ಸೋದರನಿಗೆ ಬೆದರಿಕೆ ಹಾಕಿದ ಪ್ರಕರಣ ಕೋಮು ಬಣ್ಣ ಪಡೆದುಕೊಂಡು ಆತಂಕಕ್ಕೆ ಕಾರಣವಾಗಿದೆ. ಹುಡುಗಿ ಅನುಮಾನ ವ್ಯಕ್ತ ಪಡಿಸಿದ, ಡೋಲೊ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನಲೆಯಲ್ಲಿ ಮುಸ್ಲಿಂ ಯುವಕ ಶಾರೀಕ್ ನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅದರೆ, ಬಂಧಿತ ಯುವಕ, ಆತನ ಕುಟುಂಬಸ್ಥರು, ಗೆಳೆಯರು, ಈ ಪ್ರಕರಣವನ್ನು ಹತ್ತಿರದಿಂದ ಗಮನಿಸಿದವರು ಬೇರೆಯೆ ಕತೆ ಹೇಳುತ್ತಿದ್ದಾರೆ. ಅವರ ಪ್ರಕಾರ ಈ ಮೆಸೆಂಜರ್ ಹ್ಯಾಕಿಂಗ್ […]

Continue Reading

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಕೋಮುವಾದಿಗಳಿಗೆ ಶರಣಾಗಿದೆ, ಬಿಜೆಪಿಯೊಂದಿಗೆ ಅನೈತಿಕ ಮೈತ್ರಿ ಕುದುರಿಸಿದೆ : ಮುನೀರ್ ಕಾಟಿಪಳ್ಳ

ಸಂಘಪರಿವಾರ ಸೃಷ್ಟಿಸಿಸ ಮತೀಯ ಧ್ರುವೀಕರಣ, ದ್ವೇಷದ ರಾಜಕಾರಣದ ಅವಕಾಶ ಪಡೆದು ಸುಲಭದ ಗೆಲುವು ಸಾಧಿಸಿರುವ ಜಿಲ್ಲೆಯ ಬಿಜೆಪಿ ಶಾಸಕರುಗಳು ತುಳುನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿಯನ್ನೇ ಎತ್ತುತ್ತಿಲ್ಲ. ರಸ್ತೆ ದುರಸ್ತಿ, ಗುಂಡಿ ಮುಚ್ಚುವುದು, ನಿರ್ಮಾಣ ಹಂತದ ಹೆದ್ದಾರಿ ಕಾಮಗಾರಿಗಳಂತಹ ಕನಿಷ್ಟ ಪ್ರಶ್ನೆಗಳನ್ನೂ ಅವರು ಪರಿಹರಿಸುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗ, ಸರಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಸ್ಥಾಪನೆ, ಮೀನುಗಾರಿಕೆ, ವಸತಿ ಯೋಜನೆಯಂತಹ ಜ್ವಲಂತ ಸಮಸ್ಯೆಗಳು ಅವರ ಪಟ್ಟಿಯಲ್ಲೆ ಇಲ್ಲ. ಮುಂಗಳೂರು ಉತ್ತರ ಕ್ಷೇತ್ರ ಗಂಭೀರ ಸಮಸ್ಯೆಗಳಲ್ಲಿ ಬಳಲುತ್ತಿದ್ದರೂ ಜನರ ಸಮಸ್ಯೆಗಳನ್ನು […]

Continue Reading