ಮಂಗಳೂರು ಎ.ಸಿ ಕಚೇರಿ: ಕೊಕ್ಕೆ ಮಹೇಶನ ಸೊಕ್ಕಿನ ಕಾರ್ಬಾರ್.!

ಬನ್ನೂರು ಕುರಿ ಮಾಂಸ, ಅಂಜಲ್, ಮಾಂಜಿಯಿಂದ ಬಲೆ ಬೀಸಿ, ಮಂಕು ಬೂದಿ ಎರಚುವ ಕನಕಪುರದ ಕೊಕ್ಕೆ ಕನಕಪುರ ಮೂಲದ ಮಹೇಶ ನಿಯೋಜನೆ ಮೇರೆಗೆ ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ. ಎ.ಸಿ ಸಾಹೇಬ್ರ ಆತ್ಮೀಯ! ಎಂಟು ತಿಂಗಳ ಹಿಂದೆ ಪುತ್ತೂರು ತಾಲೂಕು ಕಚೇರಿಯಲ್ಲಿ FDA ಆಗಿದ್ದಾಗ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ಮಾಡಿ ದೊಡ್ಡ ರಾದ್ಧಾಂತ ಎಬ್ಬಿಸಿದ್ದ. ಪೊಲೀಸರಿಂದ ಪೆಟ್ಟು ತಿಂದು ಕೊನೆಗೂ ರಾಜಿ ಪಂಚಾತಿಕೆ ಮೊರೆ ಹೋಗಿ ಪರಿಶಿಷ್ಟ ಜಾತಿಯವನ ಕಾಲು ಹಿಡಿದು […]

Continue Reading

ಮಳೆ ಹಾನಿ ಪ್ರದೇಶ ವೀಕ್ಷಿಸಲು ಬಂದ ಹರೀಶ್ ಪೂಂಜಾರನ್ನು ತರಾಟೆಗೆ ತೆಗೆದು, ಘೇರಾವ್ ಹಾಕಿದ ಗ್ರಾಮಸ್ಥರು.

ಇತ್ತೀಚಿಗೆ ಸುರಿದ ಬಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪಿಲಿಕಲ ರಸ್ತೆ ವ್ಯಾಪಕವಾಗಿ ಬಿರುಕು ಬಿಟ್ಟು ಜನ , ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆ ಪ್ರದೇಶಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಜನರು ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಇಂದು ನಡೆದಿದೆ. ದ.ಕ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳುಗಳಿಂದ ಬಾರಿ ಮಳೆಯಾಗಿ ತಾಲೂಕಿನಾದ್ಯಂತ ವ್ಯಾಪಕವಾಗಿ ಪ್ರಾಕೃತಿಕ ವಿಕೋಪ ಸಂಭವಿಸಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮೈಸೂರಿನ […]

Continue Reading

ಇಂದಬೆಟ್ಟು: ” ಶ್ರೀ ಅರ್ಧನಾರೀಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಕಾಮಗಾರಿಗೆ ತಮ್ಮಿಂದ ಒಂದು ರೂಪಾಯಿ ಸಹಾಯಧನ ನೀಡಲು ವಿನಂತಿ

ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಹೋರಾಟಗಾರ ವೆಂಕಪ್ಪ ಕೋಟ್ಯಾನ್ ರವರ ವಿನೂತನ ಪ್ರತಿಭಟನೆ ಇಂದಬೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಅರ್ಧನಾರೀಶ್ವರಿ ದೇವಸ್ಥಾನದ ರಸ್ತೆ ತೀರಾ ಹದಗೆಟ್ಟಿದೆ. ಇದರಿಂದಾಗಿ ಬೇಸತ್ತ ಮಾಜಿ ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಹೋರಾಟಗಾರ ವಿಶಿಷ್ಟವಾಗಿ ತನ್ನ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಅಳವಡಿಸಿದ್ದು, ಈ ಬ್ಯಾನರ್ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಶ್ರೀ ಅರ್ಧನಾರೀಶ್ವರಿ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು, ಇತಿಹಾಸ ಪ್ರಸಿದ್ಧವಾಗಿದೆ. […]

Continue Reading

ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಏಕಪಕ್ಷೀಯ ನಿರ್ಧಾರ ಕೈಗೊಂಡ ಜಿಲ್ಲಾಡಳಿತದ ವಿರುದ್ಧ ರಿಕ್ಷಾ ಚಾಲಕರಿಂದ ಬ್ರಹತ್ ಪ್ರತಿಭಟನೆ

ಎಲೆಕ್ಟ್ರಿಕಲ್ ಅಟೋರಿಕ್ಷಾಗಳಿಗೆ ದ.ಕ.ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ದ.ಕ.ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಅಟೋರಿಕ್ಷಾ ಚಾಲಕರು ನಗರದಲ್ಲಿಂದು (16-08-2024) CITU ನೇತ್ರತ್ವದಲ್ಲಿ ವಿವಿಧ ಅಟೋರಿಕ್ಷಾ ಚಾಲಕರ ಸಂಘಟನೆಗಳ ಸಹಭಾಗಿತ್ವದಲ್ಲಿ ಬ್ರಹತ್ ಪ್ರತಿಭಟನೆಯನ್ನು ನಡೆಸಿದರು. 500ಕ್ಕೂ ಮಿಕ್ಕಿದ ಅಟೋರಿಕ್ಷಾ ಚಾಲಕರು ಜಿಲ್ಲಾಡಳಿತದ ತೀರ್ಮಾನ ಹಾಗೂ ಕೇಂದ್ರ ರಾಜ್ಯ ಸರಕಾರಗಳ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಸರಕಾರಗಳ ನೀತಿಗಳನ್ನು ಖಂಡಿಸಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಫೆಡರೇಶನ್ ಆಫ್ ಕರ್ನಾಟಕ ಅಟೋರಿಕ್ಷಾ ಡ್ರೈವರ್ಸ್ ಯೂನಿಯನ್ ನ ದ.ಕ‌.ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ […]

Continue Reading

ಗುರುಪುರ ಕೈಕಂಬ: ದುವಾಃ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ; ಸಮಾಜ, ಸಮುದಾಯಕ್ಕೊಂದು ಉತ್ತಮ ಸಂದೇಶ

ಮರ್ಹೂಮ್ ಕೆ. ಹಾಜಿ ಉಮ್ಮರಬ್ಬ ಕೈಕಂಬ (ಅಮ್ಮುಂಜೆ) ಇವರ ಧರ್ಮಪತ್ನಿ ಮರಿಯಮ್ಮ ಇತ್ತೀಚೆಗಷ್ಟೇ ಅಗಲಿದ್ದರು. ಮರ್ಹೂಮ್ ಮರಿಯಮ್ಮ ರ 40 ನೇ ದಿನದ ದುವಾಃ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಹಾಗೂ ಸಮುದಾಯಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಮತ್ತು ಶ್ರೀನಿವಾಸ ಆಸ್ಪತ್ರೆ ರಕ್ತನಿಧಿ ಮುಕ್ಕ ಸುರತ್ಕಲ್ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಇಕ್ಬಾಲ್ ಚಿಕನ್ ಸೆಂಟರ್ ರವರ ರಿಫಾಯಿನಗರ ಕೈಕಂಬದಲ್ಲಿರುವ ಮನೆಯಲ್ಲಿ ದುವಾಃ ಕಾರ್ಯಕ್ರಮದೊಂದಿಗೆ […]

Continue Reading

ಬಿ.ಸಿ.ರೋಡ್ ಪದ್ಮ ಕಾಂಪ್ಲೆಕ್ಸ್ ಅಡಿಭಾಗದಲ್ಲಿ ಮಟ್ಕಾ ದಂಧೆ. ಬಂಟ್ವಾಳ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ದಾಳಿ

ಬಂಟ್ವಾಳ ತಾಲೂಕು ಬಿ ಮೂಡ ಗ್ರಾ,ಮದ ಪದ್ಮಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ, ಅಕ್ರಮವಾಗಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದಾಗ, ವಿಜಯ್ ಪ್ರಸಾದ್ DYSP ಬಂಟ್ವಾಳ ಉಪ-ವಿಭಾಗ ಬಂಟ್ವಾಳರವರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ. ಮಟ್ಕಾ ವ್ಯವಹಾರ ನಡೆಸುತ್ತಿದ್ದ ಸಜೀತ್ .ಕೆ ಪಾವೂರು, ಮಂಜೇಶ್ವರ, ವಿಶಾಲ್ ಸಿ.ಉಚ್ಚಿಲ್, ಕೆಪಿತಾನಿಯೋ ಶಾಲಾ ಬಳಿ, ಮಂಗಳೂರು. ಸುನೀಲ್ ಕುಮಾರ್, ಮಹಾಲಿಂಗೇಶ್ವರ ಹತ್ತಿರ, ಬಡ್ಡಹಿತ್ತಲು, ಮಂಜೇಶ್ವರ, ಕೇರಳ ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ ವಿವಿಧ ಮುಖ ಬೆಲೆಯ ನೋಟುಗಳನ್ನು, ಕ್ಯಾಲ್ಕುಲೇಟರ್, ಪೆನ್ನುಗಳು, ಪುಸ್ತಕಗಳು, […]

Continue Reading

ಸಮೀರ್ ಹತ್ಯೆಯ ಹಿಂದೆ ಪ್ರಭಾವಿ ರೌಡಿಯ ಕರಾಳ ಹಸ್ತ.? ಮತ್ತೆ ಬುಸುಗುಟ್ಟಿದ ಮುಸ್ಲಿಂ ಅಂಡರ್ ವರ್ಲ್ಡ್.!

ಸಮೀರ್ ಹತ್ಯೆಯ ಹಿಂದೆ ಪೊಳಲಿ ಅನಂತು ಹತ್ಯೆ, ಟಾರ್ಗೆಟ್ ಇಲ್ಯಾಸ್ ಹತ್ಯಾ ಆರೋಪಿಯ ಪಾತ್ರ.! ತನಿಖಾಧಿಕಾರಿಯ ವೈಪಲ್ಯ.! ಮಂಗಳೂರಿನಲ್ಲಿ ತಣ್ಣನೆ ಮಲಗಿದ್ದ ಮುಸ್ಲಿಂ ಅಂಡರ್ ವರ್ಲ್ಡ್ ಮತ್ತೆ ಬುಸುಗುಟ್ಟಿದೆ. ಮುಸ್ಲಿಂ ಗ್ಯಾಂಗ್ ನ ಬಲಾಬಲದ ಮಧ್ಯೆ ಉಳ್ಳಾಲದಲ್ಲಿ ನೆತ್ತರ ಕಾಳಗ ನಡೆದಿದೆ. ಪತ್ನಿ, ಮಕ್ಕಳು, ತಾಯಿಯ ಎದುರಲ್ಲೇ ರೌಡಿ ಶೀಟರ್ ಸಮೀರ್ ಕಡಪ್ಪರ ಮರ್ಡರ್ ನಡೆದಿದೆ. ಈ ಹಿಂದೆ ಬಲಾಡ್ಯ ರೌಡಿಗಳ ತಂಡವೇ ಮಂಗಳೂರನ್ನು ಅಳುತ್ತಿತ್ತು. ರೌಡಿಸಂ ಫೀಲ್ಡಿನಲ್ಲಿ ಗುರುತಿಸಿಕೊಂಡವರು ವಿರೋಧಿ ಪಾಳೆಯದವನ ಹತ್ಯೆಗೆ ಬಂದರೆ ಆತ […]

Continue Reading

ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಶಾಸಕ ಪೂಂಜಾ ವಿರುದ್ದ ಪ್ರಕರಣ ದಾಖಲಿಸಬೇಕು: ಶೇಖರ್ ಎಲ್

ಚರಕದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಹಗುರವಾಗಿ ಮಾತನಾಡಿದ ಪೂಂಜಾ ಬೆಳ್ತಂಗಡಿ ತಾಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಸಭಾಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಭಾಷಣ ದೇಶದ ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವಂತಿತ್ತು. ಅವರ ಮೇಲೆ ದೇಶದ್ರೋಹಿ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಪುತ್ತೂರು ಉಪ ವಿಭಾಗದ ಜೀತ ಪದ್ಧತಿ ನಿರ್ಮೂಲನ ಸಮಿತಿ ಸದಸ್ಯ ಶೇಖರ್ ಎಲ್ ಒತ್ತಾಯಿಸಿದ್ದಾರೆ. ಶಾಲಾ […]

Continue Reading

ಹದಗೆಟ್ಟ ರಸ್ತೆಯಲ್ಲಿ ಏಕಾಂಗಿಯಾಗಿ ಶ್ರಮದಾನ ಮಾಡಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೊತ್ಸವ ಆಚರಿಸಿದ ವಿಟ್ಲದ ಬಸ್ ಚಾಲಕ ಶಿವಣ್ಣ

ಶಿವಣ್ಣನ ಸೇವಾ ಕಾರ್ಯಕ್ಕೆ ಜನರ ಶಹಬ್ಬಾಸ್. ಜನಪ್ರತಿನಿಧಿಗಳ, ಅಧಿಕಾರಿಗಳ ಅಸಡ್ಡೆಯಿಂದಾಗಿ ಹೊಂಡ-ಗುಂಡಿಗಳಿಂದ ತುಂಬಿರುವ ಸಾಲೆತ್ತೂರು-ಮುಡಿಪು ರಸ್ತೆಯಲ್ಲಿ ಖಾಸಗಿ ಬಸ್ ಚಾಲಕರೊಬ್ಬರು ಏಕಾಂಗಿಯಾಗಿ ತೇಪೆ ಕಾರ್ಯ ನಡೆಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ವಿಟ್ಲ -ಸಾಲೆತ್ತೂರು-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಅದ್ದಾದಿಯಾ ಹೆಸರಿನ ಖಾಸಗಿ ಬಸ್ ಚಾಲಕ ಶಿವಣ್ಣ ಎಂಬವರು ಏಕಾಂಗಿಯಾಗಿ ಶ್ರಮದಾನ ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಾಹನ ಸಂಚಾರ ಬಿಡಿ.. ಕನಿಷ್ಠ ನಡೆದಾಡಲೂ ಅಸಾಧ್ಯವಾದ ಈ ರಸ್ತೆ ದುಸ್ಥಿತಿ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಈವರೆಗೆ ಸ್ಪಂದಿಸಿಲ್ಲ. […]

Continue Reading

ಮಂಗಳೂರು ಸಿಸಿಬಿ ಘಟಕದ ಶರಣಪ್ಪ, ಮೋಹನ್, ನಾಗರಾಜ ರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಗೌರವ

ಮಂಗಳೂರಿನ ಕ್ರೈಂ ಚಟುವಟಿಕೆ ಹತ್ತಿಕ್ಕುವಲ್ಲಿ ಸಿಸಿಬಿ ಘಟಕದ ಪಾತ್ರ ಮಹತ್ವದ್ದು. ಹಲವಾರು ಅಪರಾಧ ಚಟುವಟಿಕೆಗಳನ್ನು ಭೇಧಿಸಿದ ಗರಿಮೆ ಸಿಸಿಬಿಯದ್ದು. ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರಾದ ಶರಣಪ್ಪ ಭಂಡಾರಿ, ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಮೋಹನ್ ಕೆ.ವಿ ಮತ್ತು ಹೆಡ್ ಕಾನ್ಸ್ ಟೇಬಲ್ ಆದ ನಾಗರಾಜ ಚಂದರಗಿ ರವರು 2023 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ್ದ ಅತ್ಯುತ್ತಮ ಸೇವೆಗಾಗಿ ಇವರನ್ನು ಗುರುತಿಸಿ, ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

Continue Reading