ಕೇರಳದ ಚಿತ್ರರಂಗದಲ್ಲಿ ಸೆಕ್ಸ್ ಹಗರಣ ಬಯಲಿಗೆ; ದೊಡ್ಡ ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಬಹಿರಂಗ

ಕೇರಳದ ಚಿತ್ರರಂಗದಲ್ಲಿ ಸೆಕ್ಸ್ ಹಗರಣ ಬಯಲಿಗೆ ಬಂದಿದ್ದು, ದೊಡ್ಡ ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಲಭ್ಯವಾಗಿದೆ.ಕೇರಳ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಕೆ.ಹೇಮಾ ನೇತೃತ್ವದ ಸಮಿತಿ ರಚಿಸಿ, ಅ ಸಮಿತಿಯು ನಾಲ್ಕೂವರೆ ವರ್ಷಗಳ ನಂತರ ಸರಕಾರಕ್ಕೆ ವರದಿ ಸಲ್ಲಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ದುಃಸ್ಥಿತಿಯ ಬಗ್ಗೆಯ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಬಟಾ ಬಯಲಾಗಿದೆ. ಸಿನಿಮಾದಲ್ಲಿ ನಟಿಸಬೇಕು ಅಂದರೆ ನಟಿಯರು ಸೆಕ್ಸ್ ಗೆ […]

Continue Reading

ಬ್ಯಾಂಕ್‌ಗಳು ರೈತರಿಗೆ ಹೆಚ್ಚು ಬೆಳೆ ಸಾಲವನ್ನು ಮಂಜೂರು ಮಾಡಬೇಕು; ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌ ಮಹತ್ವದ ಸೂಚನೆ

ಬ್ಯಾಂಕ್‌ಗಳು ಎಲ್ಲಾ ಅರ್ಹ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಹೆಚ್ಚು ಬೆಳೆ ಸಾಲವನ್ನು ಮಂಜೂರು ಮಾಡಬೇಕು ಎಂದು ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್‌ ಮಹತ್ವದ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ (ಎಸ್‌ಎಲ್‌ಬಿಸಿ) 166ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಹೆಚ್ಚು ಸಾಲ ನೀಡುವತ್ತ ಬ್ಯಾಂಕ್ಗಳು ಗಮನ ಹರಿಸುವಂತೆ ಸೂಚಿಸಿದರು. ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮಾ […]

Continue Reading

ಬಾಂಗ್ಲಾ ಮಾದರಿ ದಂಗೆಗೆ ಐವನ್ ಸಂಚು.? ಕಾಂಗ್ರೆಸ್ ಶಾಸಕರ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಬಿಜೆಪಿ ಆಗ್ರಹ

ಬೆಂಗಳೂರು: ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗುತ್ತಿರುವ ಮಂಗಳೂರು ಮೂಲದ ಕಾಂಗ್ರೆಸ್ ನಾಯಕ ಐವನ್ ಡಿಸೋಜ ಇದೀಗ ತಮ್ಮ ಲೂಸ್ ಟಾಕ್‌ನಿಂದಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.‌ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರನ್ನು ಬಾಂಗ್ಲಾದೇಶ ಮಾದರಿಯಲ್ಲಿ ಕೆಳಗಿಸುತ್ತೇವೆಂದು ಕಾಂಗ್ರೆಸ್ ಶಾಸಕರೂ ಆದ ಐವಾನ್ ಡಿಸೋಜಾ ಹೇಳಿದ್ದಾರೆಂದು ಬಿಜೆಪಿ ನಾಯಕ ಸಿ.ಟಿ.ರವಿ ಆರೋಪಿಸಿದ್ದಾರೆ. ಐವನ್ ಡಿಸೋಜಾ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ಸಿನ ಹತಾಶ ಮನಸ್ಥಿತಿಗಳು ಹೇಗೆಲ್ಲ ಕಾರ್ಯಾಚರಿಸುತ್ತವೆ ಎಂಬುದನ್ನು ಕಾಂಗ್ರೆಸ್ ವಿಧಾನ ಪರಿಷತ್‌ […]

Continue Reading

ದೋಸ್ತಿ ಪಕ್ಷ ಜೆಡಿಎಸ್ ನೊಂದಿಗೆ ಮುನಿಸುಕೊಂಡ ಪದಾಧಿಕಾರಿಗಳಿಗೆ ಗೇಟ್ ಪಾಸ್

ರೆಬೆಲ್ ಗಳೊಂದಿಗೆ ಮಾತುಕತೆಗೆ ಮುಂದಾದ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಗೆ ಸಂಘಟನಾತ್ಮಕವಾಗಿ ಸಣ್ಣ ಪ್ರಮಾಣದ ಸರ್ಜರಿ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯ ಪದಾಧಿಕಾರಿಗಳಲ್ಲಿ ಕೆಲವರಿಗೆ ಕೊಕ್ ನೀಡಿ ಹೊಸ ಮುಖವನ್ನು ತರಲು ನಿರ್ಧರಿಸಿದೆ. ನಾನಾ ಕಾರಣಗಳಿಂದ ರಾಜ್ಯ ಬಿಜೆಪಿಯ ಸಂಘಟನೆ ದಡ ಹತ್ತುತ್ತಿಲ್ಲ. ಆಂತರಿಕ ಸಂಘರ್ಷ ಒಂದೆಡೆಯಾದರೆ, ಮಿತ್ರ ಪಕ್ಷ ಜೆಡಿಎಸ್ ನ ಮನಸ್ಥಿತಿಗೆ ಪೂರಕವಾಗಿಯೂ ಹೆಜ್ಜೆ ಇಡಬೇಕಾಗಿದೆ. ಈ ದೃಷ್ಟಿಯಿಂದ ಕೆಲ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ. ಇಬ್ಬರು ಪ್ರಧಾನಕಾರ್ಯದರ್ಶಿಗಳಿಗೆ ಗೇಟ್ ಪಾಸ್ ರಾಜ್ಯ ಬಿಜೆಪಿಯ […]

Continue Reading

ಬುದ್ದೀಸಂ ವರ್ಸಸ್ ಬ್ರಾಹ್ಮಣ್ಯ ಮತ್ತು ಭವಿಷ್ಯ ಭಾರತದ ತಂಗಲಾನ್…!

ಅಂದು ಬ್ರಿಟೀಷರ ಜೊತೆ ಮೇಲ್ವಿಚಾರಣೆಗೆಂದು ಬಂದ ಬ್ರಾಹ್ಮಣರ ಮಕ್ಕಳು ಕೆಜಿಎಫ್ ಗಣಿ ಯೂನಿಟ್ ನ ಇಂಜಿನಿಯರ್ ಗಳಾದರು. ದಲಿತ ಗಣಿ ಕಾರ್ಮಿಕರ ಮಕ್ಕಳು ಗಣಿ ಕಾರ್ಮಿಕರ ಮಕ್ಕಳಾಗಿಯೇ ಉಳಿದರು ! ✍️. ನವೀನ್ ಸೂರಿಂಜೆ, ಪತ್ರಕರ್ತರು ದಲಿತ/ ನಾಗ ಪರಂಪರೆ/ ಬುದ್ದೀಸಂನ ಪ್ರತಿಪಾದಕಿ ಆರತಿಯ ರಕ್ತವೇ ಚಿನ್ನವಾಯಿತು ! ಪ ರಂಜಿತ್ ನಿರ್ದೇಶನದ ‘ತಂಗಲಾನ್’ ಸಿನೇಮಾದ ಕತೆಯಿದು. ಸಿನೇಮಾದ ಮೊದಲಾರ್ಧದಲ್ಲಿ ‘ನಾಗ ಪರಂಪರೆಯ ನಾಯಕಿ, ಬೌದ್ದಧರ್ಮದ ಅನುಯಾಯಿ ಆರತಿಯ ರಕ್ತ ಚಿನ್ನವಾಗುತ್ತದೆ’ ಎಂದು ತಂಗಲಾನ್ ತನ್ನ ಮಕ್ಕಳಿಗೆ […]

Continue Reading

ಸಮೀರ್ ಕಡಪ್ಪರ ಹತ್ಯೆ ಪ್ರಕರಣ: ಕಷ್ಟಡಿಯಲ್ಲಿದ್ದ ಆರೋಪಿಗಳು ಸೋಮವಾರ ನ್ಯಾಯಾಲಯಕ್ಕೆ; ಪ್ರಮುಖ ಸೂತ್ರಧಾರನ ಬಂಧನ ಯಾವಾಗ.?

ಉಳ್ಳಾಲ ಕಡಪ್ಪರ ನಿವಾಸಿ ರೌಡಿ ಶೀಟರ್ ಸಮೀರ್ ಹತ್ಯೆಗೆ ಸಂಬಂಧಿಸಿದಂತೆ ಟಾರ್ಗೆಟ್ ಇಲ್ಯಾಸ್ ಭಾವ ಸುರತ್ಕಲ್ ಕೃಷ್ಣಾಪುರದ ಮುಹಮ್ಮದ್ ನೌಶಾದ್, ಕಿನ್ಯಾ ನಿವಾಸಿ ನಿಯಾಝ್, ಬಜಾಲ್ ಶಾಂತಿನಗರದ ತನ್ವೀರ್ ಯಾನೆ ತನ್ನು, ಕಾಪು ಮಜೂರಿನ ಇಕ್ಬಾಲ್ ಯಾನೆ ಇಕ್ಕು ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಈವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದರು. ಹತ್ಯೆಗೆ ಸಂಬಂಧಿಸಿ ಪ್ರಮುಖ ಸೂತ್ರಧಾರಿಯ ಬಂಧನ ಇನ್ನಷ್ಟೇ ಬಾಕಿಯಿದೆ. ಅಗಸ್ಟ್ 11 ರ ತಡರಾತ್ರಿ ಆತ್ಮೀಯ ಪರಿಚಿತ ರೌಡಿಯೊಬ್ಬನ ಫೋನ್ ಕರೆಗೆ ತೊಕ್ಕೊಟ್ಟು ಕಲ್ಲಾಪು ರೆಸ್ಟೋರೆಂಟ್ ಬಳಿ […]

Continue Reading

ಬುದ್ಧಿಮಾತು ಹೇಳಿದ್ದಕ್ಕೆ ಆಟೋ ಚಾಲಕಗೆ ಚೂರಿಯಿಂದ ಇರಿದ ಗಾಂಜಾ ವ್ಯಸನಿ; ಗಾಂಜಾ ಅಡ್ಡೆಯಾಗುತ್ತಿರುವ ವಿಟ್ಲ ಠಾಣಾ ವ್ಯಾಪ್ತಿ.

ವಿಟ್ಲ ಠಾಣಾ ವ್ಯಾಪ್ತಿಯ ಗಾಂಜಾ ಅಡ್ಡೆಯೆಂದೇ ಕುಖ್ಯಾತಿ ಪಡೆದ ಉರಿಮಜಲು ಜಂಕ್ಷನಲ್ಲಿ ಆಟೋ ಚಾಲಕಗೆ ಡ್ರಗ್ಸ್ ವ್ಯಸನಿಯೊಬ್ಬ ಚೂರಿಯಿಂದ ಇರಿತು ಕೊಲೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಆಟೋ ಚಾಲಕ ಶರೀಫ್ ಎಂಬವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಡಿ ನಿವಾಸಿ ರಫೂಫ್ ಪುತ್ರ ಗಾಂಜಾ ಅಫೀಝ್@ ಅಪ್ಪಿ(22)ಎಂಬಾತ ಉರಿಮಜಲು ಜಂಕ್ಷನಲ್ಲಿ ಬಸ್ ತಂಗುದಾಣದಲ್ಲಿ ಕುಳಿತು ಮಹಿಳೆಯರ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಅವಮಾನ ಮಾಡುತ್ತಿದ್ದ. ಆ ಸಂದರ್ಭ ಅದೇ ಪರಿಸರದಲ್ಲಿದ್ದ ಆಟೋ ಚಾಲಕ ಶರೀಫ್ ಎಂಬವರು ಅಪ್ಪಿಗೆ […]

Continue Reading

ಸದ್ಯದಲ್ಲೇ ಕಂದಾವರ ಗ್ರಾಮ ಪಂಚಾಯತ್ ಗೆ ತಟ್ಟಲಿದೆ ಪ್ರತಿಭಟನೆಯ ಬಿಸಿ; ಹೇಳೋರಿಲ್ಲ.. ಕೇಳೋರಿಲ್ಲ ಇದು ಕಂದಾವರ ಗ್ರಾಮ ಪಂಚಾಯತ್ ಕಥೆ.

ಹೇಳೋರಿಲ್ಲ.. ಕೇಳೋರಿಲ್ಲ ಇದು ಕಂದಾವರ ಗ್ರಾಮ ಪಂಚಾಯತ್ ಕಥೆ. ಕಳೆದ 23 ವರ್ಷಗಳಿಂದ ಇಲ್ಲಿನ ನಿರ್ವಸಿತರ ಪಾಡಂತೂ ನಾಯಿಪಾಡು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆ ಆಗುವ ಸಂಧರ್ಭದಲ್ಲಿ ಜಾಗ ಕಳೆದುಕೊಂಡು ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರ, ಕೊಳಂಬೆಗೆ ಬಂದ ನಿರ್ವಸಿತರ ಪಾಡು ಕೇಳುವವರಿಲ್ಲ.! ಸರಿ-ಸುಮಾರು 200 ರಷ್ಟು ಶಾಲೆಗೆ ಹೋಗುವ ಮಕ್ಕಳಿದ್ದರೂ ಈವರೆಗೂ ಮಕ್ಕಳ ಅನುಕೂಲಕ್ಕಾಗಿ ಶಾಲೆ ತೆರೆಯುವ ಗೋಜಿಗೆ ಯಾರೂ ಹೋಗಿಲ್ಲ. ಮೂಲಭೂತ ಸೌಕರ್ಯದಿಂದ ಇಲ್ಲಿನ ನಿವಾಸಿಗಳು ವಂಚಿತರಾಗಿದ್ದಾರೆ. ಸರಿಯಾದ ಚರಂಡಿ […]

Continue Reading

ಸ್ಪೆಷಲ್ ನ್ಯೂಸ್ ವರದಿ ಫಲಶ್ರುತಿ; ಕೊಕ್ಕೆ ಮಹೇಶ ಹಿಂಬಡ್ತಿ ನೀಡಿ ಮಂಗಳೂರು ಎ.ಸಿ ಕಚೇರಿಯಿಂದ ಎತ್ತಂಗಡಿ: ಜಿಲ್ಲಾಧಿಕಾರಿ ಆದೇಶ

ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಕೊಕ್ಕೆ ಮಹೇಶ ನನ್ನು ಹಿಂಬಡ್ತಿ ನೀಡಿ ಪುತ್ತೂರು ತಾಲೂಕು ಕಚೇರಿಗೆ ಎತ್ತಂಗಡಿ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಪತ್ರ ಹೊರಡಿಸಿದ್ದಾರೆ. ಕೊಕ್ಕೆ ಮಹೇಶನ ರಂಪಾಟ, ಭ್ರಷ್ಟತೆಯ ಮುಖವಾಡವನ್ನು ಸ್ಪೆಷಲ್ ನ್ಯೂಸ್ ಪತ್ರಿಕೆ ಇಂಚಿಂಚಾಗಿ ವರದಿ ಮಾಡಿತ್ತು. ಸ್ಪೆಷಲ್ ನ್ಯೂಸ್ ವೆಬ್ ಪೋರ್ಟಲ್ ಕೂಡ ವರದಿ ಮಾಡಿದ್ದವು. ‘ಕೊಕ್ಕೆ ಮಹೇಶನ ಸೊಕ್ಕಿನ ಕಾರ್ಬಾರ್’ ಹೆಡ್ ಲೈನ್ ನೊಂದಿಗೆ ಪತ್ರಿಕೆ ಸವಿವರವಾಗಿ ವರದಿ ಪ್ರಕಟಿಸಿತ್ತು. ಈ ವರದಿ ಅಧಿಕಾರಿ […]

Continue Reading

ಡೆಕಾಯ್ ಅಪರೇಷನ್ ಮೂಲಕ ಕಾರ್ಯಾಚರಣೆ; ನಾಗಮಂಗಲದಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡುವ ಜಾಲ ಪತ್ತೆ.

ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು ಕಡೆಗಳಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡುವ ಜಾಲವನ್ನು ಕಳೆದ ಆರೇಳು ತಿಂಗಳ ಹಿಂದೆ ಬೇಧಿಸಲಾಗಿತ್ತು. ಇದೀಗ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡುವ ಜಾಲ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿಂದ ಪ್ಲಾನ್ ಮಾಡಿ, ಭ್ರೂಣ ಪತ್ತೆ ಮಾಡಿಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆ ಮೂಲಕ ಭ್ರೂಣ ಪತ್ತೆ ಪ್ರಕರಣದ ಮೇಲೆ ದಾಳಿ ಮಾಡಿ, ಮಾಹಿತಿ ಸಿಕ್ಕ ಬೆನ್ನಲ್ಲೆ […]

Continue Reading