ಮತಾಂತರವಾಗದೆ ನಡೆಯುವ ವಿವಾಹಗಳು ಕಾನೂನು ಬಾಹಿರ; ಆರ್ಯ ಸಮಾಜ, ದೇವಸ್ಥಾನಗಳು ನೀಡುವ ನಕಲಿ ವಿವಾಹ ಪ್ರಮಾಣಪತ್ರ ಪ್ರಕರಣಗಳ ಬಗ್ಗೆ ಗಂಭೀರ ಕಳವಳ: ಅಲಹಾಬಾದ್ ಹೈಕೋರ್ಟ್

ಅಂತರಧರ್ಮದ ಜನರಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿರುವ ಆರ್ಯ ಸಮಾಜ ಸಂಘಗಳನ್ನು ಡಿಸಿಪಿ, ಐಪಿಎಸ್ ಮಟ್ಟದ ಅಧಿಕಾರಿಯಿಂದ ತನಿಖೆಗೆ ಆದೇಶ ಮತಾಂತರವಿಲ್ಲದೆ ಬೇರೆ ಬೇರೆ ಧರ್ಮಗಳನ್ನು ಅನುಸರಿಸುವ ಜನರ ನಡುವಿನ ವಿವಾಹವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ ಎಂದು ಅಲಹಾಬಾದ್ ನ್ಯಾಯಾಲಯ ಸ್ಪಷ್ಟಪಡಿಸಿದೆ. ಆರ್ಯ ಸಮಾಜದಂತಹ ಸಂಸ್ಥೆಗಳು ವಿವಾಹ ಪ್ರಮಾಣಪತ್ರಗಳನ್ನು ನೀಡುವ ಮತ್ತು ವಿವಾಹ ವಿಧಿವಿಧಾನದ ನಿಗದಿತ ಶುಲ್ಕ ಮತ್ತು ದಕ್ಷಿಣೆಯನ್ನು ತೆಗೆದುಕೊಂಡು ಯಾರಿಗಾದರೂ ವಿವಾಹ ಪ್ರಮಾಣಪತ್ರಗಳನ್ನು ನೀಡುವ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ನೀಡಲಾಗಿದೆ. ಅಂದರೆ, ಅಂತಹ ವಿವಾಹಗಳು ಕಾನೂನಿನ […]

Continue Reading

ಬೆಳ್ತಂಗಡಿ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ /ಪಂಗಡಗಳ ಕುಂದುಕೊರತೆಗಳ ಸಭೆ

ಕೊರಗ ಕಾಲನಿಗೆ ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ಮಂಜೂರಾದ 9 ಕೋಟಿ ಹಣದಲ್ಲಿ ದುರುಪಯೋಗ, ಉನ್ನತ ಮಟ್ಟದ ತನಿಖೆಗೆ ಒತ್ತಾಯ: ಶೇಖರ್ ಲಾಯಿಲ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ ರವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ /ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು. ಸುಲ್ಕೇರಿ ಗ್ರಾಮದ ಅಟ್ರಿಂಜೆ ಕೊರಗ ಕಾಲನಿಗೆ ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಮಂಜೂರಾದ 9 ಕೋಟಿ ರೂಪಾಯಿಗಳಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈ […]

Continue Reading

ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಹಾಮೋಸ.. ದಂಪತಿಗಳಿಗೆ 35 ಲಕ್ಷ ಪಂಗನಾಮ.!

ದೇಶವೇ ಬೆಚ್ಚಿಬೀಳಿಸುವ ಹಗರಣ.. ಸೃಷ್ಟಿ ಫರ್ಟಿಲಿಟಿ ವೈದ್ಯೆ ಸೇರಿ ಎಂಟು ಜನರ ಬಂಧನ ನೈಸರ್ಗಿಕವಾಗಿ ಮಗು ಪಡೆಯಲಾಗದವರಿಗೆ ಮಗು ಪಡೆಯಲು ಹಲವು ದಾರಿಗಳಿವೆ. ಇದಕ್ಕಾಗಿಯೇ ಗಲ್ಲಿ ಗಲ್ಲಿಗಳಲ್ಲಿ ಐವಿಎಸ್‌ ಸೆಂಟರ್‌ಗಳು ತಲೆ ಎತ್ತಿವೆ. ಇದೀಗ ಹೈದರಾಬಾದ್ ನಲ್ಲಿ ಒಂದು ಐವಿಎಫ್‌ ಕೇಂದ್ರ ತನ್ನ ಗ್ರಾಹಕರಿಗೆ ಯಾಮಾರಿಸಿದೆ. ಒಂದು ದಂಪತಿಗಳು ತಮ್ಮ ಕನಸನ್ನು ನನಸಾಗಿಸಲು ಹೈದರಾಬಾದ್‌ನ ಸುಪ್ರಸಿದ್ಧ ಫಲವತ್ತತೆ ಕ್ಲಿನಿಕ್‌ಗೆ ಬೇಟಿ ತಮ್ಮ ಕನಸು ನನಸಾಗಿಸುವ ಬಗ್ಗೆ ಅವರಲ್ಲಿ ಮಾತುಕತೆ ನಡೆಸಿದ್ದಾರೆ. ಆದರೆ, ಅವರಿಗೆ ತಿಳಿದಿರಲಿಲ್ಲ, ಆ ಕ್ಲಿನಿಕ್‌ನ […]

Continue Reading

ಸಿದ್ದು ಗುಡುಗಿದ್ರೂ ಸುರ್ಜೇವಾಲ ಉಳಿದಿದ್ದು ಹೇಗೆ.?, ಪ್ರಾಮಿಸ್ಸು ಮಾಡಿದ್ದು ಯಾರು.? ಎಮ್ಮೆಲ್ಸಿ ಪಟ್ಟಿಗೆ ರೋಚಕ ಟ್ವಿಸ್ಟ್

✍️. ಆರ್.ಟಿ.ವಿಠ್ಠಲಮೂರ್ತಿ ಕೆಲ ದಿನಗಳಿಂದ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಬಗ್ಗೆ ಬರುತ್ತಿರುವ ಮಾಹಿತಿ ಸಿಎಂ ಸಿದ್ಧರಾಮಯ್ಯ ಅವರನ್ನು ಕೆರಳಿಸಿದೆ. ಹೀಗಾಗಿ ಮುಂದಿನ ಸಲ ದಿಲ್ಲಿಗೆ ಹೋದಾಗ ಸುರ್ಜೇವಾಲ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಮಾತನಾಡಲು ಅವರು ನಿರ್ಧರಿಸಿದ್ದಾರೆ.ಅಂದ ಹಾಗೆ ಇತ್ತೀಚೆಗೆ ಪಕ್ಷದ ಸಚಿವರು, ಶಾಸಕರ ಜತೆ ಒನ್ ಟು ಒನ್ ಸಭೆ ನಡೆಸಿದ ಸುರ್ಜೇವಾಲಾ ಅವರ ಬಗ್ಗೆ ಸಿದ್ದು ಆಪ್ತರ ಪಡೆ ಸಿಟ್ಟಿಗೆದ್ದಿರುವುದು ರಹಸ್ಯವೇನಲ್ಲ.ಆದರೆ‌ ಇಂತಹ ಸಭೆ, ಅಧಿಕಾರಿಗಳ ಮಟ್ಟದಲ್ಲಿ ಶುರುವಾಗಿರುವುದರಿಂದ ಸಿದ್ದು ಆಪ್ತರು ನೇರವಾಗಿಯೇ […]

Continue Reading

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಅರೆಸ್ಟ್

ಮಂಗಳೂರಿನ ಬಿಜೈ ಬಿಲ್ಡರ್ಸ್ ಶೂಟೌಟ್ ಪ್ರಕರಣದ ಆರೋಪಿ 10 ವರ್ಷದಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರನನ್ನು ಬಂಧಿಸುವಲ್ಲಿ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ ಕರಾಡ್ ಗಣೇಶ್‌ ಲಕ್ಷ್ಮಣ್ ಸಕಟ್ ಬಂಧಿತ ಆರೋಪಿ. 2014 ರಲ್ಲಿ ಬಿಜೈಯ ಭಾರತಿ ಬಿಲ್ಡರ್ಸ್ ಕಚೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು ಶೂಟೌಟ್ ನಡೆಸಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಯಾಗಿದ್ದ ಕರಾಡ್ ಗಣೇಶ್ 2015ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು. ಈತನ […]

Continue Reading

S.I.T ಮುಂದೆ ‘ಭೀಮ’ ಎಂಟ್ರಿ.! 8 ಗಂಟೆ 30 ನಿಮಿಷಗಳ ಕಾಲ ಸುದೀರ್ಘ ವಿಚಾರಣೆ; S.I.T ಮುಂದೆ 30 ಜನರ ಹೆಸರು ರಿವೀಲ್.?

ತೆರೆದುಕೊಳ್ಳುತ್ತಾ ಧರ್ಮಸ್ಥಳದ 2 ದಶಕದ ‘ಬುರುಡೆ’ ರಹಸ್ಯ..? ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣ ಇದೀಗ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು S.I‌.T ಗೆ ವಹಿಸಿತ್ತು. ಇದೀಗ ಮುಸುಕುಧಾರಿ ದೂರುದಾರ ತನ್ನ ವಕೀಲರ ಮೂಲಕ ಮಂಗಳೂರು ಮಲ್ಲಿಕಟ್ಟೆಯಲ್ಲಿರುವ ಅತಿಥಿ ಗೃಹಕ್ಕೆ ಬಂದು ಎಸ್ ಐ ಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಎಸ್ ಐಟಿ ತಂಡದ ಡಿಐಜಿ ಎಂ ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ದಯಾಮ […]

Continue Reading

ಆಗಸ್ಟ್ ಒಂದರಿಂದ ಫೋನ್ ಪೇ, ಗೂಗಲ್ ಪೇ ಗೆ ಹೊಸ ನಿಯಮ ಜಾರಿ. ಬ್ಯಾಲೆನ್ಸ್ ಚೆಕ್ಕ್ ಮಾಡಿದರೆ ದಂಡ.!

ಫೋನ್ ಪೇ, ಗೂಗಲ್ ಪೇ ಇಲ್ಲದೆ ವ್ಯವಹಾರವೇ ನಡೆಯುದಿಲ್ಲ. ಹೀಗಿರುವಾಗ ಫೋನ್ ಪೇ, ಗೂಗಲ್ ಪೇ ಆಗಾಗ ಹೊಸ ನಿಯಮಗಳನ್ನು ತರುತ್ತಿದೆ. ಆಗಸ್ಟ್ ಒಂದರಿಂದ ಹೊಸ ನಿಯಮವೊಂದು ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ಫೋನ್ ಪೇ, ಗೂಗಲ್ ಪೇ ನಲ್ಲಿ ಒಂದು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬೇಕು. ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ವೀಕ್ಷಣೆ ಮಾಡಬಹುದಾಗಿರುತ್ತದೆ. ಆಟೋ ಪೇ […]

Continue Reading

ಭೀಕರ ರಸ್ತೆ ಅಪಘಾತ: ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಡಿವೈಎಸ್‌ಪಿಗಳು ಸಾವು. ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರಿಗೆ ಗಾಯ

ಶನಿವಾರದಂದು ಹೈದರಾಬಾದ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಇಬ್ಬರು ಡಿವೈಎಸ್‌ಪಿಗಳು ಸಾವನ್ನಪ್ಪಿದ್ದು, ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.ಪೊಲೀಸ್ ಅಧಿಕಾರಿಗಳು ಅಧಿಕೃತ ಕೆಲಸದ ನಿಮಿತ್ತ ವಿಜಯವಾಡದಿಂದ ಹೈದರಾಬಾದ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ಹಠಾತ್ ಬ್ರೇಕ್ ಹಾಕಿದಾಗ, ಮುಂದೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ರಸ್ತೆಯ ಇನ್ನೊಂದು ಬದಿಗೆ ಬಿದ್ದು, ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ […]

Continue Reading

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಸೊರಕೆ ಹೆಸರು ಮುಂಚೂಣಿಯಲ್ಲಿ..? ದ.ಕ ಜಿಲ್ಲೆಯ ‘ಆಲಿ’ ಗೆ ಸಿಗುತ್ತಾ ನಿಗಮ ಭಾಗ್ಯ..? ಕಾಂಗ್ರೆಸ್ ನಾಯಕರಲ್ಲಿ ಗರಿಗೆದರಿದ ‘ನಿಗಮ’ ನಿರೀಕ್ಷೆ.!

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ದೆಹಲಿ ಭೇಟಿ ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಹೊಸ ಹುರುಪನ್ನು ತಂದುಕೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಾ ಬಂದರೂ ಕಾರ್ಯಕರ್ತರು, ಎರಡನೇ ಹಂತದ ನಾಯಕರಿಗೆ ನಿಗಮ ಭಾಗ್ಯ ಪೂರ್ಣ ಪ್ರಮಾಣದಲ್ಲಿ ದೊರಕಿಲ್ಲ. ಪಕ್ಷ ಅಧಿಕಾರಕ್ಕೆ ತರಲು ಕಾರ್ಯಕರ್ತರು ಬೇಕು, ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ ಯಾವಾಗ ಅನ್ನುವ ಅಸಮಾಧಾನಗಳು ಪಕ್ಷದೊಳಗೆ ನಡೆಯುತ್ತಿದೆ. ಇದೀಗ ಕೆಲವು ಬಾಕಿ ಉಳಿದಿರುವ ನಿಗಮ ಮಂಡಳಿಗಳಿಗೆ ನೇಮಕಾತಿ ಪಟ್ಟಿ ಫೈನಲ್ ಹಂತಕ್ಕೆ ತಲುಪಿದ್ದು, ಅಧಿಕೃತವಾಗಿ […]

Continue Reading

ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ, ಬಲವಂತದಿಂದ ಗರ್ಭಪಾತ, ಪ್ರಕರಣ ದಾಖಲು

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಮಕ್ಕಳ ಆಶ್ರಯ ಕೇಂದ್ರದಲ್ಲಿ ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿ, ಗರ್ಭಿಣಿ ಬಲವಂತದಿಂದ ಗರ್ಭಪಾತ ಮಾಡಿಸಲಾಗಿದೆ ಎಂದು ಆರೋಪಿಸಿ ಎಚ್‌ಐವಿ ಸೋಂಕಿತ ಬಾಲಕಿ ನೀಡಿದ ದೂರಿನ ಮೇರೆಗೆ ಶುಕ್ರವಾರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧೋಕಿ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನ ಪ್ರಕಾರ, ಈ ಘಟನೆಗಳು ಜುಲೈ 13, 2023 ರಿಂದ ಈ ವರ್ಷದ ಜುಲೈ 23 ರ ನಡುವೆ ಹಸೇಗಾಂವ್‌ನಲ್ಲಿರುವ ಎಚ್‌ಐವಿ […]

Continue Reading