ನಗರದಲ್ಲಿ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಡ್ರಗ್ಸ್ ಸಪ್ಲೈ, ಮಾಲು ಸಹಿತ ಆರೋಪಿಗಳ ಹೆಡೆಮುರಿ ಕಟ್ಟಿದ ಸೆನ್‌ ಪೊಲೀಸರು

ಪೋಷಕರ ಒಂದು ದೂರಿನಿಂದ 200 ಮಂದಿಗೆ ಡ್ರಗ್ಸ್‌ ಪೂರೈಕೆಗೆ ತಡೆ: ಮಂಗಳೂರು ಪೊಲೀಸ್ ಕಮೀಷನರ್ ನಗರದಲ್ಲಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ತರಿಸಲಾದ ಗಾಂಜಾವನ್ನು ಪಾಲು ಮಾಡುತ್ತಿದ್ದ ಐವರನ್ನು ನಗರದ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಸೆನ್‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರನ್ನು ಮಂಗಳೂರಿನ ಬಿಕರ್ನಕಟ್ಟೆ ಮರೋಳಿ ನಿವಾಸಿ ತುಷಾರ್‌ ಅಲಿಯಾಸ್‌ ಸೋನು, ನಾಗುರಿಯ ದ್ವನಿ ಶೆಟ್ಟಿ, ಜಲ್ಲಿಗುಡ್ಡೆಯ ಸಾಗರ್‌ ಕಕೇರಾ, ಶಕ್ತಿನಗರದ ವಿಕಾಸ್‌ ಥಾಪ ಅಲಿಯಾಸ್‌ ಪುಚ್ಚಿ, ಮತ್ತು ಅಳಕೆ ಕಂಡೆಟ್ಟುವಿನ ವಿಘ್ನೇಶ್‌ ಕಾಮತ್‌ […]

Continue Reading

ಉಡುಪಿಯನ್ನೇ ಅಡ್ಡೆ ಮಾಡಿಕೊಂಡಿದ್ದ ಡ್ರಗ್ಸ್ ಪೆಡ್ಲರ್ ಗಳು.! ಅಂತರಾಜ್ಯ ಡ್ರಗ್ಸ್ ದಂಧೆಕೋರರ ಮಟ್ಟ ಹಾಕಿದ ಕೇಂದ್ರ NCB: ಅಮಿತ್ ಶಾ ಶ್ಲಾಘನೆ

ಉಡುಪಿ ಸೇರಿದಂತೆ ದೇಶದ ಹಲವು ನಗರಗಳ ಮೂಲಕ 10 ಕ್ಕೂ ಹೆಚ್ಚು ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಬೃಹತ್ ಮಾದಕ ವಸ್ತು ಜಾಲವನ್ನು ಮಾದಕ ವಸ್ತು ನಿಗ್ರಹ ದಳ ಬಯಲಿಗೆಳೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ (NCB) ಎಂಟು ಮಂದಿಯನ್ನು ಬಂಧಿಸಿ ಅಪಾರ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಗ್ಯಾಂಗ್ ಉಡುಪಿಯನ್ನೇ ಅಡ್ಡೆ ಮಾಡಿಕೊಂಡು ಕಾಲ್ ಸೆಂಟರ್ ಸ್ಥಾಪಿಸಿ ಆ ಮೂಲಕ ಡ್ರಗ್ಸ್ ವ್ಯವಹಾರದ ಕಾರ್ಯಾಚರಣೆ ನಡೆಸುತ್ತಿತ್ತು. ಉಡುಪಿ, ದಿಲ್ಲಿ, ಜೈಪುರ, ರೂರ್ಕಿಯಲ್ಲಿ ಕಾಲ್ […]

Continue Reading

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಗಣನೀಯ ಹೆಚ್ಚಳ; 6 ತಿಂಗಳಲ್ಲಿ 380 ಹೃದಯಾಘಾತ ಪ್ರಕರಣ, 85 ಮಂದಿ ಸಾವು: ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ

ರಾಜ್ಯದ ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಯುವಕರು ಹೃದಯಾಘಾತದಿಂದ ಮೃತಪಟ್ಟ ಸುದ್ದಿಗಳು ವರದಿಯಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಿನ ಹೃದಯಾಘಾತ ಸಾವುಗಳು ಸಂಭವಿಸಿವೆ ಎಂಬ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ಆರು ತಿಂಗಳಲ್ಲಿ 85 ಮಂದಿ ಹೃದಯಾಘಾತದಿಂದ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಚ್‌ಆರ್ ತಿಮ್ಮಯ್ಯ […]

Continue Reading

2025 ರ ನೀಟ್ ನಲ್ಲಿ MBBS ಸಾಧನೆ ಮಾಡಿದ ಕಮ್ಯೂನಿಟಿ ಸೆಂಟರ್ ನ ಎಲ್ಲಾ ವಿದ್ಯಾರ್ಥಿಗಳಿಗೆ ಅಲ್ ಮುಝೈನ್ ಮೂಲಕ 50 ಸಾವಿರ ವಿದ್ಯಾರ್ಥಿ ವೇತನ. ಲಾಂಗ್ ಟರ್ಮ್ ನೀಟ್ ಮಾಡುವ 50 ವಿದ್ಯಾರ್ಥಿಗಳಿಗೆ ಭಾರತ್ ಇನ್ಪೋಟೆಕ್ ವಿದ್ಯಾರ್ಥಿ ವೇತನ

ಶೈಕ್ಷಣಿಕ ಕ್ಷೇತ್ರದಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಫಲಿತಾಂಶ ಆಧಾರಿತ ಸೇವೆ ಎಲ್ಲರಿಗೂ ಮಾದರಿ, ನಿರಂತರ ವೀಕ್ಷಣೆಯ ಮೂಲಕ ವಿದ್ಯಾರ್ಥಿಗಳನ್ನು ಗುರಿ ತಲುಪಿಸುವ ಸೆಂಟರ್ ನ ಪ್ರಯತ್ನದಲ್ಲಿ ನಾವು ಜೊತೆ ಇರುತ್ತೇವೆ ಎಂದು ಖ್ಯಾತ ಉದ್ಯಮಿ, ಅಲ್ ಮುಝೈನ ಮಾಲಕರಾದ ಝಕಾರಿಯಾ ಹಾಜಿ ಜೋಕಟ್ಟೆ ಹೇಳಿದರು, ಸೆಂಟರ್ ನ ಕೌನ್ಸಿಲಿಂಗ್ ಹಾಗೂ ವಿದ್ಯಾರ್ಥಿವೇತನ ಪಡೆದು ವಿವಿಧ ಕೋಚಿಂಗ್ ಸೆಂಟರ್ ನಲ್ಲಿ ಕಲಿತು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮಗೆ ಸಮಾಜ […]

Continue Reading

ಉಪ್ಪಿನಂಗಡಿ: ಅಕ್ರಮ ಮಧ್ಯ ಸಾಗಾಟ ಪ್ರಕರಣ; ಆರೋಪಿ ಪ್ರತಾಪ್ ಶೆಟ್ಟಿ ದೋಷ ಮುಕ್ತ

ಅಕ್ರಮ ಮಧ್ಯ ಸಾಗಾಟ ಪ್ರಕರಣ ಆರೋಪಿ ಖುಲಾಸೆ ದಿನಾಂಕ 15/03/2023 ರಂದು ರಾತ್ರಿ ಮೂರು ಗಂಟೆ ಸಮಯ ಕಡಂಬು ಎಂಬಲ್ಲಿ ಆರೋಪಿಯು ಯಾವುದೇ ದಾಖಲಾತಿಗಳಿಲ್ಲದೆ ಸ್ವಿಫ್ಟ್ ಕಾರ್ ನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆರೋಪಿ ಪ್ರತಾಪ್ ಶೆಟ್ಟಿ ಮಧ್ಯದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಉಪ್ಪಿನಂಗಡಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿ ತಮ್ಮ ಸಿಬ್ಬಂದಿಗಳ ಜೊತೆ ದಾಳಿ ನಡೆಸಿ ಆರೋಪಿ ವಶದಲ್ಲಿದ್ದ ಒಟ್ಟು 106.830 ಲೀಟರ್ ಮಧ್ಯವನ್ನು ವಾಹನ […]

Continue Reading

ಮೂಲ್ಕಿ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಚಿನ್ನದ ಅಂಗಡಿ ಮಾಲಿಕ ಅಬ್ದುಲ್ ಲತೀಫ್ ಹತ್ಯಾ ಆರೋಪಿ ಮುಸ್ತಫಾ ಅರೆಸ್ಟ್

ಮಾವನ ಬದಲು ಅಳಿಯ ಟಾರ್ಗೆಟ್.. ಜಾಮೀನಿನ ಮೇಲೆ ಹೊರಬಂದಿದ್ದರೂ ಮತ್ತೆ ಜೈಲಿಗೆ ಹೋದ ಹಂತಕರು.! ಜಿಲ್ಲೆಯಲ್ಲೊಂದು ಅಪರೂಪದ ಮರ್ಡರ್ ಕೇಸ್.! ಐದು ವರ್ಷಗಳ ಹಿಂದೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಸನ್ನಿಧಿ ಹೆದ್ದಾರಿ ಬಳಿ ಹಾಡಹಗಲೇ ನಡೆದಿದ್ದ ಚಿನ್ನದ ಅಂಗಡಿ ಮಾಲಿಕ ಅಬ್ದುಲ್ ಲತೀಫ್ ಹತ್ಯೆಗೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಮುಹಮ್ಮದ್ ಮುಸ್ತಫಾ ಯಾನೆ ಮುಸ್ತಾ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2020 ರ ಜೂನ್ 5 ರಂದು ಅಬ್ದುಲ್ […]

Continue Reading

ಒಂದೂ ಮುಕ್ಕಾಲು ಶತಮಾನದ ಇತಿಹಾಸ ಹೊಂದಿರುವ ಕನ್ನಡ ಪತ್ರಿಕೋದ್ಯಮ, ಡಿಜಿಟಲ್ ಯುಗದಲ್ಲೂ ನಾಗರಿಕ ಬದುಕಿನ ಅವಿಭಾಜ್ಯ ಅಂಗ

ಕನ್ನಡ ಪ್ರತಿಕಾ ರಂಗಕ್ಕೆ 182 ನೇ ವಾರ್ಷಿಕೋತ್ಸವದ ಸಂಭ್ರಮ ಜುಲೈ 1 ಕನ್ನಡ ಪತ್ರಿಕಾ ದಿನಾಚರಣೆ : ಕನ್ನಡದ ಕೆಲಸಕ್ಕಾಗಿ ಮೊತ್ತ ಮೊದಲ ಗೌರ ಡಾಕ್ಟರೇಟ್ ಪ್ರಶಸ್ತಿ ಪಡೆದ ಕನ್ನಡ ಪತ್ರಿಕಾ ರಂಗದ ಪಿತಾಮಹ ರೆವರೆಂಡ್ ಹರ್ಮನ್ ಫ್ರೆಡರಿಕ್ ಮೊಗ್ಲಿಂಗ್ ಅವರ ಪತ್ರಿಕಾ ಸೇವೆ ಸ್ಮರಿಸುವ ದಿನ ✍️. ಪಿ.ಎಂ.ಎ. ಪಾಣೆಮಂಗಳೂರು, ಪತ್ರಕರ್ತರು. ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣದ ಹೋರಾಟದಲ್ಲೂ, ನಾಗರಿಕತೆಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. […]

Continue Reading

ದಿಲ್ಲಿಯಲ್ಲಿ ಸಿದ್ದು ಗುದ್ದಿದ್ದು ಯಾರಿಗೆ.?, ಎಮ್ಮೆಲ್ಸಿ ಪಟ್ಟಿಗೆ ಬ್ರೇಕ್ ಬಿದ್ದಿದ್ದೇಕೆ.?, ಸುರ್ಜೇವಾಲ ಏಕೆ ಬರುತ್ತಿದ್ದಾರೆ?

✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಗೆ ಹೋದ ಸಿಎಂ ಸಿದ್ಧರಾಮಯ್ಯ ಫುಲ್ ಗರಂ ಆಗಿದ್ದರು.ತಾವಿಡುವ ಹೆಜ್ಜೆಗಳಿಗೆ ವರಿಷ್ಟರು ಪದೇ ಪದೇ ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದೇ ಅವರ ಸಿಟ್ಟಿಗೆ ಕಾರಣ.ಅಂದ ಹಾಗೆ 2013 ರಲ್ಲಿ ಅವರು ಮುಖ್ಯಮಂತ್ರಿಯಾದಾಗ ದಿಲ್ಲಿ ನಾಯಕರು ಅವರ ಗೋಜಿಗೇ ಬರುತ್ತಿರಲಿಲ್ಲ. ಇದೇ ರೀತಿ ಇಲ್ಲಿ ಕೆಪಿಸಿಸಿ ಅಧ್ಯಕ್ಷರಾದವರೂ ಅವರಿಗೆ ಕಿರಿಕಿರಿ ಮಾಡುತ್ತಿರಲಿಲ್ಲ. ಕಾರಣ? ಅವತ್ತು ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಅವರಿಗೆ ಕರ್ನಾಟಕದ ರಾಜಕಾರಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅನಿವಾರ್ಯತೆ ಇರಲಿಲ್ಲ.ರಾಷ್ಟ್ರಮಟ್ಟದಲ್ಲಿ ಪಕ್ಷದ ಹಿತ ರಕ್ಷಿಸಲು ಕರ್ನಾಟಕದಿಂದ ಅವರೇನು […]

Continue Reading

ಪುತ್ತೂರು ‘ಕೃಷ್ಣಲೀಲೆ’ ಕಹಾನಿಗೆ ಟ್ವಿಸ್ಟ್

ಶರಣ್ ಪಂಪ್ವೆಲ್, ಮುರುಳಿ ಭಟ್ ಬಳಿಗೆ ಹೋದ್ರೂ ನ್ಯಾಯ ಸಿಕ್ಕಿಲ್ಲ; ನಾವು ಹಿಂದೂಗಳಲ್ಲವೇ: ಸಂತ್ರಸ್ತ ಯುವತಿ ತಾಯಿಯ ಪತ್ರಿಕಾಗೋಷ್ಠಿ ಅಬಾರ್ಷನ್ ಮಾಡಿಸಿ 10 ಲಕ್ಷ ಕೊಟ್ತೇವೆ; ಊರು ಬಿಟ್ಟು ಹೋಗಿ: ಬಿಜೆಪಿ ಮುಖಂಡನಿಂದ ಧಮ್ಕಿ.! ಪುತ್ತೂರು ಬಿಜೆಪಿ ಲೀಡರ್ ಪುತ್ರನ ಕೃಷ್ಣಲೀಲೆ ಕಹಾನಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಪುತ್ತೂರು ನಗರ ಸಭೆಯ ಸದಸ್ಯ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ ರಾವ್ ಯುವತಿಯೊಬ್ಬಳನ್ನು ಪ್ರೀತಿಸಿ ಗರ್ಭವತಿ ಮಾಡಿ ಮಗುವನ್ನು ಕರುಣಿಸಿ ಭೂಗತನಾಗಿದ್ದಾನೆ. ಏಳು […]

Continue Reading

ದ. ಕ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಗಣಿಗಾರಿಕೆಯ ಪರವಾನಿಗೆ ಮತ್ತು ರಾಜಸ್ವ ತೆರಿಗೆಯ ನಿಯಮ ಸಡಿಲಿಕೆಗೆ RGPRS ಅದ್ಯಕ್ಷ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಒತ್ತಾಯ.

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಅನಾಹುತಕರ ಘಟನೆಗಳು, ಕೋಮುದ್ವೇಷದ ಪ್ರಕರಣಗಳು ಹಾಗೂ ಗುಂಪು ಹತ್ಯೆಗಳ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ತೀವ್ರ ಕ್ರಮಗಳನ್ನು ಕೈಗೊಂಡಿದ್ದು, ಹೊಸ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರ ಪರಿಣಾಮವಾಗಿ ಅಕ್ರಮ ಗಣಿಗಾರಿಕೆ ಹಾಗೂ ಮರಳು ದಂಧೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಾನೂನುಬದ್ಧ ಗಣಿಗಾರಿಕೆ ಮೇಲೆ ಈಗಿನ ಕಟ್ಟುನಿಟ್ಟಿನ ಕ್ರಮಗಳಿಂದ ಪರಿಣಾಮ ಬೀರುತ್ತಿದ್ದು, ಗಣಿಗಾರಿಕೆ ಉದ್ಯಮದಲ್ಲಿ ತೊಡಗಿರುವ […]

Continue Reading