ಮಧ್ಯಪ್ರದೇಶದಲ್ಲಿ ರೈಲಿನಿಂದ ನಾಪತ್ತೆಯಾಗಿದ್ದ ನ್ಯಾಯಾಂಗ ಸೇವಾ ಆಕಾಂಕ್ಷಿ ಅರ್ಚನಾ ಕೊನಗೂ ಭಾರತ-ನೇಪಾಳ ಗಡಿಯಲ್ಲಿ ಪತ್ತೆ

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ರೈಲಿನಿಂದ ನಾಪತ್ತೆಯಾಗಿದ್ದ 28 ವರ್ಷದ ನ್ಯಾಯಾಂಗ ಸೇವೆಗಳ ಆಕಾಂಕ್ಷಿ ಅರ್ಚನಾ ತಿವಾರಿ ಅವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಕಟ್ನಿ ನಿವಾಸಿ ಅರ್ಚನಾ, ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಇಂದೋರ್ ನಲ್ಲಿ ವಾಸಿಸುತ್ತಿದ್ದರು. ಆಗಸ್ಟ್ 7 ರಂದು, ಅವರು ಮನೆಗೆ ಪ್ರಯಾಣಿಸಲು ಇಂದೋರ್-ಬಿಲಾಸ್ಪುರ್ ನರ್ಮದಾ ಎಕ್ಸ್ಪ್ರೆಸ್ ಹತ್ತಿದರು. ಅವರು ಕಟ್ನಿಯಲ್ಲಿ ಇಳಿಯಬೇಕಿತ್ತು, ಆದರೆ ಇಳಿಯಲಿಲ್ಲ. ನಂತರ ಅವರ ಬ್ಯಾಗ್ ಉಮಾರಿಯಾ ನಿಲ್ದಾಣದಲ್ಲಿ ಕಂಡುಬಂದಿತು, ಆದರೆ ಅವರು ಎಲ್ಲಿಯೂ ಕಾಣಲಿಲ್ಲ. ಆ ದಿನ ಬೆಳಿಗ್ಗೆ 10:15 ರ […]

Continue Reading

ಕಾಂಗ್ರೆಸ್ ಗ್ಯಾರಂಟಿಗೆ ಮೊರೆ ಹೋದ ಬಿಜೆಪಿ..

ವಿರೋಧ ಪಕ್ಷದ ರಾಜ್ಯದಲ್ಲಿ ಹಿಗ್ಗಾಮುಗ್ಗಾ ತರಾಟೆ..ಆಡಳಿತದ ರಾಜ್ಯಗಳಲ್ಲಿ ರತ್ನಗಂಬಳಿ ಹಾಸಿ ಸ್ವಾಗತ..ಬಿಜೆಪಿಯ ಇಬ್ಬಗೆಯ ಬಣ್ಣ ಬಯಲು ರಾಜಕೀಯ ಪಕ್ಷಗಳ ನಿಜವಾದ ಬಣ್ಣ ಬಯಲಾಗಬೇಕಾದರೆ ಚುನಾವಣೆಗಳು ಬರಬೇಕು. ಚುನಾವಣೆಗಳು ಬಂದಾಗ ಗೆಲುವು ತನ್ನದಾಗಿಸಿಕೊಳ್ಳಲು ಸಿದ್ಧಾಂತಕ್ಕೆ ಎಳ್ಳು ನೀರು ಬಿಡುತ್ತಾರೆ. ಬಹುಶಃ ಬಿಜೆಪಿಯ ವಿಷಯದಲ್ಲಿ ಇದೆ ಆದಂತಿದೆ. ಅಭಿವೃದ್ಧಿ ಆಧಾರಿತ ಆಡಳಿತದ ಪಿತಾಮಹನಂತೆ, ಆರ್ಥಿಕ ಶಿಸ್ತಿನ ಹರಿಕಾರನಂತೆ ಬಿಂಬಿಸಿಕೊಳ್ಳುವ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬಂದಾಗ ತಾನು ಕೂಡ ಇತರ ಪಕ್ಷಗಳಂತೆ ಜನಪ್ರಿಯ ಯೋಜನೆಗಳ ಹಿಂದೆ ಬೀಳುತ್ತಿರುವುದು ನಿಜಕ್ಕೂ ಅಚ್ಚರಿ […]

Continue Reading

ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಒಬ್ಬ ಭಯಂಕರ ಭಯೋತ್ಪಾದಕ: ಹಿಂದೂ ಫೈರ್ ಬ್ರ್ಯಾಂಡ್ ಉಮಾಭಾರತಿ ಅಚ್ಚರಿಯ ಹೇಳಿಕೆ

ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ‘ಭಯಂಕರ ಭಯೋತ್ಪಾದಕ’ ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಸಂಘಪರಿವಾರದ ನಾಯಕಿ ಉಮಾಭಾರತಿ ಕರೆದಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾಭಾರತಿ ಗೋಡ್ಸೆಯ ಕೃತ್ಯವು ಭಯೋತ್ಪಾದನೆಯನ್ನು ಮೀರಿದ ದೊಡ್ಡ ಪಾಪ’ ಎಂದು ಹೇಳಿದರು. ಖಾಸಗಿ ಹಿಂದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಗೋಡ್ಸೆಯನ್ನು ತೀವ್ರವಾಗಿ ಟೀಕಿಸಿದರು ಮತ್ತು ಗಾಂಧೀಜಿಯನ್ನು ಹೊಗಳಿದರು. ‘ನಾಥೂರಾಮ್ ಗೋಡ್ಸೆ ಹಿಂದೂವೇ? ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ’ ಎಂದು ಉಮಾಭಾರತಿ ಹೇಳಿದರು. “ಸ್ವತಂತ್ರ ಭಾರತದ ದೊಡ್ಡ […]

Continue Reading

ಬಿಹಾರದಲ್ಲಿ ಜನಾದಿಪತ್ಯ ಮೌಲ್ಯಗಳಿಗೆ ಧಕ್ಕೆ – ಅಲ್ಪಸಂಖ್ಯಾತರ ಮತ ಹಕ್ಕಿಗೆ ಸವಾಲು

ಇಂತಹ ಧೋರಣೆ ಮುಂದುವರಿದರೆ, ಅದು ಜನಾದಿಪತ್ಯ ಮೌಲ್ಯಗಳ ನಾಶಕ್ಕೆ ಕಾರಣವಾಗುವ ಅಪಾಯವಿದೆ. ಜನಾದಿಪತ್ಯ ಮೌಲ್ಯಗಳನ್ನು ಲೆಕ್ಕಿಸದೆ, ಕೇವಲ ಅಧಿಕಾರವನ್ನು ಹಿಡಿಯುವ ಅಜೆಂಡಾವನ್ನು ಮುಂದಿರಿಸಿಕೊಂಡು ಬಿಹಾರದಲ್ಲಿ ರಾಜಕೀಯ ಕುತಂತ್ರಗಳು ನಡೆಯುತ್ತಿವೆ. ಮುಂಬರುವ ಚುನಾವಣೆಯನ್ನು ಎದುರಿಸಲು ಸಜ್ಜಾಗಿರುವ ಸಂಘಪರಿವಾರ ಶಕ್ತಿಗಳಿಗೆ ತೀವ್ರ ಪ್ರತಿರೋಧವಾಗಿ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ನೇತೃತ್ವವು ಬಲವಾದ ಹೋರಾಟದ ವಲಯವನ್ನು ಕಟ್ಟಿಕೊಟ್ಟಿದೆ. ಸುಮಾರು 67 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಅಸಂಬದ್ಧ ಕಾರಣಗಳನ್ನು ತೋರಿಸಿ ಕೈಬಿಟ್ಟಿರುವ ಚುನಾವಣಾ ಆಯೋಗದ ನಡೆ, ರಾಜ್ಯದಾದ್ಯಂತ “ಜನಾಧಿಕಾರ ಯಾತ್ರೆ” ಎಂಬ […]

Continue Reading

ಅಕ್ರಮ ಬೆಟ್ಟಿಂಗ್ ದಂಧೆ: 110 ಕೋಟಿ ರೂಪಾಯಿ, 1,200 ಕ್ರೆಡಿಟ್ ಕಾರ್ಡ್‌ ಇ.ಡಿ ವಶ

ಸೈಪ್ರಸ್ ಮೂಲದ ‘ಅಕ್ರಮ’ ಆನ್‌ಲೈನ್ ಬೆಟ್ಟಿಂಗ್ ವೇದಿಕೆಯಾದ ಪ್ಯಾರಿಮ್ಯಾಚ್‌ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಇತ್ತೀಚೆಗೆ ಶೋಧ ನಡೆಸಿದೆ. ಅಕ್ರಮಕ್ಕೆ ಬಳಸಿಕೊಂಡಿದ್ದ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 110 ಕೋಟಿ ರೂಪಾಯಿಯನ್ನು, 1,200 ಕ್ರೆಡಿಟ್ ಕಾರ್ಡ್‌ಗಳನ್ನು ಇ.ಡಿ ವಶಪಡಿಸಿಕೊಂಡಿದೆ. ಪ್ಯಾರಿಮ್ಯಾಚ್ ಕಾರ್ಯಾಚರಣೆಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ಭಾಗವಾಗಿ ಆಗಸ್ಟ್ 12 ರಂದು ಮುಂಬೈ, ನೋಯ್ಡಾ, ಜೈಪುರ, ಸೂರತ್, ಮಧುರೈ, ಕಾನ್ಪುರ ಮತ್ತು ಹೈದರಾಬಾದ್‌ನ 17 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿತ್ತು. […]

Continue Reading

ಕಾನೂನು ಸೇವೆ ಒದಗಿಸಿ ಕೊಡುವುದಾಗಿ ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ ಬೃಹತ್‌ ಸೈಬರ್‌ ವಂಚನೆ ಜಾಲವನ್ನು ಬೇಧಿಸಿದ ಸಿಸಿಬಿ ಪೊಲೀಸರು.

ವಂಚನೆ ನಡೆಸಲು ಬಳಸುತ್ತಿದ್ದ ಹತ್ತು ಲಕ್ಷ ಮೌಲ್ಯದ ಉ‍ಪಕರಣ ಜಪ್ತಿ ಸೈಬರ್ ವಂಚನೆಗೆ ಒಳಗಾದವರಿಗೆ ಕಾನೂನು ಸೇವೆ ಒದಗಿಸಿ ಕೊಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಬೃಹತ್‌ ಸೈಬರ್‌ ವಂಚನೆ ಜಾಲ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ವಂಚನೆ ನಡೆಸಲು ಬಳಸುತ್ತಿದ್ದ ರೂ. ಹತ್ತು ಲಕ್ಷ ಮೌಲ್ಯದ ಉ‍ಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಆಗಸ್ಟ್‌ 2ರಂದು ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ಆಧರಿಸಿ, ವೈಟ್‌ಫೀಲ್ಡ್‌ನ ಡೇಟಾ ಸೆಂಟರ್‌ ಮೇಲೆ ಸಿಸಿಬಿ ಪೊಲೀಸರು ದಾಳಿ […]

Continue Reading

ಮೂರು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಪುರುಷರಿಂದ ಹನ್ನೆರಡು ವರ್ಷದ ಬಾಲಕಿಯ ನಿರಂತರ ಅತ್ಯಾಚಾರ

12 ವರ್ಷದ ಬಾಲಕಿ ಮೇಲೆ ಸರಿ-ಸುಮಾರು 200 ಪುರುಷರು ಅತ್ಯಾಚಾರ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಇದೀಗ ‌ಈ ಕೃತ್ಯ ಎಸಗಿದ 10 ಮಂದಿಯನ್ನು ಬಂಧಿಸಲಾಗಿದೆ. ಮುಂಬೈ ಸಮೀಪದ ವಸೈನಲ್ಲಿ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ ಹನ್ನೆರಡು ವರ್ಷದ ಬಾಂಗ್ಲಾದೇಶಿ ಬಾಲಕಿಯ ಮೇಲೆ ಮೂರು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಪುರುಷರು ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಎಂದು ಬಾಲಕಿ ಹೇಳಿ ಕೊಂಡಿದ್ದಾಳೆ. ಈ ಘಟನೆ ಗುಜರಾತ್‌ನ ನಾಡಿಯಾಡ್‌ನಲ್ಲಿ ನಡೆದಿದೆ. ನಂತರ ಅವಳನ್ನು ವಸೈ ಸಮೀಪದ ನೈಗಾಂವ್‌ ನಲ್ಲಿರುವ […]

Continue Reading

ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಏಕೆ ‘ಸಿದ್ಧವಾಗಿಲ್ಲ’: ಕಾಂಗ್ರೆಸ್

ನವದೆಹಲಿ: ಹಿಂದಿನ ಸರ್ಕಾರಗಳು ಎರಡೂ ಸದನಗಳಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಚರ್ಚೆಗೆ ಅವಕಾಶ ನೀಡಿದ್ದರೂ, ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಏಕೆ “ಸಿದ್ಧವಾಗಿಲ್ಲ” ಎಂದು ಕಾಂಗ್ರೆಸ್ ಶನಿವಾರ ಸರ್ಕಾರವನ್ನು ಕೇಳಿದೆ. ಚುನಾವಣಾ ಆಯೋಗದ ಚುನಾವಣಾ ಸುಧಾರಣೆಗಳು ಮತ್ತು ಚುನಾವಣೆಯಲ್ಲಿ ಹಣದ ಬಳಕೆಯ ಕುರಿತು ಚರ್ಚೆ ನಡೆದಾಗ ಹಿಂದೆ ಹಲವಾರು ಘಟನೆಗಳನ್ನು ಕಾಂಗ್ರೆಸ್ ನಾಯಕ ಮಾಣಿಕಮ್ ಟ್ಯಾಗೋರ್ ಉಲ್ಲೇಖಿಸಿದ್ದಾರೆ. “ಗೌರವಾನ್ವಿತ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯ […]

Continue Reading

ಮಾದಕ ವ್ಯಸನಕ್ಕೆ ಬಲಿಯಾದ ಅಪ್ರಾಪ್ತ ಬಾಲಕಿ, ಹಲವು ಪುರುಷರೊಂದಿಗೆ ಲೈಂಗಿಕ ಸಂಬಂಧ, ಸುಮಾರು19 ಜನರಿಗೆ ಏಡ್ಸ್

ಮಾದಕ ವ್ಯಸನಕ್ಕೆ ಬಲಿಯಾದ 17 ವರ್ಷದ ಬಾಲಕಿಯೊಬ್ಬಳು ಹಲವಾರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿ, ಸರಿ-ಸುಮಾರು19 ಜನರಿಗೆ ಎಚ್ಐವಿ ಹರಡಿಸಿದ್ದಾಳೆ. ಉತ್ತರಾಖಂಡದ ರಾಮನಗರ ಪಟ್ಟಣದ ಗುಲರ್‌ಘಟ್ಟಿ ಪ್ರದೇಶದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಬಾಲಕಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಿಂದ ಬಂದವಳಾಗಿದ್ದು, ಡ್ರಗ್ಸ್ ಸೇವನೆಗೆ ತನ್ನ ಲೈಂಗಿಕ ಸಂಪರ್ಕದಿಂದ ಬಂದ ಹಣವನ್ನು ಖರ್ಚು ಮಾಡುತ್ತಿದ್ದಳು ಎನ್ನಲಾಗಿದೆ. ಆಕೆಯೊಂದಿಗೆ ಸಂಪರ್ಕ ಹೊಂದಿದವರಲ್ಲಿ ವಿವಾಹಿತ ಪುರುಷರೂ ಸೇರಿದ್ದಾರೆ. ಆಕೆಗೆ ಎಚ್‌ಐವಿ ಇದೆ ಎಂದು ಅವರಿಗೆ ತಿಳಿದಿರಲಿಲ್ಲ […]

Continue Reading

ಮೂವರು ಐಎಎಸ್ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ

ಮೀನಾಕ್ಷಿ ಆರ್ಯ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಂಗಳೂರು ಉಪ-ವಿಭಾಗ 2023ನೇ ಬ್ಯಾಚ್‌ನ ಮೂವರು ಐಎಎಸ್ ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿಗಳ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಪಿ. ಶ್ರವಣ್‌ ಕುಮಾರ್‌ ಅವರನ್ನು ಉತ್ತರ ಕನ್ನಡ ಜಿಲ್ಲಾ ಕುಮಟಾ ಉಪ ವಿಭಾಗದ ಉಪ-ವಿಭಾಧಿಕಾರಿಯಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ. ದಿನೇಶ್‌ ಕುಮಾರ್‌ ಮೀನಾ ಅವರಿಗೆ ಚಾಮರಾಜ ನಗರ ಜಿಲ್ಲಾ ಕೊಳ್ಳೇಗಾಲ ಉಪ-ವಿಭಾಗದ ಉಪ ವಿಭಾಗಾಧಿಕಾರಿ ಹುದ್ದೆ ನೀಡಲಾಗಿದೆ. ಮೀನಾಕ್ಷಿ ಆರ್ಯ ಅವರಿಗೆ […]

Continue Reading