ವಕೀಲರ ಮೇಲೆ ಹಲ್ಲೆ ಪ್ರಕರಣ ಅಖಿಲ ಭಾರತ ವಕೀಲರ ಒಕ್ಕೂಟ ಖಂಡನೆ , ವಕೀಲರ ರಕ್ಷಣಾ ಕಾಯ್ದೆಯ ಜಾರಿಗೆ ಒತ್ತಾಯ

ಚಿಕ್ಕಮಗಳೂರಿನ ವಕೀಲರಾದ ಪ್ರೀತಮ್ ಮೇಲೆ ಸಂಚಾರ ನಿಮಯ ಉಲ್ಲಂಘನೆಯ ಕ್ಷುಲ್ಲಕ ಕಾರಣಕ್ಕಾಗಿ ಪೋಲೀಸರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ಈ ಘಟನೆಯನ್ನು ಅಖಿಲ ಭಾರತ ವಕೀಲರ ಒಕ್ಕೂಟ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಅಲ್ಲದೆ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. ರಾಜ್ಯಾಧ್ಯಂತ ವಕೀಲರ ಮೇಲಿನ‌ ದೌರ್ಜನ್ಯ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದ್ದೂ ವಕೀಲ ಸಮುದಾಯಕ್ಕೆ ರಕ್ಷಣೆ ಒದಗಿಸಲು ಆಳುವ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೂಡಲೇ ರಾಜ್ಯ ಸರ್ಕಾರ ವಕೀಲರ ರಕ್ಷಣಾ […]

Continue Reading

ಇಂಡೋನೇಷಿಯಾ ರ್ಯಾಲಿಯಲ್ಲಿ ಮಿಂಚಿ, ಇತಿಹಾಸ ನಿರ್ಮಿಸಿ, ಭಾರತದ ಕೀರ್ತಿ ಪತಾಕೆ ಹಾರಿಸಿದ ಸುಹೇಮ್ ಕಬೀರ್

ಸುಹೇಮ್ ಕಬೀರ್ ಗೆ ಬೆನ್ನೆಲುಬಾಗಿ ನಿಂತ ವಾಮ್ಸಿ ಮೇರ್ಲಾ ಸ್ಪೊರ್ಟ್ಸ್ ಫೌಂಡೇಶನ್ ಇಂಡೋನೇಷಿಯಾದಲ್ಲಿ ನಡೆದ ಏಷ್ಯಾ ಫೆಸಿಫಿಕ್ ರ್‍ಯಾಲಿ ಚಾಂಪಿಯನ್‌ಶಿಪ್-2023 ರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕರ್ನಾಟಕದ ಸುಹೇಮ್ ಕಬೀರ್ ಅವರು ಭಾಗವಹಿಸಿ ನಾಲ್ಕು ವಿಭಾಗದಲ್ಲಿ ವಿಜೇತರಾಗುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.ಸುಹೇಮ್ ಕಬೀರ್ ಅವರಿಗೆ ವಾಮ್ಸಿ ಮೇರ್ಲಾ ಸ್ಪೊರ್ಟ್ಸ್ ಫೌಂಡೇಶನ್ ಮತ್ತು ಜೆ.ಕೆ.ಟಯರ್ ಮುಖ್ಯ ಪ್ರಾಯೋಜಕರಾಗಿ ಸಹಕರಿಸಿದ್ದಾರೆ. ಪಿವಿಎಸ್ ಮೂರ್ತಿ ಅವರು ಸುಹೇಮ್ ಕಬೀರ್ ಅವರ ಸಹ ಚಾಲಕರಾಗಿ ಜೊತೆಗಿದ್ದರು. ಸುಹೇಬ್ ಕಬೀರ್ ಅವರು ಏಷ್ಯಾ […]

Continue Reading

ಸಾವಿರಾರು ಕಟ್ಟಡ ಕಾರ್ಮಿಕರಿಂದ ಕಲ್ಯಾಣ ಮಂಡಳಿಗೆ ಮುತ್ತಿಗೆ

ಶೈಕ್ಷಣಿಕ ಸಹಾಯಧನ ಕಡಿತ ವಿರೋಧಿಸಿ ಹಾಗೂ ವೈದ್ಯಕೀಯ ತಪಾಸಣೆ ಯೋಜನೆ ಕೈಬಿಡಲು ಒತ್ತಾಯಿಸಿ ಬುಧವಾರ ನೂರಾರು ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯು ನೋಂದಾಯಿತ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವ ಕಲಿಕಾ ಭಾಗ್ಯ ಯೋಜನೆಯನ್ನು ದುರ್ಬಲಗೊಳಿಸಿರುವುದು ನೋವಿನ ಸಂಗತಿ. ಶೈಕ್ಷಣಿಕ ಸಹಾಯಧನವನ್ನು ಶೇಕಡ 75ರಷ್ಟು ಹಣವನ್ನು ಕಡಿತ ಮಾಡಲಾಗಿದೆ. ಮಂಡಳಿಯ ಈ ತೀರ್ಮಾನದಿಂದಾಗಿ ಸಾವಿರಾರು […]

Continue Reading

ತೆಲಂಗಾಣದಲ್ಲಿ ಕರ್ನಾಟಕದ ಮಾದರಿ ಅನುಸರಿಸಿ, ‘ಕೈ’ ನಾಯಕರ ಕೈಗೆ ಅಧಿಕಾರ; ಸಮೀಕ್ಷೆಯಿಂದ ಬಹಿರಂಗ

ಪಂಚರಾಜ್ಯ ಚುನಾವಣೆಗಳ ಪೈಕಿ 119 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತೆಲಂಗಾಣದಲ್ಲಿ ನವೆಂಬರ್ 30 ರಂದು ಒಂದೇ ಭಾರಿಗೆ ಮತದಾನ ನಡೆಯಲಿದೆ. ಚುನಾವಣೆ ಕುರಿತು ‘ಲೋಕಪೋಲ್ ಸಮೀಕ್ಷೆ’ ಬಹಿರಂಗವಾಗಿದೆ. ಬಾರಿ ಆಡಳಿತ ಪಕ್ಷದ ವಿರುದ್ಧ ಮತದಾರರ ಪ್ರಭುಗಳು ‘ಕೈ’ ನಾಯಕರ ಕೈಗೆ ಅಧಿಕಾರ ನೀಡಲಿದ್ದಾರೆ ಎಂಬ ಅಂಶ ಹೊರಬಿದ್ದಿದೆ. ಕಳೆದ ವಾರ ಪ್ರಕಟಗೊಂಡಿದ್ದ ಸಮೀಕ್ಷೆಯಲ್ಲಿ ಸಹ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಇದೀಗ ನವೆಂಬರ್ 22ರಿಂದ ನವೆಂಬರ್ 29 ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ಕ್ಷೇತ್ರಗಳಲ್ಲಿ ಲೀಲಾಜಾಲವಾಗಿ […]

Continue Reading

ಉತ್ತರಾಖಂಡ: 400 ಗಂಟೆಗಳ ರಣರೋಚಕ ಕಾರ್ಯಾಚರಣೆ; ರಿಯಲ್ ಹೀರೋ ಮುನ್ನಾ ಖುರೇಷಿ, ವಕೀಲ್ ಖಾನ್.!

ಇಡೀ ದೇಶವೇ ಆ ಜೀವಗಳು ಬದುಕಲು ಪ್ರಾರ್ಥನೆಗೆ ಮೊರೆ ಹೋಗಿದ್ದರು. ದೇವಾಲಯ, ಚರ್ಚ್, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಎಲ್ಲರ ಪ್ರಾರ್ಥನೆಯ ಫಲವೋ ಏನೋ ಆ ಬಡ ಜೀವಗಳು ಬದುಕಿ ಬಂದವು. ಭಾರತವೇ ಆ ಕಾರ್ಯಾಚರಣೆಯನ್ನು ಕೊಂಡಾಡಿತು. 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಜೀವಗಳು ಬದುಕಿ ಬಂದವು. ಖುದ್ದು ಪ್ರಧಾನಿ ಮೋದಿ ಆ ಕಾರ್ಯಾಚರಣೆಯ ಸಾಹಸಿಗಳನ್ನು ಕೊಂಡಾಡಿದರು. 400 ಗಂಟೆಗಳ ರಣರೋಚಕ ಕಾರ್ಯಾಚರಣೆ ಹಿಂದಿನ ರಿಯಲ್ ಹೀರೋ ಆ ಇಬ್ಬರು ಆಗಿದ್ದರು. ಅವರೇ ಮುನ್ನಾ […]

Continue Reading

ಹೆಸರಿಗೆ ಮಾತ್ರ ಈತ ಶಿಶುಪಾಲ.! ಹತ್ತು ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನೇ ಮುಕ್ಕಿದ್ದ ಪಾಪಿ..

ಸ್ವಂತ ತಾಯಿಯೇ ಸಾಥ್.. ನ್ಯಾಯಾಲಯದಿಂದ ಗರಿಷ್ಠ ಶಿಕ್ಷೆ ಆತನ ಹೆಸರು ಶಿಶುಪಾಲನ್. ಹೆಸರಿನ ರೀತಿಯಲ್ಲಿ ಇರಲಿಲ್ಲ ಆತನ ಸ್ವಭಾವ. ಮೃಗೀಯವಾಗಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನೇ ಅತ್ಯಾಚಾರಕ್ಕೆ ಬಳಸಿಕೊಂಡಿದ್ದ. ಕ್ರೂರ ಕೃತ್ಯಕ್ಕೆ ಹೆಣ್ಣು ಮಕ್ಕಳ ಸ್ವಂತ ತಾಯಿಯೇ ಸಾಥ್ ಕೊಟ್ಟಿದ್ದಳು. ಇದೀಗ ನ್ಯಾಯಾಲಯವು ರಾಕ್ಷಸೀ ತಾಯಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕೇರಳದ ತಿರುವನಂತಪುರದಲ್ಲಿ ನಡೆದಿದ್ದ ಭಯಾನಕ ಘಟನೆಗೆ ಸಂಬಂಧಿಸಿದಂತೆ ತ್ವರಿತಗತಿ ವಿಚಾರಣಾ ನ್ಯಾಯಾಲಯ ತಾಯಿಗೆ 40 ವರ್ಷಗಳ ಕಠಿಣ ಶಿಕ್ಷೆಯ ತೀರ್ಪು ನೀಡಿದೆ. ಸ್ವಂತ […]

Continue Reading

ರಾಹುಲ್‌ ಗಾಂಧಿಗೆ ಎದುರಾಗಿದೆ ಮತ್ತೊಂದು ಸಂಕಷ್ಟ.! 2018 ರಲ್ಲಿ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ; ಕೋರ್ಟ್‌ ಸಮನ್ಸ್‌ ಜಾರಿ

ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2018ರಲ್ಲಿ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣ ವಿಚಾರವಾಗಿ ರಾಹುಲ್‌ ಗಾಂಧಿಯವರಿಗೆ ಕೋರ್ಟ್‌ ಸಮನ್ಸ್‌ ನೀಡಿದೆ. 2018ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್‌ ಗಾಂಧಿಯವರು ಅಮಿತ್‌ ಶಾ ಅವರನ್ನು ಕೊಲೆಗಾರ (Murderer) ಅಂತ ಸಂಭೋದಿಸಿದ್ದರು. ಇದೇ ವಿಚಾರವಾಗಿ ಉತ್ತರಪ್ರದೇಶದ ಸುಲ್ತಾನ್‌ಪುರ್‌ನ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಿಜಯ್‌ ಮಿಶ್ರ ಎಂಬವರು ರಾಹುಲ್‌ ವಿರುದ್ಧ ಎಂ.ಪಿ /ಎಂ.ಎಲ್.ಎ […]

Continue Reading

ವಿವಾಹಿತ ಮಹಿಳೆಯೊಬ್ಬಳಿಗೆ ತನ್ನ ಹಳೆಯ ಸ್ನೇಹಿತನಿಂದ ಹಲವು ಬಾರಿ ಚೂರಿ ಇರಿತ

ವಾದ ವಿವಾದದ ಹಿನ್ನೆಲೆಯಲ್ಲಿ 22 ವರ್ಷದ ವಿವಾಹಿತ ಮಹಿಳೆಯೊಬ್ಬಳಿಗೆ ತನ್ನ ಹಳೆಯ ಸ್ನೇಹಿತ ಹಲವು ಬಾರಿ ಚೂರಿಯಿಂದ ಇರಿದು ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಈಶಾನ್ಯ ದೆಹಲಿ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಸಂತ್ರಸ್ತೆಯನ್ನು ಶಾಸ್ತ್ರಿ ಪಾರ್ಕ್‌ನ ಹಸ್ಮತ್ ಜಹಾನ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬುಲಂದ್ ಮಸೀದಿ ಬಳಿ ಈ ಘಟನೆ ನಡೆದಿದ್ದು, ಬಿಹಾರದ ಕಿಶನ್‌ಗಂಜ್ ಮೂಲದ ಆರೋಪಿ ಶಾ […]

Continue Reading

ತಂದೆಯ ಉದ್ಯೋಗ ಪಡೆಯಲು ವಿವಾಹಿತ ಮಗಳೂ ಅರ್ಹಳು: ಮದ್ರಾಸ್ ಹೈಕೋರ್ಟ್

ವಿವಾಹಿತ ಮಗ ಮತ್ತು ವಿವಾಹಿತ ಮಗಳ ನಡುವೆ ಯಾವುದೇ ತಾರತಮ್ಯ ತೋರಲು ಸಾಧ್ಯವಿಲ್ಲ. ವೈವಾಹಿಕ ಸ್ಥಿತಿಯ ಆಧಾರದ ಮೇಲೆ ಮಗ ಮತ್ತು ಮಗಳ ನಡುವೆ ತಾರತಮ್ಯ ಮಾಡುವುದು ನಿರಂಕುಶತೆಯ ಪ್ರತೀಕ ಮತ್ತು ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಮೂರ್ತಿ ಕಳೆದ ವಾರ ನೀಡಿದ ಮಹತ್ವಪೂರ್ಣ ಪ್ರಕರಣವೊಂದರ ತೀರ್ಪಿನ ಸಂದರ್ಭದಲ್ಲಿ ಹೇಳಿದ್ದಾರೆ. ಸೇವೆಯಲ್ಲಿದ್ದಾಗಲೇ ಮರಣ ಹೊಂದಿದ ಸರ್ಕಾರಿ ಉದ್ಯೋಗಿಯ ವಿವಾಹಿತ ಮಗ ತಂದೆಯ ಕೆಲಸವನ್ನು ಪಡೆಯಲು ಅರ್ಹನಾಗಿರುತ್ತಾರೆ. ಆದರೆ ಮೃತನ ವಿವಾಹಿತ ಮಗಳಿಗೆ ಅನುಕಂಪದ ಆಧಾರದ ಅಡಿಯಲ್ಲಿ […]

Continue Reading

ಜನರ ದಿಕ್ಕು ತಪ್ಪಿಸುವ ಜಾಹಿರಾತು ನೀಡಿದರೆ ಕಠಿಣ ಕ್ರಮ; ಒಂದು ಕೋಟಿ ರೂ.ದಂಡ, ಪತಾಂಜಲಿ ಸಂಸ್ಥೆಗೆ ಸುಪ್ರೀಂ ಖಡಕ್ ಎಚ್ಚರಿಕೆ

ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ತಮ್ಮ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ತಪ್ಪು ಹಾಗೂ ಸುಳ್ಳು ಪ್ರಚಾರ ಮಾಡಿ,ಜನರ ದಿಕ್ಕು ತಪ್ಪಿಸುವ ಜಾಹಿರಾತು ನೀಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪತಂಜಲಿ ಮುಖ್ಯಸ್ಥ ಯೋಗ ಗುರು ರಾಮ್ ದೇವ್ ಒಡೆತನದ ಪತಾಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿ ಅಹಸಾಸುದ್ದೀನ್ ಅಮಾನುಲ್ಲಾ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಜನರ ದಿಕ್ಕು ತಪ್ಪಿಸಲು ಸುಳ್ಳು ಹಾಗೂ ತಪ್ಪು ಮಾಹಿತಿಯ […]

Continue Reading