ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ, ಬಲವಂತದಿಂದ ಗರ್ಭಪಾತ, ಪ್ರಕರಣ ದಾಖಲು

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಮಕ್ಕಳ ಆಶ್ರಯ ಕೇಂದ್ರದಲ್ಲಿ ಎಚ್ಐವಿ ಸೋಂಕಿತ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿ, ಗರ್ಭಿಣಿ ಬಲವಂತದಿಂದ ಗರ್ಭಪಾತ ಮಾಡಿಸಲಾಗಿದೆ ಎಂದು ಆರೋಪಿಸಿ ಎಚ್‌ಐವಿ ಸೋಂಕಿತ ಬಾಲಕಿ ನೀಡಿದ ದೂರಿನ ಮೇರೆಗೆ ಶುಕ್ರವಾರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಧೋಕಿ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನ ಪ್ರಕಾರ, ಈ ಘಟನೆಗಳು ಜುಲೈ 13, 2023 ರಿಂದ ಈ ವರ್ಷದ ಜುಲೈ 23 ರ ನಡುವೆ ಹಸೇಗಾಂವ್‌ನಲ್ಲಿರುವ ಎಚ್‌ಐವಿ […]

Continue Reading

ಸೈಬರ್ ವಂಚನೆ ಪ್ರಕರಣಗಳಲ್ಲಿ 22,845.73 ಕೋಟಿಗೂ ಅಧಿಕ ಹಣ ಕಳಕೊಂಡ ಭಾರತೀಯರು. ಕೇಂದ್ರ ಗೃಹ ಸಚಿವಾಲಯದ ವರದಿ.

2024 ರಲ್ಲಿ ಭಾರತೀಯರು ಸೈಬರ್ ವಂಚನೆ ಪ್ರಕರಣಗಳಲ್ಲಿ 22,845.73 ಕೋಟಿ ರೂ.ಗಳಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ(MHA) ಮಂಗಳವಾರ ಲೋಕಸಭೆಗೆ ತಿಳಿಸಿದೆ. ಇದು ಹಿಂದಿನ ವರ್ಷದ ಅಂಕಿಅಂಶಕ್ಕೆ ಹೋಲಿಸಿದರೆ ಸುಮಾರು ಶೇ. 206 ರಷ್ಚು ಭಾರಿ ಏರಿಕೆಯಾಗಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ MHA ಅಡಿಯಲ್ಲಿ I4C ನಿರ್ವಹಿಸುವ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (NCRP) ಮತ್ತು ನಾಗರಿಕ […]

Continue Reading

ಕಾನೂನಿನ ಎಲ್ಲೆ ಮೀರಿ ವರ್ತಿಸುತ್ತಿದೆ ಇ.ಡಿ, ಕೋರ್ಟ್ ಹೊರಗಡೆ ರಾಜಕೀಯ ಮಾಡಿ, ತನಿಖಾ ಸಂಸ್ದೆಗಳು ನಿಮ್ಮ ದಾಳವಲ್ಲ: ಸುಪ್ರೀಂ ಕೋರ್ಟ್

ನ್ಯಾಯಾಂಗದ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸಬೇಡಿ ಎಂದು ಸುಪ್ರೀಂ ಕೋರ್ಟ್‌ 4 ವಿವಿಧ ಪ್ರಕರಣಗಳಲ್ಲಿ ಒಂದೇ ದಿನ ಅಭಿಪ್ರಾಯ ವ್ಯಕ್ತಪಡಿಸಿದೆ.ಮುಡಾ ಹಗರಣ, ತೇಜಸ್ವಿ ಸೂರ್ಯ ವಿರುದ್ಧದ ಕ್ರಿಮಿನಲ್‌ ಪ್ರಕರಣ, ಮಮತಾ ಬ್ಯಾನರ್ಜಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಹಾಗೂ ವಕೀಲರಿಗೆ ಇ.ಡಿ.ನೋಟಿಸ್‌ ನೀಡಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನಾಲ್ಕು ಪ್ರಕರಣಗಳನ್ನು ವಿಚಾರಣೆ ಮಾಡಿದ ಮುಖ್ಯ ನ್ಯಾ| ಬಿ.ಆರ್‌. ಗವಾಯಿ ಹಾಗೂ ನ್ಯಾ| ಕೆ. ವಿನೋದ್‌ ಚಂದ್ರನ್‌ ಅವರಿದ್ದ ಪೀಠ, ನ್ಯಾಯಾಲಯದ ಪ್ರಕ್ರಿಯೆಗಳನ್ನು ರಾಜಕೀಯಗೊಳಿಸುವುದರ ವಿರುದ್ಧ […]

Continue Reading

‘ಡಿಜಿಟಲ್ ಅರೆಸ್ಟ್’ ಖದೀಮರಿಗೆ ಜೀವಾವಧಿ ಶಿಕ್ಷೆ

ದೇಶದ ಇತಿಹಾಸದಲ್ಲಿ ಸೈಬರ್ ವಂಚಕರಿಗೆ ಶಿಕ್ಷೆಗೊಳಗಾದ ಮೊದಲ ಪ್ರಕರಣ; 8 ತಿಂಗಳಲ್ಲೇ ತನಿಖೆ ಪೂರ್ಣ.. ಸೈಬರ್ ವಂಚಕರಿಗೆ ಮುಂದೈತೆ ಮಾರಿಹಬ್ಬ.! ಸ್ವಲ್ಪ ಯಾಮಾರಿದರೂ ಮುಗೀತು.. ಹೊಸ ಸೈಬರ್ ವಂಚನೆಗೆ ಬಲಿಪಶು ಆಗುವುದಂತೂ ಖಂಡಿತ. ಇಂದು ದೇಶದಾದ್ಯಂತ ಡಿಜಿಟಲ್ ತಂತ್ರಜ್ಞಾನಕ್ಕೆ ಜನಸಾಮಾನ್ಯರು ಒಗ್ಗಿ ಹೋದ ಪರಿಣಾಮ ವಂಚಕರು ಎಲ್ಲೋ ಕೂತು ಡಿಜಿಟಲ್ ಅರೆಸ್ಟ್ ಮೂಲಕ ಕೋಟಿ ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ದೇಶದ ಪ್ರಧಾನ ಮಂತ್ರಿ ಡಿಜಿಟಲ್ ಅರೆಸ್ಟ್ ಅನ್ನುವುದು ಕಾನೂನು ಬಾಹಿರ ಕೃತ್ಯ ಎಂದು ದೇಶವಾಸಿಗಳಿಗೆ ಅರಿವು ಮೂಡಿಸಿದರೂ […]

Continue Reading

ಬಿಂಕದ ಸಿಂಗಾರಿಯ ವೈಯ್ಯಾರಕ್ಕೆ 75 ವಿಐಪಿಗಳು ಕ್ಲೀನ್ ಬೋಲ್ಡ್.!

ಪ್ರಳಯಾಂತಕಿ ಕಾಮ ಬಾಣಕ್ಕೆ ಪೊಲೀಸ್ ಆಫೀಸರ್ಸ್, ಕಾಲೇಜು ಪ್ರಿನ್ಸಿಪಾಲ್, ವಾಣಿಜ್ಯ ತೆರಿಗೆ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಲಾಕ್..ಮಹಾ ‘ಹನಿ ಮನಿ’ ಕಹಾನಿ.! ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು.. ಅಂದರೆ ಮಂಚಕ್ಕೂ ಕಾಲಿರುತ್ತಾ ಅನ್ನುವ ಚಾಲಾಕಿ ಚಿತ್ರಾಂಗಿಣಿ ಇವಳು. ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಕಾಸಿರುವ ಕುಳಕ್ಕೆ ಕಣ್ಣು ಹಾಕುತ್ತಿದ್ದಳು. ದುಡ್ಡಿನ ದಾಹಕ್ಕೆ ಐಪಿಎಸ್ ಗಳನ್ನೇ ಖೆಡ್ಡಾಕ್ಕೆ ಬೀಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಬಣ್ಣ ಬಣ್ಣದ ಮಾತುಗಳಲ್ಲೇ ಮರಳು ಮಾಡಿ ಮೊಬೈಲಿನಲ್ಲಿ ಮಧು ಮಂಚ ತೋರಿಸಿ ಯಾಮಾರಿಸುತ್ತಿದ್ದ […]

Continue Reading

ನಾಲ್ಕೇ ವರ್ಷದಲ್ಲಿ ಅಚ್ಛೇದಿನ್ ‘ಬುರುಡೆ’ ಬಯಲು.! ತೆರಿಗೆ ಇಲಾಖೆ ಗದಾಪ್ರಹಾರಕ್ಕೆ ಬೆಚ್ಚಿಬಿದ್ದ ವ್ಯಾಪಾರಿಗಳು

ಗೂಗಲ್, ಫೋನ್ ಪೇ ಬೇಡ.. ಕ್ಯಾಶ್ ಕೊಡಿ.‌.ಮತ್ತೆ ಹಳೆಯ ಸಾಂಪ್ರದಾಯಿಕ ನೇರ-ನಗದು ವ್ಯವಹಾರಕ್ಕೆ ಮರಳುತ್ತಿರುವ ವ್ಯಾಪಾರಿಗಳು..ಯುಪಿಐ ಸ್ಕ್ಯಾನರ್ ಕಿತ್ತುಹಾಕುತ್ತಿರುವ ಸಣ್ಣ ಪುಟ್ಟ ವ್ಯಾಪಾರಿಗಳು ಹತ್ತು ರೂಪಾಯಿಯ ಚಹಾ ಕುಡಿದರೂ ಫೋನ್ ಪೇ, ಐದು ರೂಪಾಯಿಯ ಚಾಕಲೇಟ್ ಖರೀದಿಸಿದರೂ ಗೂಗಲ್ ಪೇ, ಡಿಜಿಟಲ್ ತಂತ್ರಜ್ಞಾನಕ್ಕೆ ಅಡಿಕ್ಟ್ ಆಗಿದ್ದ ವ್ಯಾಪಾರಿಗಳು, ಗ್ರಾಹಕರು ಇದೀಗ ತೆರಿಗೆ ಇಲಾಖೆಯ ನೋಟಿಸ್ ಗದಾಪ್ರಹಾರಕ್ಕೆ ಬೆಚ್ಚಿಬಿದ್ದು ಗೂಗಲ್ ಪೇ ಬೇಡ, ಫೋನ್ ಪೇ ಬೇಡ ಕ್ಯಾಶ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಕಳೆದ ನಾಲ್ಕು ವರ್ಷಗಳ […]

Continue Reading

ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 11 ರಾಜ್ಯಗಳಲ್ಲಿ ಕೊಟ್ಯಾಂತರ ರೂ. ವಂಚನೆ. 30ಕ್ಕೂ ಹೆಚ್ಚು ಸೈಬರ್‌ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿದ ಕಾರವಾರ ಪೊಲೀಸರು

ಮಾದಕ ವಸ್ತು ಪಾರ್ಸಲ್‌ ಬಂದಿದ್ದು, ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ವಾಟ್ಸ್‌ಆಯಪ್‌ ವೀಡಿಯೋ ಕಾಲ್‌ ಮಾಡಿ, ನಾವು ಪೊಲೀರು ಎಂದು ಬೆದರಿಸಿ ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಬಿಹಾರ ಮೂಲದ ವಂಚಕ ಹರ್ದೀಪ್‌ ಸಿಂಗ್‌ ಎಂಬಾತನನ್ನು ಕಾರವಾರ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಕಾರವಾರದ ವಿಲ್ಸನ್‌ ಫೆರ್ನಾಂಡಿಸ್‌ಗೆ ವೀಡಿಯೋ ಕರೆ ಮಾಡಿ ಹೆದರಿಸಿ 3.80 ಲಕ್ಷ ರೂ. ವಸೂಲಿ ಮಾಡಿದ್ದ ಈ ಆಸಾಮಿ. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಬಿಹಾರಕ್ಕೆ ಹೋದಾಗ ಪಾಟ್ನಾದ […]

Continue Reading

7 ವರ್ಷ ಮೇಲ್ಪಟ್ಟ ಮಕ್ಕಳ ಬಯೋಮೆಟ್ರಿಕ್ ನೀಡದಿದ್ದರೆ ಆಧಾರ್ ಕಾರ್ಡ್ ರದ್ದು: ಯುಡಿಎಐ ಎಚ್ಚರಿಕೆ

7 ವರ್ಷ ತುಂಬಿದ ಮಕ್ಕಳ ಬಯೋಮೆಟ್ರಿಕ್ ಆಪ್ ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಕಾರ್ಡ್ ಅನ್ನು ನಿಷ್ಕ್ರೀಯಗೊಳಿಸಲಾಗುವುದು ಎಂದು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಡಿಎಐ) ಎಚ್ಚರಿಸಿದೆ. ಜತೆಗೆ, ಅಂತಹವರ ಸಂಖ್ಯೆಗಳಿಗೆ ರಿಮೈಂಡರ್ ಸಂದೇಶಗಳನ್ನೂ ಕಳಿಸತೊಡಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಆಧಾರ್ ಕಾರ್ಡ್ ಮಾಡಿಸಲಾದ ಮಕ್ಕಳಿಗೆ 7 ವರ್ಷ ಆಗುತ್ತಿದ್ದಂತೆ ಬೆರಳಚ್ಚು, ಪೋಟೋ ಸೇರಿದಂತೆ ಇತರೆ ಬಯೋಮೆಟ್ರಿಕ್ ಗಳನ್ನು ಆಪ್ ಡೇಟ್ ಮಾಡಿಸುವುದು ಕಡ್ಡಾಯ. ಮಕ್ಕಳ ಬಯೋಮೆಟ್ರಿಕ್ ಡೇಟಾದ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಇದರ […]

Continue Reading

ಧರ್ಮದ ಹೆಸರಿನಲ್ಲಿ ದೋಖಾ..25 ಡೋಂಗಿ ಬಾಬಾಗಳ ಅರೆಸ್ಟ್, ‘ಆಪರೇಷನ್ ಕಲಾನೇಮಿ’ ಹೆಸರಿನಲ್ಲಿ ಬೃಹತ್ ಕಾರ್ಯಾಚರಣೆ

ಉತ್ತರಾಖಂಡ ‘ಆಪರೇಷನ್ ಕಲಾನೇಮಿ’ ಗೆ ವ್ಯಾಪಕ ಮೆಚ್ಚುಗೆ ಉತ್ತರಾಖಂಡ ರಾಜ್ಯ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿನ ಪ್ರಮುಖ ಧಾರ್ಮಿಕ ನೆಲೆಗಳಿಗೆ ಭೇಟಿ ನೀಡಲು ಅನ್ಯರಾಜ್ಯ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತರಾಖಂಡದಲ್ಲಿ ಅಪರಾಧ ಚಟುವಟಿಕೆಗಳ ಪ್ರಮಾಣ ಭಾರಿ ಕಡಿಮೆ. ಆದರೆ ಇಲ್ಲಿ ಧರ್ಮದ ಹೆಸರಿನಲ್ಲಿ ವಂಚನೆ ಎಗ್ಗಿಲ್ಲದೆ ನಡೆಯುತ್ತಿದೆ. ಸಂತರು ಹಾಗೂ ಋಷಿ ಮುನಿಗಳಂತೆ ನಟಿಸಿ ಜನಸಾಮಾನ್ಯರು, ಮಹಿಳೆಯರು , ಯುವಕರನ್ನು ದಾರಿ ತಪ್ಪಿಸುವ ಕೆಲಸ ಯಥೇಚ್ಛವಾಗಿ ನಡೆಯುತ್ತಿದೆ. ಧಾರ್ಮಿಕ […]

Continue Reading

ಸಣ್ಣ ವ್ಯಾಪಾರಿಗಳಿಗೆ GST: ವಾಣಿಜ್ಯ ತೆರಿಗೆ ಇಲಾಖೆಯ ಸ್ಪಷ್ಟನೆ. ಎಲ್ಲಾ ಸಣ್ಣ ಪುಟ್ಟ ವರ್ತಕರ ಮಾಹಿತಿ ಕಲೆ ಹಾಕಿರುವ ವಾಣಿಜ್ಯ ತೆರಿಗೆ ಇಲಾಖೆ

ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ ದಾಟಿರುವ ವರ್ತಕರಿಗೆ ಜಿ.ಎಸ್‌.ಟಿ ನೋಟಿಸ್ ಯು.ಪಿ.ಐ ಮೂಲಕ ವಹಿವಾಟು ನಡೆಸುವ ಬೇಕರಿ, ಹೋಟೆಲ್, ಕಿರಾಣಿ ಅಂಗಡಿ, ಟೀ ಅಂಗಡಿಯಂತಹ ಸಣ್ಣ ಪುಟ್ಟ ವ್ಯವಹಾರ ಮಾಡುವ ರಾಜ್ಯದ ಎಲ್ಲಾ ಸಣ್ಣ ಪುಟ್ಟ ವರ್ತಕರ ಮಾಹಿತಿ ಕಲೆ ಹಾಕಿರುವ ವಾಣಿಜ್ಯ ತೆರಿಗೆ ಇಲಾಖೆಯು ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ ದಾಟಿರುವ ವರ್ತಕರಿಗೆ ಜಿ.ಎಸ್‌.ಟಿ ನೋಟಿಸ್ ನೀಡಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಾಣಿಜ್ಯ ಇಲಾಖೆ ಇದೀಗ ಸ್ಪಷ್ಟನೆ ನೀಡಿದೆ. ಜುಲೈ […]

Continue Reading