ಮಧ್ಯ ಪ್ರದೇಶ ಚುನಾವಣೆ: ಕಾಂಗ್ರೆಸ್ ಪಕ್ಷ 120-130 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರಕ್ಕೆ

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ ಸಹ ಒಂದು. ಕಾಂಗ್ರೆಸ್ ಮತ್ತು ಬಿಜೆಪಿ ಎದುರಾಳಿಗಳು. ನವೆಂಬರ್ 17ರಂದು ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 3ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ರಾಜ್ಯದಲ್ಲಿ ಹಾಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ವಿವಿಧ ಸಂಸ್ಥೆಗಳು ಚುನಾವಣಾ ಸಮೀಕ್ಷೆಯನ್ನು ನಡೆಸುತ್ತಿವೆ. ನಡೆಸಿದ ಚುನಾವಣಾ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ ಪ್ರತಿಪಕ್ಷವಾದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. […]

Continue Reading

ಪತ್ನಿ ಬ್ಯೂಟಿ ಪಾರ್ಲರ್ ಗೆ ತೆರಳುತ್ತಿದ್ದಾಳೆ ಎಂದು ಹೆಂಡತಿಗೆ ತ್ರಿವಳಿ ತಲಾಕ್.!

ಭಾರತದಲ್ಲಿ ತ್ರಿವಳಿ ತಲಾಖ್ ಕಾನೂನು ಬಾಹಿರ ಎಂಬ ಕಾನೂನು ಜಾರಿಯಲ್ಲಿದ್ದರೂ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟಿದ್ದಾನೆ. ಸೌದಿ ಅರೇಬಿಯಾ ದೇಶದಲ್ಲಿ ಇದ್ದ ಪತಿರಾಯ, ಹೆಂಡತಿಗೆ ವಿಡಿಯೋ ಕಾಲ್ ಮೂಲಕವೇ ಮೂರು ಬಾರಿ ತಲಾಖ್ ಎಂದು ಹೇಳಿ ಸಂಬಂಧ ಕಡಿದುಕೊಂಡಿದ್ದಾನೆ. ಪತ್ನಿ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಳು ಅನ್ನೋ ಕಾರಣಕ್ಕೆ ಪತಿ ಮಹಾಶಯ ಆಕೆಗೆ ತ್ರಿವಳಿ ತಲಾಖ್ ಕೊಟ್ಟಿದ್ಧಾನೆ. ಆಕೆ ಬ್ಯೂಟಿ ಪಾರ್ಲರ್‌ಗೆ ಹೋಗಿ ತನ್ನ ಹುಬ್ಬುಗಳನ್ನು ಸರಿಪಡಿಸಿಕೊಂಡಿದ್ದಳು. ಇದೊಂದೇ ಕಾರಣಕ್ಕೆ ಪತಿರಾಯ ಸಿಟ್ಟಿಗೆದ್ದಿದ್ದಾನೆ. […]

Continue Reading

ಸಂಜೆ 6 ರಿಂದ ರಾತ್ರಿ 9 ರ ನಡುವಿನ ಸಮಯದಲ್ಲಿ ದೇಶಾಧ್ಯಂತ 94,009 ರಸ್ತೆ ಅಪಘಾತಗಳು ಸಂಭವಿಸಿ, 1,68,491 ಮಂದಿ ಮೃತಪಟ್ಟಿದ್ದಾರೆ

2022ರ ವರ್ಷದ ಸಂಜೆ 6ರಿಂದ ರಾತ್ರಿ 9 ಗಂಟೆಯ ನಡುವಿನ ಸಮಯದಲ್ಲಿ ದೇಶಾಧ್ಯಂತ 94,009 ರಸ್ತೆ ಅಪಘಾತಗಳು ಸಂಭವಿಸಿದೆ. ಇದು ಒಟ್ಟು ಅಪಘಾತ ಪ್ರಕರಣದ ಶೇ 20ರಷ್ಟು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವರದಿ ಹೇಳಿದೆ. ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಗೆ ಅತೀ ಕಡಿಮೆ ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ 2022ರಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 4,61,312 ರಸ್ತೆ ಅಪಘಾತಗಳು ಸಂಭವಿಸಿವೆ. […]

Continue Reading

ಪರ-ಪುರುಷನ ಜತೆ ಮಲಗು ಎಂದು ಕೋಣೆಗೆ ಕಳಿಸಿದ್ದಳು

ಸಿನಿಮಾದ ಮೂಲಕ ಸಿನಿಮಾಕ್ಕೆ ರಂಗ ಪ್ರವೇಶ ಮಾಡಿದ ಶಕೀಲಾ ತನ್ನ ಬಾಲ್ಯದ ಕಹಿ ನೆನಪುಗಳನ್ನು ಹೇಳಿಕೊಂಡಿದ್ದಾರೆ. ಹೆತ್ತ ತಾಯಿ ಎಲ್ಲರಿಗೂ ದೇವರು.ಆದರೆ ನನಗೆ ಮಾತ್ರ ಅಲ್ಲ.ಹಣಕ್ಕಾಗಿ ಸಿಕ್ಕ ಸಿಕ್ಕ ಗಂಡಸರ ಜೊತೆ ಮಲಗಿಸಿದ್ದಾಳೆ ಎಂದು ತನ್ನ ಮನದಾಳದ ನೋವನ್ನು ಹೇಳಿಕೊಂಡಿದ್ದಾರೆ. ತಾಯಿಯ ಕಣ್ಣಿಗೆ ತನ್ನ ಎಲ್ಲಾ ಮಕ್ಕಳೂ ಒಂದೇ. ಆದರೆ ಚಿಕ್ಕಂದಿನಿಂದಲೇ ನನ್ನನ್ನು ಬೇರೆ ರೀತಿಯಲ್ಲಿಯೇ ಟ್ರೀಟ್‌ ಮಾಡುತ್ತಿದ್ದಳು. ಅದು ನನ್ನ ಗಮನಕ್ಕೂ ಬಂದಿತ್ತು. ಕೈತುಂಬ ಹಣ ಗಳಿಸುತ್ತಿರುವಾಗಲೂ ಅದು ಹಾಗೆಯೇ ಮುಂದುವರಿದಿತ್ತು. ನಾನು ಆಗಿನ್ನೂ ಸಿನಿಮಾಕ್ಕೆ […]

Continue Reading

ಕಾಂಗ್ರೆಸ್ ಬಣ ರಾಜಕೀಯ: ಹೈಕಮಾಂಡ್ ಗರಂ; ಸಿಎಂ ಮತ್ತು ಡಿಸಿಎಂ ಗೆ ಕ್ಲಾಸ್, ಶಿಸ್ತು ಮೀರಿ ಮಾತನಾಡಿದರೆ ಯಾರೇ ಆದರೂ ಕಠಿಣ ಕ್ರಮ

ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ನೆರೆಯ ತೆಲಂಗಾಣದ ಚುನಾವಣಾ ಕೆಲಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ್ದರು. ಬುಧವಾರದಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಜತೆಗೆ ಸಭೆ ನಡೆಸಿದರು. ಹೈಕಮಾಂಡ್ ಅಂಗಳದ ಆಂತರಿಕ ಮಾತುಕತೆಗಳು ಸಾರ್ವಜನಿಕ ಚರ್ಚೆಗೆ ವಸ್ತುವಾಗಿದೆ. ಬೆಂಬಲಿಗ ಸಚಿವ, ಶಾಸಕರನ್ನು ಮಾತನಾಡಲು ಬಿಟ್ಟು ಮುಗುಮ್ಮಾಗಿ ಉಳಿದಿದ್ದೀರಿ ಎಂದು ಸಿಎಂ ಮತ್ತು ಡಿಸಿಎಂ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಣ ತಾಕಲಾಟ ಹೆಚ್ಚಿ, ಪಕ್ಷ ಮತ್ತು ಸರಕಾರದ ವರ್ಚಸ್ಸು ಹಾಳಾಗುತ್ತಿದೆ. ಮಹಾರಾಷ್ಟ್ರ ಮಾದರಿಯಲ್ಲಿ […]

Continue Reading

ಎಲ್ ಪಿ ಜಿ ಬಳಕೆದಾರರಿಗೆ ಶಾಕ್ ನೀಡಿದ ಕೇಂದ್ರ ಸರಕಾರ; ಸಿಲಿಂಡರ್ ಬೆಲೆ 101 ರೂಪಾಯಿ ಏರಿಕೆ

ನರೇಂದ್ರ ಮೋದಿ ಸರ್ಕಾರವು ಇಂದು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 101.50 ರೂಪಾಯಿಗಳಷ್ಟು ಹೆಚ್ಚಿಸಿದೆ. ಅಲ್ಲದೆ, ಇದು ತಕ್ಷಣವೇ ಜಾರಿಗೆ ಬರುವಂತೆ ಆದೇಶ ನೀಡಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಈಗ ಮುಂಬೈನಲ್ಲಿ 1,785.50 ರೂ.ಗಳಾಗಿರುತ್ತದೆ, ಇದು ಮೆಟ್ರೋಪಾಲಿಟನ್ ನಗರಗಳಲ್ಲಿ ಅತ್ಯಂತ ಅಗ್ಗವಾಗಿದೆ. ಇದು ಚೆನ್ನೈನಲ್ಲಿ ಅತ್ಯಂತ ದುಬಾರಿಯಾಗಿದ್ದು ಇದರ ಬೆಲೆ 1,999.50 ರೂ. ದೆಹಲಿಯಲ್ಲಿ 1,833 ರೂ.ಗೆ ಮಾರಾಟವಾಗಲಿದೆ ಮತ್ತು ಕೋಲ್ಕತ್ತಾದಲ್ಲಿ ಸಿಲಿಂಡರ್‌ಗಳು 1,943 ರೂ. ಲಭ್ಯವಾಗಲಿದೆ. ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು ನವದೆಹಲಿಯಲ್ಲಿ 903 […]

Continue Reading

ಕೇರಳ ಬಾಂಬ್ ಸ್ಪೋಟ ಪ್ರಕರಣ: ಧರ್ಮದ್ವೇಷಿ ಪೋಸ್ಟ್ ಮಾಡಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲು

ಕೇರಳ ಕಲುಮಶ್ಯೇರಿ ಚರ್ಚ್ ಮೇಲೆ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಗಳ ಮಧ್ಯೆ ವಿದ್ವೇಷ ಉಂಟು ಮಾಡುವ ಪೋಸ್ಟ್ ಶೇರ್ ಮಾಡಿದ್ದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ದ್ವೇಷವನ್ನು ಹರಡಿದ ಆರೋಪದಡಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಆರೋಪ ಹೊರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿಕೆಯಲ್ಲಿ […]

Continue Reading

ಯುದ್ದದಲ್ಲಿ ಮಾನವೀಯತೆಯೇ ಕಟಕಟೆಯಲ್ಲಿದೆ..! ಸೋನಿಯಾ ಗಾಂಧಿ

‘ದ ಹಿಂದೂ ‘ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸೋನಿಯಾ ಗಾಂಧಿಯವರ ಆಂಗ್ಲ ಬಾಷೆಯ ಲೇಖನವನ್ನು ಪತ್ರಕರ್ತ ನವೀನ್ ಸೂರಿಂಜೆ ಕನ್ನಡಕ್ಕೆ ಅನುವಾದಿಸಿದ್ದಾರೆ. October 7, 2023 ರಂದು, ಯೋಮ್ ಕಿಪ್ಪೂರ್ ಯುದ್ಧದ 50 ನೇ ವರ್ಷಗಳನ್ನು ನೆನಪಿಸುವಂತೆ, ಹಮಾಸ್ ಇಸ್ರೇಲ್ ಮೇಲೆ ಕ್ರೂರ ದಾಳಿಯನ್ನು ಪ್ರಾರಂಭಿಸಿತು. ಸಾವಿರಕ್ಕೂ ಹೆಚ್ಚು ಜನರು ಹತರಾಗಿದ್ದು ಅದರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಮಾಯಕ ನಾಗರಿಕರಿದ್ದರು. 200 ಕ್ಕೂ ಹೆಚ್ಚು ಜನರನ್ನು ಅಪಹರಿಸಲಾಗಿತ್ತು. ಇಂತಹ ಅಘಾತಕಾರಿ ದಾಳಿಯು ಇಸ್ರೇಲ್‌ಗೆ ವಿನಾಶಕಾರಿಯಾಗಿದೆ. ‘ಸಭ್ಯ ಜಗತ್ತಿನಲ್ಲಿ ಹಿಂಸೆಗೆ ಅವಕಾಶವಿಲ್ಲ’ […]

Continue Reading

ಕೊರೋನ ವೈರಸ್ ನಿಂದಾಗಿ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ಕರೋನವೈರಸ್ ನಿಂದಾಗಿ ದೇಶದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನವನ್ನು ಉಲ್ಲೇಖಿಸಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೋವಿಡ್ -19 ವೈರಸ್ ನಿಂದ ತೀವ್ರವಾಗಿ ಸೋಂಕಿಗೆ ಒಳಗಾದ ಜನರು ಹೃದಯಾಘಾತವನ್ನು ತಪ್ಪಿಸಲು ಒಂದು ಅಥವಾ ಎರಡು ವರ್ಷಗಳ ಕಾಲ ಅತಿಯಾಗಿ ಕೆಲಸ ಮಾಡಬಾರದು ಎಂದು ಹೇಳಿದರು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ‘ಗರ್ಬಾ’ ಆಡುವಾಗ ನಡೆದ ಘಟನೆ ಸೇರಿದಂತೆ ಹೃದಯ ಸಂಬಂಧಿತ […]

Continue Reading

ಗಡಿದಾಟಿದ ಪ್ರೇಮ ಪ್ರಕರಣ.! ಪ್ರಿಯಕರನಿಗಾಗಿ ಗಡಿ ದಾಟಿ ಬಂದ ಪ್ರೇಯಸಿ

ದೇಶದಲ್ಲಿ ಒಂದಾದ ಮೇಲೊಂದು ಕ್ರಾಸ್‌ ಬಾರ್ಡರ್‌ ಪ್ರೇಮ ಪ್ರಕರಣಗಳು ನಡೆಯುತ್ತಲೇ ಇವೆ. ಸೀಮ ಹೈದರ್‌ ಗಡಿ ದಾಟಿ ಭಾರತಕ್ಕೆ ಬಂದಂತೆ ಇದೀಗ ಬಾಂಗ್ಲಾದೇಶದಿಂದ ಯುವತಿಯೊಬ್ಬರು ಗಡಿದಾಟಿ ಬಂದಿದ್ದಾರೆ. ಫಾತೆಮ ನುಸ್ರತ್ ಅನ್ನೊ 24 ವರ್ಷದ ಬಾಂಗ್ಲಾ ಯುವತಿ ತ್ರಿಪುರದ ಧರ್ಮನಗರ್‌ ಡಿವಿಶನ್‌ನ ಪುಲ್ಭರಿ ಮೂಲದ 34 ವರ್ಷದ ನೂರ್‌ ಜಲಾಲ್‌ ಎಂಬಾತನನ್ನ ಹುಡಿಕಿಕೊಂಡು ಬಂದಿದ್ದಾರೆ. ಸ್ಚಾರಸ್ಯ ಏನಪ್ಪ ಅಂದ್ರೆ ಇವರಿಬ್ಬರೂ ಈಗಾಗಲೇ ವಿವಾಹಿತರು. ಆಯುರ್ವೇದ ಪಂಡಿತನಾಗಿದ್ದ ಜಲಾಲ್‌ ಆಗಾಗ್ಗೆ ಬಾಂಗ್ಲಾದ ಮೌಲ್ವಿ ಬಜಾರ್‌ಗೆ ಭೇಟಿ ಕೊಡ್ತಿದ್ದ. ಅಲ್ಲೇ […]

Continue Reading