ಬಜಪೆ ಪೊಲೀಸರ ಕಾರ್ಯಾಚರಣೆ: ಬಿಹಾರ ಮೂಲದ ಗಾಂಜಾ ವ್ಯಾಪಾರಿಗಳ ಬಂಧನ, ಒಂದು ಕೆ.ಜಿ ಗಾಂಜಾ ವಶ

ಕರಾವಳಿ

ಬಿಹಾರ ರಾಜ್ಯದಿಂದ ರೈಲ್ವೆ ಮುಖಾಂತರ ಮಂಗಳೂರಿಗೆ ಗಾಂಜಾ ತಂದು, ಕೂಲಿ ಕಾರ್ಮಿಕರಿಗೆ ಮಾರಾಟ ಮಾಡಲು ಯತ್ನಿಸಿದ ಅಂತರಾಜ್ಯ ಗಾಂಜಾ ವ್ಯಾಪಾರಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ರಸ್ತೆಯ ಬದಿಯಲ್ಲಿ ಸುಮಾರು 1 ಕೆ.ಜಿ ತೂಕದ ಮಾದಕವಸ್ತು ಗಾಂಜಾವನ್ನು ವಶದಲ್ಲಿರಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಲೆತ್ನಿಸಿದ ಬಿಹಾರ ಮೂಲದ ಸುನಿಲ್ ಕುಮಾರ್, ಹಾಲಿ ವಾಸ: ಕೃಷ್ಣಾಪುರ ಕಾಟಿಪಳ್ಳ ಸುರತ್ಕಲ್‌ ಮತ್ತು ಬ್ರಿಜೇಶ್ ಶ್ರಿನಿವಾಸ್ತವ, ಹಾಲಿವಾಸ: ಕೃಷ್ಣಾಪುರ ಕಾಟಿಪಳ್ಳ ಸುರತ್ಕಲ್‌ ಎಂಬವರನ್ನು ಖಚಿತ ಮಾಹಿತಿ ಮೇರೆಗೆ ಬಜಪೆ ಪೊಲೀಸರು ದಾಳಿ ನಡೆಸಿ ಆರೋಪಿತರಿಂದ ಸುಮಾರು 1 ಕೆ.ಜಿ ತೂಕದ ಮಾದಕ ವಸ್ತು ಗಾಂಜಾವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಆರೋಪಿತರನ್ನು ವಿಚಾರಣೆ ನಡೆಸಿದಾಗ ಮಾದಕ ವಸ್ತು ಗಾಂಜಾವನ್ನು ಬಿಹಾರ ರಾಜ್ಯದಲ್ಲಿ ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಜಪೆ ಪೊಲೀಸರು ಅಪರಾಧ ಸಂಖ್ಯೆ: 08-2026 ಕಲಂ (c), 20(b)(ii)(a) NDPS Act ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.