ನರೇಗಾ ಯೋಜನೆಯಲ್ಲಿ ಅವ್ಯವಹಾರ

ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಕೊಟ್ಟಿಗೆ ನಿರ್ಮಾಣ ಮಾಡದೆ ಹಣ ಗುಳುಂ, ಪಿಡಿಒ ಸಾಥ್ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಶೀಗವಳು ಗ್ರಾಮ ಪಂಚಾಯತ್ ನಲ್ಲಿ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಅವ್ಯವಹಾರದಲ್ಲಿ ಖುದ್ದು ಗ್ರಾಮ ಪಂಚಾಯತ್ ಸಿಬ್ಬಂದಿಯೇ ಶಾಮೀಲಾಗಿದ್ದು, ಪಿಡಿಒ ಸಾಥ್ ನೀಡಿದ್ದಾರೆ ಅನ್ನುವ ಮಾಹಿತಿ ಬಹಿರಂಗಗೊಂಡಿದೆ. ಶೀಗವಳು ಗ್ರಾಮ ಪಂಚಾಯತ್ ನಲ್ಲಿ ಅಟೆಂಡರ್ ಆಗಿರುವ, ಪ್ರಸ್ತುತ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ […]

Continue Reading

ಸತ್ತರೂ.. ಜೀವಂತವೆಂಬ ನಾಟಕ.! ಮೃತದೇಹದ ಹೆಸರಿನಲ್ಲಿ ಸುಲಿಗೆಗೆ ಇಳಿದಿವೆ ಕೆಲವೊಂದು ಖಾಸಗಿ ಆಸ್ಪತ್ರೆಗಳು.!

ಹೊರಗೆ ಸಜ್ಜನರ ಮುಖವಾಡ.. ಒಳಗಿದೆ ಕರಾಳತೆಯ ಛಾಯೆ.! ವೇದಿಕೆಯಲ್ಲಿ ಹೀರೋಗಳು ಎಜ್ಯುಕೇಶನಲ್ ಹಬ್ ಎಂದು ಕರೆಯಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಮೆಡಿಕಲ್ ಮಾಫಿಯಾ ದಂಧೆ ಅವ್ಯಾಹತವಾಗಿ ಬೆಳೆದಿದೆ. ಮೆಡಿಕಲ್ ಮಾಫಿಯಾ ದಂಧೆಗೆ ಹಲವಾರು ಬಡ ವರ್ಗದ ರೋಗಿಗಳು, ಬಡ ವಿದ್ಯಾರ್ಥಿಗಳ ಬದುಕು ಡೋಲಾಯಮಾನವಾಗಿದೆ. ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಖಾಸಗಿ ಆಸ್ಪತ್ರೆಗಳು ದುಡ್ಡಿಗಾಗಿ ಸತ್ತವರನ್ನೇ […]

Continue Reading

ಸಚಿವ ಭೈರತಿ ಸಹಚರರ ದಾಂಧಲೆ; ಕೇರಳ ಮೂಲದ ವ್ಯಕ್ತಿಯ ಕೊಲೆಗೆ ಸಂಚು ಆರೋಪ, ಗೃಹ ಇಲಾಖೆಗೆ ದೂರು

ಸಚಿವ ಭೈರತಿ ಸುರೇಶ್ ಗ್ಯಾಂಗ್’ನಿಂದ ಕಂಡವರ ಜಾಮೀನು ಕಬಳಿಸಲು ನೆರವು ದಂಪತಿಯನ್ನು ದೂರ ಮಾಡಿರುವ ದುರುಳರಿಗೆ ಸಚಿವರ ಆಪ್ತರ ಸಾಥ್, ಸಚಿವ ಭೈರತಿ ಸುರೇಶ್ ಗ್ಯಾಂಗ್’ನಿಂದ ಕಂಡವರ ಜಾಮೀನು ಕಬಳಿಸಲು ನೆರವು, ಬೆಂಗಳೂರಿನ ಹೆಣ್ಣೂರು ಬಳಿ ದಾಂಧಲೆ, ಏಕಾಏಕಿ ಅತಿಕ್ರಮಣ ಪ್ರವೇಶ, ನಿಷೇಧಿತ ನಾಯಿ (Rottweiler Dog) ತಂದು ದಾಳಿಗೆ ಯತ್ನ, ಕೊಲೆಗೂ ಪಿತೂರಿ, ಡಿಜಿಪಿ, ಬೆಂಗಳೂರು ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಕೆ. ಪೊಲೀಸರ ಸಮ್ಮುಖದಲ್ಲೇ ರೌಡಿಗಳ ಪುಂಡಾಟ ನಡೆದಿರುವ ಆರೋಪ, ಸಚಿವ ಬೈರತಿ ನಿಕಟವರ್ತಿಗಳ ಹಾಗೂ […]

Continue Reading

ಇಸ್ರೇಲ್ ನಡೆಸುತ್ತಿರುವುದು ಯುದ್ಧ ಅಲ್ಲ, ತಾಯ್ನೆಲಕ್ಕಾಗಿ ಹಂಬಲಿಸುತ್ತಿರುವ ಅಸಹಾಯಕ ಪ್ಯಾಲೆಸ್ತೀನಿಯರ ನರಮೇಧ: ಸುಕುಮಾರ್ ತೊಕ್ಕೊಟ್ಟು.

ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಪೊಲೀಸ್ ನೋಟೀಸು, ಧ್ವನಿವರ್ಧಕ ತ್ಯಜಿಸಿ ಪ್ರತಿಭಟನಾ ಸಭೆ ನಡೆಸಿದ ಎಡಪಕ್ಷಗಳು ಪ್ಯಾಲೆಸ್ತೀನ್ ವಿರುದ್ದ ಇಸ್ರೇಲ್ ನಡೆಸುತ್ತಿರುವುದು ಯುದ್ಧ ಅಲ್ಲ, ತಾಯ್ನೆಲದ ವಿಮೋಚನೆಗೆ ಹಂಬಲಿಸುತ್ತಿರುವ ಅಸಹಾಯಕ ಪ್ಯಾಲೆಸ್ತೀಯರ ನರಮೇಧ. ಯುದ್ಧ ನಿಯಮಗಳು, ವಿಶ್ವಸಂಸ್ಥೆಯ ಠರಾವುಗಳನ್ನು ಉಲ್ಲಂಘಿಸಿ ಇಸ್ರೇಲ್ ಗಾಝಾ ಮೇಲೆ ಧಾಳಿ ನಡೆಸುತ್ತಿದೆ. ಮಧ್ಯಪ್ರಾಚ್ಯ ಪೆಟ್ರೋಲಿಯಂ ಉತ್ಪನ್ನದ ಮೇಲಿನ ಹಿಡಿತಕ್ಕಾಗಿ ಅಮೆರಿಕಾ ಇಸ್ರೇಲ್ ಪರವಾಗಿ ನಿಂತು ಎಲ್ಲಾ ರೀತಿಯ ಬೆಂಬಲವನ್ನು ಒದಗಿಸುತ್ತಿದೆ‌. ಇದು ಖಂಡನೀಯ, ಇದರಿಂದಾಗಿ ಇಡೀ ಜಗತ್ತಿನ ಮೇಲೆ ಯುದ್ಧದ ಕಾರ್ಮೋಡ ಹರಡಿದೆ. […]

Continue Reading

ದೂರವಾಣಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು: ಹಿಮಾಚಲ ಪ್ರದೇಶ ಹೈಕೋರ್ಟ್

ಖಾಸಗಿ ಮಾತುಕತೆಯನ್ನು ಸಾಕ್ಷಿಯಾಗಿ ಪರಿಗಣಿಸುವುದು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ವೈವಾಹಿಕ ಪ್ರಕರಣವೊಂದರಲ್ಲಿ, ದೂರವಾಣಿಯಲ್ಲಿ ನಡೆದ ಖಾಸಗಿ ಸಂಭಾಷಣೆಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ. ಖಾಸಗಿ ಮಾತುಕತೆಯನ್ನು ಸಾಕ್ಷಿಯಾಗಿ ಪರಿಗಣಿಸುವುದು ಖಾಸಗಿತನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ದೂರವಾಣಿಯಲ್ಲಿ ನಡೆದ ಖಾಸಗಿ ಮಾತುಕತೆಯು ಖಾಸಗಿತನ ಹಕ್ಕಿನಡಿ ಬರುತ್ತದೆ ಎಂದು ನ್ಯಾಯಮೂರ್ತಿ ಬಿಪಿನ್ ಚಂದರ್ ನೇಗಿ ತೀರ್ಪು ನೀಡುವಾಗ ಹೇಳಿದ್ದಾರೆ. ವ್ಯಕ್ತಿಯೊಬ್ಬನ ಖಾಸಗಿ ಜೀವನದಲ್ಲಿ ದೂರವಾಣಿ ಸಂಭಾಷಣೆ […]

Continue Reading

ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಬಂಧನಕ್ಕೀಡಾಗಿದ್ದ ಇರಾನ್ ಮಹಿಳೆ ನಿಗೂಢವಾಗಿ ನಾಪತ್ತೆ.!

ಅನೈತಿಕ ಪೊಲೀಸ್ ಗಿರಿ ವಿರುದ್ಧ ತನ್ನ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿ ಬಂಧನಕ್ಕೀಡಾಗಿದ್ದ ಇರಾನ್ ಮಹಿಳೆ ಇದೀಗ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಟೆಹಾರನ್ ನ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಸರಿಯಾಗಿ ಧರಿಸಿಲ್ಲ ಎಂದು ಸ್ಥಳದಲ್ಲಿದ್ದ ಅನೈತಿಕ ಪೊಲೀಸರು ಆಕೆಯ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಆಕೆಯ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದು, ಇದರಿಂದ ಆಕ್ರೋಶಗೊಂಡ ಆಕೆ ಘೋಷಣೆಗಳನ್ನು ಕೂಗುತ್ತಾ ತಾನು ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ ಪ್ರತಿಭಟನೆ […]

Continue Reading

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಪ್ರಕರಣ: ಮಾನಸಿಕ ರೋಗಿ ಪಾತಿಮಾ ಖಾನ್ ಬಂಧನ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಬೆದರಿಕೆ ಹಾಕಿದ್ದು ಹತ್ತು ದಿನಗಳೊಳಗೆ ಸಿಎಂ ಸ್ಥಾನದಿಂದ ಕೆಳಗಿಳಿಯದಿದ್ದರೆ ಬಾಬಾ ಸಿದ್ಧಿಕಿ ಕೊಲೆ ಮಾಡಿದ ರೀತಿಯಲ್ಲಿ ನಿಮ್ಮನ್ನೂ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಸಂದೇಶಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವತಿಯನ್ನು ಬಂಧಿಸಲಾಗಿದೆ.ಬಂಧಿತ ಮಹಿಳೆಯನ್ನು ಫಾತಿಮಾ ಖಾನ್‌ ಎಂದು ಗುರುತಿಸಲಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಮಾಡಿರುವ ಫಾತಿಮಾ ಖಾನ್ ತನ್ನ ಕುಟುಂಬ ಸದಸ್ಯರೊಂದಿಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ಪ್ರದೇಶದಲ್ಲಿ ನೆಲೆಸಿದ್ದಾಳೆ ಎಂಬುದು ತಿಳಿದಿದೆ. ತನಿಖೆಯಲ್ಲಿ ಆಕೆ ಮಾನಸಿಕ ರೋಗದಿಂದ […]

Continue Reading

ಬಜಪೆ ಪೊಲೀಸರ ಕಾರ್ಯಚರಣೆ ಮಾದಕ ವಸ್ತು MDMA(ಕ್ರೀಸ್ಟಲ್) ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ಬಜಪೆ ಪೊಲೀಸರು ಕಾರ್ಯಾಚರಣೆ ನಡೆಸಿ MDMA ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ . ದಿನಾಂಕ 02-11-2024 ರಂದು ಸಂಜೆ ಬಜಪೆ ಪೊಲಿಸ್ ಠಾಣೆಯ PSI ರೇವಣಸಿದ್ದಪ್ಪ ರವರು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ತೆಂಕಎಕ್ಕಾರು ಗ್ರಾಮದ, ಬಜಪೆಯಿಂದ ಕಟೀಲು ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಪೆರ್ಮುದೆ ಪಂಚಾಯತ್ ಕ್ರಾಸ್ ಬಳಿ ಮಾದಕವಸ್ತು MDMA(ಕ್ರೀಸ್ಟಲ್) ಮಾರಾಟ ಮಾಡುತ್ತಿದ್ದ ಮಂಗಳೂರು ತಾಲೂಕು ತೋಕೂರು ಜೋಕಟ್ಟೆ ನಿವಾಸಿ ಕೆ.ಹಚ್ ಅಬ್ದುಲ್ ಖಾದರ್ ರವರ ಮಗ ಉಮ್ಮರ್ ಫಾರೂಕ್ ಮತ್ತು ಮಂಗಳೂರು ತಾಲೂಕು […]

Continue Reading

ಚಿತ್ರ ನಿರ್ದೇಶಕ ‘ಮಠ’ ಗುರುಪ್ರಸಾದ್ ಆತ್ಮಹತ್ಯೆ..

ಬೆಂಗಳೂರಿನ ಮಾದನಾಯಕನ ಹಳ್ಳಿಯ ಅಪಾರ್ಟ್ಮೆಂಟಲ್ಲಿ ನೇಣಿಗೆ ಶರಣು. ಚಿತ್ರ ನಿರ್ದೇಶಕ, ಮಠ ಸಿನಿಮಾ ಖ್ಯಾತಿಯ ಗುರುಪ್ರಸಾದ್ ಫ್ಯಾನಿಗೆ ನೇಣು ಬಿಗಿದು ಮಾದನಾಯಕನ ಹಳ್ಳಿಯ ಅಪಾರ್ಟ್ ಮೆಂಟಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬಿಗಿದು ಕೊಂಡು ತೀರಾ ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ.ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ, ರಂಗನಾಯಕ ಸಿನಿಮಾ ಸೇರಿದಂತೆ ಹಲವಾರು ಚಲನಚಿತ್ರಗಳಿಗೆ ಗುರುಪ್ರಸಾದ್ ನಿರ್ದೇಶನ ಮಾಡಿ ಪ್ರಖ್ಯಾತಿಗಳಿಸಿದ್ದರು. ಹಲವುರಿಯಾಲಿಟಿ ಶೋಗಳಲ್ಲೂ […]

Continue Reading

ಗೋಮಾತೆಯ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡಿದ ಬಂಟ್ವಾಳದ ನ್ಯಾಯವಾದಿ.

ಹೌದು..ಇದೊಂದು ರಾಜ್ಯದಲ್ಲಿ ಮಾತ್ರವಲ್ಲ. ದೇಶದಲ್ಲೇ ಪ್ರಪ್ರಥಮ ಅಪರೂಪದ ಸೇವಾ ಕಾರ್ಯ ಎಂದರೂ ಅತಿಶಯೋಕ್ತಿಯಲ್ಲ. ಹಿರಿಯರ ಹೆಸರಲ್ಲೋ, ಹೋರಾಟಗಾರರ ಹೆಸರಲ್ಲೋ, ಅಥವಾ ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಹೆಸರಲ್ಲೋ ಸವಿನೆನಪಿಗಾಗಿ ತಂಗುದಾಣ ನಿರ್ಮಿಸಿ ಸಮಾಜಕ್ಕೆ ಕೊಡುಗೆ ನೀಡುವುದು ಪ್ರತಿನಿತ್ಯ ನೋಡುತ್ತಿದ್ದೇವೆ. ಆದರೆ ಬಂಟ್ವಾಳದಲ್ಲಿ ನ್ಯಾಯವಾದಿಯಾಗಿರುವ ಶ್ರೀಮತಿ ಚೇತನಾ ರಾಮಚಂದ್ರ ಶೆಟ್ಟಿಯವರು ತಮ್ಮ ಪ್ರೀತಿಯ ಗೋಮಾತೆ ಗೌರಿಯ ಸ್ಮರಣಾರ್ಥ ಅದ್ಧೂರಿಯಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಸಾಮಾಜಕ್ಕೆ ಕೊಡುಗೆ ನೀಡುವ ಮೂಲಕ ಅಗಲಿದ ಗೋಮಾತೆಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಮೂಡುನಡುಗೋಡು […]

Continue Reading