ಬಿಜೆಪಿ ಜೆಡಿಎಸ್‌ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ, ಪಾದಯಾತ್ರೆಯಲ್ಲಿ ಬಿರುಕು.!

ಬಿಜೆಪಿ – ಜೆಡಿಎಸ್ ನಾಯಕರ ವಿರುದ್ಧ ಯೋಗೇಶ್ವರ್ ಬಂಡಾಯದ ಸಮರ; ಸಮಾವೇಶಕ್ಕೆ ಸಿದ್ದತೆ, ನಮ್ಮ ಶಾಸಕ – ನಮ್ಮ ಆಯ್ಕೆ. ಕರಪತ್ರ ಹಂಚಿಕೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಿದ ಪರಿಣಾಮ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದಾರೆ. ಆದರೆ ಇದೀಗ ಬಿಜೆಪಿ ಜೆಡಿಎಸ್‌ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಒಂದೊಂದೆೇ ಸಂಗತಿಗಳು ಹೊರಬೀಳುತ್ತಿದೆ. ಕಳೆದ ವಾರವಷ್ಟೇ ಎಚ್‌ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಘಟಿಸಿರುವ ಪಾದಯಾತ್ರೆ […]

Continue Reading

ರಾತ್ರೋರಾತ್ರಿ ಕುಸಿದ ಬ್ರಿಡ್ಜ್, ಲಾರಿ ನದಿಪಾಲು; ಚಾಲಕ ಪವಾಡಸದೃಶ ಪಾರು

ಕರ್ನಾಟಕದಲ್ಲಿ ತಪ್ಪಿತು ಮತ್ತೊಂದು ದುರಂತ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕುಸಿದಿದೆ. 60 ವರ್ಷ ಹಳೆಯದಾದ ಸೇತುವೆ ಇದಾಗಿತ್ತು. ಭಾರೀ ಮಳೆಗೆ ರಾತ್ರಿ 1 ಗಂಟೆ ಸುಮಾರಿಗೆ ಒಮ್ಮಿಂದ ಒಮ್ಮೆಲೆ ಕುಸಿದು ಬಿದ್ದ ಘಟನೆ ನಡೆದಿದೆ. ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರ ನಡುವಿನ ಸಂಪರ್ಕ ಸೇತುವೆ ಇದಾಗಿತ್ತು. ಸೇತುವೆಯ ಒಂದು ಭಾಗ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಲಾರಿ ಚಾಲನೆ […]

Continue Reading

ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ: ಹಿಂದೂ ಸಂಘಟನೆಯ ಕಾರ್ಯಕರ್ತರು ದೋಷಮುಕ್ತ

ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿದ್ದ ಮಂಗಳೂರು ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿಗಳನ್ನು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ದೋಷಮುಕ್ತ ಗೊಳಿಸಿ ಅಂತಿಮ ತೀರ್ಪು ಪ್ರಕಟಿಸಿದೆ. 2012 ರ ಜುಲೈ 28 ರಂದು ಪಡೀಲ್ ಹೋಂ ಸ್ಟೇ ಯಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ ಯುವತಿಯರ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ನಡೆಸಿದ್ದರು. ಈ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಮಂಗಳೂರಿನಲ್ಲಿ ತಾಲಿಬಾನಿ ಕೃತ್ಯ ರಾಷ್ಟ್ರೀಯ ಮಾಧ್ಯಮಗಳು ಬಣ್ಣಿಸಿದ್ದವು. ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ ಯುವತಿಯರು […]

Continue Reading

ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರಿನಲ್ಲಿ ಮನೆ ಬಾಗಿಲು ಮುರಿದು ಕಳ್ಳತನ; ಸಾಕು ನಾಯಿಯು ಕಾಣೆ.

ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಪತ್ನಿ, ಮಕ್ಕಳು ತವರಿಗೆ ಹೋಗಿದ್ದಾಗ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿಗಳನ್ನು ಕಳ್ಳತನ ಮಾಡಿರುವ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಬಳಿ ನಡೆದಿದೆ. ಮನೆ ಮಾಲಿಕ ಜಗನ್ನಾಥ್ ಅವರು ವಿದೇಶದಲ್ಲಿದ್ದು ಪತ್ನಿ ವಿಜಯ ಮತ್ತು ಮಕ್ಕಳಿಬ್ಬರು ಈಶ್ವರಮಂಗಲ ಸಮೀಪದ ತವರು ಮನೆಗೆ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ 34ಗ್ರಾಂ ಚಿನ್ನಾಭರಣ, ವಿದೇಶದ ಕರೆನ್ಸಿ ನೋಟುಗಳನ್ನು ಕಳ್ಳತನ ನಡೆಸಿದ್ದಾರೆ. ಮನೆಯಲ್ಲಿ ಎರಡು ನಾಯಿಗಳಿದ್ದು […]

Continue Reading

ಒಂಟಿ ಮಹಿಳೆಗೆ ಮೆಣಸಿನ ಪುಡಿ ಎರಚಿ, ಲಕ್ಷಾಂತರ ರೂಪಾಯಿ ದರೋಡೆ ಪ್ರಕರಣ

ಕಾರು ಸಹಿತ ಜಲೀಲ್ ಕರೋಪಾಡಿ ಹತ್ಯೆಯ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಸೋಮವಾರಪೇಟೆ ಪೊಲೀಸರು. ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ವಾರದ ಹಿಂದಷ್ಟೇ ನಡೆದ ಒಂಟಿ ಮಹಿಳೆಯ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ವಿಟ್ಲ ಸಮೀಪದ ಕರೋಪಾಡಿ ಗ್ರಾಮ ಪಂ.ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕೊಲೆ ಪ್ರಕರಣದ ಆರೋಪಿಗಳ ಸಹಿತ ನಾಲ್ವರನ್ನು ಕೊಡಗು ಪೊಲೀಸ್ ತಂಡ ವಶಕ್ಕೆ ಪಡೆದಿದ್ದಾರೆ. ಕರೋಪಾಡಿ ಜಲೀಲ್ ಹತ್ಯೆ ಪ್ರಕರಣದ ರೋಷನ್, ಪಿಲಿಂಗುರಿ ಸತೀಶ್ ಶೆಟ್ಟಿ, ಬಾಳೆ ಗಣೇಶ್ ಮತ್ತು ವೀರಕಂಭದ ಕುಸಮಾಕರನನ್ನು […]

Continue Reading

ಸರಕಾರದ ದುಡ್ಡು ಸುನೀಲಣ್ಣನ ಜಾತ್ರೆ; ಪರಶುರಾಮ ಥೀಂ ಪಾರ್ಕ್ ವಿವಾದ; ಪೂರ್ತಿ ವಿವರ ಬಿಚ್ಚಿಟ್ಟ ಎಂ.ಜಿ ಹೆಗ್ಡೆ!

ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ನಿರ್ಮಾಣ ಹಂತದಲ್ಲಿದ್ದ ಪರಶುರಾಮನ ಪ್ರತಿಮೆಯನ್ನು ಕಾರ್ಕಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಈಗ ನ್ಯಾಯಾಲಯದ ಅಂಗಳದಲ್ಲಿದ್ದು, ಇನ್ನೊಂದೆಡೆಯಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಕಳಪೆಯಾಗಿದೆ ಎಂದು ಕಾರ್ಕಳ ಪೊಲೀಸರು ಬೆಂಗಳೂರಿನ ಕ್ರಿಶ್ ಆರ್ಟ್ ವರ್ಕ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಪರಶುರಾಮನ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಇಡೀ ಪ್ರಕರಣದ ಬಗ್ಗೆ ಜನ್ಮ ಜಾಲಾಡಿದ್ದಾರೆ ಮಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ ಹೆಗಡೆಯವರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. […]

Continue Reading

ಸಿಎಂ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಸಂವಿಧಾನವನ್ನು ‘ಪಿಕ್ & ಚೂಸ್ & ಯೂಸ್’ ಎಂಬಂತೆ ಬಳಸಬಹುದೇ ?

✍️. ನವೀನ್‌ ಸೂರಿಂಜೆ, ಹಿರಿಯ ಪತ್ರಕರ್ತರು ರಾಜ್ಯಪಾಲರು ಒಕ್ಕೂಟ ಸರ್ಕಾರದ ಒಪ್ಪಂದಗಳು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸಂವಿಧಾನದ ‘ಆಯ್ದ’ ಆರ್ಟಿಕಲ್ ಗಳನ್ನು ಬಳಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಶನ್ ಗೆ ಕ್ರಮ ಕೈಗೊಳ್ಳುವುದು ಅಸಾಂವಿಧಾನಿಕವಾಗಿದೆ. ಇದು ಕೇವಲ ಕಾನೂನು/ಸಂವಿಧಾನದ ಜೊತೆಗೆ ರಾಜ್ಯಪಾಲರ ಸಂಘರ್ಷವಾಗಿರದೇ ರಾಜ್ಯಗಳ ಅಸ್ಮಿತೆಯ ಮೇಲೆ ನಡೆಸುವ ಸಂಘರ್ಷ ಎಂದು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕಿದೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಆರೋಪ ಕೇಳಿ ಬಂದಿತ್ತು. ಪ್ರತಿಪಕ್ಷ ಕಾಂಗ್ರೆಸ್ ಮತ್ತಿತರ ಪಕ್ಷಗಳು, […]

Continue Reading

ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ಬಾಂಗ್ಲಾದೇಶ ತೊರೆದಿದ್ದಾರೆ ಎಂದು ಖಾಸಗಿ ಸ್ಥಳೀಯ ಸುದ್ದಿ ವಾಹಿನಿ ವರದಿ ಮಾಡಿದೆ

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾನುವಾರದಿಂದ 106 ಕ್ಕೂ ಹೆಚ್ಚು ಜನರನ್ನು ಕೊಂದ ತಮ್ಮ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳ ನಡುವೆಯೇ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಅವರು ಢಾಕಾ ತೊರೆಯುವ ಮತ್ತು ತೊರೆಯುವ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಗೆ ಸಂಬಂಧಿಸಿದಂತೆ ಹಸೀನಾ ಅವರು ತಮ್ಮ ಸರ್ಕಾರದ […]

Continue Reading

ವಯನಾಡ್ ದುರಂತ ಬಗ್ಗೆ ಕೋಮು ಉದ್ರೇಕಕಾರಿ ಪೋಸ್ಟ್: ಪುತ್ತೂರು ವೈದ್ಯ ಮೇಲೆ ಎಫ್ ಐ ಆರ್

ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದಲ್ಲಿ ಸಾವಿಗೀಡಾದವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಪೋಸ್ಟ್ ಮಾಡಿ ಉದ್ರೇಕಕಾರಿ ರೀತಿ ಒಂದು ಸಮುದಾಯವನ್ನು ಗುರಿಯಾಗಿಸಿ ಸಮುದಾಯ, ಧರ್ಮದ ಬಗ್ಗೆ ದ್ವೇಷ ಉಂಟು ಮಾಡುವ ಬರಹ ವಿನಿಮಯ ಮಾಡಿಕೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಹಲವರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. PUTTUR DOCTORS ಹಾಗೂ ಇನ್ನಿತರ ಗ್ರೂಪುಗಳಲ್ಲಿ “ಅಂದು ವಯನಾಡಿನ ನಡು ರಸ್ತೆಯಲ್ಲಿ ಹತ್ಯೇಗೀಡಾದ ಗೋವಿನ ಆತ್ಮಕ್ಕೆ ಶಾಂತಿ ಸಿಗುತ್ತಿದೆ..ದೇವರ ಮನೆಯಲಿ ಬೆಳಕಿರಬೇಕು..ಕತ್ತಲೆಯಲ್ಲ” “ಗೋ ಮಾತೆಯ ರಕ್ತ ಚೆಲ್ಲಿ ಮಲಿನವಾದ ಕೇರಳ […]

Continue Reading

2 ನೇ ತರಗತಿ ಮದರಸಾ ವಿದ್ಯಾರ್ಥಿಯನ್ನು ಇರಿದು ಕೊಂದ 12 ವರ್ಷದ ವಿದ್ಯಾರ್ಥಿ

ಕ್ರೈಂ ವಿಚಾರದಲ್ಲಿ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಬೆಚ್ಚಿಬೀಳಿಸುವ ವರದಿಯೊಂದು ಹೊರಬಿದ್ದಿದೆ. ಬಲರಾಂಪುರ ಜಿಲ್ಲೆಯ ತುಳಸಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮದರಸದಲ್ಲಿ 2 ನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿಯನ್ನು ಅದೇ ಮದರಸದಲ್ಲಿ ಕಲಿಯುತ್ತಿರುವ 12 ವರ್ಷ ಪ್ರಾಯದ ವಿದ್ಯಾರ್ಥಿ ಇರಿದು ಕೊಂದಿದ್ದಾನೆ. ಬಲರಾಂಪುರ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ತುಳಸಿಪುರ ಇಟ್ವಾ ರಸ್ತೆಯ ಜಾಮಿಯಾ ನೈಮಿಯಾನ್ ಇರ್ವಿಯಲ್ಲಿ ಘಟನೆ ನಡೆದಿದೆ. ಜಾಮಿಯಾ ನಿಮಿಯಾ ಅರೇಬಿಕ್ ಕಾಲೇಜು 2 ನೇ ತರಗತಿ ವಿದ್ಯಾರ್ಥಿ ಆಯಾನ್ ಹತ್ಯೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿ […]

Continue Reading