2 ನೇ ತರಗತಿ ಮದರಸಾ ವಿದ್ಯಾರ್ಥಿಯನ್ನು ಇರಿದು ಕೊಂದ 12 ವರ್ಷದ ವಿದ್ಯಾರ್ಥಿ

ಕ್ರೈಂ ವಿಚಾರದಲ್ಲಿ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಬೆಚ್ಚಿಬೀಳಿಸುವ ವರದಿಯೊಂದು ಹೊರಬಿದ್ದಿದೆ. ಬಲರಾಂಪುರ ಜಿಲ್ಲೆಯ ತುಳಸಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮದರಸದಲ್ಲಿ 2 ನೇ ತರಗತಿ ಕಲಿಯುತ್ತಿದ್ದ ವಿದ್ಯಾರ್ಥಿಯನ್ನು ಅದೇ ಮದರಸದಲ್ಲಿ ಕಲಿಯುತ್ತಿರುವ 12 ವರ್ಷ ಪ್ರಾಯದ ವಿದ್ಯಾರ್ಥಿ ಇರಿದು ಕೊಂದಿದ್ದಾನೆ. ಬಲರಾಂಪುರ ಜಿಲ್ಲೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ತುಳಸಿಪುರ ಇಟ್ವಾ ರಸ್ತೆಯ ಜಾಮಿಯಾ ನೈಮಿಯಾನ್ ಇರ್ವಿಯಲ್ಲಿ ಘಟನೆ ನಡೆದಿದೆ. ಜಾಮಿಯಾ ನಿಮಿಯಾ ಅರೇಬಿಕ್ ಕಾಲೇಜು 2 ನೇ ತರಗತಿ ವಿದ್ಯಾರ್ಥಿ ಆಯಾನ್ ಹತ್ಯೆಯಾದ ದುರ್ದೈವಿ. ಘಟನೆಗೆ ಸಂಬಂಧಿಸಿ […]

Continue Reading

ಪಾದಯಾತ್ರೆಯಲ್ಲಿ ಬಿಜೆಪಿಯ ಹಲವು ನಾಯಕರು ಎರಡನೇ ದಿನವೇ ನಾಪತ್ತೆ.!

ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಮಾತ್ರ ಹೈಲೇಟ್ ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ಪಾದಯಾತ್ರೆ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಹಿನ್ನಡೆಯಿಂದ ಕುಗ್ಗಿದ್ದ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾದರೆ, ಎರಡೂ ಪಕ್ಷಗಳ ಮುಖಂಡರಲ್ಲಿ ಒಳಗೊಳಗೇ ಕಚ್ಚಾಟ ಶುರುವಾಗಿದೆ. ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಈ ಭಾಗದಲ್ಲಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಂಡಿದ್ದರಿಂದ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಪಾದಯಾತ್ರೆ ಉದ್ಘಾಟನೆಯಲ್ಲಿ ಕಾಣಿಸಿಕೊಂಡರೂ ನಂತರ ಪಾದಯಾತ್ರೆಯಲ್ಲಿ […]

Continue Reading

ವಿಟ್ಲ: ಮಳೆಯ ಅಬ್ಬರ ತಗ್ಗಿದರೂ ವಿಟ್ಲ ಪರಿಸರದಲ್ಲಿ ಗುಡ್ಡ ಕುಸಿತ, ಮನೆ, ಟ್ಯಾಂಕ್ ಕುಸಿತಗಳು ಸಂಭವಿಸುತ್ತಾ ಇದೆ.

ವಿಟ್ಲ-ಪುತ್ತೂರು ರಸ್ತೆಯ ಕಂಬಳಬೆಟ್ಟು ಶಾಂತಿನಗರ ಎಂಬಲ್ಲಿ ನಿಝಾಂ ಎಂಬವರ ಮನೆ ಭಾರೀ ಮಳೆಯ ಕಾರಣದಿಂದಾಗಿ ಸಂಪೂರ್ಣ ಕುಸಿತವಾಗಿದೆ. ಮನೆ ಕುಸಿಯುತ್ತಲೇ ಮನೆಯೊಳಗಿದ್ದವರು ಹೊರಗಡೆ ಓಡಿ ಹೋದ ಕಾರಣ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಅದೇ ರೀತಿ ವಿಟ್ಲ ಹೊರವಲಯದ ಅಡ್ಯನಡ್ಕ ಮರಕ್ಕಿಣಿ ಎಂಬಲ್ಲಿನ ಗುಡ್ಡದ ಮೇಲಿದ್ದ ಸಾರ್ವಜನಿಕ ಕುಡಿಯುವ ನೀರಿನ ಶೇಖರಣಾ ಟ್ಯಾಂಕ್ ಅಡಿಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಯಾವುದೇ ಕ್ಷಣದಲ್ಲಿ ಟ್ಯಾಂಕ್ ಸಂಪೂರ್ಣ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಎರಡೂ ಕಡೆಗಳಿಗೆ ಪುತ್ತೂರು ಶಾಸಕರು ಆಗಮಿಸಿ ಪರಿಶೀಲನೆ ನಡೆಸಿದ್ದು […]

Continue Reading

ಶೂನ್ಯ ದಾಖಲಾತಿ: ರಾಜ್ಯದಲ್ಲಿ 4398 ಸರಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿ!

ಈ ವರ್ಷ ಶೂನ್ಯ ದಾಖಲಾತಿ ಹಾಗೂ ಅತಿ ಕಡಿಮೆ ವಿದ್ಯಾರ್ಥಿಗಳ ದಾಖಲಾತಿ ಯಿಂದಾಗಿ ರಾಜ್ಯದ 4398 ಸರಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. ರಾಜ್ಯದಲ್ಲಿನ 46 ಸಾವಿರ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪೈಕಿ ಸುಮಾರು 18 ಸಾವಿರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ 30 ದಾಟಿಲ್ಲ. ಇನ್ನೂ ಆಶ್ಚರ್ಯವೆಂದರೆ 4300 ಕ್ಕೂ ಹೆಚ್ಚು ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಇದರಲ್ಲಿ ಶೂನ್ಯ ದಾಖಲಾತಿಯ ಶಾಲೆಗಳು ಇವೆ. ಈ ಹಿಂದೆ 10 ಕ್ಕಿಂತ ಕಡಿಮೆ […]

Continue Reading

ಕೆತ್ತಿಕಲ್ ಭೂ ಕುಸಿತ, ಉಸ್ತುವಾರಿ ಸಚಿವರ ಆಕ್ರೋಶ, ಮಣ್ಣು (ತಿನ್ನುವ) ಮಾಫಿಯಾ

ಭೂ ವಿಜ್ಞಾನ ಇಲಾಖೆ, ನಗರ ಪಾಲಿಕೆ ಅಧಿಕಾರಿಗಳ ವಿರುದ್ದ ಘರ್ಜಿಸಿ, ತನಿಖೆಗೆ ಆದೇಶಿಸಿದ್ದೇನೆ ಅಂದರೆ, ಮಂಗಳೂರಿನ ಜನರು ನಕ್ಕು ಮುಂದೆ ಸಾಗುತ್ತಾರೆ, ಅಷ್ಟೆ. ಸಚಿವರು ಅರ್ಥ ಮಾಡಿಕೊಳ್ಳಲಿ: ಮುನೀರ್ ಕಾಟಿಪಳ್ಳ ಮಂಗಳೂರಿನ ಕೆತ್ತಿಕಲ್ ನಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಗುಡ್ಡವನ್ನು ಅವೈಜ್ಞಾನಿಕವಾಗಿ ಕತ್ತರಿಸಿದ ಪರಿಣಾಮ ಕುಸಿತದ ಭೀತಿ ಎದುರಾಗಿದೆ. ಈ ಗುಡ್ಡವನ್ನು ಹೆದ್ದಾರಿ ಅಗಲೀಕರಣಕ್ಕೆ ಪೂರ್ವದಲ್ಲೆ ಮಂಗಳೂರಿನ ಭೂ ಮಾಫಿಯಾ, ಮಣ್ಣು ಮಾಫಿಯಾ ಬೇಕಾಬಿಟ್ಟಿ ದೋಚಿದೆ. ಮೊನ್ನೆ ಸ್ಥಳ ಪರಿಶೀಲನೆಗೆ ಬಂದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೆದ್ದಾರಿ […]

Continue Reading

ಮಂಗಳೂರು ಮ.ನ.ಪಾಲಿಕೆಯ ಒಳಹೊಕ್ಕರೆ ಕೇಳಿ ಬರುವ ವೇದವಾಕ್ಯವೊಂದೆ ಲಂಚ..ಲಂಚ..! ಇಲ್ಲಿ ಲಂಚ ಮುಟ್ಟದವನು ಪಾಪಿ..!

ಕಂದಾಯ ಇಲಾಖೆಯಲ್ಲಿ ಭಾರೀ ಗೋಲ್ಮಾಲ್ ‘ಸರಕಾರದ ಕೆಲಸ ದೇವರ ಕೆಲಸ’ ಅಂತ ಹಿರಿಯರು ಹೇಳುತ್ತಾರೆ. ಅಲ್ಲದೆ ಸರಕಾರಿ ಹುದ್ದೆಯಲ್ಲಿ ಇರುವವರು ಅದೃಷ್ಟವಂತರು ಅಂತನೂ ಕೂಡಾ ಹೇಳುತ್ತಾರೆ. ಅಟೆಂಡರ್ ನಿಂದ ಹಿಡಿದು ಅಧಿಕಾರಿ ವರ್ಗದವರಿಗೆ ಕೆಲಸ ಮಾಡೋ ನೌಕರರಿಗೆ ದೇವರು ಹೂ ಹೆಚ್ಚಿಗೆ ಹಾಕಿ ಭೂಮಿಗೆ ಕಳಿಸಿರುತ್ತಾರೆ. ಅದನ್ನು ಒಳ್ಳೆಯ ಸದುಪಯೋಗ ಮಾಡಬಹುದು ಅಥವಾ ದುರುಪಯೋಗ ಬೇಕಾದರೂ ಆಗಬಹುದು. ಅದು ನಮ್ಮ ಕೈಯಲ್ಲಿರುತ್ತದೆ. ಆದರೆ ‘ಜೇನು ಬಿಚ್ಚೋರು ಕೈ ನೆಕ್ಕಲ್ವ’ ಅಂತಾರೆ. ಆದರೆ ಇಡೀ ಜೇನಿನ ಗೂಡನ್ನೇ ತಿನ್ನೋಕೆ […]

Continue Reading

ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಅರಣ್ಯ ಒತ್ತುವರಿಯನ್ನು ಒಂದು ತಿಂಗಳಲ್ಲಿ ತೆರವುಗೊಳಿಸಲು ಖಡಕ್ ಸೂಚನೆ: ಸಚಿವ ಈಶ್ವರ್ ಖಂಡ್ರೆ

ರಾಜ್ಯದ ಪಶ್ಚಿಮ ಘಟ್ಟದ 9 ಜಿಲ್ಲೆಗಳಲ್ಲಿ ಅರಣ್ಯ ಒತ್ತುವರಿಯನ್ನು ಒಂದು ತಿಂಗಳಲ್ಲಿ ತೆರವುಗೊಳಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ. ಭಾರೀ ಮಳೆಯಿಂದಾಗಿ ಶಿರೂರು ಗುಡ್ಡ ಕುಸಿತದಲ್ಲಿ 11 ಮಂದಿ ಮೃತಪಟ್ಟಿದ್ದು ಹಾಗೂ ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ 300ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಗಳ ಹಿನ್ನೆಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗುತ್ತಿರುವ ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮೈಸೂರು, ಉತ್ತರ ಕನ್ನಡ, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಕೊಡಗು […]

Continue Reading

Karnataka Media Council (KMC) ಅಧ್ಯಕ್ಷ ಅಲ್ವಿನ್ ಮೆಂಡೋನ್ಸಾ ಸಹಿತ ಮಾಧ್ಯಮ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಾಜ್ಯ ಸಂವಹನ ಪ್ರಶಸ್ತಿ’

ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (Public Relations Council of India- PRCI) ನೀಡುವ ‘ರಾಜ್ಯ ಸಂವಹನ ಪ್ರಶಸ್ತಿ‌’ ಪ್ರದಾನ ಸಮಾರಂಭ ಗಮನಸೆಳೆಯಿತು. ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಗುರುತಿಸಿ ನೀಡುವ ಪ್ರತಿಷ್ಠಿತ ಪ್ರಶಸ್ತಿ ಬೆಂಗಳೂರಿನಲ್ಲಿ ನೆರವೇರಿತು. PRCI ಕರ್ನಾಟಕ ಚಾಪ್ಟರ್ ಆಯೋಜಿಸಿದ್ದ ಸಮಾರಂಭದಲ್ಲಿ ಈ ಬಾರಿ ಮಾಧ್ಯಮ, ಸಂವಹನ, ಸಿನಿಮಾ, ಸಾರ್ವಜನಿಕ ಸಂಪರ್ಕ ಸಹಿತ ವಿವಿಧ ಕ್ಷೇತ್ರಗಳ 12 ಮಂದಿಗೆ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ, ನಿವೃತ್ತ ನ್ಯಾಯಮೂರ್ತಿ ಡಾ. […]

Continue Reading

ಜೆಡಿಎಸ್ ನಾಯಕರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ; ಅವರು ಕೈಜೋಡಿಸಿಲಿ, ಬಿಡಲಿ, ಅವರ ಬೆಂಬಲ ನಿರೀಕ್ಷಿಸದೆ ಪಾದಯಾತ್ರೆ ಆಯೋಜಿಸಿ: ಅಮಿತ್ ಶಾ ಖಡಕ್ ವಾರ್ನಿಂಗ್

ಜೆಡಿಎಸ್ ನಾಯಕರ ಯಾವುದೇ ಬ್ಲಾಕ್ಮೇಲ್ ತಂತ್ರಕ್ಕೆ ಬಗ್ಗದೇ ನಿಗದಿಯಾಗಿರುವಂತೆ ಬೆಂಗಳೂರಿನಿಂದ ಮೈಸೂರುವರೆಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ಮುಂದುವರೆಸಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯಘಟಕಕ್ಕೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಎಚ್.ಡಿ. ಕುಮಾರಸ್ವಾಮಿಯವರ ಹೇಳಿಕೆಗೆ ತಲೆಕೆಡಿಸಿಕೊಳ್ಳದೆ. ಈಗಾಗಲೇ ತೀರ್ಮಾನಿಸಿರುವಂತೆ ಆ.3ರಿಂದ ಮೈಸೂರುವರೆಗೆ ಪಾದಯಾತ್ರೆಯನ್ನು ನಡೆಸಿ ಸರ್ಕಾರದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರವನ್ನು ಜನರಿಗೆ ಮನವರಿಕೆ ಮಾಡುವಂತೆ ಸೂಚನೆ ಕೊಡಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ […]

Continue Reading

ಬಜಪೆ ಪಟ್ಟಣ ಪಂಚಾಯತ್: ಚೀಫ್ ಆಫೀಸರ್ ಅಂಧಾ ದರ್ಬಾರ್.! ಫಿಕ್ರೇ ಇಲ್ಲದ ಪಕೀರಪ್ಪ.!!

‘ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬಂತಾಗಿದೆ ಬಜಪೆ ಪಟ್ಟಣ ಪಂಚಾಯತ್ ನ ಸದ್ಯದ ಪರಿಸ್ಥಿತಿ. ಇಲ್ಲಿನ ಚೀಫ್ ಆಫೀಸರ್ ಆನೆ ನಡೆದದ್ದೇ ಹಾದಿ ಅನ್ನುವಂತಾಗಿದೆ. ಜನಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಬೆಲೆಯಿಲ್ಲ. ಎಲ್ಲವೂ ಹೊಸದಾಗಿ ಬಂದ ಮುಖ್ಯಾಧಿಕಾರಿಯ ಮೂಗಿನ ನೇರಕ್ಕೆ ನಡೆಯುವುದು. ಅಷ್ಟಕ್ಕೂ ಬಜಪೆ ಪಟ್ಟಣ ಪಂಚಾಯತ್ ಕರ್ಮಕಥೆ ಏನು? ಇಲ್ಲಿದೆ ಡೀಟೈಲ್ಸ್. ಮಂಗಳೂರಿನಿಂದ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಬಜಪೆ ವೇಗವಾಗಿ ಬೆಳೆಯುತ್ತಿರುವ ನಗರ. ಇತ್ತೀಚೆಗೆ ಬಜಪೆ ಪಟ್ಟಣ ಪಂಚಾಯತ್ ಆಗಿ ಬದಲಾಗಿದೆ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ […]

Continue Reading