ನಕಲಿ ದಾಖಲೆ ಸೃಷ್ಠಿಸಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಮಹಿಳೆ ಹಾಗೂ ನಕಲಿ ದಾಖಲೆ ಒದಗಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲು

ಥಾಣೆ: ನಕಲಿ ದಾಖಲೆಗಳ ಆಧಾರದ ಮೇಲೆ ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ಪಡೆದು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ 23 ವರ್ಷ ಪ್ರಾಯದ ಮಹಿಳೆಯ ವಿರುದ್ಧ ಹಾಗೂ ಆಕೆಗೆ ನಕಲಿ ದಾಖಲೆಗಳನ್ನು ಒದಗಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಮಹಿಳೆಯನ್ನು ನಗ್ಮಾ ನೂರ್ ಮಕ್ಸೂದ್ ಅಲಿ ಅಲಿಯಾಸ್ ಸನಮ್ ಖಾನ್ ಎಂದು ಗುರುತಿಸಲಾಗಿದ್ದು, ತನ್ನ ಹೆಸರನ್ನು ಬದಲಾಯಿಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಮಗಳ ಜನನ ಪ್ರಮಾಣಪತ್ರವನ್ನು […]

Continue Reading

ಕೇರಳ: ದೇವರನಾಡು ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಆರ್ಭಟ.! ನಿಫಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಕೇರಳದಲ್ಲಿ ಹಲವು ಕಡೆಗಳಲ್ಲಿ ಲಾಕ್ ಡೌನ್

ದೇವರನಾಡು ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಆರ್ಭಟಿಸುತ್ತಿದೆ. ನಿಫಾ ವೈರಸ್ ಸೋಂಕಿಗೆ ತುತ್ತಾಗಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ಭಾನುವಾರ ಕೋಝಿಕ್ಕೋಡ್‌ನಲ್ಲಿ ಸಾವನ್ನಪ್ಪಿದ್ದಾನೆ. ಜೊತೆಗೆ ನಿಫಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇರಳದಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ.ಮಲಪ್ಪುರಂನ ಬಾಲಕನ ಸಾವಿನ ಬೆನ್ನಲ್ಲೇ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಫಾ ಸೋಂಕು ಸಾವಿಗೆ ಕಾರಣ ಅನ್ನೋದನ್ನು ಪತ್ತೆ ಹಚ್ಚಿದೆ. ನಿಫಾ ಸೋಂಕಿನಿಂದ ಸಾವನ್ನಪ್ಪಿರುವ ಬಾಲಕನ ಅಂತ್ಯಕ್ರಿಯೆಯನ್ನು ಸರಕಾರದ ಮಾರ್ಗಸೂಚಿಯಂತೆಯೇ ನಡೆಸಲಾಗಿದೆ. ಬಾಲಕ ಮಾತ್ರವಲ್ಲದೇ ಇನ್ನೂ ನಾಲ್ವರಲ್ಲಿ […]

Continue Reading

ಮಂಗಳೂರು ನಗರದ ಮಾರುಕಟ್ಟೆಗಳೀಗ ರೋಗ ಹರಡುವ ಕೇಂದ್ರಗಳು: ಸಂತೋಷ್ ಬಜಾಲ್

ಉರ್ವಸ್ಟೋರ್ ಮಾರುಕಟ್ಟೆ ಸಂಪೂರ್ಣ ಶಿಥೀಲಾವಸ್ಥೆಯಲ್ಲಿದ್ದು ಮೂಗು ಬಿಡದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತೆರೆದ ಚರಂಡಿಗಳಿಂದಾಗಿ ದುರ್ನಾತ ಬೀರುವ ಈ ಮಾರುಕಟ್ಟೆಯಲ್ಲಿ ಸೃಷ್ಟಿಯಾದ ರೋಗಗಳಿಗೆ ಸಣ್ಣ ಪುಟ್ಟ ವ್ಯಾಪಾರಿಗಳು ಅನಾರೋಗ್ಯದಿಂದ ಬಳಲಿ ಮನೆ ಸೇರಿದ್ದಾರೆ. ಇವತ್ತು ನಗರದ ಬಹುತೇಕ ಮಾರುಕಟ್ಟೆಗಳು ವ್ಯಾಪಾರ ಕೇಂದ್ರಗಳಿಗಿಂತಲೂ ರೋಗ ಹರಡುವ ಕೇಂದ್ರಗಳಾಗಿ ಮಾರ್ಪಟ್ಟಿದೆ ಇದು ಬಿಜೆಪಿ ಆಡಳಿತ ಕೊಡುಗೆ ಎಂದು ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಡಿವೈಎಫ್ಐ ಉರ್ವಸ್ಟೋರ್ ಘಟಕದ ನೇತ್ರತ್ವದಲ್ಲಿ ಉರ್ವಸ್ಟೋರ್ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಲು ಹಾಗೂ […]

Continue Reading

ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದ ಈ ಚಕ್ರವು ನಮ್ಮ ರಾಜ್ಯದ ಮೂಲಸೌಕರ್ಯವನ್ನು ಹಾಳುಮಾಡಿದೆ.

ಶಿರೂರು ಭೂಕುಸಿತ: ಹೊಣೆಗಾರಿಕೆ ಮತ್ತು ಕ್ರಮಕ್ಕಾಗಿ ಹೃದಯಪೂರ್ವಕ ಮನವಿ ✍️. ಇಸ್ಮಾಯಿಲ್. ಎಸ್, ವಕೀಲರು ಕಳೆದ ಮಂಗಳವಾರ ಬೆಳಗ್ಗೆ ಅಂಕೋಲಾ ಬಳಿಯ ಪ್ರಶಾಂತವಾದ ಶಿರೂರು ಗ್ರಾಮವು ಹತಾಶೆ ಹಾಗೂ ಕಣ್ಣೀರಿನ ಆಗರವಾಗಿ ಮಾರ್ಪಟ್ಟಿತ್ತು. ಮಾನವ ನಿರ್ಮಿತ ಭೂಕುಸಿತವು ಕನಿಷ್ಠ ಹತ್ತು ಜನರನ್ನು ಮತ್ತು ಹಲವಾರು ವಾಹನಗಳನ್ನು ನೆಲ-ಜಲ ಸಮಾಧಿ ಮಾಡಿತು, ಇಡೀ ಊರಿಗೆ ಊರೇ ಛಿದ್ರಗೊಂದು, ಜನ ಜಾನುವಾರುಗಳನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದೆ. ಭೂ ಕುಸಿತಕ್ಕೆ ಬಲಿಯಾದವರಲ್ಲಿ, ಐವರು ಒಂದೇ ಕುಟುಂಬದವರು NH 66 ರ ಪಕ್ಕದಲ್ಲಿ […]

Continue Reading

ಬೆಳ್ತಂಗಡಿ ಶಾಸಕರ ”ಹಿಂದೂ ಸಮಾಜದ ರಕ್ಷಕ” ಎಂಬ ನಕಲಿ ಮುಖವಾಡ.!

ಬೆಳ್ತಂಗಡಿ: ಹಿಂದೂ ಸಮಾಜದ ರಕ್ಷಕನೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಾಸಕ ಪೂಂಜಾರಿಂದ ಬಾರ್ಯ ಗ್ರಾಮ ಪಂಚಾಯತ್ ಅಧೀನದ ಹಿಂದೂ ರುಧ್ರಭೂಮಿ ಮತ್ತು ಪ.ಜಾ ಮತ್ತು ಪ.ಪಂ.ದ ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳದ ಅಭಿವೃದ್ಧಿಗೊಳಿಸುವುದನ್ನು ವಿರೋದಿಸಿ ಪೂಂಜಾ ಮತ್ತು ಪಟಾಲಂನಿಂದ ದಾಂದಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯವಾಗಿ ಬೈದು, ತಲೆ ಕಡಿಯುತ್ತೇನೆಂದು ಬೆದರಿಕೆ ಒಡ್ಡಿರುವ ಹಿಂದುತ್ವದ ನಕಲಿ ಮುಖವಾಡ ಕಳಚಿಟ್ಟ ಬಿಟ್ಟಿದೆ. ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮ ಪಂಚಾಯತ್ ಗೊಳಪಟ್ಟ ಪುತ್ತಿಲ ಗ್ರಾಮದ ಸರ್ವೆನಂಬ್ರ 73/2A ರಲ್ಲಿ 0.20 ಸೆಂಟ್ಸ್ ಪರಿಶಿಷ್ಟ […]

Continue Reading

ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ 11.9 ಲಕ್ಷ ಜನ ಬಲಿ; ಅಮೆರಿಕ ವಿವಿಗಳ ಅಧ್ಯಯನ ವರದಿ

ಕೋವಿಡ್ ಸಾಂಕ್ರಾಮಿಕಕ್ಕೆ ಭಾರತದಲ್ಲಿ 11.9 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ಆಕ್ಸ್ ಫರ್ಡ್, ಸಿಟಿ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನ ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಕೇಂದ್ರ ಸರಕಾರ ಅಧಿಕೃತ ಲೆಕ್ಕಕ್ಕಿಂತ ಎಂಟು ಪಟ್ಟು ಅಧಿಕ.! ಅಮೆರಿಕದ ನ್ಯೂಯಾರ್ಕ್ ಆಕ್ಸ್ ಫರ್ಡ್ ಹಾಗೂ ನ್ಯೂಯಾರ್ಕ್ ಸಿಟಿ ವಿಶ್ವವಿದ್ಯಾಲಯದ ತಜ್ಞರ ತಂಡ ನಡೆಸಿದ ಸಂಶೋಧನಾ ವರದಿಯು, ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದ ಮೊದಲ ವರ್ಷದಲ್ಲಿ ಭಾರತದಲ್ಲಿ ಮುಸ್ಲಿಮರು, ಆದಿವಾಸಿಗಳು, ದಲಿತರು, ಸಮಾಜದ ಶೋಷಿತ ವರ್ಗ, ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ […]

Continue Reading

ಕಳ್ಳತನ ಪ್ರಕರಣ: ಮಂಗಳೂರು ನಗರದ ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಕುಂಬಳೆ ಪೊಲೀಸರು

ಮಂಜೇಶ್ವರದ ಮೊಹಮ್ಮದ್‌ ಶಿಹಾಬ್‌, ಗಂಜಿಮಠ ನಿವಾಸಿಗಳಾದ ಮೊಹಮ್ಮದ್‌ ಸಫಾನ್‌ ಹಾಗೂ ಮೊಹಮ್ಮದ್‌ ಅರ್ಫಾಸ್‌ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಮಂಗಳೂರು ನಗರದ ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಜೇಶ್ವರ ನಿವಾಸಿ ಮೊಹಮ್ಮದ್‌ ಶಿಹಾಬ್‌, ಮಂಗಳೂರು ತಾಲೂಕು ಗಂಜಿಮಠ ನಿವಾಸಿಗಳಾದ ಮೊಹಮ್ಮದ್‌ ಸಫಾನ್‌ ಹಾಗೂ ಮೊಹಮ್ಮದ್‌ ಅರ್ಫಾಸ್‌ ಎಂಬವರನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಸೋಂಕಾಲ್‌ ಸುಭಾಶ್‌ ನಗರದ ಆಯಿಶಾ ಯೂಸಫ್‌ ಅವರ ಮನೆಯಿಂದ 2024ರ ಜೂ. 4ರಂದು 1.20 ಲಕ್ಷ ರೂ. ಮೌಲ್ಯದ […]

Continue Reading

ಆಯುಕ್ತರ ಅಕ್ರಮ ಆಸ್ತಿ ಸಂಪಾದನೆಗೆ ಬಿಜೆಪಿ ಆಡಳಿತ ನೇರ ಹೊಣೆ. ಪಾಲಿಕೆ ಆಯುಕ್ತರ ವಜಾಕ್ಕೆ ಸಿಪಿಐಎಂ ಆಗ್ರಹ

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್ ಸಿ.ಎಲ್ ಅವರ ಮೇಲೆ ನಿನ್ನೆ ನಡೆದ ಲೋಕಾಯುಕ್ತ ದಾಳಿ ವೇಳೆ ಅಕ್ರಮ ಸಂಪಾದನೆಯಿಂದ ಗಳಿಸಿದ ಆಸ್ತಿ ಪತ್ತೆಯಾಗಿದೆ. ನಗರದ ಜನರ ತೆರಿಗೆ ಹಣವನ್ನು ಈ ರೀತಿ ಭ್ರಷ್ಟಾಚಾರದ ಮೂಲಕ ಗಳಿಸಲು ಹೊರಟ ಪಾಲಿಕೆ ಆಯುಕ್ತರ ಅಕ್ರಮ ಆಸ್ತಿ ಸಂಪಾದನೆ ಕಂಡು ಸುಮ್ಮನಿದ್ದ ಪಾಲಿಕೆ ಮೇಯರ್ ಮತ್ತು ಬಿಜೆಪಿ ಆಡಳಿತವೇ ನೇರಹೊಣೆ. ಸರಕಾರ ಈ ಕೂಡಲೇ ಪಾಲಿಕೆ ಆಯುಕ್ತರನ್ನು ವಜಾಗೊಳಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿದೆ. ಕರ್ನಾಟಕದಲ್ಲಿ ಅತೀ […]

Continue Reading

ಹೈಟೆಕ್ ಕೋಳಿ ಅಂಕಕ್ಕೆ ಪೆಂಡಾಲ್ ಹಾಕುತ್ತಿದ್ದಾಗ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿ ಓರ್ವ ಸಾವು, ನಾಲ್ವರಿಗೆ ಗಾಯ.

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡೇಶ್ವಾಲಯ ಬಳಿ ದುರ್ಘಟನೆ. ಬಂಟ್ವಾಳ : ಖಾಸಗಿ ಸ್ಥಳವೊಂದರಲ್ಲಿ ಹೈಟೆಕ್ ಕೋಳಿ ಅಂಕ ನಡೆಸಲು ಕಬ್ಬಿಣದ ಶೀಟುಗಳ ಪೆಂಡಾಲ್ ಹಾಕುತ್ತಿದ್ದ ಸಂದರ್ಭ ಕಬ್ಬಿಣದ ರಾಡ್ ಗೆ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಕಲ್ಲಡ್ಕದ ಸಾಲಿಯಾನ್ ಶಾಮಿಯಾನ ಸಂಸ್ಥೆಯ ಕಾರ್ಮಿಕ ಬಿಹಾರ ಮೂಲದ ಕುಂದನ್ ಕುಮಾರ್ ಮಂಡಲ್ (18) ಎಂಬಾತ ಮೃತಪಟ್ಟಿದ್ದು, ಕಡೇಶ್ವಾಲ್ಯ ಗ್ರಾಮದ ಪ್ರಸನ್ನ , ಜಾರ್ಖಂಡ್ ಮೂಲದ ಬಬ್ಲು, ಪ್ರದೀಪ್, ಪಶ್ಚಿಮ […]

Continue Reading

ಮಳೆಗಾಲ ಆರಂಭಗೊಂಡು ಎರಡು ತಿಂಗಳು ಕಳೆದರೂ ಕಾಟಿಪಳ್ಳ ಭಾಗದಲ್ಲಿ ಕುಡಿಯುವ ನೀರಿಗೆ ಬರ

ಖಾಲಿ ಕೊಡಪಾನಗಳ ಮೆರವಣಿಗೆ ಮಾಡಲು ನಾಗರಿಕ ಹೋರಾಟ ಸಮಿತಿ ನಿರ್ಧಾರ ಮಳೆಗಾಲದಲ್ಲೂ ನಗರ ಪಾಲಿಕೆಯಿಂದ ನೀರು ಸರಬರರಾಜು ಇಲ್ಲದೆ ಮನೆಯ ಮೇಲಿನಿಂದ ಹರಿದು ಬರುವ ಮಳೆ ನೀರಿಗೆ ಟ್ಯಾಂಕ್ ಇಟ್ಟು ಕಾಯುತ್ತಿರುವ ಕಾಟಿಪಳ್ಳದ ನಾಗರಿಕರು. ನಾಲ್ಕು ದಿನಗಳಿಗೊಮ್ಮೆ ಮಾತ್ರ ತುಂಬೆಯಿಂದ ನೀರು ಸರಬರಾಜು ಮಾಡುತ್ತಿರುವ ನಗರ ಪಾಲಿಕೆ. ಬೋರ್ ವೆಲ್ ಪಂಪ್ ಹಾಳಾಗಿ ತಿಂಗಳುಗಳು ದಾಟಿದರು ರಿಪೇರಿ ಮಾಡದೆ ಕೂತಿರುವ ಪಾಲಿಕೆ ಅಧಿಕಾರಿಗಳು. ಮಳೆಗಾಲ ಆರಂಭಗೊಂಡು ಎರಡು ತಿಂಗಳಾದರೂ ಸುರತ್ಕಲ್ ಉಪವಿಭಾಗದಲ್ಲಿ ಈಗಲೂ ನೀರು ಸರಬರಾಜಿನಲ್ಲಿ ಅಧಿಕೃತವಾಗಿ […]

Continue Reading