ಹಲ್ಲೆ, ಜೀವ ಬೆದರಿಕೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

ಬಂಟ್ವಾಳ: ಕನ್ಯಾನ ನಿವಾಸಿ ಆನಂದ ಎಂಬವರಿಗೆ 2020 ರಲ್ಲಿ, ಆರೋಪಿಗಳಾದ ಅಜೀಝ್, ತೋಯಿಬ್, ಆಶೀಪ್, ಕಲೀಲ್, ಅಜೀಝ್ ಹಾಗೂ ಇತರರು ಕೂಟ ಸೇರಿ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 135/2020 ರಂತೆ ಪ್ರಕರಣ ದಾಖಲಾಗಿರುತ್ತು. ಪ್ರಕರಣದ ಆರೋಪಿಗಳ ಪೈಕಿ ಬಂಟ್ವಾಳ, ಕನ್ಯಾನ ನಿವಾಸಿ ಮೊಯಿದ್ದೀನ ಶಾಕೀರ್ ಯಾನೆ ಮೊಯಿದ ಶಾಕೀರ ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ವಿದೇಶಕ್ಕೆ ತೆರಳಿದ್ದ. ಸದ್ರಿ ಆರೋಪಿ […]

Continue Reading

ನಕಲಿ, ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ; ನೋಂದಣಿ ಇಲ್ಲದೆ ವೈದ್ಯ ವೃತ್ತಿ ಮಾಡುವವರಿಗೆ ಕಾದಿದೆ ಸಂಕಟ

ಮೊದಲ ಅಪರಾಧಕ್ಕೆ 25 ಸಾವಿರ ದಂಡ, 2ನೇ ಅಪರಾಧಕ್ಕೆ 2.5 ಲಕ್ಷ ರೂ. ಮತ್ತು ಒಂದು ವರ್ಷ ಜೈಲು, ನಂತರದ ಪ್ರತಿ ಅಪರಾಧಕ್ಕೆ 3ವರ್ಷಗಳವರೆಗೆ ಜೈಲು ಶಿಕ್ಷೆ 5 ಲಕ್ಷ ರೂ. ವರೆಗೆ ದಂಡ ನಕಲಿ ವೈದ್ಯರು ಮತ್ತು ಅನರ್ಹ ವೈದ್ಯರನ್ನು ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯರ ನೋಂದಣಿ […]

Continue Reading

ಬೆಳಗಾವಿ: ಸೈಬರ್ ವಂಚಕರ ಜಾಲ ಪತ್ತೆ; ಅಮೇರಿಕದ ಬ್ಯಾಂಕಿಗೆ ಕನ್ನ, 33 ಮಂದಿ ಆರೋಪಿಗಳ ಬಂಧನ

ಅನಧಿಕೃತ ಕಾಲ್‌ ಸೆಂಟರ್‌ ಬಗ್ಗೆ ಸಂಶಯಗೊಂಡ ನಾಗರಿಕರೊಬ್ಬರು ನೀಡಿರುವ ಮಾಹಿತಿಯಿಂದ ಪತ್ತೆ ಅಮೆರಿಕಾ ದೇಶದ ನಾಗರಿಕರ ಮೊಬೈಲ್‌ ಹಾಗೂ ಬ್ಯಾಂಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ವಂಚಿಸುತ್ತಿದ್ದ ಕಾಲ್‌ ಸೆಂಟರ್‌ ಮೇಲೆ ದಾಳಿ ನಡೆಸಿದ ಬೆಳಗಾವಿ ಸೈಬರ್‌ ಅಪರಾಧ ವಿಭಾಗದ ಪೊಲೀಸರು 33 ಆರೋಪಿಗಳನ್ನು ಬಂಧಿಸಿ, ಹಲವಾರು ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಜಂ ನಗರದ ಸರ್ಕಲ್‌ ಬಳಿಯ ಕುಮಾರ್‌ ಹಾಲ್‌ನಲ್ಲಿ ಅನಧಿಕೃತ ಕಾಲ್‌ ಸೆಂಟರ್‌ ಕಾರ‍್ಯ ನಿರ್ವಹಿಸುತ್ತಿರುವ ಕುರಿತು ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ಸಿಕ್ಕಿತ್ತು. […]

Continue Reading

ಮೂಡಬಿದ್ರೆ: ಆಳ್ವಾಸ್ ಕ್ಯಾಂಟೀನ್ ಸಿಬ್ಬಂದಿ ಕೊಲೆ ಪ್ರಕರಣ; ಆರೋಪಿ ಚಿದಾನಂದನಿಗೆ ಜೀವಾವಧಿ ಶಿಕ್ಷೆ

ಅಂದಿನ ತನಿಖಾಧಿಕಾರಿ ದಿನೇಶ್ ಕುಮಾರ್ ರವರ ಕರ್ತವ್ಯ ನಿಷ್ಠೆಯಿಂದ ಆರೋಪಿಗೆ ಕಾನೂನಿನ ಕುಣಿಕೆ ಬಿಗಿ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಳ್ವಾಸ್ ಕಾಲೇಜಿನ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬವನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿದಾನಂದ ಪರಶುನಾಯ್ಕರ್ ಎಂಬುವನಿಗೆ ಎರಡನೇ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2020 ರಲ್ಲಿ ಆಳ್ವಾಸ್ ಕ್ಯಾಂಟೀನ್ ನಲ್ಲಿ ಚೇತನ್ ಹಾಗೂ ಚಿದಾನಂದ ಇಬ್ಬರು ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಕ್ಯಾಂಟೀನ್ ವಿಚಾರದಲ್ಲಿ ಹಾಗೂ ವೈಯಕ್ತಿಕ ವಿಚಾರದಲ್ಲಿ ಇಬ್ಬರ […]

Continue Reading

‘ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಮುಂದುವರೆಯಲು ಹಾದಿ ಸುಲಭ’; ಅಡ್ವೋಕೇಟ್ ಕೆ. ಜನೆರಲ್ ಶಶಿ ಕಿರಣ್ ಶೆಟ್ಟಿ

ನವದೆಹಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು ಬಂದಿದೆ. ಯೋಜನೆ ವಿರೋಧಿಸಿ ನೆರೆಯ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ, ಮೇಕೆದಾಟು ಯೋಜನೆ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ದೊಡ್ಡ ಗೆಲುವು ಲಭಿಸಿದಂತಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಸರ್ಕಾರದ ಅಡ್ವೋಕೇಟ್ ಜನೆರಲ್ ಕೆ ಶಶಿಕಿರಣ್ ಶೆಟ್ಟಿ, ರಾಜ್ಯದ ಪಾಲಿಗೆ ಇದೊಂದು ಅಭೂತಪೂರ್ವ ಗೆಲುವಾಗಿದೆ. ಸರ್ಕಾರದ ದಿಟ್ಟ ನಿಲುವು, ಕಾನೂನು ತಜ್ಞರ ನಿರಂತರ ಪರಿಶ್ರಮದಿಂದಾಗಿ […]

Continue Reading

ಕೆಂಪು ಕೋಟೆ ಸ್ಫೋಟ: ಶಂಕಿತರೊಂದಿಗೆ ಸಂಪರ್ಕ ಹೊಂದಿದ ಮೂರನೇ ಕಾರಿಗಾಗಿ ಹುಡುಕಾಟ

ನವದೆಹಲಿ: (ನವೆಂಬರ್ 13) ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ನಂಬಲಾದ ಮೂರನೇ ಕಾರನ್ನು ಬಹು ಭದ್ರತಾ ಸಂಸ್ಥೆಗಳು ಹುಡುಕುತ್ತಿವೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಬಿಳಿ ಬಣ್ಣದ ಹುಂಡೈ ಐ20 ಸ್ಫೋಟಗೊಂಡು 12 ಜನರು ಸಾವನ್ನಪ್ಪಿ 30 ಜನರು ಗಾಯಗೊಂಡಿದ್ದರೂ, ತನಿಖಾಧಿಕಾರಿಗಳು ನಂತರ ಎರಡನೇ ವಾಹನ – ಕೆಂಪು ಫೋರ್ಡ್ ಇಕೋಸ್ಪೋರ್ಟ್ – ಫರಿದಾಬಾದ್‌ನಲ್ಲಿ ಪತ್ತೆಯಾಗಿದೆ. ಆದಾಗ್ಯೂ, ಮಾರುತಿ ಬ್ರೆಝಾ ಎಂದು ಶಂಕಿಸಲಾದ ಮೂರನೇ ಕಾರು […]

Continue Reading

ದೆಹಲಿ ಬಾಂಬ್ ಸ್ಫೋಟ – ಮಾನವತೆಗೆ ವಿರುದ್ಧವಾದ ಕ್ರೂರ ಅಪರಾಧ; ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿ, ಇಂತಹ ಕೃತ್ಯ ಮತ್ತೆ ಮರುಕಳಿಸದಿರಲಿ

✍️. ಇಸ್ಮಾಯಿಲ್ ಸುಣ್ಣಾಲ್ ವಕೀಲರು, ಮಂಗಳೂರು. 2025ರ ನವೆಂಬರ್ 10ರ ಸಂಜೆಯ ವೇಳೆಗೆ, ದೆಹಲಿಯ ಇತಿಹಾಸ ಪ್ರಸಿದ್ಧ ಕೆಂಪುಕೋಟೆಯ ಸಮೀಪ ಸಂಭವಿಸಿದ ಭೀಕರ ಕಾರ್ ಬಾಂಬ್ ಸ್ಫೋಟವು ರಾಷ್ಟ್ರವನ್ನೇ ನಡುಗಿಸಿದೆ. ಈ ಘಟನೆಯಲ್ಲಿ ಕನಿಷ್ಠ 12 ನಿರಪರಾಧಿಗಳು ಪ್ರಾಣ ಕಳೆದುಕೊಂಡಿದ್ದು, 20 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕ್ರೂರ ಕೃತ್ಯ ಕೇವಲ ಭಯೋತ್ಪಾದನೆಯಲ್ಲ- ಇದು ಮಾನವತೆಯ ವಿರುದ್ಧ ನಡೆದ ಪಾಶವಿಕ ದಾಳಿಯಾಗಿದೆ ಎನ್ನದೆ ವಿಧಿಯಿಲ್ಲ. ಮನುಷ್ಯತ್ವ ಇರುವ ಯಾವುದೇ ವ್ಯಕ್ತಿ ಆತ ಯಾವ ಧರ್ಮದವನೇ, […]

Continue Reading

ಕಂದಾವರ: ಪರವಾನಿಗೆ ಮುಗಿದರೂ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ

ನಾಗರೀಕರು ಸತತ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಅಧಿಕಾರಿಗಳು; ಅಕ್ರಮದ ಹಿಂದೆ ಗಣಿ ಇಲಾಖೆ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಶಾಮೀಲು ಶಂಕೆ.! ಇನ್ನಾದರೂ ಕಂದಾವರ ಪದವಿನ ಜನತೆಯ ರೋಧನ ಇಲಾಖೆಯ ಕಿವಿಗೆ ಮುಟ್ಟಲಿ ದುಡ್ಡಿನ ಬಲ, ಅಧಿಕಾರಿಗಳ ಬೆಂಬಲ ಇದ್ದರೆ ಕಾನೂನಿಗೆ ಮಣ್ಣೆರಚಿ ಅಕ್ರಮ ವಹಿವಾಟು ನಡೆಸಬಹುದು ಅನ್ನುವುದಕ್ಕೆ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯೇ ಅಪ್ಪಟ ಸಾಕ್ಷಿ. 2023 ರಲ್ಲಿ ಸ್ಥಳೀಯ ನಾಗರಿಕರು ಕಂದಾವರ […]

Continue Reading

ಪುತ್ತೂರು ಅಶ್ರಫ್ ಕಲ್ಲೇಗರಿಗೆ ಐದು ಲಕ್ಷ ಬಾಂಡ್ ಮುಚ್ಚಳಿಕೆ ಕೋರಿ ನೋಟೀಸು ಆಘಾತಕಾರಿ: ಮುನೀರ್ ಕಾಟಿಪಳ್ಳ

ಅಶ್ರಫ್ ಕಲ್ಲೇಗ ಅವರಿಗೆ ಪುತ್ತೂರು ಪೊಲೀಸರ ವರದಿಯ ಆಧಾರದಲ್ಲಿ ತಾಲೂಕು ದಂಡಾಧಿಕಾರಿಗಳು BNSS ಕಾಯ್ದೆ 130 ಅಡಿ ಐದು ಲಕ್ಷ ರೂಪಾಯಿ ಬಾಂಡ್ ಹಾಗು ಜಾಮೀನು ಮುಚ್ಚಳಿಕೆ ನೀಡುವಂತೆ ನಿರ್ದೇಶಿಸಿ ನೋಟೀಸು ನೀಡಿರುವುದು ತಿಳಿದು ಆಘಾತವಾಯ್ತು. ಅಶ್ರಫ್ ಕಲ್ಲೇಗ ಪುತ್ತೂರು ಭಾಗದಲ್ಲಿ ಸಕ್ರಿಯರಾಗಿರುವ ಜಿಲ್ಲೆಯ ಹಿರಿಯ ರಾಜಕಾರಣಿ. ಜನತಾದಳ, ಜಾತ್ಯಾತೀತ ಜನತಾ ದಳದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದವರು. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು. ರಾಜಕೀಯದ ಆಚೆಗೂ ಸಾಮಾಜಿಕ, ಸಾಮುದಾಯಿಕ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಮುಸ್ಲಿಮ್ ಯುವಜನ […]

Continue Reading

ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ‘ಸಕ್ರಮ’ ಮರಳುಗಾರಿಕೆ.. ಆದರೆ ನಡೆಯುತ್ತಿರುವುದು ಅಕ್ರಮ.. ಅಕ್ರಮ!

‘ಲೀಸ್’ ಹೆಸರಲ್ಲಿ ಗಡಿ ಗುರುತು ಮೀರಿ ಮರಳು ದೋಚುತ್ತಿದ್ದಾರೆ.. ಜಿಲ್ಲಾಡಳಿತ, ಗಣಿ ಇಲಾಖೆ ಮಾತ್ರ ಜಾಣ ಮೌನಕ್ಕೆ ಶರಣು! ‘ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳ್ತಾರೆ’ ಅನ್ನುವ ಗಾದೆ ಮಾತು ಚಾಲ್ತಿಯಲ್ಲಿದೆ. ಕಳ್ಳರು ಎಷ್ಟೇ ಚಾಣಾಕ್ಯರಾದರೂ ಅಧಿಕಾರಿಗಳ ಬುದ್ಧಿವಂತಿಕೆಯ ಎದುರು ಅವರ ಕಾರುಬಾರು ನಡೆಯುವುದಿಲ್ಲ ಅನ್ನುವುದು ಒಟ್ಟಾರೆ ಇದರ ಅರ್ಥ. ಆದರೆ ಈ ಮರಳುಗಾರಿಕೆ ವಿಷಯದಲ್ಲಿ ಈ ಗಾದೆ ಮಾತು ಸ್ವಲ್ಪ ಉಲ್ಟಾ-ಪಲ್ಟಾ ಆಗಿದೆ. ಅಧಿಕಾರಿಗಳು ಎಷ್ಟೇ ಬುದ್ಧಿವಂತರಾದರೂ ಈ ಮರಳುಗಾರಿಕೆ ನಡೆಸುವ […]

Continue Reading