ನಕಲಿ ದಾಖಲೆ ಸೃಷ್ಟಿಸಿ, ಗ್ರಾಹಕರಿಗೆ ವಂಚಿಸಿದ ಪ್ರಕರಣ; ಉಪ-ನೋಂದಣಾಧಿಕಾರಿ ಮತ್ತು ನವಯುಗ ಪ್ರಾಪರ್ಟಿಸ್ ಪಾಲುದಾರನ ಬಂಧನ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೋಂದಣಿ ಮಾಡಿಸಿ ನೂರಾರು ಗ್ರಾಹಕರಿಗೆ ವಂಚಿಸಿದ ಆರೋಪದಡಿ ಬೆಂಗಳೂರಿನ ಬಿಟಿಎಂ ಲೇಔಟ್‌ನ ಹಿಂದಿನ ಉಪ-ನೋಂದಣಾಧಿಕಾರಿ ಸೇರಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಟಿಎಂ ಲೇಔಟ್‌ನ ಹಿಂದಿನ ಉಪ ನೋಂದಣಾಧಿಕಾರಿ ರೂಪಾ ಮತ್ತು ನವಯುಗ ಪ್ರಾಪರ್ಟಿಸ್ ಪಾಲುದಾರ ನವೀನ್‌ ಕುಮಾರ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಇತರೆ 38 ಮಂದಿ ಜತೆ ಸೇರಿಕೊಂಡು ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಬೆರೆಟೇನ ಅಗ್ರಹಾರ ಗ್ರಾಮದ ಸರ್ವೆ ನಂಬರ್‌ 5/2ರಲ್ಲಿರುವ 40ಕ್ಕೂ ಹೆಚ್ಚು ನಿವೇಶನಗಳನ್ನು […]

Continue Reading

ಹೇರಂಜಾಲು ಯಕ್ಷ ಸಂಭ್ರಮ : ಹೇರಂಜಾಲು ಕೃತಿ ಲೋಕಾರ್ಪಣೆ : ಹೇರಂಜಾಲು ಗೌರವ ಪುರಸ್ಕಾರ ಪ್ರದಾನ

ಯಕ್ಷಗಾನಕ್ಕೆ ಹೇರಂಜಾಲು ಗೋಪಾಲ ಗಾಣಿಗರ ಕೊಡುಗೆ ಅಪಾರ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಉಡುಪಿ : ಓರ್ವ ಯಕ್ಷಗಾನ ಕಲಾವಿದ, ಓರ್ವ ಭಾಗವತ ಹೇಗಿರಬೇಕು ಎಂಬುದಕ್ಕೆ ಹೇರಂಜಾಲು ಗೋಪಾಲ ಗಾಣಿಗರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಯಕ್ಷಗಾನ ಕಲೆಗೆ ಅವರ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಶಿವರಾಮ ಶೆಟ್ಟಿ ಹೇಳಿದರು. ಅವರು ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಹೇರಂಜಾಲು ಯಕ್ಷ ಬಳಗದಿಂದ ಹೇರಂಜಾಲು ಯಕ್ಷ ಸಂಭ್ರಮ, ಹೇರಂಜಾಲು ಕೃತಿ ಲೋಕಾರ್ಪಣೆ […]

Continue Reading

ಮಂಗಳೂರು ಉತ್ತರದತ್ತ ಬಂಟರ ಚಿತ್ತ. ಮುಸ್ಲಿಮರಿಗೆ ಗೂಟ.! ರಾಜಕೀಯದಾಟ ಬಲ್ಲವರಾರು.?

ಕೆಟ್ಟ ಮೇಲೆ ಬುದ್ಧಿ ಬರುವ ಕಾಂಗ್ರೆಸ್ಸಿನ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜಕಾರಣದಲ್ಲಿ ಬಿರುಸಿನ ರಾಜಕಾರಣ ತೆರೆಮರೆಯಲ್ಲಿ ನಡೆಯುತ್ತಿರುವುದಂತೂ ಸುಳ್ಳಲ್ಲ. ಅದರಲ್ಲೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ಭರ್ಜರಿಯಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡ, ಉಡುಪಿ ರಾಜಕಾರಣದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರಾವಳಿ ರಾಜಕಾರಣದ ಬಗ್ಗೆ ಹೆಚ್ಚು ಗಂಭೀರ ಚಿಂತನೆಯಲ್ಲಿ ತೊಡಗಿಸಿಕೊಂಡಂತೆ ಕಾಣುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿನಲ್ಲಿ ಬಿಜೆಪಿಯ ಅಶೋಕ್ […]

Continue Reading

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡಿದ ಆರೋಪದ ಮೇಲೆ ನಿವೃತ್ತ ಸೇನಾ ಅಧಿಕಾರಿಯ ಬಂಧನ

ತಮ್ಮ ನೆರೆಯ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿ ಮಾಡಿದ ಆರೋಪದ ಮೇಲೆ 59 ವರ್ಷದ ನಿವೃತ್ತ ಸೇನಾ ಅಧಿಕಾರಿಯನ್ನು ಸೋಮವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.ಬಾಲಕಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ಕರೆದೊಯ್ದು ತಾಪಸಣೆ ನಡೆಸಿದಾಗ, ಅಲ್ಲಿ ಅವಳು ಎರಡು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ತಾನು ಗರ್ಭಿಣಿ ಎಂದು ತಿಳಿದು ಆಘಾತಕ್ಕೊಳಗಾದ ಬಾಲಕಿ ತನ್ನ ಪೋಷಕರ ಬಳಿ ಮಾಜಿ ಸೇನಾಧಿಕಾರಿ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಶನಿವಾರ ಸಂಜೆ ಪೋಷಕರು ಮುಂಬೈನ […]

Continue Reading

ಬೆಳ್ತಂಗಡಿ: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯ ಸೆರೆ.

ಬೆಳ್ತಂಗಡಿ ಮಾಲಾಡಿಯಲ್ಲಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಮಾಲಾಡಿ ಗ್ರಾಮದ ನಿವಾಸಿ ಪ್ರಕಾಶ್‌ ಶೆಟ್ಟಿ (53) ಎಂಬವರ ದೂರಿನಂತೆ, ಸದ್ರಿಯವರ ಮನೆಯ ಸಮೀಪ ಶ್ರೀಮತಿ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಸದ್ರಿ ಪ್ರೇಮಾ ಶೆಟ್ಟಿರವರು ಕೆಲ ಸಮಯದಿಂದ ವಿದೇಶದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿ.ಸಿ ಟಿ.ವಿ ಅಳವಡಿಸಿರುತ್ತಾರೆ. ನವೆಂಬರ್ 9 ರಂದು ಬೆಳಿಗ್ಗೆ ಪ್ರೇಮಾರವರ ಮಗಳು ಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿ ಅವರ ತಾಯಿಯ ಮನೆಯಲ್ಲಿ ಯಾರೋ […]

Continue Reading

BIG iMPACT ಮಳಲಿ ಅಣೆಕಟ್ಟಿನ ಬಳಿ ರೂಲ್ಸ್ ಬ್ರೇಕ್ ಮಾಡಿ ಅಕ್ರಮ ಮರಳುಗಾರಿಕೆ; ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಪರಿಶೀಲನೆ

ನಿನ್ನೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರ ವರದಿ ಪ್ರಕಟಿಸಿತ್ತು ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಅಣೆಕಟ್ಟಿನ ಬುಡದಲ್ಲೇ ಅಕ್ರಮ ಮರಳುಗಾರಿಕೆ ನಡೆಸಿ , ಅಣೆಕಟ್ಟು ಕುಸಿಯುವ ಭೀತಿ ಎದುರಾಗಿದ್ದು ಸ್ಥಳೀಯ ನಾಗರೀಕರು ಆತಂಕಕ್ಕೆ ಒಳಗಾಗಿದ್ದರು. ಯಾವುದೇ ಸೇತುವೆ ಅಥವಾ ಅಣೆಕಟ್ಟಿನಿಂದ 500 ಮೀಟರ್ ಅಂತರದಲ್ಲಿ ಮರಳುಗಾರಿಕೆ ಅಥವಾ ಇನ್ನಿತರ ನಿರ್ಮಾಣ ಚಟುವಟಿಕೆ ನಡೆಸಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮವಿದೆ. ಇಲಾಖೆಯು ಈಗಾಗಲೇ ಗುರುತಿಸಿರುವ ಗಡಿ ಗುರುತು ಉಲ್ಲಂಘಿಸಿ ಅಣೆಕಟ್ಟಿನ ಎರಡೂ […]

Continue Reading

ಕುಟುಂಬದಲ್ಲಿ ಆಸ್ತಿ ಒಪ್ಪಂದವು ವಿಭಜನೆಯನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ಮಾನ್ಯವಾಗಿದೆ: ಸುಪ್ರೀಂ ಕೋರ್ಟ್

ವಿವಾದ ಪರಿಹರಿಸಲು ಕುಟುಂಬ ಸದಸ್ಯರ ನಡುವೆ ಲಿಖಿತ ಅಥವಾ ಮೌಖಿಕ ಒಪ್ಪಂದ, ಕುಟುಂಬದೊಳಗೆ ಶಾಂತಿಯನ್ನು ಕಾಪಾಡಿ, ವ್ಯಾಜ್ಯಗಳಿಂದ ಮುಕ್ತ ಇದರ ಉದ್ದೇಶವಾಗಿದೆ ಕುಟುಂಬದ ಆಸ್ತಿಯ ವಿಭಜನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನೋಂದಾಯಿಸದ ಕುಟುಂಬ ಒಪ್ಪಂದವು ವಿಭಜನೆಯನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ಮಾನ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ನೋಂದಾಯಿಸದ ಕುಟುಂಬ ಒಪ್ಪಂದವು ಶೀರ್ಷಿಕೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ, ಆದರೆ ಅದನ್ನು ಪುರಾವೆಯಾಗಿ ಒಪ್ಪಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.ಕೆಳ ನ್ಯಾಯಾಲಯಗಳು ಕಾನೂನನ್ನು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು […]

Continue Reading

ಮಳಲಿ: ಅಣೆಕಟ್ಟಿನ ಬಳಿ ರೂಲ್ಸ್ ಬ್ರೇಕ್; ಅಕ್ರಮ ಮರಳುಗಾರಿಕೆ ಅಣೆಕಟ್ಟು ಕುಸಿಯುವ ಆತಂಕ.!

ಗಂಜಿಮಠ ಗ್ರಾಮ ಸಭೆ ನಿರ್ಣಯಕ್ಕೆ ಇಲ್ಲ ಬೆಲೆ; ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ದೂರು ಗಂಜಿಮಠ ಪಂಚಾಯಿತಿ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಮಳಲಿಯಲ್ಲಿ ಆಣೆಕಟ್ಟಿನ ಬುಡದಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಣೆಕಟ್ಟಿನ ಸುರಕ್ಷತೆ ದೃಷ್ಟಿಯಿಂದ ತಕ್ಷಣ ಮರಳುಗಾರಿಕೆ ನಿಷೇಧಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ. ಗಂಜಿಮಠ ಪಂಚಾಯಿತಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಹಲವು ಬಾರಿ ವಿಷಯ ಪ್ರಸ್ತಾಪಗೊಂಡಿದ್ದವು. ಜನವರಿ 8 ರಂದು ಗ್ರಾಮ ಸಭೆಯಲ್ಲಿ ಮರಳುಗಾರಿಕೆ ನಿಷೇಧಿಸುವಂತೆ ನಿರ್ಣಯ ಕೂಡ ಮಾಡಲಾಗಿತ್ತು. ಆದರೆ ಅವೆಲ್ಲವೂ ಕಸದ ಬುಟ್ಟಿ ಸೇರಿದೆ. […]

Continue Reading

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಸೋಲು ಒಪ್ಪಿಕೊಂಡಿದೆ. ಅದರ ನಾಯಕರು ಈಗಾಗಲೇ ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುತ್ತಿದ್ದಾರೆ: ಪವನ್ ಖೇರಾ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಸೋಲನ್ನು ಒಪ್ಪಿಕೊಂಡಿದೆ, ಮತ್ತು ಅದರ ಅನೇಕ ನಾಯಕರು ಈಗಾಗಲೇ ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಎನ್‌ಡಿಎ ನಾಯಕರ ಸೂಚನೆಯಂತೆ ಅಧಿಕಾರಿಗಳು ‘ಸೋಲನ್ನು ಗ್ರಹಿಸಿ’ ಪ್ರಮುಖ ಕಡತಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಆರೋಪಿಸಿದರು. ನವೆಂಬರ್ 6ರಂದು ನಡೆದ ಮೊದಲ ಹಂತದ ಮತದಾನ ಮತ್ತು ನವೆಂಬರ್ 11 ರಂದು ನಡೆಯುವ ಅಂತಿಮ ಹಂತದ ಮತದಾನಕ್ಕೆ ಇಂಡಿಯಾ ಬಣದ […]

Continue Reading

ಕರಾವಳಿಯ ಪಾತಕ ಜಗತ್ತಿನಲ್ಲಿ ನಡೆದಿದೆ ಸಾಲು ಸಾಲು ಮೋಸದ ಮರ್ಡರ್!

ವಾಮಂಜೂರು ರೋಹಿ ಯಿಂದ ಉಡುಪಿಯ ಸೈಪುದ್ದೀನ್ ವರೆಗಿನ ಹತ್ಯೆಯ ಕಹಾನಿ ಬಜಾಲ್ ನೌಫಲ್ ಚಾಪ್ಟರ್ ಕ್ಲೋಸ್ ಹಿಂದಿದೆ ಇಂತಹ ಅನುಮಾನ.! ಇವತ್ತಿನ ಹಾಗೆ ಚಿಲ್ಟು ಪಲ್ಟುಗಳಲ್ಲ. ಬಲಾಢ್ಯ ರೌಡಿಗಳು ಮಂಗಳೂರು ಭೂಗತ ಲೋಕವನ್ನು ಆಳುತ್ತಿದ್ದರು. ಒಬ್ಬೊಬ್ಬರ ಹೆಸರು ಕೇಳಿದಾಗಲೇ ಗಡಗಡ ನಡುಗುವಂತಹ ರೌಡಿಗಳು ಮಂಗಳೂರಿನಲ್ಲಿ ವಿಜೃಂಭಿಸುತ್ತಿದ್ದ ಕಾಲವೊಂದಿತ್ತು. ಆದರೆ ಅವರು ಕಟುಕರು, ರೌಡಿಗಳಾದರೂ ಸ್ವಲ್ಪ ಮಟ್ಟಿನ ಮಾನವೀಯತೆ, ಕರುಣೆ ಎಂಬುದು ಅವರಲ್ಲಿ ಇತ್ತು. ತಮ್ಮ ವಿರೋಧಿ ಗುಂಪಿನವನನ್ನು ಕೊಲ್ಲಲು ಬಂದಾಗ ಆತನ ಜೊತೆ ಹೆಂಡತಿ, ಮಕ್ಕಳು, ತಾಯಿ […]

Continue Reading