ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂ ಕದ ತಟ್ಟಿದ್ದ ಜಮೀಯತ್ ಉಲೇಮಾ ಎ ಹಿಂದ್, ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾ

ತನ್ನ ನಡೆಯನ್ನು ಸಮರ್ಥಿಸಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರಕಾರ ಕೇಂದ್ರ ಸರಕಾರ 2019 ರಲ್ಲಿ ಜಾರಿಗೆ ತಂದಿರುವ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 4 ರಲ್ಲಿ ತ್ರಿವಳಿ ತಲಾಖ್ ಅನ್ನು ಗಂಭೀರ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗಿದೆ. ಈ ಅಪರಾಧಕ್ಕೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಕಾಯ್ದೆಯನ್ನು ಕೇಂದ್ರ ಸರಕಾರ ಸಂಸತ್ತಿನಲ್ಲಿ ಅಂಗೀಕರಿಸಿತ್ತು. ಈ ಕಾಯ್ದೆಯ ವಿರುದ್ಧ ದೇಶದಾದ್ಯಂತ ಮುಸ್ಲಿಂ ಸಮುದಾಯ ಆಕ್ರೋಶವನ್ನು […]

Continue Reading

151 ಹಾಲಿ ಸಂಸದರ, ಶಾಸಕರ ವಿರುದ್ಧ ಮಹಿಳಾ ನಿಂದನೆ ಪ್ರಕರಣ.

ಭಾರತೀಯ ಜನತಾ ಪಕ್ಷವು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣದಲ್ಲಿ ಪ್ರಥಮ ಸ್ಥಾನ ಪಡೆದಿದೆ ಭಾರತದ ಒಟ್ಟು ಜನಪ್ರತಿನಿಧಿಗಳ ಪೈಕಿ 151 ಹಾಲಿ ಸಂಸದರು, ಶಾಸಕರು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 151 ಹಾಲಿ ಸಂಸದರು ಮತ್ತು ಶಾಸಕರು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಪಶ್ಚಿಮ ಬಂಗಾಳವು ಅಂತಹ ಪ್ರಕರಣಗಳನ್ನು ಎದುರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಹೊಂದಿದೆ ಎಂದು ಸಮೀಕ್ಷೆಯ ಇತ್ತೀಚಿನ ವರದಿ ತಿಳಿಸಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ […]

Continue Reading

ಕೇರಳದ ಚಿತ್ರರಂಗದಲ್ಲಿ ಸೆಕ್ಸ್ ಹಗರಣ ಬಯಲಿಗೆ; ದೊಡ್ಡ ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಬಹಿರಂಗ

ಕೇರಳದ ಚಿತ್ರರಂಗದಲ್ಲಿ ಸೆಕ್ಸ್ ಹಗರಣ ಬಯಲಿಗೆ ಬಂದಿದ್ದು, ದೊಡ್ಡ ದೊಡ್ಡ ವ್ಯಕ್ತಿಗಳು ಭಾರಿ ದಂಧೆ ನಡೆಸಿದ್ದಾರೆ ಎಂಬ ಸ್ಪೋಟಕ ವರದಿಗಳು ಲಭ್ಯವಾಗಿದೆ.ಕೇರಳ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಕೆ.ಹೇಮಾ ನೇತೃತ್ವದ ಸಮಿತಿ ರಚಿಸಿ, ಅ ಸಮಿತಿಯು ನಾಲ್ಕೂವರೆ ವರ್ಷಗಳ ನಂತರ ಸರಕಾರಕ್ಕೆ ವರದಿ ಸಲ್ಲಿಸಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ದುಃಸ್ಥಿತಿಯ ಬಗ್ಗೆಯ ವರದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಬಟಾ ಬಯಲಾಗಿದೆ. ಸಿನಿಮಾದಲ್ಲಿ ನಟಿಸಬೇಕು ಅಂದರೆ ನಟಿಯರು ಸೆಕ್ಸ್ ಗೆ […]

Continue Reading

ಹಿಜಾಬ್ ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜುವೊಂದು ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ

ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಿ ಮುಂಬೈನ ಖಾಸಗಿ ಕಾಲೇಜುವೊಂದು ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಹಿಜಾಬ್ ಅನ್ನು ನಿಷೇಧಿಸಿದರೆ ಮಹಿಳಾ ಸಬಲೀಕರಣವನ್ನು ಹೇಗೆ ಸಾಧಿಸಬಹುದು ಎಂದು ನ್ಯಾಯಾಲಯವು ಕಾಲೇಜು ಆಡಳಿತವನ್ನು ಕೇಳಿದೆ.​ ಇದರೊಂದಿಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡದ ಈ ಪ್ರಕರಣಕ್ಕೆ ಬಾಂಬೆ ಹೈಕೋರ್ಟ್ ತೀರ್ಪಿಗೆ ಸಹ ಸುಪ್ರೀಂ ಕೋರ್ಟ್ ತಡೆ ನೀಡಿದಂತಾಗಿದೆ. ಕಾಲೇಜು ಆಡಳಿತ ಮಂಡಳಿಯ ವರ್ತನೆಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯಾವುದನ್ನು ಧರಿಸಬಹುದು? […]

Continue Reading

ವಯನಾಡ್ ದುರಂತ ಬಗ್ಗೆ ಕೋಮು ಉದ್ರೇಕಕಾರಿ ಪೋಸ್ಟ್: ಪುತ್ತೂರು ವೈದ್ಯ ಮೇಲೆ ಎಫ್ ಐ ಆರ್

ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದಲ್ಲಿ ಸಾವಿಗೀಡಾದವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಪೋಸ್ಟ್ ಮಾಡಿ ಉದ್ರೇಕಕಾರಿ ರೀತಿ ಒಂದು ಸಮುದಾಯವನ್ನು ಗುರಿಯಾಗಿಸಿ ಸಮುದಾಯ, ಧರ್ಮದ ಬಗ್ಗೆ ದ್ವೇಷ ಉಂಟು ಮಾಡುವ ಬರಹ ವಿನಿಮಯ ಮಾಡಿಕೊಂಡ ಹಿನ್ನೆಲೆಯಲ್ಲಿ ಪುತ್ತೂರಿನ ಹಲವರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ. PUTTUR DOCTORS ಹಾಗೂ ಇನ್ನಿತರ ಗ್ರೂಪುಗಳಲ್ಲಿ “ಅಂದು ವಯನಾಡಿನ ನಡು ರಸ್ತೆಯಲ್ಲಿ ಹತ್ಯೇಗೀಡಾದ ಗೋವಿನ ಆತ್ಮಕ್ಕೆ ಶಾಂತಿ ಸಿಗುತ್ತಿದೆ..ದೇವರ ಮನೆಯಲಿ ಬೆಳಕಿರಬೇಕು..ಕತ್ತಲೆಯಲ್ಲ” “ಗೋ ಮಾತೆಯ ರಕ್ತ ಚೆಲ್ಲಿ ಮಲಿನವಾದ ಕೇರಳ […]

Continue Reading

ಕೇರಳ ವಯನಾಡ್ ಭೂಕುಸಿತದ ಸಂತ್ರಸ್ತರಿಗೆ ಭಾವಪೂರ್ಣ ಶ್ರದ್ಧಾಂಜಲಿ.!

ಭವಿಷ್ಯದ ಸುಂದರ ಕನಸುಗಳನ್ನು ಹೊತ್ತು ನಿದ್ರಿಸಿದ ಸಹೋದರರು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ ✍️. ಇಸ್ಮಾಯಿಲ್ ಸುಣ್ಣಲ್, ವಕೀಲರು ವಯನಾಡಿನ ಹಸಿರು ಬೆಟ್ಟಗಳು ಮತ್ತು ಕಣಿವೆಗಳಲ್ಲಿ,ವಿಶಾಲವಾದ ಪ್ರಕೃತಿಯ ಸೌಂದರ್ಯವು ಎಲ್ಲಿ ನೆಲೆಸಿತ್ತೋ, ಅಲ್ಲಿ ಆ ಒಂದು ದುರಂತ, ಆ ಹೃದಯ ವಿದ್ರಾವಕ ದೃಶ್ಯ,ಕಳೆದುಹೋದ ಜೀವಗಳು,ಛಿದ್ರಗೊಂಡ ಭರವಸೆಗಳು, ಕಮರಿಹೋದ ಕನಸುಗಳು,ಆ ರಾತ್ರಿಯ ಕತ್ತಲೆಯಲ್ಲಿ!ರೌಧ್ರತೆಯೊಂದಿಗೆ ಸ್ಫೋಟಗೊಂಡ ಪರ್ವತ, ಶಕ್ತಿಯಿಂದ ಮುನ್ನಡೆದ ನೀರು, ಜೀವಗಳನ್ನು ಹೊತ್ತೊಯ್ದವುಬಿಟ್ಟುಹೋದವು ದುರವಸ್ಥೆಯ ಜಾಡು. ಕುಟುಂಬಗಳು ಮಣ್ಣಾದವು, ಉಳಿದವರ ಭವಿಷ್ಯವು ಅನಿಶ್ಚಿತವಾದವು!ಪ್ರೀತಿಪಾತ್ರರ ನೆನಪುಗಳು, ಬಿಟ್ಟುಹೋದವು,ಶಾಶ್ವತವಾದ ನೋವು.ಅಗಲಿದವರ ಆತ್ಮಕ್ಕೆ […]

Continue Reading

ಜಾನುವಾರು ಕಳ್ಳಸಾಗಣೆ ಪ್ರಕರಣ:ಟಿಎಂಸಿ ನಾಯಕ ಅನುಬ್ರತಾ ಮೊಂಡಲ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಅನುಬ್ರತಾ ಮೊಂಡಲ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಪ್ರಕರಣದ ವಿಚಾರಣೆಗೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅವರು ಎರಡು ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂದು ಗಮನಿಸಿದ ನಂತರ ಮೊಂಡಲ್ ಅವರಿಗೆ ಪರಿಹಾರವನ್ನು ನೀಡಿತು. ಆದಾಗ್ಯೂ, ನವೆಂಬರ್ 2022 ರಲ್ಲಿ ಅದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) […]

Continue Reading

ಹೈಕೋರ್ಟ್ ಆದೇಶ ಉಲ್ಲಂಘನೆ: ಪತಂಜಲಿಗೆ 4 ಕೋಟಿ ರೂ. ದಂಡ

ಕರ್ಪೂರ ಉತ್ಪನ್ನವನ್ನು ಮಾರಾಟ ಮಾಡದಂತೆ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಪತಂಜಲಿ ಕಂಪನಿಗೆ ಬಾಂಬೆ ಹೈಕೋರ್ಟ್ ಸೋಮವಾರ 8 ಕೋಟಿ ರೂಪಾಯಿ ದಂಡ ವಿಧಿಸಿದೆ. ಪತಂಜಲಿ ಕಂಪನಿಯು ಕರ್ಪೂರ ಉತ್ಪನ್ನಗಳ ಮಾರಾಟಕ್ಕೆ ನಮ್ಮ ಕಂಪನಿಯ ಟ್ರೇಡ್ ಮಾರ್ಕ್ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಮಂಗಳಂ ಆರ್ಗಾ ನಿಕ್ಸ್ ಕಂಪನಿಯು ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಉತ್ಪನ್ನ ಮಾರಾಟ ಮಾಡದಂತೆ 2023 ರಲ್ಲಿ ಪತಂಜಲಿ ನಿರ್ಬಂಧ ವಿಧಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಐ ಛಾಗಲಾ ಅವರು […]

Continue Reading

ವಯನಾಡಿನಲ್ಲಿ ಭಾರೀ ಭೂಕುಸಿತ; ನೂರಾರು ಮಂದಿ ಸಿಲುಕಿರುವ ಶಂಕೆ.!

ಕೇರಳದ ವಯನಾಡಿ ಮೆಪ್ಪಾಡಿ ಬಳಿಯ ಹಲವಾರು ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಭಾರಿ ಭೂಕುಸಿತ ಸಂಭವಿಸಿದ್ದು, ಅನೇಕ ಜನರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ವರದಿಗಳ ಪ್ರಕಾರ, ನೂರಾರು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಅಗ್ನಿಶಾಮಕ ಮತ್ತು ಎನ್ ಡಿಆರ್‌ಎಫ್ ತಂಡಗಳನ್ನು ಭೂಕುಸಿತ ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಮತ್ತೊಂದು ಎನ್ ಡಿಆರ್‌ಎಫ್ ತಂಡವು ವಯನಾಡಿಗೆ ತೆರಳುತ್ತಿದೆ ಎಂದು ಅದು ಹೇಳಿದೆ. ಹೆಚ್ಚುವರಿಯಾಗಿ, ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು […]

Continue Reading

ಜಡ್ಜ್ ಗಳಿಗೆ ಸಾಮಾನ್ಯ ಜ್ಞಾನ ಅಗತ್ಯ: ಸಿಜೆಐ

ಕ್ರಿಮಿನಲ್ ಪ್ರಕರಣಗಳನ್ನು ಅನುಮಾನದ ದೃಷ್ಟಿಕೋನದಲ್ಲಿ ನೋಡುವ ಮೂಲಕ ಕೆಳ ನ್ಯಾಯಾಲಯದ ಜಡ್ಜ್ ಗಳು ಆರೋಪಿಗಳಿಗೆ ಜಾಮೀನು ನೀಡಲು ಹಿಂಜರಿಯುತ್ತಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಉದ್ದೇಶದಿಂದ ಜಾಮೀನು ನೀಡದೆ ಸುರಕ್ಷಿತ ಆಟವಾಡುತ್ತಿದ್ದಾರೆ: ಸಿಜೆಐ.ಡಿ.ವೈ ಚಂದ್ರಚೂಡ್ “ಪ್ರಮುಖ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡದ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಸುರಕ್ಷಿತವಾಗಿ ಆಟವಾಡುತ್ತಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. “ಕ್ರಿಮಿನಲ್ ಪ್ರಕರಣಗಳನ್ನು ಅನುಮಾನದ ದೃಷ್ಟಿಕೋನದಲ್ಲಿ ನೋಡುವ ಮೂಲಕ ಕೆಳ ನ್ಯಾಯಾಲಯದ ಜಡ್ಜ್ ಗಳು ಆರೋಪಿಗಳಿಗೆ ಜಾಮೀನು […]

Continue Reading