ಲಾಲನೆಯರ ಮೋಹಕ್ಕೆ ಬಿದ್ದು, ‘DRDO’ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐಗೆ ರವಾನೆ ಮಾಡಿದ ಗುಜರಾತ್ ಮೂಲದ ಪ್ರವೀಣ್ ಮಿಶ್ರಾ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಜರಾತ್ ಭರೋಜ್ ಜಿಲ್ಲೆಯ ಪ್ರವೀಣ್ ಮಿಶ್ರಾ ಎಂದು ಗುರುತಿಸಲಾಗಿದೆ. ಲಾಲನೆಯರ ಹನಿಟ್ರ್ಯಾಪ್ ಬೇಟೆಯ ನಂತರ ಆರೋಪಿ ಪ್ರವೀಣ್ ಮಿಶ್ರಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಯಾರಿಸಿದ ಡ್ರೋನ್ ಬಗ್ಗೆ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಯೊಂದಿಗೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಎಸ್ಎಲ್ ಸಿಐಡಿ ಕ್ರೈಂ ಟೀಂ […]

Continue Reading

ಸಾವಿನ ಕದ ತಟ್ಟಿ ಹೊರಬಂದ ರಹೀಂಗೆ ಮತ್ತೊಂದು ಸಂಕಟ.!

18 ವರ್ಷಗಳ ಬಳಿಕ ಫಾತಿಮಾರವರ ಕಣ್ಣೀರು ಅನಂದ ಬಾಷ್ಪವಾಗಿ ಮಾರ್ಪಟ್ಟಿದೆ ಸೌದಿ ಅರೇಬಿಯಾದ ಜೈಲಿನಲ್ಲಿರುವ ಕೇರಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ಮತ್ತೊಂದು ಸಂಕಟ ಎದುರಾಗಿದೆ. ಒಂದು ಕೋಟಿ 66 ಲಕ್ಷ ರೂಪಾಯಿಗಳನ್ನು ತಕ್ಷಣವೇ ಪಾವತಿಸಬೇಕು ಎಂದು ಅಬ್ದುಲ್ ರಹೀಂ ಪರ ವಕೀಲರ ಬೇಡಿಕೆ ಹೊಸ ಬಿಕ್ಕಟ್ಟನ್ನು ಸೃಷ್ಠಿಸಿದೆ. ರಹೀಂ ಪರ ವಕೀಲರ ಸಂಭಾವನೆ ಹಸ್ತಾಂತರಿಸಿದರೆ, ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆಯನ್ನು ತೀವ್ರಗೊಳಿಸಬಹುದು ಎಂದು ರಿಯಾದ್‌ನಲ್ಲಿರುವ ಕಾನೂನು ನೆರವು ಸಮಿತಿ ಹೇಳಿದೆ. ಅಬ್ದುಲ್ ರಹೀಮ್ ಬಿಡುಗಡೆಗಾಗಿ ದತ್ತಿಯಾಗಿ ನೀಡಿದ […]

Continue Reading

ಸ್ಟಿಂಗ್ ಆಪರೇಶನ್: ಅಸಲಿ ಸತ್ಯ ಬಯಲು!

ಕೋಲ್ಕತ್ತಾ ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣದ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಥಳೀಯ ಚಾನೆಲ್ ವೊಂದು ಮಾಡಿದ ಸ್ಪಿಂಗ್ ಆಪರೇಷನ್ ನ ವಿಡಿಯೋ ದಲ್ಲಿ ಹೇಳಲಾಗುತ್ತಿದೆ. ಸಂದೇಶ್ ಖಾಲಿಯಲ್ಲಿ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವಾದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಎಸಗಿದ ಪ್ರಕರಣ ಹೆಚ್ಚು ಸದ್ದು ಮಾಡಿತ್ತು. ಆದರೆ ಶನಿವಾರ ಸ್ಥಳೀಯ ಚಾನೆಲ್ ವೊಂದು ನಡೆಸಿದ್ದ ಸ್ವಿಂಗ್ ಆಪರೇಷನ್ ನಲ್ಲಿ ಬಿಜೆಪಿಯ ಬೂತ್ ಮುಖ್ಯಸ್ಥ ಎಂದು ಹೇಳಿಕೊಳ್ಳುವ ಒಬ್ಬರು, ಈ […]

Continue Reading

ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು; ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ನೀಡಬೇಕು: ಮದ್ಯಪ್ರದೇಶ ಹೈಕೋರ್ಟ್​

ಆಧುನಿಕತೆ ಬೆಳೆದಂತೆ ಪಾಶ್ಚಾತ್ಯ ಸಂಸ್ಕೃತಿಗೆ ಜನ ಒಗ್ಗಿಕೊಳ್ಳಲು ಬಯಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್’ ಎನ್ನುವುದು ಸಾಮಾನ್ಯವಾಗುತ್ತಿದೆ. ಇಂತಹ ಸಂಬಂಧದಿಂದಾಗಿ ಈಗಾಗಲೇ ಹಲವಾರು ಮಂದಿ ಸಮಸ್ಯೆಗೆ ಸಿಲುಕಿರುವುದು. ಅದರಲ್ಲೂ ಮಹಿಳೆಯರೇ ತಮಗೆ ಮೋಸವಾಗಿದೆ ಎಂದು ದೂರು ಕೂಡ ನೀಡಿತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಹೈಕೋರ್ಟ್​ ಮಹತ್ವದ ತೀರ್ಪುವೊಂದನ್ನು ನೀಡಿದೆ. ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು. ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ಕೊಡಬೇಕು ಎಂದು ಮದ್ಯಪ್ರದೇಶ ಹೈಕೋರ್ಟ್​ ಹೇಳಿದೆ.ಪುರುಷನೊಂದಿಗೆ ಹಲವು ವರ್ಷಗಳಿಂದ ವಾಸಿಸುವ ಮಹಿಳೆ […]

Continue Reading

ಹಕ್ಕಿ ಜ್ವರ ಅಥ್ವಾ H5N1 ವೈರಸ್‌ ಜಗತ್ತಿನಲ್ಲಿ ಮತ್ತೊಮ್ಮೆ ಆಘಾತ ಸೃಷ್ಠಿಸುವ ಸಾಧ್ಯತೆ; ಇದು ಕೋವಿಡ್‌ ಗಿಂತಲೂ ಮಾರಕವಾಗಿ ಇಡೀ ಜಗತ್ತನ್ನೇ ಕಾಡಲಿದೆ: ಅಮೆರಿಕದ ತಜ್ಞರ ಎಚ್ಚರಿಕೆ

ಆತಂಕಕಾರಿ ಬೆಳವಣಿಗೆಯಲ್ಲಿ ಹಕ್ಕಿ ಜ್ವರ ಅಥ್ವಾ H5N1 ವೈರಸ್‌ ಜಗತ್ತಿನಲ್ಲಿ ಮತ್ತೊಮ್ಮೆ ಆಘಾತ ಸೃಷ್ಠಿಸುವ ಸಾಧ್ಯತೆ ಇದೆ. ಇದು ಕೋವಿಡ್‌ ಗಿಂತಲೂ ಡೇಂಜರ್ ಆಗಿ ಜಗತ್ತನ್ನೇ ಕಾಡಲಿದೆ ಎಂದು ಅಮೆರಿಕದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಇದೀಗ H5N1 ಪ್ರಕರಣಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಒಟ್ಟು 6 ರಾಜ್ಯಗಳ ಸಾಕು ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸುಮಾರು ಹಸುಗಳಲ್ಲಿ ಮತ್ತು ಅವುಗಳ ಪಾಲಕರಲ್ಲಿ H5N1 ಪಾಸಿಟಿವ್‌ ಬಂದಿದೆ. ಕೆಲವು ಬೆಕ್ಕುಗಳಲ್ಲೂ ಈ ಖಾಯಿಲೆ […]

Continue Reading

ಮತ್ತೊಂದು ಹೊಸ ಸಾಂಕ್ರಾಮಿಕ ರೋಗವು ಹೊರಹೊಮ್ಮಬಹುದಾದ ಸಾಧ್ಯತೆ ದಟ್ಟವಾಗಿದೆ: ಯುಕೆಯ ಸಾಂಕ್ರಾಮಿಕ ರೋಗ ತಜ್ಞರು

ಕೋವಿಡ್ 19 ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿ ನಾಲ್ಕು ವರ್ಷಗಳು ಕಳೆದಿವೆ. ಇದರ ಪರಿಣಾಮವು ಕಡಿಮೆಯಾಗಿದೆ. ಆದರೆ ಯಾವುದೇ ಸಮಯದಲ್ಲಿ ಮತ್ತೊಂದು ಹೊಸ ಸಾಂಕ್ರಾಮಿಕ ರೋಗವು ಹೊರಹೊಮ್ಮಬಹುದಾದ ಸಾಧ್ಯತೆ ಇದೆ ದಟ್ಟವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವರದಿಯ ಪ್ರಕಾರ, U.K ಯ ಸಾಂಕ್ರಾಮಿಕ ರೋಗ ತಜ್ಞರು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಮಹಾ ವೈರಸ್‌ಗಳು ಮತ್ತೊಂದು ಸಾಂಕ್ರಾಮಿಕ ರೋಗವಾಗಿ ತಲೆದೋರಬಹುದು ಎಂದು ಎಚ್ಚರಿಸಿದ್ದಾರೆ. ಮುಂದಿನ ಸಾಂಕ್ರಾಮಿಕ ವೈರಸ್ ಹಬ್ಬುವ ಸಾಧ್ಯತೆ ದಟ್ಟವಾಗಿದೆ. ಇದು ಎರಡು ವರ್ಷ ಅಥವಾ ಇನ್ನೂ […]

Continue Reading

ಅಮೃತಬಳ್ಳಿ ಉಪಯುಕ್ತತೆ ಬ್ರಿಟನ್ ಅಂಗೀಕಾರ

ಯಕೃತ್ತನ್ನು ಆರೋಗ್ಯಕರವಾಗಿಡಲು ಮತ್ತು ದೇಹದ ಜೀವಕೋಶಗಳ ಅವನತಿಯನ್ನು ತಡೆಯಲು ಸಹಾಯಕ; ಸಂಶೋಧನೆಯಿಂದ ದೃಢ ಯಕೃತ್ ಅನ್ನು ಆರೋಗ್ಯಕರ ವಾಗಿಡುವ ಸಾಮರ್ಥ್ಯವನ್ನು (ಹೆಪಟೊಪ್ರೊಟೆಕ್ಟಿವ್) ಅಮೃತಬಳ್ಳಿ (ಗಿಲೋಯ್) ಹೊಂದಿದೆ. ಅಲ್ಲದೇ, ಇದು ಇತರ ಪ್ರಯೋಜನಕಾರಿ ಅಂಶಗಳನ್ನೂ ಹೊಂದಿದೆ ಎಂದು ಬ್ರಿಟನ್ ಈಗ ಧೃಡೀಕರಿಸಿದೆ. ಇದನ್ನು ಗ್ರೇಟ್ ಬ್ರಿಟನ್ ನ ಜರ್ನಲ್ ಆಫ್ ದಿ ರಾಯಲ್ ಫಾರ್ಮಾ ಸ್ಯುಟಿಕಲ್ ಸೊಸೈಟಿಯ ಪ್ರಸಿದ್ಧ ಸಂಶೋಧನಾ ಪತ್ರಿಕೆ ‘ಜರ್ನಲ್ ಆಫ್ ಫಾರ್ಮಸಿ ಆಂಡ್ ಫಾರ್ಮಕಾಲಜಿ’ ನಲ್ಲಿ ಪ್ರಕಟಿಸಲಾಗಿದೆ. ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ […]

Continue Reading

ಮದುವೆ ನೋಂದಣಿಗಾಗಿ ಅಮೆರಿಕದಿಂದ ವಾಸ್ತವಿಕವಾಗಿ ಹಾಜರಾಗಲು ಭಾರತೀಯ ದಂಪತಿಗೆ ಹೈಕೋರ್ಟ್ ಅನುಮತಿ

ಹೊಸದಿಲ್ಲಿ: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ದಂಪತಿಗೆ ತಮ್ಮ ವಿವಾಹ ನೋಂದಣಿಗಾಗಿ ಇಲ್ಲಿನ ನೋಂದಣಿ ಪ್ರಾಧಿಕಾರದ ಮುಂದೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ಪುರುಷ ಮತ್ತು ಮಹಿಳೆಗೆ ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾದ ಭಾರತೀಯ ಕಾನ್ಸುಲೇಟ್ ಜನರಲ್ ಮುಂದೆ ಹಾಜರಾಗಲು ಮತ್ತು ಅಲ್ಲಿಂದ ವೀಡಿಯೊ ಕಾನ್ಫರೆನ್ಸ್‌ಗೆ ಸೇರುವಂತೆ ಸೂಚಿಸಿದರು ಮತ್ತು ಪ್ರಗತಿಯ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. , ಯಾರಾದರೂ ದಂಪತಿಗಳನ್ನು ಅನುಕರಿಸುವ ಸಾಧ್ಯತೆಯನ್ನು […]

Continue Reading

ದುಬೈಯಲ್ಲಿ ರಸ್ತೆ ಅಪಘಾತ, ಕೋಟೆಕಾರಿನ ಬೀರಿ ನಿವಾಸಿ ವಿಧಿಶಾ ಮೃತ್ಯು

ದುಬೈಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಕೋಟೆಕಾರು ಬೀರಿ ನಿವಾಸಿ ವಿದಿಶಾ ಎಂಬವರು ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕುಲಾಲ್ ಮತ್ತು ವಿಠಲ್ ಕುಲಾಲ್ ಅವರ ಪುತ್ರಿ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ತದ ನಂತರ 2019ರಲ್ಲಿ ದುಬೈಗೆ ತೆರಳಿ ಕಳೆದ ಐದು ವರುಷಗಳಿಂದ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ದಿನಂಪ್ರತಿ ಕಂಪೆನಿಯ ಕ್ಯಾಬ್‍ನಲ್ಲಿ ಸಂಚರಿಸುತ್ತಿದ್ದ ವಿದಿಶಾ ಫೆ. 22ರ ಗುರುವಾರದಂದು ತನ್ನ ಕಾರಿನಲ್ಲೆ […]

Continue Reading

ಪೆಬ್ರವರಿ 13, 14ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರ ವಿಧಾನಸೌಧ ಚಲೋ ಅಹೋರಾತ್ರಿ ಹೋರಾಟ

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಿಂಗಳಿಗೆ ರೂ. 15 ಸಾವಿರ ಪ್ರೋತ್ಸಾಹಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುವ ಆಶಾ ಕಾರ್ಯಕರ್ತೆಯರು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಇದೇ ಪೆಬ್ರವರಿ 13 ಮತ್ತು 14ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ‘ವಿಧಾನಸೌಧ ಚಲೋ’ ಅಹೋರಾತ್ರಿ ಹೋರಾಟಹಮ್ಮಿಕೊಂಡಿದ್ದಾರೆ. ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಆಗುತ್ತಿರುವ ವಂಚನೆ ತಡೆಯಲು ಆರ್.ಸಿ.ಎಚ್. ಪೋರ್ಟಲ್ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಬೇರ್ಪಡಿಸಬೇಕು. ಮೊಬೈಲ್ ಬಳಕೆ ಬಾರದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮೊಬೈಲ್ […]

Continue Reading