ಸುರತ್ಕಲ್ ನಲ್ಲಿ ಬಿಜೆಪಿ ಅಡಳಿತದ ನಗರ ಪಾಲಿಕೆಯ ಅಧಿಕೃತ ಡೆಂಗಿ ಸೊಳ್ಳೆ, ಲಾರ್ವಾ ಉತ್ಪತ್ತಿ ಕೇಂದ್ರ

ಪಾಳು ಬಿದ್ದಿರುವ ಸುರತ್ಕಲ್ ಮಾರುಕಟ್ಟೆ ಸ್ಥಿತಿ ಕಂಡು ಅಸಮಾಧಾನ, ಆಕ್ರೋಶಗೊಂಡಿರುವ ಇಲ್ಲಿನ ಜನತೆ “ಯಾರ ಕೆನ್ನೆಗೆ ಭಾರಿಸಬೇಕು” ಭರತ್ ಶೆಟ್ರೆ: ಮುನೀರ್ ಕಾಟಿಪಳ್ಳ ದಕ್ಷಿಣ ಕನ್ನಡ ಜಿಲ್ಲೆ ಡೆಂಗಿಯಿಂದ ತತ್ತರಿಸಿದೆ. ಡೆಂಗಿ ಹರಡುವ ಸೊಳ್ಳೆಗಳು ಒಂದೆಡೆ ನಿಂತ ನೀರಿನಲ್ಲಿ ಉತ್ಪಾದನೆ ಆಗುತ್ತವೆ. ಲಾರ್ವಾ ಉತ್ಪಾದನೆ ಆಗುವ ಇಂತಹ ಸ್ಥಳಗಳನ್ನು ಗುರುತಿಸಿ ಅವುಗಳನ್ನು ನಾಶ ಪಡಿಸಬೇಕು ಎಂದು ಸರಕಾರ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಪ್ರಕಟನೆಗಳ ಮೇಲೆ ಪ್ರಕಟನೆ ಹೊರಡಿಸುತ್ತಿದೆ. ಡೆಂಗಿ ಜ್ವರದ ಪ್ರಧಾನ ಕೇಂದ್ರವಾಗಿರುವ ಮಂಗಳೂರು ನಗರದಲ್ಲಿಯಂತೂ ಈ […]

Continue Reading

ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್‌ ಆನಂದ್‌ ಸಿ.ಎಲ್‌. ವರ್ಗಾವಣೆ ಆದೇಶ ರದ್ದುಗೊಳಿಸಿದ ಸರಕಾರ.

ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್‌ ಆನಂದ್‌ ಸಿ.ಎಲ್‌. ಅವರ ವರ್ಗಾವಣೆ ಆದೇಶವನ್ನು ಸರಕಾರ ರದ್ದುಗೊಳಿಸಿದೆ. ಅನಂದ್‌ ರವರು 2023ರ ಜೂ. 28ರಂದು ಮಂಗಳೂರು ಪಾಲಿಕೆಯ ಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಸರಕಾರ ಜುಲೈ 4ರಂದು ಹುದ್ದೆ ಗೊತ್ತುಪಡಿಸದೆ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಈ ಮೊದಲು ಮಂಗಳೂರಿನಲ್ಲಿ ಎ.ಸಿ ಯಾಗಿದ್ದ ಪ್ರಸ್ತುತ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ರವಿಚಂದ್ರ ನಾಯಕ್‌ ಅವರನ್ನು ಮಹಾನಗರ ಪಾಲಿಕೆಯ ಕಮಿಷನರ್‌ ಸ್ಥಾನಕ್ಕೆ ನಿಯೋಜನೆ ಮಾಡಿತ್ತು. […]

Continue Reading

ರಾಹುಲ್ ಗಾಂಧಿಯ ಕೆನ್ನೆಗೆ ಬಾರಿಸುವುದು ಬಿಡಿ, ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನ ಮೈ ಮುಟ್ಟುವ ತಾಕತ್ತು, ದಮ್ಮು ಭರತ್ ಶೆಟ್ರೆಗಿದೆಯಾ: ಗಿರೀಶ್ ಆಳ್ವ

ರಾಹುಲ್ ಗಾಂಧಿ ಈ ದೇಶದ ಪರಮೋಚ್ಚ ನಾಯಕ, ರಾಹುಲ್ ಗಾಂಧಿ ಕೆನ್ನೆಗೆ ಬಾರಿಸುವುದು ಬಿಡಿ, ನಮ್ಮ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನ ಮೈ ಮುಟ್ಟುವ ತಾಕತ್ತು ನಿಮಗಿದೆಯೆ ಭರತ್ ಶೆಟ್ಟಿಯವರೇ.? ಎಂದು ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಗಿರೀಶ್ ಆಳ್ವ ಕಿಡಿಕಾರಿದ್ದಾರೆ. ನೀವು ಶಾಸಕರಾಗಲು ನಾಲಾಯಕ್, ಸಂವಿಧಾನದ ಆಶಯದಂತೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ನೀವು ರಸ್ತೆ ಬದಿ ಪುಡಿ […]

Continue Reading

ಮಣ್ಣು ಕುಸಿತದಲ್ಲಿ ಸಾವನ್ನಪ್ಪಿದ ಕಟ್ಟಡ ಕಾರ್ಮಿಕನ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ – ಸುನಿಲ್ ಕುಮಾರ್ ಬಜಾಲ್

ಮಂಗಳೂರು ನಗರದ ಬಲ್ಮಠ ವಾಸುಲೇನ್ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಮಣ್ಣು ಕುಸಿತದಿಂದಾಗಿ ಸಾವನ್ನಪ್ಪಿದ ಹಾಗೂ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿರುವ ಉತ್ತರಭಾರತ ಮೂಲದ ಕಾರ್ಮಿಕರಿಬ್ಬರಿಗೆ ತಲಾ 50 ಲಕ್ಷ ರೂ.ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಹಾಗೂ ಕಾರ್ಮಿಕ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ CITU ದ.ಕ‌.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಎಚ್ಚರಿಕೆ ನೀಡಿದರು. ಮಣ್ಣು ಕುಸಿತ ಘಟನೆಗೆ ನೇರ ಕಾರಣವಾದ ಬಿಲ್ಡರ್ ಹಾಗೂ ಜಿಲ್ಲಾಡಳಿತದ […]

Continue Reading

ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಞಳ್ ಕೂರ ವಿಧಿವಶ

ಸಯ್ಯಿದ್ ತಾಜುಲ್ ಉಲಮಾ ಉಳ್ಳಾಲ ತಂಞಳ್ ರವರ ಸುಪುತ್ರರಾಗಿರುವ ಸಯ್ಯಿದ್ ಫಝಲ್ ಕೋಯಮ್ಮ ತಂಞಳ್ ಅಲ್ ಬುಖಾರಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಉಳ್ಳಾಲದ ಖಾಝಿ ಯಾಗಿ, ಪ್ರಮುಖ ಧಾರ್ಮಿಕ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದರು. ಅವರ ಜನಾಝ ಕೇರಳದ ಎಟ್ಟಿಕುಲಂ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ ಎಂದು ಉಳ್ಳಾಲದ ದರ್ಗಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

ನಂಬಿದ ವಕೀಲರಿಂದಲೇ ಮೋಸ.! ಜಮೀನು ವಂಚನೆ ಪ್ರಕರಣ: ವಕೀಲರ ಸಹಿತ ಆರೋಪಿಗಳ ಮೇಲೆ ಪ್ರಕರಣ ದಾಖಲು.

ಸುರತ್ಕಲ್: ಜಮೀನು ಮಾರಾಟದಲ್ಲಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಸೇರಿದಂತೆ ಕ್ರಯಪತ್ರದ ಮೂಲಕ ಮಾರಾಟ ಮಾಡಲು ನೆರವು ನೀಡಿದ ಮತ್ತು ಅಕ್ರಮದಲ್ಲಿ ಭಾಗಿಯಾದ 14 ಮಂದಿ ಮೇಲೆ ಸೆನ್ ಪೊಲೀಸರು FIR ದಾಖಲು ಮಾಡಿದ್ದಾರೆ. ಮಂಗಳೂರ ನಗರದ ಗಂಗಾಧರ್ ಎಚ್. ಎಂಬವರು ಈ ಪ್ರಕರಣದ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಕುಸುಮ ಕೆ. ಸುವರ್ಣ, ನೀರಜಾಕ್ಷಿ ಅಗರ್‌ವಾಲ್ ಮತ್ತು ಇತರ 11 ಮಂದಿ ಪ್ರಕರಣದಲ್ಲಿ ಇತರ ಆರೋಪಿಗಳಾಗಿದ್ದಾರೆ. ಸುರತ್ಕಲ್ ಮುಂಚೂರಿನ ಕೆ. ರುಕ್ಮಯ್ಯ ಶೆಟ್ಟಿ ಅವರು […]

Continue Reading

ವಿಟ್ಲ ಠಾಣಾ ವ್ಯಾಪ್ತಿಯ ಕೊಡಂಗಾಯಿ ಬಲಿಪಗುಳಿಯಲ್ಲಿ ಕಳ್ಳರ ಕರಾಮತ್ತು.

ಕಿಟಕಿಯ ಸರಳು ತುಂಡರಿಸಿ ಒಳನುಗ್ಗಿದ ಕಳ್ಳರು ವೃದ್ಧೆಯ ಕತ್ತು ಹಿಸುಕಿ ಚಿನ್ನಾಭರಣ ಕದ್ದೊಯ್ದು ಪರಾರಿ. ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿ ಎಂಬಲ್ಲಿ ಕಳ್ಳತನ ನಡೆದಿದೆ. ವಿದೇಶದಲ್ಲಿರುವ ಸುಲೈಮಾನ್ ಎಂಬವರ ಮನೆಯ ಮಹಡಿಯ ಕಿಟಕಿ ಸರಳು ತುಂಡರಿಸಿ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರಿಂದ ದುಷ್ಕೃತ್ಯ ನಡೆದಿದೆ. ಕೋಣೆಯೊಳಗೆ ನಿದ್ರಿಸಿದ್ದ ವೃದ್ಧೆ ಐಸಮ್ಮಾ(72)ಅವರ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಕಿವಿಯಲ್ಲಿದ್ದ ಹಿಂದಿನ ಕಾಲದ ಚಿನ್ನದ ಕಿವಿಯೋಲೆಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಇನ್ನೊಂದು ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಐಸಮ್ಮಾ […]

Continue Reading

ಮಂಗಳೂರು ಮೀನುಗಾರಿಕಾ ಧಕ್ಕೆ ಪ್ರದೇಶದ ಅಭಿವೃದ್ಧಿಯ ಭಗೀರಥ ಅಶ್ರಫ್ ಕಂದಕ್

ಗುಜರಿ ವಾಹನಕ್ಕೆ ಮುಕ್ತಿ ಎಂದು.? ಟ್ರಾಫಿಕ್ ಇಲಾಖೆ, ಆರೋಗ್ಯ ಇಲಾಖೆ ಇತ್ತ ಕಣ್ಣಾಡಿಸಲಿ.! ಮಂಗಳೂರಿನ ಸದಾ ಜಿನುಗುಡುವ ರಸ್ತೆ ಅದು. ದಿನಕ್ಕೆ ಕೋಟ್ಯಂತರ ಆದಾಯ ತರುವ ಹೆಬ್ಬಾಗಿಲು ಅದು. ಸರಕಾರದ ಖಜಾನೆ ತುಂಬಿಸುವ ಆ ಸುತ್ತಮುತ್ತಲಿನ ಪ್ರದೇಶದ ಅವ್ಯವಸ್ಥೆ ಹೇಳತೀರದು. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ, ಬಿಝಿ ಟ್ರಾಫಿಕ್ ಇರುವುದರಿಂದ ವಾಹನ ಸವಾರರು ಅಲ್ಲಿ ಓಡಾಡುವುದೆಂದರೆ ಬಾವಿಗೆ ಬಿದ್ದು ಮೇಲೆ ಎದ್ದ ಅನುಭವ. ಇದು ಸ್ಮಾರ್ಟ್ ಸಿಟಿ ಎಂದು ಹೇಳಿಕೊಳ್ಳುವ ಮಂಗಳೂರಿನ ಪರಿಸ್ಥಿತಿ. ಅಷ್ಟಕ್ಕೂ ಈ […]

Continue Reading

ಕಲ್ಲಡ್ಕ: ಜಿಲ್ಲಾಧಿಕಾರಿ ಬಂದು ಹತ್ತು ದಿನ ಕಳೆದರೂ, ಕಲ್ಲಡ್ಕ-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಯಾಗಿಲ್ಲ.!

ಬಡ ಕೃಷಿಕರ ನೆಮ್ಮದಿಯ ಬದುಕಿಗೆ ಕೊಳ್ಳಿಯಿಟ್ಟ NHAI ಅಧಿಕಾರಿಗಳು. ಕಲ್ಲಡ್ಕ: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅವ್ಯವಸ್ಥೆ ನೋಡಲು ಜಿಲ್ಲಾಧಿಕಾರಿ ಬಂದು ಹತ್ತು ದಿನ ಕಳೆದರೂ ಕಲ್ಲಡ್ಕ-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಸರಿಯಾಗಿಲ್ಲ. ಬಡ ಕೃಷಿಕರ ನೆಮ್ಮದಿಯ ಬದುಕಿಗೆ ಕೊಳ್ಳಿಯಿಟ್ಟ NHAI ಅಧಿಕಾರಿಗಳು. ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪರಿಸರದ ರೈತರು ನರಕಯಾತನೆ ಅನುಭವಿಸುತ್ತಿದ್ದಾರೆ. ಪೆರ್ನೆ, ಬಿಳಿಯೂರು ಗ್ರಾಮಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯ ಬಡ ರೈತರು ಗೊತ್ತುಗುರಿಯಿಲ್ಲದ ಅವ್ಯವಸ್ಥೆಯ ಕಾಮಗಾರಿಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. […]

Continue Reading

ಮಂಗಳೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ರವಿಚಂದ್ರ ನಾಯಕ್

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್ ಅವರಿಗೆ ವರ್ಗಾವಣೆಯಾಗಿದ್ದು, ನೂತನ ಆಯುಕ್ತರಾಗಿ ರವಿಚಂದ್ರ ನಾಯಕ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ರವಿಚಂದ್ರ ನಾಯಕ್ ಅವರು ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದರು. ಮಂಗಳೂರಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ರವಿಚಂದ್ರ ನಾಯಕ್ ಅವರು ಮಂಗಳೂರು ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ, ಮಂಗಳೂರು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಆಗಿಯೂ ಸೇವೆ ಸಲ್ಲಿಸಿದ್ದರು. ಇವರು ಕರ್ತವ್ಯದಲ್ಲಿ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸರಳತೆಗೆ […]

Continue Reading