ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮ-ಸಕ್ರಮ ನೆಪದಲ್ಲಿ ಭಾರೀ ಗೋಲ್ಮಾಲ್, ಸರ್ಕಾರಿ ಜಮೀನು ಸ್ವಾಹಾ..

ಕಂದಾಯ ಇಲಾಖೆ ಸಿಬ್ಬಂದಿಗಳ, ಬ್ರೋಕರುಗಳ ಕಪಿಮುಷ್ಠಿಯಲ್ಲಿ ನಲುಗಿದ ಬಂಟ್ವಾಳ ತಾಲೂಕು ಕಛೇರಿ..!, ಸಮಗ್ರ ತನಿಖೆಗೆ ನಾಗರಿಕರ ಒತ್ತಾಯ. ಹೌದು..“ಸರ್ಕಾರಿ ಕೆಲಸ ದೇವರ ಕೆಲಸ“ ಎಂಬ ಫಲಕ ಕೇವಲ ಗೋಡೆಗೆ ಮಾತ್ರ ಸೀಮಿತವಾಯ್ತೇ.?2000-2025ರ ತನಕ ಇಪ್ಪತೈದು ವರ್ಷಗಳಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ನಡೆದ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಯಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಖದೀಮರ ಪಾಲಾಗಿವೆ. ಯಾವುದೇ ರೀತಿಯ ಕೃಷಿ ಉದ್ದೇಶದ ಕೃತಗಳಿಲ್ಲದ ಸರ್ಕಾರಿ ಜಮೀನುಗಳು ದಲ್ಲಾಳಿಗಳ ಮತ್ತು ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳ ಕೃಪಾಕಟಾಕ್ಷದಿಂದಾಗಿ ಭೂಗಳ್ಳರ ಪಾಲಾಗಿದೆ. ಯಾರದೋ […]

Continue Reading

ವಾಮಂಜೂರು: ಬಿಲ್ಲವರ ಸಂಘದ ಆಸ್ತಿಯನ್ನು ಕಾನೂನುಬಾಹಿರವಾಗಿ ವರ್ಗಾಯಿಸಿ, ಅವ್ಯವಹಾರ ಪ್ರಕರಣ

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ವಾಮಂಜೂರಿನ ‘ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಸರಕಾರ ಆದೇಶಿಸಿದೆ. ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಂಘಸಂಸ್ಥೆಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ಸೊಸೈಟಿ ರಿಜಿಸ್ಟ್ರೇಷನ್ ಕಾಯಿದೆ ಪ್ರಕಾರ 1993 ರಲ್ಲಿ ನೋಂದಣಿಗೊಂಡಿದೆ. 2005 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತಿರುವೈಲ್ ಗ್ರಾಮದ ಸರ್ವೇ ನಂಬ್ರ 9/1ಎ1ಬಿ ಯಲ್ಲಿ 10 ಸೆಂಟ್ಸ್ ಜಮೀನನ್ನು ಮಂಜೂರು ಮಾಡಿದ್ದರು. ಸದ್ರಿ ಜಮೀನಿನಲ್ಲಿ ಸಂಸ್ಥೆಯವರು […]

Continue Reading

ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣವನ್ನು ಭೇದಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು

ಆರೋಪಿಯ ಮನೆ, ವಧೆ ಮಾಡಿರುವ ಶೇಡ್‌ ನ ಆವರಣ ಪೊಲೀಸರಿಂದ ಜಪ್ತಿ; ಮುಟ್ಟುಗೋಲು ಮಾಡುವ ಬಗ್ಗೆ ಎ.ಸಿ ಅವರಿಗೆ ವರದಿ ದಿನಾಂಕ 16-11-2025 ರಂದು ಬೆಳಗ್ಗೆ ಬಂಟ್ವಾಳ ತಾಲೂಕು ಅರಳ ಗ್ರಾಮದ ನಿವಾಸಿ ಮೈಯದಿ ಎಂಬವರು, ಮನೆಯ ಆವರಣದಲ್ಲಿರುವ ಶೆಡ್‌ ಬಳಿ ಜಾನುವಾರುಗಳನ್ನು ಕಟ್ಟಿಕೊಂಡು, ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ರವರ ನೇತ್ರತ್ವದ ಪೊಲೀಸರ ತಂಡ ಸ್ಥಳಕ್ಕೆ ದಾಳಿ ನಡೆಸಿದ್ದು, ಆರೋಪಿಯ […]

Continue Reading

ಹಗಲು ದರೋಡೆಗೆ ಇಳಿದ್ರಾ ಕೆಂಪು ಕಲ್ಲು ಕ್ವಾರಿ ದಣಿಗಳು.? ಬೀದಿಗಿಳಿದಿದ್ದ ಬಿಜೆಪಿ ನಾಯಕರು ಮೌನ ವಹಿಸಿದ್ದೇಕೆ.?

ರಾಜಧನ ಇಳಿಸಿದ್ರೂ ಕಲ್ಲಿನ ದರದಲ್ಲಿ ಇಳಿಕೆಯಾಗಿಲ್ಲ.. 26 ರೂ. ಇದ್ದ ಕಲ್ಲಿನ ದರ ಈಗ 45 ರೂ. ಆಗಿದ್ದೇಗೆ.! ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಕಮೀಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿಯಾಗಿ ಡಾ. ಅರುಣ್ ಕೆ. ಎಂಟ್ರಿಯಾಗುತ್ತಿದ್ದಂತೆ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲು ಕ್ವಾರಿ ಬಾಗಿಲು ಬಂದಾಗಿತ್ತು. ಈ ನಡುವೆ ರಾಜ್ಯ ಸರಕಾರ ರಾಜಧನ ದುಬಾರಿ ವಿಧಿಸಿದ ಪರಿಣಾಮ ಅಧಿಕೃತ ಪರವಾನಿಗೆ ಪಡೆದಿದ್ದ ಕಲ್ಲು ಕ್ವಾರಿ ಗಳು ಕೂಡ ವಹಿವಾಟು ನಿಲ್ಲಿಸಿತ್ತು. ಇದರ ಪರಿಣಾಮವಾಗಿ ದಕ್ಷಿಣ […]

Continue Reading

ಹಲ್ಲೆ, ಜೀವ ಬೆದರಿಕೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ.

ಬಂಟ್ವಾಳ: ಕನ್ಯಾನ ನಿವಾಸಿ ಆನಂದ ಎಂಬವರಿಗೆ 2020 ರಲ್ಲಿ, ಆರೋಪಿಗಳಾದ ಅಜೀಝ್, ತೋಯಿಬ್, ಆಶೀಪ್, ಕಲೀಲ್, ಅಜೀಝ್ ಹಾಗೂ ಇತರರು ಕೂಟ ಸೇರಿ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 135/2020 ರಂತೆ ಪ್ರಕರಣ ದಾಖಲಾಗಿರುತ್ತು. ಪ್ರಕರಣದ ಆರೋಪಿಗಳ ಪೈಕಿ ಬಂಟ್ವಾಳ, ಕನ್ಯಾನ ನಿವಾಸಿ ಮೊಯಿದ್ದೀನ ಶಾಕೀರ್ ಯಾನೆ ಮೊಯಿದ ಶಾಕೀರ ಎಂಬಾತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ವಿದೇಶಕ್ಕೆ ತೆರಳಿದ್ದ. ಸದ್ರಿ ಆರೋಪಿ […]

Continue Reading

ಮೂಡಬಿದ್ರೆ: ಆಳ್ವಾಸ್ ಕ್ಯಾಂಟೀನ್ ಸಿಬ್ಬಂದಿ ಕೊಲೆ ಪ್ರಕರಣ; ಆರೋಪಿ ಚಿದಾನಂದನಿಗೆ ಜೀವಾವಧಿ ಶಿಕ್ಷೆ

ಅಂದಿನ ತನಿಖಾಧಿಕಾರಿ ದಿನೇಶ್ ಕುಮಾರ್ ರವರ ಕರ್ತವ್ಯ ನಿಷ್ಠೆಯಿಂದ ಆರೋಪಿಗೆ ಕಾನೂನಿನ ಕುಣಿಕೆ ಬಿಗಿ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಆಳ್ವಾಸ್ ಕಾಲೇಜಿನ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬವನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿದಾನಂದ ಪರಶುನಾಯ್ಕರ್ ಎಂಬುವನಿಗೆ ಎರಡನೇ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2020 ರಲ್ಲಿ ಆಳ್ವಾಸ್ ಕ್ಯಾಂಟೀನ್ ನಲ್ಲಿ ಚೇತನ್ ಹಾಗೂ ಚಿದಾನಂದ ಇಬ್ಬರು ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಕ್ಯಾಂಟೀನ್ ವಿಚಾರದಲ್ಲಿ ಹಾಗೂ ವೈಯಕ್ತಿಕ ವಿಚಾರದಲ್ಲಿ ಇಬ್ಬರ […]

Continue Reading

ಕಂದಾವರ: ಪರವಾನಿಗೆ ಮುಗಿದರೂ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ

ನಾಗರೀಕರು ಸತತ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಅಧಿಕಾರಿಗಳು; ಅಕ್ರಮದ ಹಿಂದೆ ಗಣಿ ಇಲಾಖೆ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಶಾಮೀಲು ಶಂಕೆ.! ಇನ್ನಾದರೂ ಕಂದಾವರ ಪದವಿನ ಜನತೆಯ ರೋಧನ ಇಲಾಖೆಯ ಕಿವಿಗೆ ಮುಟ್ಟಲಿ ದುಡ್ಡಿನ ಬಲ, ಅಧಿಕಾರಿಗಳ ಬೆಂಬಲ ಇದ್ದರೆ ಕಾನೂನಿಗೆ ಮಣ್ಣೆರಚಿ ಅಕ್ರಮ ವಹಿವಾಟು ನಡೆಸಬಹುದು ಅನ್ನುವುದಕ್ಕೆ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯೇ ಅಪ್ಪಟ ಸಾಕ್ಷಿ. 2023 ರಲ್ಲಿ ಸ್ಥಳೀಯ ನಾಗರಿಕರು ಕಂದಾವರ […]

Continue Reading

ಪುತ್ತೂರು ಅಶ್ರಫ್ ಕಲ್ಲೇಗರಿಗೆ ಐದು ಲಕ್ಷ ಬಾಂಡ್ ಮುಚ್ಚಳಿಕೆ ಕೋರಿ ನೋಟೀಸು ಆಘಾತಕಾರಿ: ಮುನೀರ್ ಕಾಟಿಪಳ್ಳ

ಅಶ್ರಫ್ ಕಲ್ಲೇಗ ಅವರಿಗೆ ಪುತ್ತೂರು ಪೊಲೀಸರ ವರದಿಯ ಆಧಾರದಲ್ಲಿ ತಾಲೂಕು ದಂಡಾಧಿಕಾರಿಗಳು BNSS ಕಾಯ್ದೆ 130 ಅಡಿ ಐದು ಲಕ್ಷ ರೂಪಾಯಿ ಬಾಂಡ್ ಹಾಗು ಜಾಮೀನು ಮುಚ್ಚಳಿಕೆ ನೀಡುವಂತೆ ನಿರ್ದೇಶಿಸಿ ನೋಟೀಸು ನೀಡಿರುವುದು ತಿಳಿದು ಆಘಾತವಾಯ್ತು. ಅಶ್ರಫ್ ಕಲ್ಲೇಗ ಪುತ್ತೂರು ಭಾಗದಲ್ಲಿ ಸಕ್ರಿಯರಾಗಿರುವ ಜಿಲ್ಲೆಯ ಹಿರಿಯ ರಾಜಕಾರಣಿ. ಜನತಾದಳ, ಜಾತ್ಯಾತೀತ ಜನತಾ ದಳದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದವರು. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು. ರಾಜಕೀಯದ ಆಚೆಗೂ ಸಾಮಾಜಿಕ, ಸಾಮುದಾಯಿಕ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಮುಸ್ಲಿಮ್ ಯುವಜನ […]

Continue Reading

ಜಿಲ್ಲೆಯಲ್ಲಿ ಹೆಸರಿಗೆ ಮಾತ್ರ ‘ಸಕ್ರಮ’ ಮರಳುಗಾರಿಕೆ.. ಆದರೆ ನಡೆಯುತ್ತಿರುವುದು ಅಕ್ರಮ.. ಅಕ್ರಮ!

‘ಲೀಸ್’ ಹೆಸರಲ್ಲಿ ಗಡಿ ಗುರುತು ಮೀರಿ ಮರಳು ದೋಚುತ್ತಿದ್ದಾರೆ.. ಜಿಲ್ಲಾಡಳಿತ, ಗಣಿ ಇಲಾಖೆ ಮಾತ್ರ ಜಾಣ ಮೌನಕ್ಕೆ ಶರಣು! ‘ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳ್ತಾರೆ’ ಅನ್ನುವ ಗಾದೆ ಮಾತು ಚಾಲ್ತಿಯಲ್ಲಿದೆ. ಕಳ್ಳರು ಎಷ್ಟೇ ಚಾಣಾಕ್ಯರಾದರೂ ಅಧಿಕಾರಿಗಳ ಬುದ್ಧಿವಂತಿಕೆಯ ಎದುರು ಅವರ ಕಾರುಬಾರು ನಡೆಯುವುದಿಲ್ಲ ಅನ್ನುವುದು ಒಟ್ಟಾರೆ ಇದರ ಅರ್ಥ. ಆದರೆ ಈ ಮರಳುಗಾರಿಕೆ ವಿಷಯದಲ್ಲಿ ಈ ಗಾದೆ ಮಾತು ಸ್ವಲ್ಪ ಉಲ್ಟಾ-ಪಲ್ಟಾ ಆಗಿದೆ. ಅಧಿಕಾರಿಗಳು ಎಷ್ಟೇ ಬುದ್ಧಿವಂತರಾದರೂ ಈ ಮರಳುಗಾರಿಕೆ ನಡೆಸುವ […]

Continue Reading

ಹೇರಂಜಾಲು ಯಕ್ಷ ಸಂಭ್ರಮ : ಹೇರಂಜಾಲು ಕೃತಿ ಲೋಕಾರ್ಪಣೆ : ಹೇರಂಜಾಲು ಗೌರವ ಪುರಸ್ಕಾರ ಪ್ರದಾನ

ಯಕ್ಷಗಾನಕ್ಕೆ ಹೇರಂಜಾಲು ಗೋಪಾಲ ಗಾಣಿಗರ ಕೊಡುಗೆ ಅಪಾರ : ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಉಡುಪಿ : ಓರ್ವ ಯಕ್ಷಗಾನ ಕಲಾವಿದ, ಓರ್ವ ಭಾಗವತ ಹೇಗಿರಬೇಕು ಎಂಬುದಕ್ಕೆ ಹೇರಂಜಾಲು ಗೋಪಾಲ ಗಾಣಿಗರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಯಕ್ಷಗಾನ ಕಲೆಗೆ ಅವರ ಕೊಡುಗೆ ಅಪಾರ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಶಿವರಾಮ ಶೆಟ್ಟಿ ಹೇಳಿದರು. ಅವರು ಎಂಜಿಎo ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ನಡೆದ ಹೇರಂಜಾಲು ಯಕ್ಷ ಬಳಗದಿಂದ ಹೇರಂಜಾಲು ಯಕ್ಷ ಸಂಭ್ರಮ, ಹೇರಂಜಾಲು ಕೃತಿ ಲೋಕಾರ್ಪಣೆ […]

Continue Reading