ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಮಟ್ಟದ ನಿಯೋಗದಿಂದ ಜಿಲ್ಲಾಢಳಿತಕ್ಕೆ ಅಕ್ಷರಶಃ ಬೆದರಿಕೆ

“ನಮ್ಮವರ ತಂಟೆಗೆ ಬಂದರೆ ಜೋಕೆ” ಧಮ್ಕಿ ಮಾದರಿಯಲ್ಲಿ ಬೆದರಿಸಿ, ಪತ್ರಿಕಾಗೋಷ್ಟಿಯಲ್ಲಿ ಗೂಂಡಾಗಿರಿಯ ಭಾಷೆ, ಇದು ತೀರಾ ಖಂಡನೀಯ: ಸಿಪಿಐಎಂ ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಜ್ಯ ಮಟ್ಟದ ನಿಯೋಗ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತವನ್ನು ಅಕ್ಷರಶಃ ಬೆದರಿಸಿ ಹೋಗಿದೆ. ಅದರಲ್ಲೂ ಕೋಮು ಶಕ್ತಿಗಳನ್ನು ನಿಯಂತ್ರಿಸಲು ಹೊರಟಿರುವ ಜಿಲ್ಲೆಯ ನೂತನ ಎಸ್ ಪಿ ಅರುಣ್ ಕುಮಾರ್, ನಗರ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರನ್ನು ಅದು ಎಂತಹದ್ದೇ ನಟೋರಿಯಸ್ ಗಳು ಆಗಿದ್ದರೂ ಸರಿ “ನಮ್ಮವರ ತಂಟೆಗೆ ಬಂದರೆ ಜೋಕೆ” ಎಂದು ಅವರ […]

Continue Reading

ಸಾಮಾನ್ಯ ವಿದ್ಯಾರ್ಥಿಯಾಗಿದ್ದ ನನ್ನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಿ, ನನ್ನಲ್ಲಿ ಆತ್ಮ ವಿಶ್ವಾಸ ಬೆಳೆಸಿದ್ದು ಪುತ್ತೂರು ಕಮ್ಯೂನಿಟಿ ಸೆಂಟರ್: ಡಾ. ವಾಜಿದ

ಟ್ಯೂಶನ್ ಕೊಡುತ್ತಾ ಬಿಡಿಎಸ್ ಶಿಕ್ಷಣ ಮಾಡುತ್ತಿದ್ದ ಯುವತಿ ಇಂದು ಜಾಗತಿಕ ಯುವ ಸಮ್ಮೇಳನದಲ್ಲಿ NSS ಪ್ರತಿನಿಧಿ. ಈಕೆ ಹಲವು ಸಂಘ ಸಂಸ್ಥೆಗಳಿಗೆ ಶೈಕ್ಷಣಿಕ ಸಲಹೆಗಾರ್ತಿ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ NSS ವಿಭಾಗದ, ಕೆವಿಜಿ ಡೆಂಟಲ್ ಕಾಲೇಜ್ ಇದರ ಪ್ರತಿನಿಧಿಯಾಗಿ ಯೆನೆಪೋಯ ಯುನಿವರ್ಸಿಟಿಯಲ್ಲಿ ನಡೆದ ಜಾಗತಿಕ ಯುವ ಸಮ್ಮೇಳನದಲ್ಲಿ ಭಾಗವಹಿಸಿ, ಪ್ರಗತಿಯ ಭಾರತಕ್ಕೆ ಯುವ ಸಮೂಹದ ಆಲೋಚನೆಗಳನ್ನು ಪರಿಚಯಿಸಿದ ಡಾ ವಾಜಿದಾರವರು ಪುತ್ತೂರು ಕಮ್ಯೂನಿಟಿ ಸೆಂಟರ್ ಬಗ್ಗೆ ಹೀಗೆ ಬರೆಯುತ್ತಾರೆ. ಪುತ್ತೂರು […]

Continue Reading

ನಿವೇಶನಕ್ಕೆ ಬದಲಿ ಜಾಗ ಗುರುತು. ಆರು ತಿಂಗಳಲ್ಲಿ ವಿತರಿಸುವ ಭರವಸೆ

ಕುಪ್ಪೆಪದವು ನಿವೇಶನ ವಂಚಿತರ ಧರಣಿ ತಾತ್ಕಾಲಿಕ ಸ್ಥಗಿತ : ಭರವಸೆ ಈಡೇರದಿದ್ದಲ್ಲಿ ಆಗಸ್ಟ್ 15 ರಿಂದ ಧರಣಿ ಪುನರಾರಂಭಿಸಲು ನಿರ್ಧಾರ ಹಕ್ಕು ಪತ್ರ ಪಡೆದು ನಿವೇಶನ ಸ್ವಾಧೀನ ದೊರಕದೆ ವಂಚನೆಗೊಳಗಾಗಿರುವ ಕುಪ್ಪೆಪದವು ಗ್ರಾಮದ 97 ಕುಟುಂಬಗಳು ಕಳೆದ 11 ದಿನಗಳಿಂದ ನಡೆಸುತ್ತಿದ್ದ ಹಗಲು ರಾತ್ರಿ ಧರಣಿಯನ್ನು ತಹಶೀಲ್ದಾರ್ ಭರವಸೆಯ ಹಿನ್ನಲೆಯಲ್ಲಿ ಆಗಸ್ಟ್ 15 ರವರಗೆ ತಾತ್ಕಾಲಿಕವಾಗಿ ಹಿಂಪಡೆದರು. ಭರವಸೆ ಈಡೇರದಿದ್ದಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿ ಧರಣಿಯನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದರು. ಕುಪ್ಪೆ ಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ […]

Continue Reading

ಕರಾವಳಿಯ ಮತೀಯ ಹಿಂಸೆಗೆ ಅಡ್ಡ ಕಸುಬುಗಳು ಕಾರಣವಾ.? ಲವ್ ಜಿಹಾದ್, ಜಾನುವಾರು ಸಾಗಾಟ , ದ್ವೇಷ ಭಾಷಣದ ಪ್ರಭಾವ ಎಷ್ಟು? ಫೀಡ್ ಬ್ಯಾಕ್ ಏನು ಹೇಳುತ್ತದೆ.?

ಖಡಕ್ ಐಪಿಎಸ್ ಇದ್ದರೆ ಸಾಕಾ.. ದಕ್ಷ ಐಎಎಸ್ ಕೂಡ ಬೇಡವೇ.? ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಾಟೆ ಜಾಸ್ತಿಯಾಗಿದೆ, ಮತೀಯ ಹತ್ಯೆಗಳು ತಾಂಡವವಾಡುತ್ತಿದೆ. ಅಲ್ಲಿಗೆ ಹೋಗಿ ಒಮ್ಮೆ ನೋಡಿ ಬಾ ಮಹರಾಯ.. ಎಂದು ಬಿ ಕೆ ಹರಿಪ್ರಸಾದ್ ಅವರನ್ನು ಮುಖ್ಯಮಂತ್ರಿಯವರು ಕೇಳಿಕೊಂಡದಕ್ಕೆ ಶಾಂತಿ ಬಿತ್ತುವ ರಾಯಭಾರಿ ರೀತಿಯಲ್ಲಿ ಮಂಗಳೂರಿಗೆ ಬಿ ಕೆ ಹರಿಪ್ರಸಾದ್ ಬಂದು ಹೋಗಿದ್ದಾರೆ. ವಿವಿಧ ಪ್ರಜ್ಞಾವಂತ ಸಂಘಸಂಸ್ಥೆಗಳ ಮುಖಂಡರು, ಧಾರ್ಮಿಕ ನಾಯಕರ ಜೊತೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಹೋಗಿದ್ದಾರೆ. ಆದರೆ ಇಷ್ಟಕ್ಕೆ […]

Continue Reading

ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ: ಮೂಡಬಿದ್ರೆ ಗಂಟಾಲ್ ಕಟ್ಟೆಯಲ್ಲಿ ಪೊಲೀಸರಿಂದ ಶೋಧ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಇರಾ ಕಾಂಬೋಡಿ ಎಂಬಲ್ಲಿ ಮೇ 27 ರಂದು ಮರಳು ಆರ್ಡರ್ ಹೆಸರಿನಲ್ಲಿ ಮೋಸದಿಂದ ಕರೆಸಿ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಖಲಂದರ್ ಶಾಫಿ ಎಂಬಾತನ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕಾಗಿ ಈ ಹತ್ಯೆ ನಡೆದಿತ್ತು. ಘಟನೆಯ ಸಂಬಂಧ ಪೊಲೀಸರು ಐದು ತಂಡಗಳನ್ನು ರಚಿಸಿ ಹಂತಕರ ಪತ್ತೆಗೆ ಇಳಿದಿತ್ತು. ಹತ್ಯೆಯಾದ ಎರಡೇ ದಿನದಲ್ಲಿ ಮೂವರು ಆರೋಪಿಗಳಾದ ದೀಪಕ್ […]

Continue Reading

ಬಂಟ್ವಾಳ: ಒಡಹುಟ್ಟಿದವರಿಂದಲೇ ತಮ್ಮನಿಗೆ ಮಾಸಿಕ ಹಿಂಸೆ,ಹುಚ್ಚನೆಂಬ ಹಣೆಪಟ್ಟಿ, ಆಶ್ರಮಕ್ಕೆ ಸೇರ್ಪಡೆ; ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು

ಹುಚ್ಚನೆಂಬ ಹಣೆಪಟ್ಟಿ ಕಟ್ಟಿ ಬಲಾತ್ಕಾರವಾಗಿ ಆಶ್ರಮಕ್ಕೆ ಸೇರ್ಪಡೆ, ಎಟಿಎಂನಿಂದ 1.50 ಲಕ್ಷ ಡ್ರಾ. ಒಡಹುಟ್ಟಿದ ಅಣ್ಣಂದಿರೇ ಆಸ್ತಿ ಕಬಳಿಕೆ ಉದ್ದೇಶವನ್ನಿಟ್ಟುಕೊಂಡು, ವೀಲುನಾಮೆ ಯಾನೆ ಮರಣ ಶಾಸನ ದಾಖಲೆಯನ್ನು ಸೃಷ್ಟಿಸಿ, ವಂಚನೆ, ವಿಶ್ವಾಸದ್ರೋಹ, ಪ್ರಾಣ ಬೆದರಿಕೆ ಹಾಗೂ ಸುಲಿಗೆ ಮಾಡಿದ್ದಾರೆ ಎಂದು 51 ವರ್ಷ ಪ್ರಾಯದ ಬಂಟ್ವಾಳ ತಾಲೂಕು, ಬರಿಮಾರು ಗ್ರಾಮದ ಪುರುಷಕೋಡಿ ನಿವಾಸಿ ವಲೇರಿಯನ್ ಲಸ್ರಾದೊ ಇವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ಲಿಖಿತ ದೂರಿನಂತೆ ಜೂನ್ 6ರಂದು ಪ್ರಕರಣ ದಾಖಲಾಗಿದೆ. ಪಿರಿಯಾದುದಾರ ವಿವಾಹ ವಿಚ್ಛೇದನವಾದ […]

Continue Reading

ಕುಪ್ಪೆಪದವು ನಿವೇಶನ ವಂಚಿತರ ಹಗಲು ರಾತ್ರಿ ಧರಣಿ 10 ನೇ ದಿನಕ್ಕೆ. ಧರಣಿ ಮಂಟಪದಲ್ಲೆ ಬೀಡಿ ಕಟ್ಟುವ ದುಡಿಮೆ ಆರಂಭಿಸಿದ ಸಂತ್ರಸ್ತರು

ಬೀಡಿ ಕಟ್ಟದಿದ್ದರೆ ಬದುಕಿನ ಬಂಡಿ ಸಾಗುವುದಿಲ್ಲ, ಧರಣಿ ನಿಲ್ಲಿಸಿದರೆ ನಿವೇಶನ ದೊರಕುವುದಿಲ್ಲ ಶಾಸಕ ಭರತ್ ಶೆಟ್ರು 97 ಕುಟುಂಬಗಳಿಗೆ 7 ವರ್ಷಗಳ ಹಿಂದೆ ಹಕ್ಕು ಪತ್ರ ವಿತರಿಸಿ, ಈವರೆಗೂ ನಿವೇಶನ ಸ್ವಾಧೀನ ನೀಡದೆ ವಂಚಿಸಿರುವುದರ ವಿರುದ್ಧ ಗ್ರಾಮದ ನಿವೇಶನ ರಹಿತರು ನಡೆಸುತ್ತಿರುವ ಹಗಲು ರಾತ್ರಿ ಧರಣಿ 10 ನೇ ದಿನಕ್ಕೆ ಪ್ರವೇಶಿಸಿದೆ. ಧರಣಿ ನಿರತರಲ್ಲಿ ಬಹುತೇಕರು ಬೀಡಿ ಕಾರ್ಮಿಕರು. ಧರಣಿ ದೀರ್ಘಗೊಳ್ಳುತ್ತಿರುವುದರಿಂದ ಅವರ ಆದಾಯವಾದ ಬೀಡಿ ಕಟ್ಟುವ ದುಡಿಮೆಗೂ ಕಡಿವಾಣ ಬಿದ್ದಿತ್ತು. ಬೀಡಿ ಕಟ್ಟದಿದ್ದರೆ ಬದುಕಿನ ಬಂಡಿ […]

Continue Reading

ಈ ಸಾವು ನ್ಯಾಯವೇ..? ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೊಣೆ ಯಾರು.?

ಗಂಜಿಮಠ ಶಬ್ನಂ ಖಾದರ್ ಆಳ್ವಾಸ್ ಮಿಜಾರ್ ಬಳಿ ಡಿಬಿಲ್ ಕಂಪನಿಯ ಬೇಜವಾಬ್ದಾರಿತನಕ್ಕೆ ಬಲಿಯಾದರು ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ 169 ನಲ್ಲಿ ಡಿಬಿಲ್ ಕಂಪನಿಯ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗೆ ಅದೆಷ್ಟೋ ಜೀವಗಳು ಬಲಿಯಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ಒಂದೇ ಮಳೆಗೆ ಬಟಾಬಯಲಾಗಿದೆ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಬಿಲ್ ಕಂಪನಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಾಡಿ ಎಬ್ಬಿಸಿದಷ್ಟು ಬೇರೆ ಯಾವುದೇ ಕಂಪನಿಯ ಕಾಮಗಾರಿ ಇಷ್ಟೊಂದು ವಿವಾದಕ್ಕೆ ಕಾರಣವಾಗಿಲ್ಲ ಅನ್ನಬಹುದು. ಮೇ ತಿಂಗಳ ಕೊನೆಯ […]

Continue Reading

ಕೊಳ್ತಮಜಲು ಅಬ್ದುಲ್ ರಹಿಮಾನ್ ಹತ್ಯಾ ಪ್ರಕರಣ: ಶೃಂಗೇರಿ ಮೂಲದ ಆರೋಪಿ ರವಿ ಸಂಜಯ್ ಬಂಧನ; ಬಂಧಿತರ ಸಂಖ್ಯೆ ಎಂಟಕ್ಕೆ

ಬಂಟ್ವಾಳದ ಇರಾಕೋಡಿ ಎಂಬಲ್ಲಿ ಇತ್ತೀಚೆಗೆ ಕೋಮುವಾದಿಗಳ ದಾಳಿಯಿಂದ ಹತ್ಯೆಯಾದ ಅಬ್ದುಲ್ ರಹಿಮಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತೊಬ್ಬ ಆರೋಪಿ ಶೃಂಗೇರಿ ಮೂಲದ ರವಿ ಸಂಜಯ್ (29) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಬ್ದುಲ್‌ ರಹಿಮಾನ್ ಹತ್ಯೆ ಪ್ರಕರಣ ಸಂಬಂಧ ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ಮನೆಯ ದೀಪಕ್ (21), ಅಮ್ಮುಂಜೆ ಶಿವಾಜಿ ನಗರ […]

Continue Reading

ಕೊಲ್ಲುವುದು ನಮ್ಮ ಧರ್ಮವಲ್ಲ; ಬದುಕಿಸುವುದೇ ನಮ್ಮ ಧರ್ಮ: ಜಾತಿ-ಮತ ನೋಡದೆ ಮನುಷ್ಯತ್ವದ ಪಾಠ ಹೇಳಿಕೊಡುತ್ತಿರುವ ಪಾಣೆಮಂಗಳೂರಿನ ಮುಸ್ಲಿಮರು

ನೇತ್ರಾವತಿ ನದಿಗೆ ಹಾರಿದಾತನನ್ನು ರಕ್ಷಿಸಲು ಸತತ ಐದು ಗಂಟೆ ಪ್ರಯತ್ನಪಟ್ಟರು. ವಿಧಿಯಾಟವೇ ಬೇರೆಯಾಗಿತ್ತು. ಮೃತದೇಹವನ್ನು ಮೇಲಕ್ಕೆತ್ತಿದರು ಅದು ಪಾಣೆಮಂಗಳೂರಿನ ಮುಸ್ಲಿಮರು. ಕೊಲ್ಲುವುದು ನಮ್ಮ ಧರ್ಮವಲ್ಲ, ಬದುಕಿಸುವುದೇ ನಮ್ಮ ಧರ್ಮ ಎಂದು ಸಾರಿದವರು. ಆತ್ಮಹತ್ಯೆಗೈಯಲು ನೇತ್ರಾವತಿ ನದಿಗೆ ಹಾರಿದರೇ ಕ್ಷಣಾರ್ಧದಲ್ಲೇ ಅವರನ್ನು ಬದುಕಿಸಲು ಇಲ್ಲೊಂದು ಮುಸ್ಲಿಮರ ತಂಡವಿದೆ. ಕೊನೆಗೂ ಬದುಕಿಸಲಾಗದಿದ್ದರೂ ಮೃತದೇಹವನ್ನು ಮೇಲಕ್ಕೆತ್ತಿ ಅದಕ್ಕೊಂದು ಗೌರವಯುತ ಸಂಸ್ಕಾರಕ್ಕೆ ಇಲ್ಲಿನ ಮುಸ್ಲಿಮರು ಕಾರಣರಾಗುತ್ತಿದ್ದಾರೆ. ಸಾಯಲು ಹೋದ ನೂರಾರು ಮಂದಿಯನ್ನು ಬದುಕಿಸಿದ್ದಾರೆ. ಅದೇ ರೀತಿ ಜೀವದ ಹಂಗು ತೊರೆದು ನೂರಾರು ಮೃತದೇಹಗಳನ್ನು […]

Continue Reading