ಕರ್ನಾಟಕ ವಿಧಾನಸಭೆ ಚುನಾವಣೆ. ಅತಂತ್ರ ವಿಧಾನ ಸಬೆಯ ಸುಳಿವು, ಜೆಡಿಎಸ್ ಕಿಂಗ್ ಮೆಕರ್ ಸಾಧ್ಯತೆ.!

ದೇಶದಾದ್ಯಂತ ಕಾಂಗ್ರೆಸ್‌ಗೆ ಕಾಯಕಲ್ಪ ಸಿಗುವ ಬೆಂಬಲ,ಭರವಸೆ ಇದೆ. ಆದರೆ ಅದು ಕರ್ನಾಟಕ ರಾಜ್ಯದಿಂದಲೇ ಪ್ರಾರಂಭವಾಗಬೇಕು.2013ರಿಂದ 2018ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಪಕ್ಷವೇ ಈ ಬಾರಿಯೂ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. 2013ರಲ್ಲಿ ಕಾಂಗ್ರೆಸ್ 120 ಸ್ಥಾನಗಳನ್ನು ಗೆದ್ದು, ಶೇ 36.6 ರಷ್ಟು ಮತಗಳನ್ನು ಗಳಿಸಿತ್ತು. ಬಿಜೆಪಿಯು 40 ಸ್ಥಾನಗಳನ್ನು ಪಡೆದು ಶೇ 19.9 ಹಾಗು ಜೆಡಿಎಸ್ 40 ಸ್ಥಾನಗಳೊಂದಿಗೆ ಶೇ 20.2 ರಷ್ಟು ಮತ ಪಡೆದು ಗೆದ್ದಿದ್ದವು.2018ರಲ್ಲಿ ಕಾಂಗ್ರೆಸ್‌ ಶೇ 38.14ರಷ್ಟು ಮತಗಳಿದ್ದರೂ 80 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈಗ, […]

Continue Reading

ಸಿಸಿಬಿ ಪೊಲೀಸರ ಕಾರ್ಯಾಚರಣೆ, ನಕಲಿ ಪದವಿ ಪ್ರಮಾಣ ಪತ್ರದ ಜಾಲ ಬಯಲಿಗೆ, 30 ಸಾವಿರಕ್ಕೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ಬಿಕಾರಿ.!

ಸರಕಾರದ ಮಾನ್ಯತೆ ಪಡೆಯದೇ ಕರೆಸ್ಪಾಂಡೆನ್ಸ್‌ ಶಿಕ್ಷಣ ಸಂಸ್ಥೆ ತೆರೆದು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ರಾಜ್ಯದ ಸ್ಟಡಿ ಸೆಂಟರ್‌ಗಳ ಮೂಲಕ ನಕಲಿ ಅಂಕಪಟ್ಟಿಗಳನ್ನು ವಿತರಿಸುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಭೇದಿಸಿದ್ದಾರೆ.ಜಾಲದ ಪ್ರಮುಖ ಆರೋಪಿ, ಹುಬ್ಬಳ್ಳಿ ಮೂಲದ ಪ್ರಭುರಾಜ್‌,ಬೆಂಗಳೂರಿನ ಜರಗನಹಳ್ಳಿ ನಿವಾಸಿ ಮೈಲಾರಿ ಪಾಟೀಲ್‌ ಮತ್ತು ಅರಕೆರೆ ನಿವಾಸಿ ಮೊಹಮ್ಮದ್‌ ತೈಹೀಬ್‌ ಅಹಮ್ಮದ್‌ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಇನ್‌ಸ್ಟಿಟ್ಯೂಷನ್‌ ಆಫ್ ಒಪನ್‌ ಸ್ಕೂಲಿಂಗ್‌ ಕರ್ನಾಟಕ ಸರ್ಕಾರ,ಎಂದು ನಮೂದಿಸಿರುವ 10 […]

Continue Reading

ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಜೂನ್ ಒಂದರಿಂದ ಕರೆಂಟ್ ಬಿಲ್ಲು ಕಟ್ಟಬೇಡಿ: ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಐದು ಗ್ಯಾರಂಟಿ ಭರವಸೆ ನೀಡಿದೆ. ಜೂನ್ 1 ರಿಂದ ಕಾಂಗ್ರೆಸ್ ಪಕ್ಷದ ಹೊಸ ಸರ್ಕಾರ ಬರುತ್ತದೆ.ಅಲ್ಲಿಂದ ಯಾರು ಕರೆಂಟ್ ಬಿಲ್ಲನ್ನು ಕಟ್ಟಬೇಡಿ. ಬೆಲೆ ಏರಿಕೆ ಮೀತಿ ಮೀರಿದೆ. ವರ್ಷಕ್ಕೆ ಪ್ರತಿ ಕುಟುಂಬಕ್ಕೆಹೊಸ ಸರಕಾರದ ವತಿಯಿಂದ 24 ಸಾವಿರ ಬರುತ್ತದೆ.ಅನ್ನಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 10 ಕೆಜಿ ಕೊಡುತ್ತೇವೆ.ಬಡವರು ಹಸಿವಿನಿಂದ ಬಳಲಬಾರದು ಯುವಕರಿಗೆ ಕೆಲಸ ಕೊಡುತ್ತೇವೆ ಅಂತ ಬಿಜೆಪಿ ಹೇಳಿತ್ತು. ಆದರೆ ಆ ಮೇಲೆ ಪಕೋಡ ಮಾರಿ ಅಂತ ಹೇಳಿದರು.ಪದವಿ ಓದಿ ಪಕೋಡ […]

Continue Reading

ಮೇ.1 ರಿಂದ ಬದಲಾಗಲಿವೆ ಕೆಲವು ನಿಯಮಗಳು; ಬ್ಯಾಟರಿ ವಾಹನ, ಬ್ಯಾಂಕ್ ವಹಿವಾಟು, ಜಿಎಸ್ಟಿ, ಎಲ್ ಪಿಜಿ ಸಿಲಿಂಡರ್, ಷೇರು ಮಾರುಕಟ್ಟೆಗೆ ಸಂಬಂಧಿಸಿದ ನಿಯಮಗಳು ಬದಲಾವಣೆ ಸಾಧ್ಯತೆ

ಎಲ್ ಪಿ ಜಿ ಸಿಲಿಂಡರ್, ಪೆಟ್ರೋಲ್,ಡೀಸೆಲ್ ದರ ಏರಿಕೆ ಸಾಧ್ಯತೆ.! ಮೇ ತಿಂಗಳ ಪ್ರಾರಂಭದಿಂದ ಕೆಲವು ನಿಯಮಗಳು ಬದಲಾಗಲಿವೆ. ಬ್ಯಾಟರಿ ಚಾಲಿತ ವಾಹನಗಳು, ಬ್ಯಾಂಕ್ ವಹಿವಾಟುಗಳು, ಜಿಎಸ್ಟಿ, ಎಲ್ ಪಿಜಿ ಸಿಲಿಂಡರ್ ಬೆಲೆಗಳು ಮತ್ತು ಷೇರು ಮಾರುಕಟ್ಟೆಗೆ ಸಂಬಂಧಿಸಿದ ನಿಯಮಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಕೆಲವು ಬದಲಾವಣೆಗಳು ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ ಗಳ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದನ್ನು ಹೂಡಿಕೆದಾರರ ಸ್ನೇಹಿಯಾಗಿಸಲು, ಸೆಬಿ ಹೊಸ […]

Continue Reading

ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವರ ಪುತ್ರಿ ಗೀತಾ ಅವರು 2014 ರಲ್ಲಿ ಜೆಡಿಎಸ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವೇಳೆ ಜೆಡಿಎಸ್ ನಲ್ಲಿ ಜೊತೆಗೆ ಸಹೋದರ ಮಧುಬಂಗಾರಪ್ಪ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಸೊರಬದಿಂದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಇಂದು ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ […]

Continue Reading

ಮಂಡ್ಯ ಜಿಲ್ಲೆಗೆ ಯೋಗಿ ಆದಿತ್ಯನಾಥರ ದ್ವೇಷದ ಉಪದೇಶ ಬೇಕಾಗಿಲ್ಲ; ದ್ವೇಶವನ್ನೇ ಕಾರುವ ಕಾವಿಧಾರಿಯ ಆಡಳಿತ ಮಂಡ್ಯ ಜಿಲ್ಲೆಗೆ ಮಾದರಿಯಲ್ಲ:ಸಿಪಿಎಂ

ಸೌಹಾರ್ದತೆಯ ಮಂಡ್ಯ ಜಿಲ್ಲೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ದ್ವೇಷದ ಉಪದೇಶ ಬೇಕಾಗಿಲ್ಲ. ಮೈಯೆಲ್ಲಾ ದ್ವೇಶವನ್ನೇ ಕಾರುವ ಕಾವಿಧಾರಿಯ ಆಡಳಿತ ಮಂಡ್ಯ ಜಿಲ್ಲೆಗೆ ಮಾದರಿಯಲ್ಲ. ಇವರ ಮಾತುಗಳಿಗೆ ಜಿಲ್ಲೆಯ ಜನತೆ ಕಿವಿಗೊಡಬಾರದು ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿ ಮನವಿ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ನೆಲ ಕಚ್ಚಿದೆ. ಉನ್ನಾವೊ ಅತ್ಯಚಾರ ಪ್ರಕರಣದಲ್ಲಿ ಅತ್ಯಾಚಾರಿಗಳು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕೆ ಸಂತ್ರಸ್ತೆಯ ಕುಟುಂಬಕ್ಕೆ ಬೆಂಕಿ ಇಡಲಾಗಿದೆ. ಸಂತ್ರಸ್ತೆಯ ತಂದೆ, ತಾಯಿ […]

Continue Reading

ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಮಾಧ್ಯಮಗೋಷ್ಠಿಗಳಿಗೆ ಬಹಿಷ್ಕಾರ ಹಾಕಿದ ಪತ್ರಕರ್ತರು

ನೀವ್ಯಾರು ನಾಳೆಯಿಂದ ಕೆಪಿಸಿಸಿ ಕಚೇರಿಗೆ ಬರಬೇಡಿ ಎಂದು ದರ್ಪತೋರಿದ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಧ್ಯಮ ಪ್ರತಿನಿಧಿಗಳ ನಡುವೆ ಸಂಘರ್ಷದ ಪರಿಣಾಮ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಮಾಧ್ಯಮ ಗೋಷ್ಠಿಗಳಿಗೆ ಮಾಧ್ಯಮ ಪ್ರತಿನಿಧಿಗಳು ಬಹಿಷ್ಕಾರ ಹಾಕಿದ್ದಾರೆ.ಇಂದು ಅಪರಾಹ್ನ ಕಾಂಗ್ರೇಸ್ ಕಚೇರಿಯಲ್ಲಿ ಕೆಪಿಸಿಸಿ ಮಾಧ್ಯಮ ಉಪಾಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್. ರಮೇಶ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ ಅವರು ಕರೆದ ಪತ್ರಿಕಾಗೋಷ್ಠಿಗೆ ಮಾಧ್ಯಮ ಪ್ರತಿನಿಧಿಗಳಿಲ್ಲದೇ ಖಾಲಿ ಖುರ್ಚಿಗಳ ನಡುವೆಯೇ ಪತ್ರಿಕಾ ಸುದ್ದಿಗೋಷ್ಠಿ […]

Continue Reading

ಕರ್ನಾಟಕ ರಾಜ್ಯದಲ್ಲಿ ಅತಂತ್ರ ಸ್ಥಿತಿ, ಸಮ್ಮಿಶ್ರ ಸರಕಾರದ ಸಾಧ್ಯತೆ.! ಸಮೀಕ್ಷಾ ವರದಿಯಿಂದ ಬಹಿರಂಗ

ರಾಜ್ಯದಲ್ಲಿ ಅಪ್ಪ-ಮಕ್ಕಳೇ.. ಕಿಂಗ್ ಮೇಕರ್.? ಮೇ 10 ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳಿಂದ ಚುನಾವಣಾ ಪೂರ್ವ ಸಮೀಕ್ಷೆ ನಡೆಸಲಾಗಿದ್ದು, ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಈ ಮೂರು ಪಕ್ಷಗಳ ಬಹುಮತದ ಬಗ್ಗೆ ಸಮೀಕ್ಷೆ ನಡೆಸಲಾಗಿ,ಸಮೀಕ್ಷೆಯ ವರದಿ ಪ್ರಕಾರ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರುವ ಸಾಧ್ಯತೆ ಬಹಳ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಹೆಚ್ಚಿದೆ.ಬಿಜೆಪಿಯು […]

Continue Reading

ಬಾಡಿಗೆ ಕರಾರು ಪತ್ರಗಳನ್ನು ನೊಂದಾವಣೆ ಮಾಡದಿದ್ದರೆ ಬಾಡಿಗೆ ಹೆಚ್ಚಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು

ಬಾಡಿಗೆ ಕರಾರುಪತ್ರವನ್ನು ನೆೊಂದಾವಣೆ ಮಾಡದಿದ್ದರೆ ಬಾಡಿಗೆಯನ್ನು ಹೆಚ್ಚಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.ದಸ್ತಾವೇಜು ನಿಯಮದ ಪ್ರಕಾರ ಬಾಡಿಗೆ ಕರಾರು ಅಥವಾ ಒಪ್ಪಂದದ ದಸ್ತಾವೇಜನ್ನು ಮಾಲಿಕರು ನೋಂದಣಿ ಮಾಡದಿದ್ದರೆ ಪ್ರತಿ ವರ್ಷ ಬಾಡಿಗೆ ಹೆಚ್ಚಳ ಮಾಡಲು ಅವಕಾಶ ಇರುವದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಬೆಂಗಳೂರಿನ ಶ್ರೀನಿವಾಸ ಎಂಟರ್‌ಪ್ರೈಸಸ್‌ಗೆ ಸೇರಿದ ಜಾಗವನ್ನು ಕೇರಳ ಮೂಲದ ನೆಡುಗುಂಡಿ ಬ್ಯಾಂಕಿಗೆ ಪ್ರತಿ ತಿಂಗಳು 13574 ರೂ. ಬಾಡಿಗೆ ಮತ್ತು 81444/- ಮುಂಗಡ ಅಡ್ವಾನ್ಸ್‌ ಠೇವಣಿ ಒಪ್ಪಂದಕ್ಕೆ ನೀಡಲಾಗಿತ್ತು.1998ರಲ್ಲಿ ಐದು […]

Continue Reading

ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಅನನ್ಯಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

ಮೂರು ಲಕ್ಷ ರೂಪಾಯಿ ನಗದು ಮುಂದಿನ ಶಿಕ್ಷಣ ಅಳ್ವಾಸ್ ಸಂಸ್ಥೆಯಿಂದ ಉಚಿತ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿನಿ ಅನನ್ಯಾ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಅನನ್ಯಾ 600 ಕ್ಕೆ 600 ಅಂಕ ಪಡೆದುಕೊಂಡಿದ್ದು, ಅವರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ಮೂರು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಅವರ ಮುಂದಿನ ಶಿಕ್ಷಣವನ್ನು ಸಂಸ್ಥೆಯಿಂದ ಉಚಿತವಾಗಿ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ […]

Continue Reading