ಬಾಲಕಿಯರ ಅತ್ಯಾಚಾರದ ವಿಡಿಯೊ ಮಾಡಿ ಬ್ಲಾಕ್ ಮೈಲ್, ಮನನೊಂದ ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆಗೆ ಶರಣು

ಉತ್ತರ ಪ್ರದೇಶದ ಕಾನ್ಪುರ ಘಟಂಪುರ್ ಕೊಟ್ವಾಲಿ ಗ್ರಾಮದ ಇಟ್ಟಿಗೆ ಗೂಡು ಬಳಿ ಇಬ್ಬರು ಬಾಲಕಿಯರ ದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಟ್ಟಿಗೆ ಗೂಡುಗಳ ಗುತ್ತಿಗೆದಾರ, ಆತನ ಮಗ ಮತ್ತು ಸೋದರಳಿಯ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಕೆಲವು ದಿನಗಳ ನಂತರ ಈ ಬಾಲಕಿಯರ ಮೃತದೇಹ ಪತ್ತೆಯಾಗಿದೆ. ಇಟ್ಟಿಗೆ ಗೂಡುಗಳ ಗುತ್ತಿಗೆದಾರ ರಾಮ್ ರೂಪ್ ನಿಷಾದ್,ಆತನ ಮಗ ರಾಜು ಮತ್ತು ಸೋದರಳಿಯ ಸಂಜಯ್ ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂದು […]

Continue Reading

ಸರ್ಕಾರ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಪರಿಹಾರಕ್ಕೆ ಅರ್ಹರಾದವರಿಗೆ ಪರಿಹಾರ ನೀಡುವುದು ಸರ್ಕಾರ ಮಾಡುವ ದಾನವಲ್ಲ: ಸುಪ್ರೀಂ ಕೋರ್ಟ್‌

ಸರ್ಕಾರ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಪರಿಹಾರಕ್ಕೆ ಅರ್ಹರಾದವರಿಗೆ ಪರಿಹಾರ ನೀಡುವುದು ಸರ್ಕಾರ ಮಾಡುವ ದಾನವಲ್ಲ. ಸರ್ಕಾರ ಮತ್ತು ಅದರ ಅಂಗಗಳು ದಯಾಪರತೆಯಿಂದ ಭೂಮಾಲೀಕರಿಗೆ ಪರಿಹಾರ ನೀಡಿವೆ ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಂವಿಧಾನದ 300-ಎ ವಿಧಿಯಡಿ ಆಸ್ತಿಯ ಹಕ್ಕು ಈಗಲೂ ಸಾಂವಿಧಾನಿಕ ಹಕ್ಕು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿಳಿಸಿತು. ಇಪ್ಪತ್ತು ವರ್ಷಗಳ ಕಾಲ ಜಮೀನು ಬಳಸುವ ನಾಗರಿಕರ ಸಾಂವಿಧಾನಿಕ ಹಕ್ಕು ಕಸಿದುಕೊಂಡು ಆ ಬಳಿಕ ಪರಿಹಾರ […]

Continue Reading

ಸಿಎಎ ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕಾಗಿ ನಾವು ಜಾರಿಗೆ ತರುತ್ತಿಲ್ಲ: ಅಮಿತ್ ಶಾ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್​ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆ ಮಾಡುವ ಬಗ್ಗೆ ವಿಶ್ವಾಸ ಇದೆ ಎಂದಿರುವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಗೆಲುವು ಸಿಗಲಿದೆ ಅನ್ನೋದ್ರ ಬಗ್ಗೆ ಯಾವುದೇ ಸಸ್ಪೆನ್ಸ್ ಆಗಿ ಉಳಿದಿಲ್ಲ. ಕಾಂಗ್ರೆಸ್​ಗೆ ಕೂಡ ಅದು ಅರ್ಥ […]

Continue Reading

ಪರೀಕ್ಷೆಗಾಗಿ ವಿದ್ಯಾರ್ಥಿನಿ ಸೇವಿಸುತ್ತಿದ್ದ ಮಾತ್ರೆ ಉಗ್ರರು ಬಲಸುತ್ತಿದ್ದ ಮಾತ್ರೆ.! ಒಂದು ಮಾತ್ರೆ ಸೇವಿಸಿದರೆ 40 ಗಂಟೆಗಳ ಕಾಲ ನಿದ್ರೆ ಬರೊಲ್ಲ

ಪರೀಕ್ಷೆ ಹತ್ತಿರ ಬರುತ್ತಿಂದಂತೆ, ವಿದ್ಯಾರ್ಥಿಗಳು ಆತಂಕಗೊಳಗಾಗುತ್ತಾರೆ, ಓದಲು ಶುರುವಿಡುತ್ತಾರೆ. ಓದಿದ್ದನ್ನು ನೆನಪಿನಲ್ಲಿಡಬೇಕೆಂದು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ನಿದ್ರೆಬಿಟ್ಟು ಹಗಲು ರಾತ್ರಿ ಓದುತ್ತಾರೆ. ನಿದ್ದೆ ಬರಬಾರದೆಂದು ಟೀ, ಕಾಫಿ ಸೇವಿಸುತ್ತಾರೆ. ಆದರೆ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ತನಗೆ ರಾತ್ರಿ ನಿದ್ರೆ ಬರಬಾರದು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಪಾಸಾಗಬೇಕು ಎಂದು, ಮಾತ್ರೆಯನ್ನು ಸೇವಿಸಿ ಓದಲು ಪ್ರಾರಂಭಿಸಿದ್ದಾಳೆ. ಈಕೆ ಉತ್ತರಪ್ರೇದಶದ 10ನೇ ತರಗತಿ ಓದುವ ವಿದ್ಯಾರ್ಥಿನಿ. ಪರೀಕ್ಷೆ ಸಮಯದಲ್ಲಿ ಮನೆಯಲ್ಲಿ, ಶಾಲೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಹತ್ತನೇ ಕ್ಲಾಸಿನಲ್ಲಿ ಉತ್ತಮ […]

Continue Reading

ಅಬ್ಬಬ್ಬಾ.. ಪತ್ನಿ ಕೊಂದು 31 ವರ್ಷಗಳ ಕಾಲ ತಲೆಮರೆಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಸುಬ್ರಮಣಿ

ಕೇರಳದಲ್ಲಿ ಮುಸ್ಲಿಂ ವೇಷಧರಿಸಿ ಮರೆಸಿಕೊಂಡಿದ್ದ ಸುಬ್ರಮಣಿ ಆಲಿಯಾಸ್ ಮೌಲ್ವಿ ಹುಸೇನ್ ಸಿಕಂದರ್ ಬಾಷಾ ಅಂದರ್ ಪತ್ನಿ ಸುಧಾ ಅವರನ್ನು ಬೆಂಕಿ ಹಚ್ಚಿ ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಸುಬ್ರಮಣಿ ಆಲಿಯಾಸ್ ಮೌಲ್ವಿ ಹುಸೇನ್ ಸಿಕಂದರ್ ಬಾಷಾ 31 ವರ್ಷಗಳ ಬಳಿಕ ಹೆಬ್ಬಾಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೆಬ್ಬಾಳ ನಿವಾಸಿ ಸುಬ್ರಮಣಿ, ಪತ್ನಿ ಸುಧಾ ಅವರನ್ನು 1993 ರಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಈತನನ್ನು ಇತ್ತೀಚೆಗೆ ಬಂಧಿಸಿ ನಗರಕ್ಕೆ ಕರೆ ತರಲಾಗಿದೆ ಎಂದು ಪೊಲೀಸ್ ಮೂಲಗಳು […]

Continue Reading

ಡಿಸಿಎಂ ಹುದ್ದೆ ಅಸಾಂವಿಧಾನಿಕವಲ್ಲ: ಸುಪ್ರೀಂ

ರಾಜ್ಯವೊಂದು ಉಪಮುಖ್ಯಮಂತ್ರಿಯನ್ನು ನೇಮಕ ಮಾಡುವುದು ಸಂವಿಧಾನ ಬಾಹಿರ ಕ್ರಮ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಡಿಸಿಎಂಗಳ ನೇಮಕವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು, ಉಪಮುಖ್ಯಮಂತ್ರಿ ಎಂಬುದು ಒಂದು ಹುದ್ದೆಯ ಹೆಸರು ಮಾತ್ರ. ಅವರನ್ನು ಇತರರಿಗಿಂತ ಹಿರಿಯರು ಎಂದು ಪರಿಗಣಿಸುವರೇ ಹೊರತು, ಅಧಿಕ ವೇತನವನ್ನೇನೂ ಪಡೆಯುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿದೆ. ‘ಉಪಮುಖ್ಯಮಂತ್ರಿಯು ಒಬ್ಬ ಶಾಸಕ ಮತ್ತು ಸಚಿವ […]

Continue Reading

ರಾಮ, ಹನುಮ, ಪರಶುರಾಮ: ಬಿಜೆಪಿ ‘ಪಾಸ್’, ಕಾಂಗ್ರೆಸ್ ‘ಫೇಲ್’ ; ಅಡ್ಜೆಸ್ಟ್ ಮೆಂಟ್ ರಾಜಕಾರಣಕ್ಕೆ ಬೆಲೆ ತೆತ್ತ ಕಾಂಗ್ರೆಸ್.!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯೊಂದನ್ನು ಈ ಹಿಂದೆ ಕೊಟ್ಟಿದ್ದರು. ಆರ್ ಎಸ್ ಎಸ್ ನೊಂದಿಗೆ ತೆರೆಮರೆಯ ಸಂಬಂಧ ಹೊಂದಿರುವ ಕಾಂಗ್ರೆಸ್ ನಾಯಕರೆಲ್ಲ ಕಾಂಗ್ರೆಸ್ ಬಿಟ್ಟು ತೆರಳಲಿ. ಮುಕ್ತ ಅವಕಾಶವಿದೆ. ನಾವು ಮತ್ತೆ ಪಕ್ಷವನ್ನು ಸದೃಢವಾಗಿ ಕಟ್ಟುತ್ತೇವೆ. ರಾಹುಲ್ ಗಾಂಧಿ ಮಾತಿನ ತಾತ್ಪರ್ಯ ದಂತೆ ಇಂದು ದೆಹಲಿ ಮಟ್ಟದಲ್ಲಿ ಮಾತ್ರವಲ್ಲ ರಾಜ್ಯ, ಜಿಲ್ಲೆ, ಗಲ್ಲಿ ಮಟ್ಟದಲ್ಲೂ ಕೆಲವೊಂದು ಕಾಂಗ್ರೆಸ್ ನಾಯಕರು ಹಗಲು ಹೊತ್ತಿನಲ್ಲಿ ಕಾಂಗ್ರೆಸ್ಸಿಗರಂತೆ ನಟಿಸಿದರೆ, ರಾತ್ರಿ ಹೊತ್ತು ಬಿಜೆಪಿಗರಾಗುತ್ತಾರೆ. ಇಂತಹ ಮನಸ್ಥಿತಿಯ ನಾಯಕರಿಂದಲೇ ಕಾಂಗ್ರೆಸ್ ಬಹುತೇಕ […]

Continue Reading

ಭಾರೀ ಸ್ಫೋಟದಲ್ಲಿ ಒಬ್ಬ ಸಾವು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 16 ಮಂದಿಗೆ ಗಾಯ,ನಾಲ್ವರ ಸ್ಥಿತಿ ಗಂಭೀರ.

ಕೇರಳ: ಕೊಚ್ಚಿ ಸಮೀಪದ ತ್ರಿಪುಣಿತುರಾದಲ್ಲಿ ವಸತಿ ಪ್ರದೇಶದಿಂದ ನಡೆಯುತ್ತಿದ್ದ ಅಕ್ರಮ ಪಟಾಕಿ ಗೋದಾಮಿನಲ್ಲಿಂದು ಸಂಭವಿಸಿದ ಭಾರೀ ಸೋಟದಲ್ಲಿ ಒಬ್ಬ ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ವ್ಯಕ್ತಿಯನ್ನು ತಿರುವನಂತಪುರಂ ಮೂಲದ ವಿಷ್ಣು ಎಂದು ಗುರುತಿಸಲಾಗಿದೆ. ಸೋಟದಲ್ಲಿ ಸುತ್ತಮುತ್ತಲಿನ 25 ಕ್ಕೂ ಹೆಚ್ಚು ಮನೆಗಳು ಮತ್ತು ಕೆಲವು ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು ಎರಡು […]

Continue Reading

ಮಾಜಿ ಮುಖ್ಯ ಮಂತ್ರಿ ಕಮಲ್ ನಾಥ್ ಆಪ್ತರೊಂದಿಗೆ ಕಮಲ ಮುಡಿಯಲು ಸನ್ನದ್ಧ; ಕಾಂಗ್ರೆಸ್ ಪಾಲಿಗೆ ಮತ್ತೊಂದು ಮರ್ಮಾಘಾತ.!

ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಸತತವಾಗಿ ಹಿನ್ನಡೆ ಅನುಭವಿಸುತ್ತಾ ಬರುತ್ತಿದ್ದು, ಈಗ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಮತ್ತು ಅವರ ಆಪ್ತ ರಾಜ್ಯ ಸಭಾ ಸದಸ್ಯ ವಿವೇಕ್ ತಂಖಾ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ‌ ಎನ್ನಲಾಗುತ್ತಿದ್ದು, ಈ ಬಗ್ಗೆ ಬಾರಿ ಗುಸು ಗುಸು ಸುದ್ದಿ ಕೇಳಿ ಬರುತ್ತಿದೆ. ಕಮಲನಾಥ್ ಅವರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ, ಪುತ್ರನಿಗೆ ಲೋಕಸಭಾ ಟಿಕೆಟ್ ಹಾಗೂ ತಂಖಾ ಅವರನ್ನು ಬಿಜೆಪಿ ಲೋಕ ಅಖಾಡಕ್ಕೆ ಇಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಆಘಾತ […]

Continue Reading

2024 ಏಪ್ರಿಲ್ ನಂತರ ಟೋಲ್​ಗಳಲ್ಲಿ ಹಂತ-ಹಂತವಾಗಿ ಫಾಸ್ಟ್ ಟ್ಯಾಗ್ ಕಣ್ಮರೆಯಾಗಲಿದೆ

ಟೋಲ್ ಗೇಟ್‌ಗಳಲ್ಲಿ ವಾಹನ ಚಾಲಕರು ಕಾಯುವ ಸಮಯವನ್ನು ಕಡಿಮೆ ಮಾಡಿ, ತ್ವರಿತ ಪಾವತಿಗೆ ಅವಕಾಶ ಕಲ್ಪಿಸುವ ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇದಕ್ಕೆ ಫುಲ್​ಸ್ಟಾಪ್​ ಹಾಕಲು ತೀರ್ಮಾನಿಸಿದೆ. ಏಪ್ರಿಲ್​ ವೇಳೆಗೆ ಈ ವ್ಯವಸ್ಥೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ತೆಗೆದುಹಾಕಿ ಜಿಪಿಎಸ್​ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸುವುದಾಗಿದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಏಪ್ರಿಲ್ ವೇಳೆಗೆ ದೇಶಾದ್ಯಂತ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. 2024ರ ಲೋಕಸಭೆ ಚುನಾವಣಾ […]

Continue Reading