2018ರ ಫೆ.22ರಂದು ಮಧು ಎಂಬ ಆದಿವಾಸಿ ಯುವಕನೊಬ್ಬನನ್ನು ಗುಂಪೊಂದು ದಾಳಿ ಮಾಡಿ ಬಲಿತೆಗೆದುಕೊಂಡಿತು.ಮಾನಸಿಕ ಅಸ್ವಸ್ಥನಾಗಿದ್ದ ಮಧು ತನ್ನ ಕುಟುಂಬದಿಂದ ದೂರವಿರುವ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ. ಜನರ ಗುಂಪೊಂದು ಮಧುವನ್ನು ಕಳ್ಳ ಎಂದು ಆರೋಪಿಸಿ ಕಾಡಿನಿಂದ ಹಿಡಿದು ಊರಿಗೆ ಕರೆತಂದಿತ್ತು ಕಳ್ಳನೆಂದು ಆರೋಪಿಸಿ ಜನರು ಹೊಡೆದು ಕೊಂದರು.ಈ ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರೆಂದು ತೀರ್ಮಾನಿಸಿದ ನ್ಯಾಯಾಲಯ ಶಿಕ್ಷೆಯನ್ನು ಇಂದು ಪ್ರಕಟಿಸಲಿದೆ. ಇಬ್ಬರನ್ನು ಖುಲಾಸೆ ಮಾಡಲಾಯಿತು. ಈ ಪ್ರಕರಣದಲ್ಲಿ 4ನೇ ಮತ್ತು 11ನೇ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
ಪ್ರಕರಣದಲ್ಲಿ 16 ಮಂದಿ ಆರೋಪಿಗಳಿದ್ದು,14ಮಂದಿ ತಪ್ಪಿತಸ್ಥರಿಗೆ ಬುಧವಾರ ಶಿಕ್ಷೆ ವಿಧಿಸಲಾಗುವುದು. ಘಟನೆ ನಡೆದು 5 ವರ್ಷಗಳ ಬಳಿಕ ಮಣ್ಣಾರ್ಕ್ಕಾಡ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಐದು ವರ್ಷಗಳ ಬಳಿಕ ಪ್ರಕರಣದ ತೀರ್ಪು ಪ್ರಕಟವಾಗಿದೆ.ಮಣ್ಣಾರ್ಕ್ಕಾಡ್ ಎಸ್ಸಿ-ಎಸ್ಟಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ರತೀಶ್ ಕುಮಾರ್ ಪ್ರಕರಣದ ತೀರ್ಪು ಪ್ರಕಟಿಸಿದ್ದಾರೆ.
ಹತ್ಯೆ ಪ್ರಕರಣದ ವಿಚಾರಣೆ ಮಾರ್ಚ್ 10 ರಂದು ಪೂರ್ಣಗೊಂಡಿತು. ಮಾರ್ಚ್ 18 ರಂದು ತೀರ್ಪು ನೀಡುವುದಾಗಿ ಘೋಷಿಸಲಾಗಿತ್ತು, ಆದರೆ ನಂತರ ಅದನ್ನು ಮಾರ್ಚ್ 30 ಕ್ಕೆ ಮುಂದೂಡಲಾಯಿತು.ಮಾರ್ಚ್ 30ರಂದು ಪ್ರಕರಣದ ವಿಚಾರಣೆ ನಡೆದಾಗ ಏಪ್ರಿಲ್4ರಂದು ತೀರ್ಪು ಪ್ರಕಟಿಸಲು ಮತ್ತೆ ಮುಂದೂಡಲಾಗಿತ್ತು.ಮಧು ಅವರ ತಾಯಿ ಹಾಗೂ ಸಹೋದರಿ ಅವರಿಗೆ ವಿಶೇಷ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಮಧು ಅವರ ತಾಯಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.ಪ್ರಕರಣದಲ್ಲಿ 16 ಆರೋಪಿಗಳಿದ್ದರು. ಹನ್ನೊಂದು ತಿಂಗಳ ಸಾಕ್ಷ್ಯದ ನಂತರ ಪ್ರಕರಣದ ತೀರ್ಪು ಪ್ರಕಟಿಸಲಾಗಿದೆ. ಪ್ರಕರಣದಲ್ಲಿ 127 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.
ಫೆಬ್ರವರಿ 22, 2018 ರಂದು ಅಟ್ಟಪಾಡಿಯಲ್ಲಿ ಮಧು ಎಂಬ ಬುಡಕಟ್ಟು ಯುವಕನನ್ನು ಕಳ್ಳತನದ ಆರೋಪದ ಮೇಲೆ ಗುಂಪೊಂದು ಹತ್ಯೆ ಮಾಡಿತ್ತು.ಮಾನಸಿಕ ಅಸ್ವಸ್ಥನಾಗಿದ್ದ ಮಧು ತನ್ನ ಕುಟುಂಬದಿಂದ ದೂರವಿರುವ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ. ಜನರ ಗುಂಪೊಂದು ಮಧುವನ್ನು ಕಳ್ಳ ಎಂದು ಆರೋಪಿಸಿ ಕಾಡಿನಿಂದ ಹಿಡಿದು ಊರಿಗೆ ಕರೆತಂದಿತ್ತು. ಮಧುವನ್ನು ಸಮೀಪದ ಕಾಡಿನೊಳಗಿಂದ ಹಿಡಿದು ಆರೋಪಿಗಳು ಅಮಾನುಷವಾಗಿ ಥಳಿಸಿದ್ದಾರೆ. ಅಕ್ಕಿ ಕದ್ದಿದ್ದಾನೆಂದು ಆರೋಪಿಸಿ ಮಧು ವಾಸವಿದ್ದ ಸ್ಥಳದಿಂದ ಪತ್ತೆಯಾದ ಅಕ್ಕಿ ಮೂಟೆಯನ್ನು ಅವರ ಹೆಗಲ ಮೇಲೆ ಹಾಕಿ ಆರೋಪಿಗಳು ಕರೆತಂದು ಗುಂಪು ಸೇರಿ ಥಳಿಸಿದ್ದರು.ತದ ನಂತರ ಪೊಲೀಸರು ಮಧುವನ್ನು ವಶಕ್ಕೆ ತೆಗೆದುಕೊಂಡು,ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಷ್ಟರಲ್ಲಿ ಮಧು ಮೃತಪಟ್ಟಿದ್ದಾನೆ. ಆರೋಪಿಗಳ ದಾಳಿಯಿಂದ ಮಧು ತೀವ್ರವಾಗಿ ಗಾಯಗೊಂಡಿದ್ದ.