ಮುಮ್ತಾಜ್ ಅಲಿ ಸುಸೈಡ್ ಪ್ರಕರಣ; ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ.!

ಮಾಜಿ ಶಾಸಕ ಮೊಹಿದ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು; ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ನಡುವೆಯೇ ಮಂಗಳೂರಿನ ಇಬ್ಬರು ಹೈ ಪ್ರೊಫೈಲ್ ಉದ್ಯಮಿಗಳಿಗೆ ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ಅಂಶ ಬಯಲಾಗಿದೆ. ಹೈ ಪ್ರೊಫೈಲ್ ಉದ್ಯಮಿಗಳ ಪೈಕಿ ಓರ್ವರು ಮುಮ್ತಾಜ್ ಅಲಿ ಬಳಗದಲ್ಲೇ ಕಾಣಿಸಿಕೊಂಡವರಾಗಿದ್ದು, ಅವರ ಕುಟುಂಬದವರೊಂದಿಗೆ ನಿಕಟ ಸಂಬಂಧ ಹೊಂದಿದವರಾಗಿದ್ದಾರೆ. ಇನ್ನೊಬ್ಬ ಉದ್ಯಮಿ ಕೂಡ ಇದೇ ಬಳಗದಲ್ಲಿ […]

Continue Reading

ರಾಜ್ಯದಲ್ಲಿ 215 ಬಾಲ್ಯವಿವಾಹ ಪ್ರಕರಣಗಳು; ದೇಶದಲ್ಲಿ ಕರ್ನಾಟಕವೇ ನಂಬರ್ ಒನ್.!

ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು ಚಾಲ್ತಿಯಲ್ಲಿದ್ದರೂ 2022 ರಲ್ಲಿ ಒಟ್ಟಾರೆ ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ಜರುಗಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ ಸಿಪಿಆರ್) ವರದಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಅಂಕಿಅಂಶಗಳ ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಬಾಲ್ಯ ವಿವಾಹ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಒಟ್ಟು 215 ಬಾಲ್ಯ ವಿವಾಹಗಳು ನಡೆದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೇ ನಂಬರ್ ಒನ್ ಸ್ಥಾನದಲ್ಲಿದೆ. ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ […]

Continue Reading

ತಡರಾತ್ರಿಯಲ್ಲಿ ಟಯರ್ ಪಂಕ್ಚರ್ ಆಗಿ ಒದ್ದಾಡುತ್ತಿದ್ದ ಪ್ರಯಾಣಿಕರು; ಟಯರ್ ಬದಲಾಯಿಸಿ ಕೊಟ್ಟು ಮಾನವೀಯತೆ ಮೆರೆದ ಉಪ್ಪಿನಂಗಡಿ ಪೊಲೀಸರು.

ಉಪ್ಪಿನಂಗಡಿ ಸಮೀಪದ ರಾಮನಗದಲ್ಲಿ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಬರುತ್ತಿದ್ದ ‘ಯಕ್ಷ ತೆಲಿಕೆ’ ಕಲಾವಿದರ ತಂಡ ನೆಕ್ಕಿಲಾಡಿ ತಲುಪುತ್ತಿದ್ದಂತೆ ಟಯರ್ ಪಂಕ್ಚರ್ ಆಗಿದೆ. ಟಯರ್ ಬದಲಾಯಿಸಲು ಕಾರಿನಲ್ಲಿದ್ದವರು ಒದ್ದಾಡುತ್ತಿದ್ದಾಗ ಅದೇ ರಸ್ತೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಠಾಣೆಯ ಸಿಬ್ಬಂದಿಗಳಾದ ಮೋಹನ್ ಮತ್ತು ಗಜೇಂದ್ರ ಅವರು ತಮ್ಮ ವಾಹನದಲ್ಲಿ ಬಂದು ವಿಚಾರಿಸಿದ್ದಾರೆ. ಕಾರಿನ ಪ್ರಯಾಣಿಕರು ಟಯರ್ ಬದಲಾಯಿಸಲು ಕಷ್ಟಪಡುವುದನ್ನು ಗಮನಿಸಿದ ಸಮವಸ್ತ್ರಧಾರಿ ಸಿಬ್ಬಂದಿಗಳು ತಾವೇ ಮುಂದೆ ಬಂದು ಜಾಕ್ ಮೂಲಕ ಟಯರ್ ಬದಲಾಯಿಸಿ ಕೊಟ್ಟು ಹೃದಯವಂತಿಕೆ ಮೆರೆದಿದ್ದಾರೆ.ತಮ್ಮ ಕರ್ತವ್ಯದ […]

Continue Reading

ಮೈಸೂರು ಸ್ಯಾಂಡಲ್​ ಸೋಪ್​ ಫ್ಯಾಕ್ಟರಿಯಲ್ಲಿ ಭಾರಿ ಅಕ್ರಮ; 40 ಲಕ್ಷ ಲಂಚ ಕೊಡುವ ವೇಳೆ ಸಿಕ್ಕಿಬಿದ್ದಿದ್ದ ಕಂಪನಿಯೊಂದಕ್ಕೆ ಬಹುಕೋಟಿ ಟೆಂಡರ್​

ಮೈಸೂರು ಸ್ಯಾಂಡಲ್​ ಸೋಪ್​ ಫ್ಯಾಕ್ಟರಿಯ ಟೆಂಡರ್​ ಅಕ್ರಮಕ್ಕಾಗಿ ಬಹುಕೋಟಿ ಲಂಚ ವಸೂಲಿ ಪ್ರಕರಣ ಸುದ್ದಿಯಾಗಿದ್ದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಆರೋಪ ಹೊರಬಿದ್ದಿದೆ. ಟೆಂಡರ್ ಅಕ್ರಮಕ್ಕಾಗಿ 40 ಲಕ್ಷ ರೂಪಾಯಿ ಲಂಚ ಕೊಡುವ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದ ಕಂಪನಿಯೊಂದಕ್ಕೆ ಮತ್ತೆ ಬಹುಕೋಟಿ ಟೆಂಡರ್​ ನೀಡಲಾಗಿದೆ. ಟೆಂಡರ್​ ನಿಯಮಗಳನ್ನು ಗಾಳಿಗೆ ತೂರಿ ಈ ಕಂಪನಿಗೆ ಸ್ಯಾಂಡಲ್​ವುಡ್​ ಆಯಿಲ್​ ಮತ್ತು ನೂಡಲ್ಸ್​ ಪೂರೈಕೆಯ ಗುತ್ತಿಗೆ ನೀಡಲಾಗಿದ್ದು, ಬಾರೀ ಕಿಕ್​ಬ್ಯಾಕ್​ನ ಆರೋಪ ಕೇಳಿ ಬಂದಿದೆ. ಮಾರುಕಟ್ಟೆ ದರಕ್ಕಿಂತ ಎರಡರಷ್ಟು ಹೆಚ್ಚಿನ […]

Continue Reading

ಮಂಗಳೂರು: ಬಲ್ಮಠದಲ್ಲಿ ಖಾಸಗಿ ಬಸ್ ಸಿಬ್ಬಂದಿಗಳ ಮಾರಾಮಾರಿ; ರೌಡಿಗಳಂತೆ ಬಡಿದಾಡಿಕೊಂಡ ಸೆಲಿನಾ-ಧರಿತ್ರಿ ಬಸ್ ಸಿಬ್ಬಂದಿಗಳು

ವಿಟ್ಲ-ಮಂಗಳೂರು ಮಧ್ಯೆ ಸಂಚರಿಸುವ ಸೆಲಿನಾ ಬಸ್ ಮತ್ತು ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಧರಿತ್ರಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಬಡಿದಾಡಿ ಕೊಂಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್ ಟಿ ಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬಸ್ […]

Continue Reading

ದೇವನಹಳ್ಳಿ ಕೆಐಎಡಿಬಿ ಭೂಹಗರಣ ಆರೋಪ; ಸಮಗ್ರ ತನಿಖೆಗೆ ಬಿಜೆಪಿ ಶಾಸಕ ಸಿ.ಟಿ.ರವಿ ಆಗ್ರಹ

ಚಿತ್ರದುರ್ಗ: ದೇವನಹಳ್ಳಿ ಕೆಐಎಡಿಬಿ ಕರ್ಮಕಾಂಡ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಬಿಜೆಪಿ ಆಗ್ರಹಿಸಿದೆ. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ಭೂ ಕರ್ಮಕಾಂಡಗಳ ಬಗ್ಗೆ ಆಕ್ರೋಶ ಹೊರಹಾಕಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ KIADB ಭೂ ಸ್ವಾದೀನ ಪ್ರಕ್ರಿಯೆಯಲ್ಲಿ ಹಗರಣ ನಡೆದಿದ್ದು, ಈ ಬಗ್ಗೆ ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು. 1984 ರಲ್ಲಿ ಇದೇ ಭೂಮಿಯನ್ನು […]

Continue Reading

ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ಕಾನೂನು ಕುಣಿಕೆ;

KIADBಯಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತಕ್ಕೆ ಸಲ್ಲಿಕೆಯಾಯ್ತು ಮತ್ತೊಂದು ದೂರು.. ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ.ಪಾಟೀಲ್ ಸುತ್ತ ಅನುಮಾನಗಳ ಹುತ್ತ..! ಬೆಂಗಳೂರು: ವಾಲ್ಮಿಕಿ ನಿಗಮ ಕರ್ಮಕಾಂಡ, ಮುಡಾ ಸೈಟ್ ಅಕ್ರಮ ಹಗರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಕೆಐಎಡಿಬಿ ಭೂ ಅವ್ಯವಹಾರದ ಉರುಳು ಕೂಡಾ ಸುತ್ತಿಕೊಂಡಿದೆ. ಸರ್ಕಾರಿ ಜಮೀನನ್ನೇ ಬೇರೆಯವರ ಹೆಸರಲ್ಲಿ ಪರಿಗಣಿಸಿ ಪರಿಹಾರ ವಿತರಿಸಿರುವ ಭಾರೀ ಅಕ್ರಮ ಆರೋಪ ಕುರಿತಂತೆ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿದೆ. “ಸಿಟಿಜನ್ ರೈಟ್ಸ್ ಫೌಂಡೇಷನ್” ಪರವಾಗಿ ಅಧ್ಯಕ್ಷ ಕೆ.ಎ.ಪಾಲ್ ನೀಡಿರುವ ಈ […]

Continue Reading

ಹುಬ್ಬಳ್ಳಿಯಲ್ಲೂ ವಿಡಿಯೋ, ಅಡಿಯೋ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಟೀಂ

ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಮಾಡಬಾರದ ಕೆಲಸ ಮಾಡುತ್ತಿದ್ದ ತಂಡವೊಂದರ ಹಿಸ್ಟರಿ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ. ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ ನಿವಾಸಿ ಸಯ್ಯದ ಎಂಬಾತ ಹಣವಂತರನ್ನು ಗುರುತಿಸಿ ತನ್ನ ಪ್ರಿಯತಮೆಯನ್ನೆ ಅವರ ಬಳಿ ಬಿಟ್ಟು ಮಲಗಿಸಿ, ವಿಡಿಯೋ ಅಥವಾ ಅಡಿಯೋ ಮಾಡಿಕೊಂಡು ಅವರ ಬಾಗಿಲು ಬಡಿಯುವ ಹನಿಟ್ರ್ಯಾಪ್ ಟೀಂ ಒಂದನ್ನು ಹುಬ್ಬಳ್ಳಿಯ ಸಿಸಿಬಿ ಪೋಲೀಸರು ಹೆಡಮುರಿ ಕಟ್ಟಿದ್ದಾರೆ. ಹುಬ್ಬಳ್ಳಿಯ ಬಾಂಡೆ ಅಂಗಡಿ ವ್ಯಾಪಾರಿಯೊಬ್ಬನಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಈ ಟೀಂ ಬೇಡಿಕೆ ಇಟ್ಟಿತ್ತು.ಇವರಿಂದ ಬೇಸತ್ತ ವ್ಯಾಪಾರಿ […]

Continue Reading

ಸಜಿಪ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಸ್ಥಾನದಿಂದ ಖತರ್ನಾಕ್ ಶಾಫಿ ನಂದಾವರ ವಜಾ..

ಇತ್ತ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸತ್ತಾರ್ ಸುರತ್ಕಲ್ ಉಚ್ಛಾಟನೆ ಕೆಟ್ಟ ಮೇಲೆ ಬುದ್ಧಿ ಬಂತು.. ಧಾರ್ಮಿಕ ಸಂಘಟನೆಗಳಿಗೆ ಇದೊಂದು ಪಾಠವಾಗಲಿ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದು ಅನ್ನುತ್ತಾರಲ್ಲ ಆ ಸ್ಥಿತಿಯಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಸಂಘಟನೆಗಳ ಕಥೆ. ಎಲ್ಲಿಂದಲೋ ಬಂದ ಅಡ್ರೆಸ್ ಇಲ್ಲದ ವ್ಯಕ್ತಿಯನ್ನು ಹೂಗುಚ್ಛ, ಶಾಲು ಕೊಟ್ಟು ಅಧ್ಯಕ್ಷ ಕುರ್ಚಿ ನೀಡಿ ಸನ್ಮಾನಿಸಿದರೆ ಆತ ಇದನ್ನೆಲ್ಲ ಮಾಡದೆ ಇನ್ನೇನೂ ಮಾಡಲು ಸಾಧ್ಯ. ಮೂಲತಃ ಪಡುಬಿದ್ರಿಯ ನಿವಾಸಿಯಾದ ಶಾಫಿ ಯನ್ನು ನಂದಾವರ ಜಮಾಅತಿಗರು ತಲೆಯ […]

Continue Reading

ಸಜಿಪ ಬಳಿ ಚಾಲಕನ ನಿಯಂತ್ರಣ ತಪ್ಪಿದ ಥಾರ್ ಜೀಪ್, ಎರಡು ಆಟೋ, ಮೂರು ಬೈಕುಗಳಿಗೆ ಡಿಕ್ಕಿ, ಚಾಲಕ ಆಸ್ಪತ್ರೆಗೆ

ಚಾಲಕನ ನಿಯಂತ್ರಣ ಕಳೆದುಕೊಂಡ THAR ಜೀಪೊಂದು ರಸ್ತೆ ಬದಿಯಪಾರ್ಕಿಂಗ್ ಸ್ಥಳದಲ್ಲಿದ್ದ ಎರಡು ಆಟೋಗಳು, ಮೂರು ಬೈಕುಗಳಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದ ಘಟನೆ ಮೆಲ್ಕಾರ್-ಮುಡಿಪು ರಸ್ತೆಯ ಸಜಿಪದಲ್ಲಿ ಇದೀಗ ನಡೆದಿದೆ. ಆಟೋ ಚಾಲಕರು, ಬೈಕುಗಳ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಅಂಗಡಿಗೆ ಹೋಗಿದ್ದ ಕಾರಣ ಅದೃಷ್ಟವಶಾತ್ ಬಚಾವಾಗಿ ತಮ್ಮ ಮನೆಯವರ ಮುಖ ನೋಡುವಂತಾಗಿದೆ. ಅಪಘಾತದ ತೀವ್ರತೆಗೆ ವಾಹನಗಳು ಸಾಕಷ್ಟು ಜಖಂಗೊಂಡಿದ್ದು ಥಾರ್ ಜೀಪು ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Continue Reading