ಹಾಡಹಗಲೇ ಮನೆಗೆ ನುಗ್ಗಿ ಚಿನ್ನಾಭರಣ, ನಗದು ಹೊತ್ತೊಯ್ದ ಖದೀಮರು.

ವಿಟ್ಲ ಠಾಣಾ ವ್ಯಾಪ್ತಿಯ ಅಳಕೆಮಜಲು ಎಂಬಲ್ಲಿ ಎರಡು ಮನೆ ಕಳ್ಳತನ. ಘಟನೆಯಿಂದ ತೀವ್ರ ಆಘಾತಕ್ಕೀಡಾಗಿ ಕುಸಿದುಬಿದ್ದು ಪ್ರಜ್ಞಾಹೀನರಾದ ಮನೆಯೊಡತಿ ವಿಟ್ಲ-ಕಬಕ ರಸ್ತೆಯ ಅಳಕೆಮಜಲು ಕೆಮನಾಜೆ ಎಂಬಲ್ಲಿ ಇಂದು ಮಧ್ಯಾಹ್ನ ಮನೆಯವರೆಲ್ಲ ಶಾರದೋತ್ಸವಕ್ಕೆ ಹೋಗಿದ್ದ ಸಂದರ್ಭ ಕಳ್ಳತನ ನಡೆದಿದೆ. ಕೆಮನಾಜೆ ನಿವಾಸಿ ಪುಷ್ಪರಾಜ್ ಮತ್ತು ಅಂದೆ ಪರಿಸರ ನಿವಾಸಿ ಕೃಷ್ಣಪ್ಪ ಕುಲಾಲ್(ಕುಂಞಣ್ಣ) ಮನೆಯವರೆಲ್ಲ ಅಳಕೆಮಜಲು ಭಜನಾ ಮಂದಿರದಲ್ಲಿ ನಡೆಯುವ ಶಾರದಾ ಪ್ರತಿಷ್ಠೆಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಮನೆಗೆ ಬಂದಾಗ ಕಳ್ಳರು ದುಷ್ಕೃತ್ಯ ನಡೆಸಿರುವುದು ತಿಳಿದುಬಂದಿದೆ. ಪುಷ್ಪರಾಜ್ ಅವರ […]

Continue Reading

ಮೂಡಬಿದ್ರೆ: ಖಾಸಗಿ ಬಸ್ಸಿನ ‘ಯಮಸ್ವರೂಪಿ’ ವಿಡಿಯೋ ವೈರಲ್.!

ಜೈನ್ ಚೇಸಿಂಗ್ ಗೆ ಸಿಂಗಂ ಹಾಕಿದರು ಬ್ರೇಕ್.! ಮಂಗಳೂರು -ಮೂಡಬಿದ್ರೆ-ಕಾರ್ಕಳ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ಸಿನ ಧಾವಂತಕ್ಕೆ ಕಡಿವಾಣ ಹಾಕುವವರೇ ಇಲ್ಲ. ಈ ರೂಟಿನಲ್ಲಿ ಖಾಸಗಿಯವರದ್ದೇ ದರ್ಬಾರ್. ಟೈಮಿಂಗ್ ವಿಚಾರದಲ್ಲಿ ಬಸ್ ಗಳ ನಡುವೆ ಗಲಾಟೆ ಇಲ್ಲಿ ಸರ್ವೇ ಸಾಮಾನ್ಯ. ಇನ್ನು ಈ ಖಾಸಗಿ ಬಸ್ ಗಳ ಭಯಾನಕ ಚಾಲನೆಗೆ ಹಲವಾರು ಮಂದಿ ಪ್ರಾಣ ಕಳೆದುಕೊಂಡವರು ಇದ್ದಾರೆ. ಈ ಬಗ್ಗೆ ಆರ್ ಟಿ ಓ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಖಾಸಗಿ ಪ್ರಭಾವಕ್ಕೆ ಆರ್ […]

Continue Reading

ಮುಡಿಪು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ. ಪ್ರಯಾಣಿಕರು ಅದೃಷ್ಟವಶಾತ್ ಪಾರು.

ಮುಡಿಪು ಕಡೆಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಟೊಯೊಟಾ ಅರ್ಬನ್ ಕ್ರೂಸರ್ ಕಾರು ಸಾಲೆತ್ತೂರು ಜಂಕ್ಷನಲ್ಲಿ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯಲ್ಲಿದ್ದ ಭಾರಿ ಗಾತ್ರದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಭಾಗಶ: ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ಎರಡು ಸುರಕ್ಷತಾ ಬೆಲೂನುಗಳೂ ಓಪನ್ ಆಗಿದ್ದರಿಂದಾಗಿ ಚಾಲಕ ಮತ್ತು ಪ್ರಯಾಣಿಕರು ಅದೃಷ್ಟವಶಾತ್ ಬಚಾವಾಗಿದ್ದಾರೆ.

Continue Reading

ಮಂಗಳೂರು: ಹನಿಟ್ರ್ಯಾಪ್.. ಪ್ರಮುಖ ಸೂತ್ರಧಾರಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಸತ್ತಾರ್, ಮುಸ್ತಫಾ ಅಂದರ್..ಬಲೆಗೆ ಬಿದ್ದಿದ್ದು ಹೇಗೆ ಗೊತ್ತೆ..? ಮಂಗಳೂರು ಉದ್ಯಮಿ, ಸಾಮಾಜಿಕ ಮುಂದಾಳು ಮುಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹನಿಟ್ರ್ಯಾಪ್ ಸೂತ್ರಧಾರಿಗಳನ್ನು ಪೊಲೀಸರು ಬಲೆಗೆ ಕೆಡವಲು ಯಶಸ್ವಿಯಾಗಿದ್ದು, ಒಟ್ಟಾರೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಅನ್ನಲಾಗುತ್ತಿದೆ. ಮುಮ್ತಾಜ್ ಅಲಿ ನಿಗೂಢ ಕಣ್ಮರೆ ಬಳಿಕ ಮುಮ್ತಾಜ್ ಅಲಿ ಸಹೋದರ ಹೈದರ್ ಆರು ಜನರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಬಿಎನ್ […]

Continue Reading

ಮೂರು ಸಾವಿರ ಎಕರೆ ಭೂಮಿ, ಚಿನ್ನದ ಗಣಿ, ಸಮಸ್ತ ಆಸ್ತಿಯನ್ನು ಮಠಕ್ಕೆ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಓಸ್ವಾಲ್ ಜೈನ್

ಚಿನ್ನದ ಅದಿರು ಗಣಿ ಮಾಲೀಕ ರಾಜಸ್ಥಾನ ಮೂಲದ ಪಿ.ಬಿ.ಓಸ್ವಾಲ್ ಜೈನ್ ರವರು ತನ್ನ ಒಡೆತನದ ಗಣಿಗಾರಿಕೆ ಪ್ರದೇಶದ 3 ಸಾವಿರ ಎಕರೆ ಭೂಮಿ ಮತ್ತು ಇತರ ಸಮಸ್ತ ಆಸ್ತಿಯನ್ನು ದಾನವಾಗಿ ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷ ಡಾ. ಸಿದ್ದರಾಜು ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದ್ದಾರೆ. ಕಳೆದ 20 ವರ್ಷಗಳಿಂದ ಪಾಲನಹಳ್ಳಿ ಶನೇಶ್ಚರ ಸ್ವಾಮಿ ಮಠಾಧ್ಯಕ್ಷರಾದ ಡಾ. ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ, ಸೇವಾ ಕೈಂಕರ್ಯಗಳನ್ನು ಹತ್ತಿರದಿಂದ ಗಮನಿಸಿ, 78 ವರ್ಷಪ್ರಾಯದ ಇವರು ಜೈನ ಧರ್ಮದ ತತ್ವಗಳ ಅನುಸಾರ ಅಹಿಂಸಾ […]

Continue Reading

ಹರ್ಯಾಣ: ಚೌಕಾಸಿಗೆ ಇಳಿದ ಕಾಂಗ್ರೆಸ್ ಗೆ ಗುದ್ದು ಕೊಟ್ಟ ಆಮ್ ಆದ್ಮಿ.. ಮೋದಿ ಮೋಡಿ ಇಲ್ಲದಿದ್ದರೂ ಗೆದ್ದ ಬಿಜೆಪಿ!

ದೇಶದ ಶ್ರೀಮಂತ ಮಹಿಳೆ ಇನ್ನು ಎಂಎಲ್ಎ.! ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧ್ಯವೇ ಇಲ್ಲ. ಆಡಳಿತ ವಿರೋಧಿ ಅಲೆಗೆ ಸಿಲುಕಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಕನ್ಫರ್ಮ್ ಆಗುತ್ತಲೇ ಬಿಜೆಪಿ ಹೈಕಮಾಂಡ್ ತನ್ನ ಸ್ಟ್ರಾಟಜಿ ಎಲ್ಲವನ್ನೂ ಜಮ್ಮು ಕಾಶ್ಮೀರದತ್ತ ತಿರುಗಿಸಿತ್ತು. ನರೇಂದ್ರ ಮೋದಿ ಕೇವಲ ನಾಲ್ಕು ರೋಡ್ ಶೋ ಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ ಬಿಜೆಪಿ ಘಟಾನುಘಟಿಗಳು ಹರಿಯಾಣದತ್ತ ಮುಖವೇ ಹಾಕಲಿಲ್ಲ. ಸೋಲುವ ರಾಜ್ಯದಲ್ಲಿ ತಮ್ಮ ಹೆಸರು, ಖ್ಯಾತಿ ಎಲ್ಲವನ್ನೂ ಕಳೆದುಕೊಳ್ಳಲು ಅವರು ಇಷ್ಟ ಪಡಲಿಲ್ಲ. ಎಲ್ಲಾ ಸಮೀಕ್ಷೆಗಳು […]

Continue Reading

ಜಮ್ಮು ಕಾಶ್ಮೀರ: ಡರೋ ಮತ್..ಡರೋ ಮತ್..ರಾಗಾ ಮ್ಯಾಜಿಕ್ ವರ್ಕ್ ಔಟ್..ಬಿಜೆಪಿ, ಪಿಡಿಪಿ ಕಿಕ್ ಔಟ್..!

ಭಾರತದ ನೆತ್ತಿಯ ಮೇಲಿರುವ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ – ಪಿಡಿಪಿ ಕಿಕ್ ಔಟ್ ಆಗಿದೆ. ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮೈತ್ರಿಕೂಟಕ್ಕೆ ಅಧಿಕಾರ ಲಭಿಸಿದೆ. ಈ ಚುನಾವಣೆ ರಾಷ್ಟ್ರದ ಗಮನ ಸೆಳೆದಿತ್ತು. ಕೇಂದ್ರಾಡಳಿತ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆದಿತ್ತು. ರಾಜ್ಯಕ್ಕೆ ಸಂವಿಧಾನದ 370 ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಪಡಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು. ಈ ನಿರ್ಧಾರ ಐತಿಹಾಸಿಕ ಅಂತ ಹೇಳಿ ಬೀಗುತ್ತಿದ್ದ ಬಿಜೆಪಿಗೆ ಅಲ್ಲಿನ […]

Continue Reading

ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ; ಕಳೆಂಜಿಮಲೆ ರಕ್ಷಿತಾರಣ್ಯದಿಂದ ಹಾಲುಮಡ್ಡಿ ಎಗರಿಸಿದ ಖದೀಮರು ಬಂಧನ

ಅರಣ್ಯ ಇಲಾಖೆಯ ಉಕ್ಕುಡ ವಲಯ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿನ ದೂಪದ ಮರಗಳಿಂದ ಅಕ್ರಮವಾಗಿ ಹಾಲುಮಡ್ಡಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಂಬಳೆಬೆಟ್ಟು ಬಳಿ ವಶಕ್ಕೆ ಪಡೆದು ಬಂಧಿಸಿದೆ. ಬಂಟ್ವಾಳ ತಾಲೂಕು ಕೆದಿಲ ಪಾಟ್ರಕೋಡಿಯ ಉಮ್ಮರ್ ಫಾರೂಕ್(44), ಮಹಮ್ಮದ್ ಹಸೈನಾರ್ (30), ತಾಳಿಪಡ್ಪು ಉಮ್ಮರ್ ಫಾರೂಕ್(26), ಅಲಿ ಹೈದರ್ ಎಂ.ಕೆ.ಎಂಬವರನ್ನು ಬಂಧಿಸಿ ಆಟೋರಿಕ್ಷಾ ಸಹಿತ 1.05ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ.ನೇತೃತ್ವದಲ್ಲಿ ದಾಳಿ ನಡೆದಿದೆ. ಉಪ […]

Continue Reading

ಮಮ್ತಾಜ್ ಅಲಿ ಆತ್ಮಹತ್ಯೆ, ಬ್ಲಾಕ್ ಮೇಲ್ ಪ್ರಕರಣ : ಆಳವಾದ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಮುನೀರ್ ಕಾಟಿಪಳ್ಳ ಸಂಚಾಲಕರು, ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಪ್ರಸಿದ್ಧ ಉದ್ಯಮಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ ಸಮಾಜದಲ್ಲಿ ತಲ್ಲಣ ಮೂಡಿಸಿದೆ. ಹನಿ ಟ್ರಾಪ್, ಬ್ಲಾಕ್ ಮೇಲ್ ನಿಂದ ಕಂಗೆಟ್ಟು ಈ ಆತ್ಮಹತ್ಯೆ ಸಂಭವಿಸಿದೆ. ಇಷ್ಟಲ್ಲದೆ ಪ್ರಕರಣದಲ್ಲಿ ಇನ್ನುಷ್ಟು ನಿಗೂಢ ಅಂಶಗಳು, ಭಾಗೀದಾರಿಕೆಯ ಶಂಕೆ ಇದೆ. ಈ ಪ್ರಕರಣ ಮಾತ್ರವಲ್ಲದೆ ಇನ್ನಷ್ಟು ಹನಿಟ್ರಾಪ್, ಬ್ಲಾಕ್ ಮೇಲ್ ಪ್ರಕರಣಗಳು ಮಂಗಳೂರಿನ ಪ್ರತಿಷ್ಟಿತರು, ಉದ್ಯಮಿಗಳನ್ನು ಗುರಿಯಾಗಿಸಿ ನಡೆದಿರುವ ಸುದ್ದಿಗಳು ಹರಿದಾಡುತ್ತಿವೆ. ಸದ್ದಿಲ್ಲದೆ ಮುಗಿದು ಹೋಗಿರುವ […]

Continue Reading

ಹನಿಟ್ರ್ಯಾಪ್ ಬಗೆದಷ್ಟು..ಬಿಚ್ಚಿಡುತ್ತಿದೆ.!

ಪ್ರಖ್ಯಾತ ಧಾರ್ಮಿಕ ಪಂಡಿತರನ್ನೇ ಬಲೆಗೆ ಬೀಳಿಸುತ್ತಿದ್ದ ಹರಾಮಿಕೋರರು.! ಹನಿಟ್ರ್ಯಾಪ್.. ಖದೀಮರು ಸುಲಭದಲ್ಲಿ ದುಡ್ಡು ಮಾಡಿಕೊಳ್ಳಲು ಕಂಡುಕೊಂಡ ಮಾರ್ಗ ಇದು. ಶ್ರೀಮಂತ ಉದ್ಯಮಿಗಳು, ಪ್ರಖ್ಯಾತರ ವೀಕ್ನೆಸ್ ತಿಳಿದು ಚೆಂದುಳ್ಳಿ ಚೆಲುವೆಯರ ಮೂಲಕ ಅವರನ್ನು ಬಲೆಗೆ ಬೀಳಿಸಿ ಅಲ್ಲಿ ನಡೆಯುವ ಸಕಲ ಆಟವನ್ನು ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಸಂತ್ರಸ್ತರನ್ನು ಜೀವನ ಪರ್ಯಂತ ದೋಚುವ ಕಾಯಕ ಮಾಡಿಕೊಂಡಿರುವ ಇಂತಹ ಖತರ್ನಾಕ್ ಗ್ಯಾಂಗ್ ಮಂಗಳೂರಿನಲ್ಲಿ ಅಲ್ಲಲ್ಲಿ ತಲೆ ಎತ್ತಿ ನಿಂತಿದೆ. ನಿರಂತರ ಬ್ಲ್ಯಾಕ್ ಮೇಲ್ ಗೆ ಸಿಲುಕಿದರೂ ಮಾನ ಮರ್ಯಾದೆಗೆ ಹೆದರಿ ಪೊಲೀಸ್ […]

Continue Reading