ಸುಳ್ಯ: ಚಿನ್ನಾಭರಣ ಕಳ್ಳತನ ಪ್ರಕರಣ; ಆರೋಪಿಗಳಿಂದ ಚಿನ್ನಾಭರಣ ವಶ, ಪ್ರಕರಣ ದಾಖಲು

ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರು ನೀಡಿರುವ ದೂರಿನಂತೆ, ಪ್ರಕರಣದ ಆರೋಪಿತೆಯಾದ ಶೃತಿ @ ವಿಶ್ಮೀತ ಎಂಬಾಕೆಯೊಂದಿಗೆ ನನ್ನ ತಂದೆಗೆ ಸಂಪರ್ಕವಿದ್ದು, ಆಕೆಗೆ ಪುಣ್ಯಶ್ರೀಯವರ ತಂದೆ ಸಾಲವಾಗಿ ಸರಿ-ಸುಮಾರು 6 ಲಕ್ಷ ರೂಪಾಯಿ ಹಣವನ್ನು ನೀಡಿರುವುದಾಗಿದೆ. ಪಿರ್ಯಾದಿದಾರರು ಸದ್ರಿ ಹಣವನ್ನು ಹಿಂತಿರುಗಿಸುವಂತೆ ಆರೋಪಿತೆ ಶೃತಿ ಯಾನೆ ವಿಶ್ಮೀತರವರಿಗೆ ತಿಳಿಸಿದ ಮೇರೆಗೆ ಆಕೆಯು ಹಣವನ್ನು ಹಿಂತಿರುಗಿಸುವುದಾಗಿ ಒಪ್ಪಿಕೊಂಡು ದಿನಾಂಕ: 07.04.2026 ರಂದು ಪಿರ್ಯಾದಿದಾರರ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರ ಮನೆಗೆ ಬಂದಿರುತ್ತಾರೆ. ದೂರುದಾರರು ಆ ಬಳಿಕ ಕೆಲಸಕ್ಕೆ ತೆರಳಿದ್ದು, […]

Continue Reading

ಮುಸ್ಲಿಂ ಸಮುದಾಯ ಓದಲೇಬೇಕಾದ ಸ್ಟೋರಿ

ಬಂಟ, ಬ್ರಾಹ್ಮಣರಂತೆ ಬ್ಯಾರಿ ಹುಡುಗರಿಗೂ ವಧು ಸಿಗುತ್ತಿಲ್ಲ.! ಮಸೀದಿ, ಮೊಹಲ್ಲಾ, ಸಂಘ ಸಂಸ್ಥೆಗಳ ಕರ್ತವ್ಯವೇನು.? ಸಮುದಾಯ ಇನ್ನಾದರೂ ಚಿಂತಿಸಲಿ ಮುಸ್ಲಿಂ ಸಮುದಾಯದಲ್ಲಿ ಅದರಲ್ಲೂ ಬ್ಯಾರಿ ಜನಾಂಗದಲ್ಲಿ ಈ ಹಿಂದೆ ವರದಕ್ಷಿಣೆಯ ಪಿಡುಗು ದೊಡ್ಡ ಸಮಸ್ಯೆಯಾಗಿ ತಲೆದೋರಿತ್ತು . ವಿವಾಹವಾಗುವ ಹೆಣ್ಣು ಕುಟುಂಬಗಳು ವರದಕ್ಷಿಣೆ ನೀಡಲು ಸಾಧ್ಯವಾಗದೇ 30-35 ವರ್ಷ ಮೀರಿದರೂ ಮದುವೆ ಮಾಡಲು ಸಾಧ್ಯವಾಗದೇ ಮನೆಯಲ್ಲೇ ಉಳಿಯುವಂತಾಗುತ್ತಿತ್ತು. ಇಸ್ಲಾಂ ನಲ್ಲಿ ಮಹರ್ ಪದ್ಧತಿ ಜಾರಿಯಲ್ಲಿದ್ದರೂ ಅನಪೇಕ್ಷಿತವಾಗಿ ನುಸುಳಿಕೊಂಡ ವರದಕ್ಷಿಣೆ ಪಿಡುಗು ಸಮುದಾಯವನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿತ್ತು. ಇದರ […]

Continue Reading

ಮುಸ್ಲಿಮರು ಪತ್ನಿಯರನ್ನು ಸಮಾನವಾಗಿ ನೋಡಿಕೊಂಡರೆ, ಬಹುಪತ್ನಿತ್ವಕ್ಕೆ ಅವಕಾಶ ಇದೆ: ಅಲಹಾಬಾದ್ ಹೈಕೋರ್ಟ್

ಇಸ್ಲಾಂ ಧರ್ಮದ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಮುಸ್ಲಿಂ ಪುರುಷರು ಪಡೆಯಬಹುದಾದ ವಿವಾಹದ ಹಕ್ಕುಗಳ ಕುರಿತು ಇತ್ತೀಚೆಗೆ ಅಲಹಾಬಾದ್ ನ್ಯಾಯಾಲಯವು ಪ್ರಮುಖ ತೀರ್ಪೊಂದನ್ನು ನೀಡಿದೆ. ಮೊದಲ ಪತ್ನಿ ಜೀವಂತವಾಗಿದ್ದರೂ ಅಥವಾ ಆಕೆಯೊಂದಿಗೆ ವಿಚ್ಛೇದನವಾಗದಿದ್ದರೂ ಸಹ, ಮುಸ್ಲಿಂ ಪುರುಷನು ಎರಡನೇ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪು ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಡಿಯಲ್ಲಿ ಬರುವ ಹಕ್ಕುಗಳನ್ನು ಎತ್ತಿಹಿಡಿದಿದೆ. ಧಾರ್ಮಿಕ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ನಾಲ್ಕು ವಿವಾಹಗಳವರೆಗೆ ಮಾಡಿಕೊಳ್ಳಲು ಅವಕಾಶವಿರುವುದರಿಂದ, ಇದನ್ನು ಕಾನೂನುಬಾಹಿರ ಎಂದು […]

Continue Reading

ಮಂಗಳೂರು: ತಲೆ ಮರೆಸಿಕೊಂಡಿರುವ ಕುಖ್ಯಾತ ಆರೋಪಿಗಳ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರು ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ. ಕುಶಾಲನಗರ ನಿವಾಸಿ ಸುಲೈಮಾನ್ ಅಲಿಯಾಸ್ ಶಮೀರ್ ಮತ್ತು ಸಂಶುದ್ದೀನ್ ರೆಡ್ ಕಾರ್ನರ್ ನೋಟಿಸ್ ಜಾರಿ, ತಲೆಮರೆಸಿಕೊಂಡಿರುವ ಆರೋಪಿಗಳು. ಕುಶಾಲನಗರದ ಸುಲೈಮಾನ್ 2017ರಲ್ಲಿ ಮಂಗಳೂರಿನ ಉರ್ವ ಠಾಣಾ ಎಎಸ್ ಐ ಆಗಿದ್ದ ಐತಪ್ಪ ಅವರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳಲ್ಲಿ ಓರ್ವ. ಕೊಣಾಜೆ ಠಾಣಾ […]

Continue Reading

ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ಕ್ವಾಟ್ರಸ್ಸನ್ನೇ ಲಪಟಾಯಿಸಲು ಸ್ಕೆಚ್; ಸಂಘಿ ಮುಖಂಡರು ಅಂಧರ್.!

ಮಾಸ್ಟರ್ ಮೈಂಡ್ ಶ್ರೀನಾಥ್ ನಗರಗದ್ದೆ ಮಾಜಿ ಸಚಿವರೊಬ್ಬರ ಕಚೇರಿ ಮಾಜಿ ಸಹಾಯಕ ನಕಲಿ ದಾಖಲೆ ಸೃಷ್ಟಿಸಿ ಪೊಲೀಸ್ ವಸತಿಗೃಹದ ಜಾಗವನ್ನು ಕಬಳಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಶಿವಮೊಗ್ಗದ ಸಂಘ ಪರಿವಾರದ ಬಿಜೆಪಿ ಮುಖಂಡ ಸೇರಿದಂತೆ ಮೂವರನ್ನು ಮಲ್ಲೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮುಖಂಡ ಶ್ರೀನಾಥ್ ನಗರಗದ್ದೆ, ತುಮಕೂರಿನ ಕೃಷ್ಣಮೂರ್ತಿ ಹಾಗೂ ಮೈಸೂರಿನ ಕಿಶನ್‌ ಬಂಧಿತರು. ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಎಂ.ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ವಂಚಕ ಆರೋಪಿಗಳನ್ನು […]

Continue Reading

ಟೊಪ್ಪಿ ನೌಫಲ್ ಹತ್ಯೆಗೆ ಸಂಭ್ರಮಿಸಿದ್ದೇ ಟ್ಯಾಬ್ಲೆಟ್ ಆರೀಫ್ ಹತ್ಯೆಗೆ ಕಾರಣ.!

ಆರೀಫ್ ಹತ್ಯೆಯಲ್ಲಿ ಭಾಗಿಯಾದ ಏಳು ಆರೋಪಿಗಳು ಪೊಲೀಸ್ ವಶದಲ್ಲಿ.! ಹತ್ಯೆಗೂ ಇದೆ ಸೌದಿ ಲಿಂಕ್.! ತೊಕ್ಕೋಟು ಓವರ್ ಬ್ರಿಡ್ಜ್ ಮೇಲೆ ನಡೆದ ಅರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಮಹತ್ವದ ಪ್ರಗತಿ ಸಾಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೆಲ ತಿಂಗಳುಗಳ ಹಿಂದೆ ಉಪ್ಪಳದಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ಬಜಾಲ್‌ನ ನೌಫಲ್ ಎಂಬಾತನ ಸಾವನ್ನು ಅರಿಫ್ ಸಂಭ್ರಮಿಸಿದ್ದೇ ಈ ಭೀಕರ ಕೊಲೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಈ ಸೇಡಿನ ಕೃತ್ಯಕ್ಕೆ […]

Continue Reading

ಕುಟುಂಬದೊಳಗಿನ ಜಾಗದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹಣದ ಆಮಿಷಕ್ಕೆ ಬಲಿಯಾಗಿದ್ದ ದೈವದ ವೇಷಧಾರಿಗೆ ಸಂಕಷ್ಟ

ಸುಳ್ಯ ನ್ಯಾಯಾಲಯದಿಂದ ಎಫ್ ಐಆರ್ ದಾಖಲಿಸಿ ವರದಿ ನೀಡುವಂತೆ ಆದೇಶ. ದೈವ ವೇಷಧಾರಿ ಮೋಹನ, ಸಚಿನ್ ಮಡ್ತಿಲರಿಗೆ ಬಂಧನ ಭೀತಿ! ಐವರ್ನಾಡು ಗ್ರಾಮದ ಮಡ್ತಿಲದಲ್ಲಿ ಮಡ್ತಿಲ ಕುಟುಂಬದ ನೇಮೋತ್ಸವದ ಸಂದರ್ಭದಲ್ಲಿ ದೈವಧಾರಿಯು ನಿನಗೆ ಮಗು ಬೇಕಾ ಅಥವಾ ಜಾಗ ಬೇಕಾ.? ಎಂದು ಕೇಳಿ ಬೆದರಿಕೆ ಒಡ್ಡಿರುವುದಾಗಿ ಮಮತಾ ಭಾಸ್ಕರ ಮಡ್ತಿಲ ಎಂಬವರು ನೀಡಿರುವ ಪಿರ್ಯಾದಿಯನ್ನು ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸುಳ್ಯ ನ್ಯಾಯಾಲಯವು ಆದೇಶ ನೀಡಿದ ಮೇರೆಗೆ ಬೆಳ್ಳಾರೆ ಪೊಲೀಸರು ದೈವಧಾರಿ ಮೋಹನ ಮತ್ತು […]

Continue Reading

ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಯ ದಣಿಗಳಿಗೆ ಕರಾರು ಒಪ್ಪಂದ; ಡಿವೈಎಫ್ಐ ವಿರೋಧ, ಒಪ್ಪಂದ ಹಿಂಪಡೆಯಲು ಆಗ್ರಹ.

ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದು, ಸರಕಾರಿ ಆಸ್ಪತ್ರೆಗಳ ಕತ್ತು ಹಿಸುಕುವ ಹುನ್ನಾರ: ಡಿವೈಎಫ್ಐ ಹೋರಾಟದ ಎಚ್ಚರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವ ಹಿತದೃಷ್ಟಿಯಿಂದ ಖಾಸಗೀ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ರಾಜ್ಯ ಸರಕಾರದ ನಡೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕಟುವಾಗಿ ವಿರೋಧಿಸುತ್ತದೆ. ಇದು ಸರಕಾರಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕತ್ತು ಹಿಸುಕಿ ಸಾಯಿಸಿ ಖಾಸಗೀ ಆಸ್ಪತ್ರೆಗಳಿಗೆ ಲಾಭಿ ಮಾಡಿಕೊಡುವ ಉದ್ದೇಶ ಈ ತೀರ್ಮಾನದ ಹಿಂದೆ ಅಡಗಿದೆ ಎಂದು ಆರೋಪಿಸಿದೆ. ಆರೋಗ್ಯ […]

Continue Reading

ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ.

ಖಾಸಗೀಕರಣ ಮಾಡಲು ಹೊರಟ ರಾಜ್ಯ ಸರಕಾರ; ಇದು ಬಡಜನರ ಮೇಲಿನ ಮರಣಶಾಸನ: ಶೇಖರ್ ಲಾಯಿಲ ದ.ಕ ಜಿಲ್ಲೆಯ ವಿವಿಧ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದು ಬಡಜನರ ಮೇಲಿನ ಮರಣಶಾಸನವಾಗಿದೆ. ಬಡಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ವರದಾನವಾಗಿತ್ತು. ಇದೀಗ ಏಕಾಏಕಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದಕ್ಕೆ ಸಹಿ ಹಾಕುವ […]

Continue Reading

ಸುಳ್ಯ: ಮಸೀದಿಯ ಕಾಣಿಕೆ ಡಬ್ಬಿ ಕಳವು ಪ್ರಕರಣದ ಆರೋಪಿಯ ಸೆರೆ

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗೂನಡ್ಕ ಎಂಬಲ್ಲಿರುವ ಮಸೀದಿಯ ಆವರಣದಲ್ಲಿದ್ದ ಕಾಣಿಕೆ ಡಬ್ಬಿಯನ್ನು ದಿನಾಂಕ 30.03.2026 ರಂದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 45/2026 ಕಲಂ 303(2)BNS -2023 ಪ್ರಕರಣ ದಾಖಲಿಸಿಕೊಂಡು ತನಿಖೆ ಹಂತದಲ್ಲಿತ್ತು. ದಿನಾಂಕ 06.04.2026 ರಂದು ಸುಳ್ಯ ಕೆಮ್ರಾಜೆ ಎಲಿಮಲೆ ಎಂಬಲ್ಲಿ ಪ್ರಕರಣದ ಆರೋಪಿ ಆಂದ್ರಪ್ರದೇಶದ ಪಶ್ಚಿಮ ಗೊದಾವರಿ ಮೂಲದ ನಿವಾಸಿ ಮಹಮ್ಮದ್‌ ಸಲ್ಮಾನ್‌ ಎಂಬಾತನನ್ನು ಸುಳ್ಯ ಪೊಲೀಸರು ದಸ್ತಗಿರಿ ಮಾಡಿ, ಆರೋಪಿತನಿಂದ ಕಳವು ಮಾಡಿದ 2,000 ರೂ […]

Continue Reading