ಮೊದಲ ಬಾರಿ ಬ್ಯಾಂಕ್ ಲೋನ್ ಪಡೆಯುವವರಿಗೆ ಸಿಬಿಲ್‌ ಸ್ಕೋರ್‌ ಮಾನದಂಡ ಕಡ್ಡಾಯವಲ್ಲ- ಕೇಂದ್ರ ಹಣಕಾಸು ಸಚಿವಾಲಯ

ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಸಿಬಿಲ್ ಸ್ಕೋರ್ ಇಲ್ಲದ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ನೀಡಲಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಸಿಬಿಲ್ ಸ್ಕೋರ್ ಕಾರಣ ನೀಡಿ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಸಾಲ ಪಡೆಯಬೇಕಿದ್ದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರಬೇಕು ಎನ್ನುತ್ತಾರೆ. ವೈಯಕ್ತಿಕ ಸಾಲಗಳಂತಹ ಅನ್‌ಸೆಕ್ಯೂರ್ಡ್ ಸಾಲಗಳಿಗೆ ಬ್ಯಾಂಕುಗಳು ಖಂಡಿತಾ ಈ ಸ್ಕೋರ್ ಕೇಳುತ್ತವೆ. 650ಕ್ಕಿಂತ ಹೆಚ್ಚಿನ ಸ್ಕೋರ್ ಹೊಂದಿರುವ ಮತ್ತು ಸಾಲವನ್ನು ಡಿಫಾಲ್ಟ್ ಮಾಡದವರಿಗೆ ಮಾತ್ರ ಬ್ಯಾಂಕುಗಳು ಸಾಲ […]

Continue Reading

ಪೊಲೀಸ್ ಇನ್ಸ್ ಪೆಕ್ಟರ್ ಖಾತೆಗೆ ಸೈಬರ್ ಖದೀಮರು ಕನ್ನ, ಮೂರು ಲಕ್ಷ ರೂ ವಂಚನೆ

ಪೊಲೀಸ್ ಇನ್ಸ್ ಪೆಕ್ಟರ್ ರೊಬ್ಬರ ಖಾತೆಗೆ ಸೈಬರ್ ಖದೀಮರು ಕನ್ನ ಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ. ರಾಜ್ಯಪಾಲರ ಅಧಿಕೃತ ನಿವಾಸ ‘ರಾಜ ಭವನ’ದಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಸೈಬರ್ ಖಧೀಮರು ಮೂರು ಲಕ್ಷ ರೂ ವಂಚಿಸಿದ್ದಾರೆ. ಮುಂಬಾಯಿ ರಾಜ ಭವನದ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಫಿಶಿಂಗ್ ಮೂಲಕ ಸೈಬರ್ ಕಳ್ಳರು ವಂಚಿಸಿದ್ದಾರೆ. ಫಿಶಿಂಗ್ ಎನ್ನುವುದು ಇಮೇಲ್‌, ಪಠ್ಯ ಸಂದೇಶಗಳು, ಫೋನ್ ಕರೆಗಳು ಅಥವಾ ದುರುದ್ದೇಶಪೂರಿತ ಲಿಂಕ್‌ಗಳ ಮೂಲಕ ವ್ಯಕ್ತಿಗಳ ಮೇಲೆ ನಡೆಸುವ ಸೈಬರ್ ದಾಳಿಯಾಗಿದೆ. ಇದರಿಂದ ವೈಯಕ್ತಿಕ […]

Continue Reading

ಲಕ್ಕಿ‌ ಸ್ಕೀಂ ವಂಚನೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಿಪಿಐಎಂ ಆಗ್ರಹ

ಲಕ್ಕಿ ಸ್ಕೀಂ ಹೆಸರಿನಲ್ಲಿ ಬಂಪರ್ ಬಹುಮಾನ, ಕಟ್ಟಿದ ಹಣದ ಮೌಲ್ಯಕ್ಕೆ ತಕ್ಕುದಾದ ವಸ್ತುಗಳನ್ನು ನೀಡುವ ಆಮಿಷ ಒಡ್ಡಿ ಸಾವಿರಾರು ಸಂಖ್ಯೆಯ ಜನರಿಂದ ಕೋಟಿ, ಕೋಟಿ ಹಣ ಸಂಗ್ರಹಿಸಿದ ಲಕ್ಕಿ‌ ಸ್ಕೀಂ ಗಳಲ್ಲಿ‌ ಕೆಲವೊಂದು ಆಯೋಜಕರು ಸ್ಕೀಂ ಕೊನೆಗೊಂಡ ತರುವಾಯ ವಸ್ತುಗಳನ್ನು ನೀಡದೆ ವಂಚಿಸಿರುವುದು ವರದಿಯಾಗಿದೆ. ಸಂತ್ರಸ್ತರು ನೀಡಿದ ದೂರಿನ ಆಧಾರದಲ್ಲಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶೈನ್ ಹಾಗು ನ್ಯೂ ಇಂಡಿಯಾ ಸ್ಕೀಂ ಆಯೋಜಕರನ್ನು ಬಂಧಿಸಿರುತ್ತಾರೆ. ಸುರತ್ಕಲ್ ಪೊಲೀಸರ ಕ್ರಮವನ್ನು ಸಿಪಿಐಎಂ ಸ್ವಾಗತಿಸುತ್ತದೆ, ಅದೇ ಸಂದರ್ಭ, ಸಂತ್ರಸ್ತರಿಗೆ […]

Continue Reading

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು: ಬಸವಲಿಂಗಪ್ಪ ಹಿಂದೆ ಸರಿದಿದ್ದರು, ರೇಸಿನಲ್ಲಿದ್ದರು ಬಿ.ರಾಚಯ್ಯ, ರಂಗನಾಥ್ ವಂಚಿತರಾಗಿದ್ದು ಹೇಗೆ.? ಪರಮೇಶ್ವರ್ ಲಕ್ಕು ಕುದುರಲಿಲ್ಲ

✍️ ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ ದಲಿತ ಸಿಎಂ ಕೂಗು ಮೇಲೇಳಲಿದೆ.ಅಂದ ಹಾಗೆ ಈ ವಿಷಯವನ್ನು ಆಪ್ತರೊಡನೆ ಹಂಚಿಕೊಂಡ ಪವರ್ ಫುಲ್ ನಾಯಕರೊಬ್ಬರು:’ಸಿದ್ಧರಾಮಯ್ಯ ಸಿಎಂ ಆಗಿರುವವರೆಗೆ ದಲಿತರು ಈ ಹುದ್ದೆಗಾಗಿ ಪಟ್ಟು ಹಿಡಿಯುವುದಿಲ್ಲ.ಯಾಕೆಂದರೆ ರಾಜ್ಯದ ಅಹಿಂದ ವರ್ಗಗಳಿಗೆ ಅವರು ನಿರ್ವಿವಾದ ನಾಯಕ.ಆದರೆ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಿಲ್ಲವಲ್ಲ?ಹೀಗಾಗಿ ದಲಿತರು ತಮ್ಮ ಹಕ್ಕಿಗಾಗಿ ಪೂರ್ವ ತಯಾರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ’ ಎನ್ನುತ್ತಿದ್ದರು.ಅವರ ಪ್ರಕಾರ:’ಇಂತಹ ಪೂರ್ವ ತಯಾರಿಯ […]

Continue Reading

ಲೋಕಾನುಗ್ರಹಿ ಹಝ್ರತ್ ಪ್ರವಾದಿ (ಸ.ಅ) ಅವರ ಜನನದಿಂದ ಪುಳಕಿತಗೊಂಡ ರಬೀವುಲ್ ಅವ್ವಲ್ ಎಂದಾಕ್ಷಣ ನೈಜ ವಿಶ್ವಾಸಿ ಪುಳಕಿತಗೊಳ್ಳದಿರಲು ಸಾಧ್ಯವಿಲ್ಲ

ಕೋಮುವಾದವನ್ನು ಸಮಾಜದಲ್ಲಿ ಪ್ರಚುರಪಡಿಸುವವನು, ಕೋಮುವಾದವನ್ನು ಬೆಂಬಲಿಸುವವನು, ಅದಕ್ಕೆ ಸಹಾಯ ಮಾಡುವವನು, ಅದಕ್ಕಾಗಿ ಜೀವ ತೆರುವವನು ನನ್ನವನಲ್ಲ: ಪ್ರವಾದಿ ಸ.ಅ ✍️. ಪಿ.ಎಂ.ಎ. ಪಾಣೆಮಂಗಳೂರು. ಈ ಲೋಕವನ್ನೇ ಸೃಷ್ಟಿಸಲು ಕಾರಣೀಕರ್ತರಾಗಿದ್ದಾರೆ ಹಝ್ರತ್ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಅಂತ್ಯ ಪ್ರವಾದಿಗಳ ಜೀವನ ಕ್ರಮವು ಅದು ಪವಿತ್ರ ಕುರ್‍ಆನ್ ಆಗಿತ್ತು. ಅಂದರೆ ಪವಿತ್ರ ಕುರ್‍ಆನಿನ ಸಕಲ ಆಶಯಾದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಲೋಕಕ್ಕೆ ಮಾದರಿಯಾಗಿ ನಿಯೋಜಿಸಲ್ಪಟ್ಟಿದ್ದರು ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಪ್ರವಾದಿಯವರ ಮುಅïಜಿಝತ್ ಗಳನ್ನು […]

Continue Reading

“ಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತಾದ ಹೋರಾಟಗಳ ವಿಷಯದಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಸಂದರ್ಭದಲ್ಲಿ ನಾಡಿನ ಎಡ, ಜನಪರ, ಪ್ರಜಾಪ್ರಭುತ್ವವಾದಿ ಚಳವಳಿಗಳು ಜನತೆಗೆ ನೀಡುತ್ತಿರುವ ವಿವರಣೆ”

ಮುಸುಕುದಾರಿ ಚಿನ್ನಯ್ಯ ಕೊಟ್ಟ ದೂರಿನ ಬಳಿಕ ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟ ಪ್ರಾರಂಭವಾಗಿದ್ದಲ್ಲ. ಧರ್ಮಸ್ಥಳದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳನ್ನು ತನಿಖೆ ನಡೆಸಲು ನೆಲ ಅಗೆಯಬೇಕಿಲ್ಲ. ಚಿನ್ನಯ್ಯ ಅನಾಮಿಕರಾಗಿ ಬಂದು ದೂರು ನೀಡಿದ ಬಳಿಕ ಅಸಹಜ ಸಾವುಗಳಾದ ಶವಗಳನ್ನು ಹೂತ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತೇ ವಿನಹ, ಅದು ಹೋರಾಟದ ಪ್ರಾರಂಭವಲ್ಲ. ಚಿನ್ನಯ್ಯರ ದೂರೇ ಹೋರಾಟದ ಮುಖ್ಯವಸ್ತುವಲ್ಲ. ಎಡಪಂಥೀಯ, ದಲಿತ, ಸಮಾನತಾವಾದಿ, ಮಹಿಳಾ ಹೋರಾಟಗಾರರು, ಚಿಂತಕರು ಯಾವತ್ತೂ ಕೂಡಾ ಹೋರಾಟಕ್ಕೆ […]

Continue Reading

ಬಂಟ್ವಾಳ: ಅಕ್ರಮವಾಗಿ ಪಡಿತರ ದಾಸ್ತಾನು ಪ್ರಕರಣ: ಆಹಾರ ನಿರೀಕ್ಷಕರ ಮತ್ತು ಪೊಲೀಸರ ಜಂಟಿ ದಾಳಿ: 64 ಗೋಣಿ ಚೀಲ ಅಕ್ಕಿ, ಇತರ ಸೊತ್ತು ವಶ; ಪ್ರಕರಣ ದಾಖಲು

ಬಂಟ್ವಾಳ: ಗೊಳ್ತಮಜಲು ಗ್ರಾಮದ ಪಟ್ಟೆಕೋಡಿ ಎಂಬಲ್ಲಿರುವ ಅಂಗಡಿ ಕಟ್ಟಡವೊಂದರಲ್ಲಿ, ಪಡಿತರ ಅಕ್ಕಿಯನ್ನು ಆಕ್ರಮವಾಗಿ ದಾಸ್ತಾನು ಇಡಲಾಗಿರುವ ಬಗ್ಗೆ ಮಾಹಿತಿ ಮೇರೆಗೆ, ಬಂಟ್ವಾಳ ತಾಲೂಕು ಕಛೇರಿಯ ಆಹಾರ ನಿರೀಕ್ಷಕರು ಹಾಗೂ ಬಂಟ್ವಾಳ ನಗರ ಠಾಣಾ ಪೊಲೀಸರ ಸಹಕಾರದೊಂದಿಗೆ ಜಂಟಿ ದಾಳಿ ನಡೆಸಿ, ಬಂಟ್ವಾಳ, ಗೋಳ್ತಮಜಲು ನಿವಾಸಿ ಉಮ್ಮರಬ್ಬ ಎಂಬವರು, ಕಟ್ಟಡವೊಂದರಲ್ಲಿ 64 ಗೋಣಿ ಚೀಲಗಳಲ್ಲಿ 58,288/-ರೂ. ಮೌಲ್ಯದ 2103.35 ಕೆ.ಜಿ ಬೆಳ್ತಿಗೆ ಅಕ್ಕಿ ಮತ್ತು 467.10 ಕೆ.ಜಿ ಕುಚ್ಚಲಕ್ಕಿಯನ್ನು ಆಕ್ರಮವಾಗಿ ಸಂಗ್ರಹಿಸಿಟ್ಟಿು, ಕೆಎ.19.ಡಿ.3896 ಎಂಬ ಆಟೋರಿಕ್ಷಾದಲ್ಲಿ ಸಾಗಾಟ ಮಾಡಲು […]

Continue Reading

EXCLUSIVE ಮಂಗಳೂರು: ಬ್ಲಡ್ ದಂಧೆ ಮಹಾಮೋಸ

ಮಂತ್ರಿಗಳೇ ‘ರಕ್ತ’ದಲ್ಲೂ ವ್ಯಾಪಾರವೇ.? ರಕ್ತದಾನ ಮಹಾದಾನ ಅನ್ನುತ್ತೇವೆ. ರಕ್ತದಾನಕ್ಕಿಂತ ಇನ್ನೊಂದು ದೊಡ್ಡ ಇಲ್ಲ. ರಕ್ತದಾನ ಅನ್ನುವುದು ಇನ್ನೊಂದು ಜೀವವನ್ನು ಉಳಿಸುವ ಮಹತ್ಕಾರ್ಯ. ಆದರೆ ನಾವು ಕೊಟ್ಟ ರಕ್ತವನ್ನೇ ದಂಧೆಯಾಗಿ ಪರಿವರ್ತಿಸುವ ಜಾಲ ಮಂಗಳೂರಿನಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ ಅನ್ನುವ ಸ್ಪೋಟಕ ವಿಚಾರಗಳು ಹೊರಬರುತ್ತಿದೆ. ಮೆಡಿಕಲ್ ಮಾಫಿಯಾ, ಎಜ್ಯುಕೇಶನ್ ಮಾಫಿಯಾ ರೀತಿ ಬ್ಲಡ್ ಮಾಫಿಯಾ ದಂಧೆ ನಗರದಲ್ಲಿ ಭರ್ಜರಿಯಾಗಿ ಕಾರ್ಯಾಚರಿಸುತ್ತಿದೆ. ಸ್ಪೆಷಲ್ ನ್ಯೂಸ್ ಮೀಡಿಯಾ ಈ ಬಗ್ಗೆ ತನಿಖಾ ವರದಿಗೆ ಇಳಿದಾಗ ಬೆಚ್ಚಿಬೀಳಿಸುವ ಸಂಗತಿ ಒಂದೊಂದಾಗಿ ಹೊರಬರುತ್ತಿದೆ. ಅಷ್ಟಕ್ಕೂ […]

Continue Reading

“ಮಂಗಳೂರಿಗೆ ಹೈಕೋರ್ಟ್ ಪೀಠ ಬರಲಿ, ಜೊತೆಗೆ ಜಿಲ್ಲಾ ಕೋರ್ಟ್ ಗಳಲ್ಲೂ ರಿಟ್ ಅಪೀಲ್ ಅವಕಾಶ ಸಿಗಲಿ”

ಸ್ಥಳೀಯರ ಅವಶ್ಯಕತೆಗಳಿಗೆ ಆದ್ಯತೆ ನೀಡಲು ಪ್ರಧಾನಿ, ಕಾನೂನು ಸಚಿವರಿಗೆ ಕರಾವಳಿ ಜಿಲ್ಲೆಯ ವಕೀಲರ ಮನವಿ.. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮಂಗಳೂರು: ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಹೈಕೋರ್ಟ್ ಪೀಠ ಬೇಕೆಂಬ ಕೂಗು ಮತ್ತೆ ಕೇಳಿಬಂದಿದೆ. ಇದರ ಜೊತೆಯಲ್ಲೇ, ರಿಟ್ ಅಪೀಲ್ ಸಂಬಂಧದ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಸಲು ಅನುಕೂಲವಾಗುವಂತೆ ಕಾನೂನಿಗೆ ತಿದ್ದುಪಡಿ ತರುವಂತೆಯೂ ಮಂಗಳೂರಿನ ವಕೀಲರ ಸಮೂಹ ಒತ್ತಾಯಿಸಿದೆ. ವಕೀಲರ ಈ ಆಗ್ರಹ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಮಂಗಳೂರಿನಲ್ಲಿ ಮಾಜಿ […]

Continue Reading

ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಶಿಕ್ಷಕಿಯನ್ನು ಸೇವೆಯಿಂದ ವಜಾ

ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಶಿಕ್ಷಕಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇಸ್ರೇಲ್‍ನ ಪೆಟಾ ಟಿಕ್ವಾದ 43 ವರ್ಷದ ಶಿಕ್ಷಕಿಯೊಬ್ಬರು 17 ವರ್ಷದ ಇಬ್ಬರು ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದನ್ನು ಒಪ್ಪಿಕೊಂಡ ನಂತರ ಆಕೆಯನ್ನು ನಾಗರಿಕ ಸೇವಾ ಆಯೋಗವು, ದೋಷಿ ಎಂದು ಘೋಷಿಸಿದೆ. ಇಬ್ಬರು ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ಲೈಂಗಿಕ ಕ್ರಿಯೆ ನಡೆಸಿದ್ದನ್ನು ಮತ್ತೊಬ್ಬ ವಿದ್ಯಾರ್ಥಿ ನೋಡಿದ್ದ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಯಿತು. ಈ ವೇಳೆ ಹೆಸರು ಬಹಿರಂಗಪಡಿಸದ […]

Continue Reading