ನಳಿನ್ ಗೆ ಠಕ್ಕರ್..ಭಟ್ರ ‘ರಿಪಬ್ಲಿಕ್’.. ಕಲ್ಲಡ್ಕ ಫ್ಲೈ ಓವರ್: ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಗಾಢ ನಿದ್ರೆಯಲ್ಲಿ..?

ಕರಾವಳಿಯಲ್ಲಿ ಅನಧಿಕೃತ ಸರಕಾರ ಏನಾದರೂ ಅಸ್ತಿತ್ವದಲ್ಲಿದೆಯೋ ಅನ್ನುವ ಪ್ರಶ್ನೆ ಪದೇ ಪದೇ ಕಾಡುತ್ತಿದೆ. ಇದಕ್ಕೆ ಕಾರಣ ಸೋಮವಾರದಂದು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾದ ನೂತನ ಮೇಲ್ಸೆತುವೆಯನ್ನು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದ್ದಾರೆ. ಪೂಜೆ ಮಾಡಿ, ಭಾಷಣ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿ ಪ್ಲೈ ಓವರ್ ಗೆ ಚಾಲನೆ ನೀಡಿದ್ದಾರೆ. ಮಾತ್ರವಲ್ಲ ಈ ಪ್ಲೈ ಓವರ್ ಗೆ ಶ್ರೀರಾಮ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಕಲ್ಲಡ್ಕ ಫ್ಲೈ ಓವರ್ ಉದ್ಘಾಟನೆ ಮಾಡಲು ಕಲ್ಲಡ್ಕ […]

Continue Reading

ಕೆನರಾ ಬ್ಯಾಂಕಿನಲ್ಲಿ ಮಹಾ ದರೋಡೆ; ವಿಜಯಪುರದ ಮಂಗೋಲಿ ಶಾಖೆಯಿಂದ 59 ಕೆಜಿ ಚಿನ್ನವನ್ನು ಹೊತ್ತೊಯ್ದ ಕಳ್ಳರು

ಕೆನರಾ ಬ್ಯಾಂಕಿನ ವಿಜಯಪುರದ ಮಂಗೋಲಿ ಶಾಖೆಯಿಂದ 59 ಕೆಜಿ ಚಿನ್ನವನ್ನು ಕಳ್ಳರು ದೋಚಿದ್ದಾರೆಬ್ಯಾಂಕಿನಿಂದ ಸಾಲ ಪಡೆದ ಗ್ರಾಹಕರು ಚಿನ್ನವನ್ನು ಠೇವಣಿ ಇಟ್ಟಿದ್ದರು. 59 ಕೆಜಿ ಚಿನ್ನ ಕಳವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಅಂದಾಜಿಸಿದ್ದು ಮೇ 26ರಂದು ಕೆನರಾ ಬ್ಯಾಂಕ್ ಮಂಗೋಲಿ ಶಾಖೆಯ ವ್ಯವಸ್ಥಾಪಕರು ದೂರು ದಾಖಲಿಸಿದರು. ಮೇ 23ರಂದು ಸಂಜೆ ಬ್ಯಾಂಕ್‌ಗೆ ಬೀಗ ಹಾಕಿ ಸಿಬ್ಬಂದಿಗಳು ತೆರಳಿದ್ದರು. ಮೇ 24 ಮತ್ತು 25 ರಂದು (ನಾಲ್ಕನೇ ಶನಿವಾರ ಮತ್ತು ಭಾನುವಾರ) ಬ್ಯಾಂಕ್ ರಜೆ ಇತ್ತು. ಮೇ 26 […]

Continue Reading

ನಿರುಪಯುಕ್ತ ಕಿಂಡಿ ಅಣೆಕಟ್ಟಿನಿಂದ ಕೃಷಿ ಜಮೀನು ಸರ್ವನಾಶ. ಅಧಿಕಾರಿಗಳ, ಬಂಟ್ವಾಳ ಶಾಸಕರ ನಿರ್ಲಕ್ಷ್ಯ.

ಜಮೀನು ರಕ್ಷಣೆಗಾಗಿ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿರುವ 84 ವರ್ಷದ ವೃದ್ಧೆ ಶಕುಂತಳಾ ಶೇಖ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಒಂದೇ ವರ್ಷದಲ್ಲಿ ಕುಸಿದು ಹೊಳೆ ಬದಿಯ ಕೃಷಿ ಜಮೀನು ಭಾರಿ ಪ್ರಮಾಣದಲ್ಲಿ ಕೊಚ್ಚಿ ಹೋಗುತ್ತಿದೆ. ತನ್ನ ಜಮೀನು ರಕ್ಷಿಸುವುದಕ್ಕಾಗಿ 84ವರ್ಷದ ವಯೋವೃದ್ಧೆ ಮಹಿಳೆ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೊಳ್ನಾಡು ಗ್ರಾಮದ ಪೀಲ್ಯಡ್ಕ ನಿವಾಸಿ ಶಕುಂತಳಾ ಶೇಖ(84)ತನ್ನ ಜಮೀನು ಉಳಿಸುವುದಕ್ಕಾಗಿ ವಿವಿಧ ಇಲಾಖೆಗಳಿಗೆ ಅಲೆದಾಡುತ್ತಿರುವ ವೃದ್ಧೆ. ಕೊಳ್ನಾಡು ಗ್ರಾಮದ ಸ.ನಂ.157/6ರ […]

Continue Reading

ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಕರೆತಂದು, ಸ್ಥಳ ಮಹಜರು ನಡೆಸಿದ ಬಂಟ್ವಾಳ ಪೊಲೀಸರು

ಕೊಳ್ತಮಜಲು: ಇರಾ ಕೋಡಿಯಲ್ಲಿ ಮೇ 27ರಂದು ಸಂಜೆ ನಡೆದ ಪಿಕಪ್‌ ಚಾಲಕ ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬೆಳ್ತಂಗಡಿಯ ನಾಲ್ಕು ಸ್ಥಳಗಳಿಗೆ ಸೋಮವಾರ ಕರೆತಂದು ಮಹಜರು ನಡೆಸಿದ್ದಾರೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸ್‌ ಆರೋಪಿಗಳು ಓಡಾಡಿದ ವಿವಿಧ ಸ್ಥಳಗಳಿಗೆ ತೆರಳಿ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮುಂಡರ ಕೋಡಿ ನಿವಾಸಿ ದೀಪಕ್‌ ಮತ್ತು ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಸುಮಿತ್‌ ಆಚಾರ್ಯ […]

Continue Reading

ತಿರುವೈಲ್, ನಾಲ್ಯಪದವು, ಹಳೆಕೋಟೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ: ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ ಭಾಗಿ

ಮಳೆಯ ಕಾರಣದಿಂದ ಮೇ ಅಂತ್ಯಕ್ಕೆ ಆರಂಭಗೊಳ್ಳಬೇಕಿದ್ದ ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಜೂನ್ 2 ರಂದು ಆರಂಭವಾಗಿದ್ದು , ರಾಜ್ಯದಾದ್ಯಂತ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿದವು. ಇದರ ಭಾಗವಾಗಿ ಮಂಗಳೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್, ನಾಲ್ಯಪದವು ಸರಕಾರಿ ಶಾಲೆ ಹಾಗೂ ಉಳ್ಳಾಲದ ಹಳೆ ಕೋಟೆ ಸೈಯದ್ ಮದನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸರ್ಕಾರಿ ಹಿರಿಯ […]

Continue Reading

ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರಿಗೆ ಶುಭಸುದ್ದಿ; ಬ್ಯಾಂಕ್‌ನಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕೆಂಬ ನಿಯಮ ಹಿಂದಕ್ಕೆ, ದಂಡ ಶುಲ್ಕ ಮನ್ನಾ

ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್, ತನ್ನೆಲ್ಲಾ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಿದೆ. ಉಳಿತಾಯ ಖಾತೆಗಳ ಜೊತೆಗೆ ವೇತನ ಖಾತೆಗಳು, ಅನಿವಾಸಿ ಭಾರತೀಯ (ಎನ್‌ಆರ್‌ಐ) ಎಸ್‌ಬಿ ಖಾತೆಗಳನ್ನೂ ಸೇರಿದಂತೆ ಎಲ್ಲಾ ರೀತಿಯ ಎಸ್‌ಬಿ ಅಕೌಂಟ್‌ಗಳ ಮೇಲಿನ ಕನಿಷ್ಠ ತಿಂಗಳ ಮೊತ್ತ (ಎಎಂಬಿ) ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣವಾಗಿ […]

Continue Reading

ಕುಪ್ಪೆಪದವು: ನಿವೇಶನ ಸಂತ್ರಸ್ತರ ಅನಿರ್ಧಿಷ್ಟಾವಧಿ ಧರಣಿ ನಾಲ್ಕನೇ ದಿನಕ್ಕೆ

ಇ ಒ, ತಹಶೀಲ್ದಾರ್ ರವರ ಭರವಸೆಗೆ ಜಗ್ಗದೆ, ಸತತವಾಗಿ ಸುರಿಯುತ್ತಿರುವ ಮಹಾಮಳೆಯನ್ನೂ ಲೆಕ್ಕಿಸದೆ ಧರಣಿ ಮುಂದುವರಿಸಿದ ಸಂತ್ರಸ್ತರು ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಕುಪ್ಪೆಪದವು ಗ್ರಾಮದಲ್ಲಿ ಸ್ವಂತ ಮನೆ, ಸ್ವಂತ ಭೂಮಿ ಇಲ್ಲದ ನೂರಾರು ಬಡ ಕುಟುಂಬಗಳು ದಶಕದಿಂದ ನಿವೇಶನಕ್ಕಾಗಿ ಕುಪ್ಪೆಪದವು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದರು. ಆರು ವರ್ಷಗಳ ಹಿಂದೆ ಚುನಾವಣಾ ಪೂರ್ವದಲ್ಲಿ ಬಹಳ ತರಾತುರಿಯಿಂದ ಶಾಸಕ ಭರತ್ ಶೆಟ್ಟಿ 97 ಕುಟುಂಬಗಳಿಗೆ ನಿವೇಶನ ತೋರಿಸಿ ಹಕ್ಕು ಪತ್ರ ವಿತರಿಸಿದರು. ಆದರೆ, ಹಕ್ಕುಪತ್ರ […]

Continue Reading

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಹಿಂಸೆ ಹರಡುವವರಿಗೆ ಎಫ್ ಐ ಆರ್ ಭಾಗ್ಯ

ಕಲ್ಲಡ್ಕ ಭಟ್ರು ಮೇಲೂ ಬಿತ್ತು ಕೇಸು..ಕಡಬ ಠಾಣೆಗೆ ಅಕ್ರಮ ಪ್ರವೇಶಗೈದ 15 ಸಂಘಪರಿವಾರ ಕಾರ್ಯಕರ್ತರ ಮೇಲೂ ಎಫ್ ಐ ಆರ್ ಕೋಮು ಅಶಾಂತಿಯ ಕುಲುಮೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳ ಸರಣಿ ಬೇಟೆ ಅಶಾಂತಿಯನ್ನು ಹತ್ತಿಕ್ಕುವಲ್ಲಿ ಪೂರಕವಾಗುತ್ತಿದೆ. ಹಿಂಸೆ ಹರಡುವವರಿಗೆ ಮುಲಾಜಿಲ್ಲದೆ ಎಫ್ ಐ ಆರ್ ದಾಖಲಿಸುತ್ತಿದ್ದಾರೆ. ಇದರಿಂದ ಹಿಂಸೆ ಹರಡುವವರ ಜಂಘಾಬಲ ಹುಡುಗಿ ಹೋಗುವಂತಾಗಿದೆ. ಮಂಗಳೂರಿನ ಜನತೆ ಇದೀಗ ರಾಜಕಾರಣಿಗಳಲ್ಲಿ ಭರವಸೆ ಇಟ್ಟಿಲ್ಲ. ಬದಲಾಗಿ ಇಬ್ಬರು ದಕ್ಷ ಪೊಲೀಸ್ ಅಧಿಕಾರಿಗಳ ಮೇಲೆ ಭರಪೂರ […]

Continue Reading

ಅಮಿತ್ ಶಾ ಆತುರಕ್ಕೆ ಏನು ಕಾರಣ.? ಕೋರ್ ಕಮಿಟಿಯಲ್ಲಿ ಇವರಿಗೆ ಜಾಗವಿಲ್ಲ.

ಕುಮಾರಣ್ಣ ಯಶಸ್ವಿ ಆಗುತ್ತಿರುವುದು ಹೇಗೆ.?ಕುಮಾರಸ್ವಾಮಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಖುಷಿ. ಸಿದ್ಧರಾಮಯ್ಯ – ಡಿ.ಕೆ.ಶಿ ನಡುವಣ ಸಂಘರ್ಷ ತೀವ್ರ ರೂಪ ಪಡೆಯಲಿದೆ. ಸಂಘರ್ಷ ತಡೆಯಲು ಕಾಂಗ್ರೆಸ್ ಹೈಕಮಾಂಡ್ ವಿಫಲವಾಗಲಿದೆಯೇ.? ✍️. ಆರ್.ಟಿ.ವಿಠ್ಠಲಮೂರ್ತಿ ರಾಜ್ಯ ಬಿಜೆಪಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಧಾ ಮೋಹನದಾಸ್ ಅಗರ್ವಾಲ್ ಕಳೆದ ವಾರ ಕರ್ನಾಟಕಕ್ಕೆ ಬಂದರು.ಹೀಗೆ ಬಂದವರು ಪಕ್ಷದ ರಾಜ್ಯ ನಾಯಕರ ವಿರುದ್ದ ಕಂಪ್ಲೇಂಟುಗಳ ಪಟ್ಟಿ ಹಿಡಿದುಕೊಂಡು ಬಂದಿದ್ದರು.ಅಂದ ಹಾಗೆ ಇದಕ್ಕೂ ಮುಂಚೆ ತಿರಂಗಾ ಯಾತ್ರೆಗೆ ಅಂತ ಕರ್ನಾಟಕಕ್ಕೆ ಬಂದಿದ್ದ ರಾಧಾಮೋಹನದಾಸ್ ಅಗರ್ವಾಲ್, ಅವತ್ತೇ […]

Continue Reading

ಮತೀಯವಾದದ ವಿರುದ್ಧ ತಿರುಗಿ ನಿಂತಿತಾ ಹಿಂದೂ ಸಮಾಜ..? ಕೊಳತ್ತಮಜಲು ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಮನೆಗೆ ಸ್ಥಳೀಯ ಬಿಜೆಪಿ ಮುಖಂಡರು, ಹಿಂದೂ ಸಮುದಾಯದ ನಾಯಕರ ಭೇಟಿ

ಶಾಸಕ ರಾಜೇಶ್ ನಾಯಕ್ ಇನ್ನಾದರೂ ಮನುಷ್ಯತ್ವ ಪ್ರದರ್ಶಿಸುತ್ತಾರೋ..? ಕೊಂದು ಸಾಧಿಸುವ ಧರ್ಮವಾದರೂ ಯಾವುದು..? ಜೀವ ಕೊಡುವುದಕ್ಕೆ ನಮ್ಮ ಕೈಯಲ್ಲಿ ಆಗುವುದಿಲ್ಲ ಅಂದ ಮೇಲೆ ಕೊಲ್ಲೋದು ಯಾಕೆ? ಕೊಂದು ಬಿಟ್ಟು ಸಾಧಿಸುವುದಾದರೂ ಏನು.? ಕೊಳತ್ತಮಜಲಿನಲ್ಲಿ ಅಮಾಯಕ ಅಬ್ದುಲ್ ರಹಿಮಾನ್ ನನ್ನು ಮತೀಯ ದ್ವೇಷಕ್ಕೆ ಪ್ರಾಣ ಸ್ನೇಹಿತರೇ ಕೊಂದು ಬಿಟ್ಟಿದ್ದರು‌. ಕೊಳತ್ತಮಜಲು ಕೋಮು ಸಾಮರಸ್ಯದ ಊರು. ಹಿಂದೂಗಳ ಶಾರದಾ ಮೆರವಣಿಗೆಗೆ ಇಲ್ಲಿನ ಮುಸ್ಲಿಂ ಬಾಂಧವರು ಪಾನಕ ಕೊಡುತ್ತಿದ್ದರು. ಮುಸ್ಲಿಮರ ಈದ್ ಮಿಲಾದ್ ಮೆರವಣಿಗೆಗೆ ಹಿಂದೂಗಳು ಸಿಹಿ ತಿಂಡಿ ವಿತರಿಸುತ್ತಿದ್ದರು. ಅಪ್ಪಟ […]

Continue Reading