ಈ ಸಾವು ನ್ಯಾಯವೇ..? ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹೊಣೆ ಯಾರು.?

ಗಂಜಿಮಠ ಶಬ್ನಂ ಖಾದರ್ ಆಳ್ವಾಸ್ ಮಿಜಾರ್ ಬಳಿ ಡಿಬಿಲ್ ಕಂಪನಿಯ ಬೇಜವಾಬ್ದಾರಿತನಕ್ಕೆ ಬಲಿಯಾದರು ಬಿಕರ್ನಕಟ್ಟೆ -ಸಾಣೂರು ರಾಷ್ಟ್ರೀಯ ಹೆದ್ದಾರಿ 169 ನಲ್ಲಿ ಡಿಬಿಲ್ ಕಂಪನಿಯ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗೆ ಅದೆಷ್ಟೋ ಜೀವಗಳು ಬಲಿಯಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿ ಒಂದೇ ಮಳೆಗೆ ಬಟಾಬಯಲಾಗಿದೆ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಬಿಲ್ ಕಂಪನಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ರಾಡಿ ಎಬ್ಬಿಸಿದಷ್ಟು ಬೇರೆ ಯಾವುದೇ ಕಂಪನಿಯ ಕಾಮಗಾರಿ ಇಷ್ಟೊಂದು ವಿವಾದಕ್ಕೆ ಕಾರಣವಾಗಿಲ್ಲ ಅನ್ನಬಹುದು. ಮೇ ತಿಂಗಳ ಕೊನೆಯ […]

Continue Reading

ಕಾಲ್ತುಳಿತ, ಮರಣಹೋಮ: ರಾಜ್ಯ ಸರ್ಕಾರದ ಅಮಾನತಿಗೆ CRF ಸಲಹೆ; ಕಾಲ್ತುಳಿತ, ಮರಣಹೋಮಕ್ಕೆ ಸಿಎಂ-ಡಿಸಿಎಂ ಹೊಣೆಗಾರಷ್ಟೇ ಅಲ್ಲ, ಕಾರಣಕರ್ತರು: ರಾಜ್ಯಪಾಲರಿಗೆ CRF ವರದಿ

‘ಪುಷ್ಪಾ-2’ ಕಾಲ್ತುಳಿತ ದುರಂತದಲ್ಲಿ ಅಲ್ಲೂ ಅರ್ಜುನ್ ಬಂಧನ; ಇಲ್ಲಿ ಡಿಕೆಶಿ, ಕೊಹ್ಲಿ ವಿರುದ್ದ ಏಕೆ ಕ್ರಮವಿಲ್ಲ? CRF ಪ್ರಶ್ನೆ ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ಇದೀಗ ರಾಜ್ಯ ಸರ್ಕಾರದ ಅಸ್ತಿತ್ವಕ್ಕೂ ಸಂಚಕಾರ ತಂದಿದೆ. ಜೊತೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ತಂಡಕ್ಕೂ ಸಂಕಷ್ಟ ತಂದೊಡ್ಡಿದೆ. 11 ಜನರ ಮರಣ ಹೋಮಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಇಲಾಖೆಗಳ ಆಕ್ಷೇಪದ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಠಕ್ಕೆ […]

Continue Reading

ಮನೆಯ ವಿದ್ಯುತ್ ಸಂಪರ್ಕಕ್ಕೆ 20 ಸಾವಿರ ಲಂಚ: ಬ್ರಹ್ಮಾವರ ಮೆಸ್ಕಾಂ ಎಇಇ ಲೋಕಾ ಬಲೆಗೆ

ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ನೀಡಬೇಕಾದರೆ 20 ಸಾವಿರ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟ ಬ್ರಹ್ಮಾವರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಪೂಜಾರಿ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದಿನೇಶ್ ಪೂಜಾರಿ ಎಂಬವರು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಮೆಸ್ಕಾಂ ಎಇಇ ಭೇಟಿಯಾಗಿದ್ದರು. ಸ್ಥಳ ಪರಿಶೀಲನೆ ನಡೆಸಿದ ಎಇಇ ವಿದ್ಯುತ್ ಸಂಪರ್ಕ ನೀಡಬೇಕಾದರೆ 20 ಸಾವಿರ ಲಂಚ ನೀಡಬೇಕು ಎಂಬ ಬೇಡಿಕೆಯನ್ನು ಇರಿಸಿದ್ದರು. ಈ ಬಗ್ಗೆ ದಿನೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. […]

Continue Reading

ರಾಜ್ಯ ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡುವ ಹಿನ್ನೆಲೆ, ನಾಲ್ವರು ಎಂಎಲ್​ಸಿಗಳ ಹೆಸರು ಫೈನಲ್

ರಮೇಶ್​ ಬಾಬು, ದಿನೇಶ್​ ಅಮೀನ್​ ಮಟ್ಟು, ಡಾ.ಆರತಿ ಕೃಷ್ಣ, ಡಿಜಿ ಸಾಗರ್ ನಾಲ್ವರು ಪೈನಲ್ ವಿಧಾನ ಪರಿಷತ್ತಿಗೆ ನಾಲ್ವರ ಹೆಸರುಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಸಮಾಜಸೇವೆ, ಶಿಕ್ಷಣ, ಸಹಕಾರ ಕ್ಷೇತ್ರದ ಕೋಟಾದಡಿ ಕೆಪಿಸಿಸಿ ವಕ್ತಾರ ರಮೇಶ್​ ಬಾಬು, ಪತ್ರಕರ್ತರ ಕೋಟಾದಡಿ ದಿನೇಶ್​ ಅಮೀನ್​ ಮಟ್ಟು, ಅನಿವಾಸಿ ಭಾರತೀಯ ಸೇವೆ, ಮಹಿಳಾ, ಸಮಾಜ ಸೇವೆ ಕೋಟಾದಡಿ ಡಾ.ಆರತಿ ಕೃಷ್ಣ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಡಿಜಿ ಸಾಗರ್ ಹೆಸರುಗಳನ್ನುಕಾಂಗ್ರೆಸ್​ ಹೈಕಮಾಂಡ್​ ಅಂತಿಮಗೊಳಿಸಿದೆ. ಈ ನಾಲ್ವರನ್ನು ಪರಿಷತ್ […]

Continue Reading

ಗ್ರಾಮ ಪಂಚಾಯಿತಿಗೂ ಬಂತು ‘ರೆರಾ’. ಪಂಚಾಯತ್ ವ್ಯಾಪ್ತಿಯಲ್ಲಿ ಅನುಮೋದಿತ ಬಡಾವಣೆಗಳಿಗೆ ‘ರೆರಾ’ ನೋಂದಣಿ ಕಡ್ಡಾಯ

ಭೂ ಪರಿವರ್ತನೆಗೊಂಡ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ನೀಡುವಾಗ ರೆರಾ ನೋಂದಣಿ ಕಡ್ಡಾಯಗೊಳಿಸಿ ಆದೇಶ ಕರ್ನಾಟಕ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಮೋದಿತ ಬಡಾವಣೆಗಳಿಗೆ ‘ರೆರಾ’ ನೋಂದಣಿಯನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತರಲಾಗಿದೆ. ಹೊಸ ಕಾನೂನಿನ ಪ್ರಕಾರ, ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್, ಮತ್ತು ಗ್ರಾಮ ಪಂಚಾಯಿತ್ ಗಳು ಕಟ್ಟಡ ನಿರ್ಮಾಣದ ಮೇಲೆ ನಿಯಂತ್ರಣ ಹೊಂದಿರುತ್ತವೆ. ಭೂ ಪರಿವರ್ತನೆಗೊಂಡ ಭೂಮಿಯಲ್ಲಿ […]

Continue Reading

ಕೊಳ್ತಮಜಲು ಅಬ್ದುಲ್ ರಹಿಮಾನ್ ಹತ್ಯಾ ಪ್ರಕರಣ: ಶೃಂಗೇರಿ ಮೂಲದ ಆರೋಪಿ ರವಿ ಸಂಜಯ್ ಬಂಧನ; ಬಂಧಿತರ ಸಂಖ್ಯೆ ಎಂಟಕ್ಕೆ

ಬಂಟ್ವಾಳದ ಇರಾಕೋಡಿ ಎಂಬಲ್ಲಿ ಇತ್ತೀಚೆಗೆ ಕೋಮುವಾದಿಗಳ ದಾಳಿಯಿಂದ ಹತ್ಯೆಯಾದ ಅಬ್ದುಲ್ ರಹಿಮಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮತ್ತೊಬ್ಬ ಆರೋಪಿ ಶೃಂಗೇರಿ ಮೂಲದ ರವಿ ಸಂಜಯ್ (29) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಬ್ದುಲ್‌ ರಹಿಮಾನ್ ಹತ್ಯೆ ಪ್ರಕರಣ ಸಂಬಂಧ ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಮುಂಡರಕೋಡಿ ಮನೆಯ ದೀಪಕ್ (21), ಅಮ್ಮುಂಜೆ ಶಿವಾಜಿ ನಗರ […]

Continue Reading

ಕೊಲ್ಲುವುದು ನಮ್ಮ ಧರ್ಮವಲ್ಲ; ಬದುಕಿಸುವುದೇ ನಮ್ಮ ಧರ್ಮ: ಜಾತಿ-ಮತ ನೋಡದೆ ಮನುಷ್ಯತ್ವದ ಪಾಠ ಹೇಳಿಕೊಡುತ್ತಿರುವ ಪಾಣೆಮಂಗಳೂರಿನ ಮುಸ್ಲಿಮರು

ನೇತ್ರಾವತಿ ನದಿಗೆ ಹಾರಿದಾತನನ್ನು ರಕ್ಷಿಸಲು ಸತತ ಐದು ಗಂಟೆ ಪ್ರಯತ್ನಪಟ್ಟರು. ವಿಧಿಯಾಟವೇ ಬೇರೆಯಾಗಿತ್ತು. ಮೃತದೇಹವನ್ನು ಮೇಲಕ್ಕೆತ್ತಿದರು ಅದು ಪಾಣೆಮಂಗಳೂರಿನ ಮುಸ್ಲಿಮರು. ಕೊಲ್ಲುವುದು ನಮ್ಮ ಧರ್ಮವಲ್ಲ, ಬದುಕಿಸುವುದೇ ನಮ್ಮ ಧರ್ಮ ಎಂದು ಸಾರಿದವರು. ಆತ್ಮಹತ್ಯೆಗೈಯಲು ನೇತ್ರಾವತಿ ನದಿಗೆ ಹಾರಿದರೇ ಕ್ಷಣಾರ್ಧದಲ್ಲೇ ಅವರನ್ನು ಬದುಕಿಸಲು ಇಲ್ಲೊಂದು ಮುಸ್ಲಿಮರ ತಂಡವಿದೆ. ಕೊನೆಗೂ ಬದುಕಿಸಲಾಗದಿದ್ದರೂ ಮೃತದೇಹವನ್ನು ಮೇಲಕ್ಕೆತ್ತಿ ಅದಕ್ಕೊಂದು ಗೌರವಯುತ ಸಂಸ್ಕಾರಕ್ಕೆ ಇಲ್ಲಿನ ಮುಸ್ಲಿಮರು ಕಾರಣರಾಗುತ್ತಿದ್ದಾರೆ. ಸಾಯಲು ಹೋದ ನೂರಾರು ಮಂದಿಯನ್ನು ಬದುಕಿಸಿದ್ದಾರೆ. ಅದೇ ರೀತಿ ಜೀವದ ಹಂಗು ತೊರೆದು ನೂರಾರು ಮೃತದೇಹಗಳನ್ನು […]

Continue Reading

ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಬೈಕ್ ಜೊತೆ ಮೊಬೈಲ್, ಚಪ್ಪಲಿ ಪತ್ತೆ..ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನಾಪತ್ತೆ..ತೀವ್ರ ಶೋಧ..

ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬೈಕ್, ಚಪ್ಪಲಿ, ಮೊಬೈಲ್ ಫೋನ್ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಪುತ್ತೂರು ನಗರಸಭೆಯ ಕೌನ್ಸಿಲರ್ ನೆಲ್ಲಿಕಟ್ಟೆ ರಮೇಶ್ ರೈ ಅವರದ್ದೆಂದು ತಿಳಿದುಬಂದಿದೆ. ತನ್ನ ಸೊತ್ತುಗಳನ್ನು ಸೇತುವೆಯಲ್ಲಿಟ್ಟು ರಮೇಶ್ ರೈ ನೇತ್ರಾವತಿ ನದಿಗೆ ಹಾರಿದ್ದಾರೆ ಎಂಬ ಬಲವಾದ ಸಂಶಯ ಮೂಡಿಬಂದಿದೆ. ಇದೀಗ ಸೇತುವೆಯಲ್ಲಿ ಭಾರಿ ಜನ ಜಮಾಯಿಸಿದ್ದು ನೇತ್ರಾವತಿ ನದಿಯಲ್ಲಿ ಹುಡುಕಾಟ ಆರಂಭವಾಗಿದೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ್ ರೈ ಅವರು ಜಯಗಳಿಸಿದ್ದರು‌. […]

Continue Reading

ಸೋಷಿಯಲ್ ಮೀಡಿಯಾಗಳಲ್ಲಿ ಪರಾಕ್ರಮ ತೋರಿಸುತ್ತಿದ್ದ ಐವರು ಖಾಕಿ ಬಲೆಗೆ: ವಿದೇಶದಲ್ಲಿ ಕೂತು ದ್ವೇಷ ಪೋಸ್ಟ್ ಹಾಕಿದರೂ ಖಾಕಿ ಡ್ರಿಲ್ ಖಂಡಿತ

ಇನ್ನಾದರೂ ಯುವ ಸಮೂಹ ಎಚ್ಚೆತ್ತುಕೊಳ್ಳಿ ಈಗಿನವರದ್ದು ಏನಿದ್ದರೂ 5G ಜಮಾನ. ಸೋಷಿಯಲ್ ಮೀಡಿಯಾಗಳಲ್ಲಿ ನಕಲಿ ಪೇಜ್ ಸೃಷ್ಟಿಸಿ ಬೆದರಿಕೆ, ದ್ವೇಷ ಬಿತ್ತುವ ಪೋಸ್ಟ್ ಹಾಕಿ ಪೌರುಷ ತೋರಿಸುತ್ತಾರೆ. ಬಹುತೇಕ ಯುವ ಸಮೂಹ ಇಂತಹ ಪರಾಕ್ರಮದಲ್ಲೇ ನಿರತರಾಗಿರುತ್ತಾರೆ. ಇವರು ಹಾಕುವ ಒಂದು ಪೋಸ್ಟ್ ಸ್ವಾಸ್ಥ್ಯ ಸಮಾಜವನ್ನು ಕೆಡಿಸಿಬಿಡುತ್ತದೆ. ಧರ್ಮ ದಂಗಲ್ ಗೂ ಕಾರಣವಾಗಿ ಬಿಡುತ್ತದೆ. ಕೆಲವರು ವಿದೇಶಗಳಲ್ಲೂ ಕೂತು ನಮ್ಮದು ಸೇಫ್ ಜಾಗ ಅಂತ ತಿಳಿದುಕೊಂಡು ದ್ವೇಷ ಬಿತ್ತುವ ಪೋಸ್ಟ್ ಹಂಚುತ್ತಾರೆ . ನಿಮ್ಮ ಈ ಅತಿರೇಕದ ವರ್ತನೆ […]

Continue Reading

ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ: ಭರತ್ ಕುಮ್ದೇಲ್ ಸಹಚರ ಅರೆಸ್ಟ್

ಸುಹಾಸ್ ಶೆಟ್ಟಿ ಹತ್ಯೆ ಕೇಸ್: ಆರೋಪಿಗಳಿಗೆ ಆಶ್ರಯ ನೀಡಿದ ಮುಝಮ್ಮಿಲ್ ತಂದೆಯ ಬಂಧನ ಕೊಳತ್ತಮಜಲು ಅಬ್ದುಲ್ ರಹಿಮಾನ್ ಹತ್ಯೆ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ತೆಂಕಬೆಳ್ಳೂರು ನಿವಾಸಿ ಅಭಿನ್ ರೈ, ಬಡಗಬೆಳ್ಳೂರು ನಿವಾಸಿ ತೇಜಾಕ್ಷ ಎಂಬಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಾಗಿರುವ ಅಭಿನ್ ರೈ 2017 ಜೂನ್ 21 ರಂದು ನಡೆದ ಕಲಾಯಿ ಅಶ್ರಫ್ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತ ಭರತ್ ಕುಮ್ದೇಲ್ ಪ್ರಮುಖ ಸಹಚರನಾಗಿದ್ದಾನೆ. ರಹಿಮಾನ್ ಹತ್ಯೆ ಅಶ್ರಫ್ ಕಲಾಯಿ […]

Continue Reading