ಎಸ್ಐಟಿ ತನಿಖೆಯ ದಿಕ್ಕುತಪ್ಪಿಸಲು ಬಿಜೆಪಿ ಎಡಪಂಥೀಯರ ವಿರುದ್ಧ ಕಪೋಲಕಲ್ಪಿತ ಆರೋಪಗಳೊಂದಿಗೆ ರಂಗಕ್ಕೆ ಬಂದಿದೆ. ಸಿಪಿಐಎಂ ತಿರುಗೇಟು

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಹೆಣ ಹೂತು‌ ಹಾಕಿರುವ ಪ್ರಕರಣದಲ್ಲಿ ಎಸ್ಐಟಿ ಪ್ರಭಾವಗಳಿಗೆ ಮಣಿಯದೆ ತನಿಖೆ ನಡೆಸುತ್ತಿರುವುದು ಬಿಜೆಪಿ ಪಕ್ಷವನ್ನು ಹತಾಶೆಗೆ ತಳ್ಳಿದೆ. ಈ ಹತಾಶೆಯ ಪರಿಣಾಮವಾಗಿ ಎಸ್ಐಟಿ ತನಿಖೆ ಹಾಗು ಜನಾಕ್ರೋಶದ ದಿಕ್ಕನ್ನು ತಪ್ಪಿಸಲು ಬಿಜೆಪಿ ಪಕ್ಷದ ಶಾಸಕರು, ನಾಯಕರುಗಳು ಮೌನ ಮುರಿದು ಏಕಾಏಕಿ ರಂಗ ಪ್ರವೇಶ ಮಾಡಿದ್ದಾರೆ. ಹೋರಾಟಗಾರರ ಮೇಲೆ ಕೆಸರೆರಚಲು ತೊಡಗಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ದೌರ್ಜನ್ಯಗಳ ಎದುರಾಗಿ ದಶಕಗಳಿಂದ ಹೋರಾಟ ನಡೆಸುತ್ತಿರುವ ಎಡಪಂಥೀಯ ಪಕ್ಷಗಳ ಎದುರಾಗಿ ಸುಳ್ಳು ಕತೆಗಳನ್ನು ಕಟ್ಟಿ ಧರ್ಮ […]

Continue Reading

ಧರ್ಮಸ್ಥಳ: ಪತ್ರಕರ್ತರ ಮೇಲೆ ಪುಂಡರು ನಡೆಸಿದ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಅತ್ಯಾಚಾರವಾಗಿದೆ.

ಎಸ್ಐಟಿ ತನಿಖೆಯನ್ನು ದಾರಿ ತಪ್ಪಿಸಲು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಹುನ್ನಾರ: ಶೇಖರ್ ಲಾಯಿಲ ಧರ್ಮಸ್ಥಳ ಗ್ರಾಮದ ಪಾಂಗಳ ಎಂಬಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ ವರದಿ ಮಾಡುತ್ತಿದ್ದ ಯೂಟ್ಯೂಬರ್ ಗಳ ಮೇಲೆ ಪುಂಡರು ನಡೆಸಿದ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಅತ್ಯಾಚಾರವಾಗಿದೆ. ಇಂತಹ ಕಾನೂನು ಬಾಹಿರ ಗೂಂಡಾಗಿರಿ ನಡೆಸಿದ ಎಲ್ಲ ಪುಂಡರರನ್ನು ತಕ್ಷಣ ಬಂದಿಸಬೇಕು. ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಸಾವಿರಾರು ಅಸಹಜ ಸಾವುಗಳ ಶವಗಳನ್ನು ಕಾನೂನು ಬಾಹಿರವಾಗಿ ಹೂತಿರುವ ಪ್ರಕರಣದ […]

Continue Reading

ಸುರತ್ಕಲ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಶಹನ್ವಾಝ್ ಅರೆಸ್ಟ್

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ರಾಮ್ ಪುರ ನಿವಾಸಿ ಶಹನ್ವಾಝ್ ಯಾನೆ ಶಾನು ಎಂದು ಗುರುತಿಸಲಾಗಿದೆ. ಘಟನೆಯ ವಿವರ 2014 ಫೆಬ್ರವರಿ 8 ರಂದು ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ಕಲ ದ ನಿವಾಸಿ ಸುಮತಿ ಪ್ರಭು ಎಂಬವರ ಕುತ್ತಿಗೆಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ನಡೆದಿತ್ತು. ಕೊಲೆಗೈದ ಆರೋಪಿಗಳು ಆಕೆಯ ಮೈ ಮೇಲಿದ್ದ 24 ಪವನ್ ಚಿನ್ನಾಭರಣವನ್ನು […]

Continue Reading

ಧರ್ಮಸ್ಥಳ ಫೈಲ್ಸ್ ಮೇಜರ್ ಟ್ವಿಸ್ಟ್; ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಎರಡು ಹೊಸ ಯು‌.ಡಿ.ಆರ್ ಪ್ರಕರಣ ಎಸ್.ಐ.ಟಿ ಹೆಗಲಿಗೆ

ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಫೈಲ್ಸ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ರಾಜ್ಯ ಸರಕಾರ ಪ್ರಕರಣವನ್ನು ಎಸ್ ಐಟಿ ತಂಡಕ್ಕೆ ವರ್ಗಾಯಿಸಿತ್ತು. ಅನಾಮಿಕ ತೋರಿಸಿದ 13 ಸ್ಥಳಗಳಲ್ಲಿ ಉತ್ಖನನ ಕಾರ್ಯ ನಡೆಯುತ್ತಿರುವ ಹೊತ್ತಿನಲ್ಲಿ ಮತ್ತೆರಡು ಹೊಸ ಪ್ರಕರಣಗಳನ್ನು ಎಸ್ ಐಟಿ ಹೆಗಲಿಗೆ ವಹಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅ.ಕ್ರ: 39/2025 ಕಲಂ:211 (ಎ) BNS ಪ್ರಕರಣವನ್ನು ಜುಲೈ 19 ರಂದು ರಾಜ್ಯ ಸರಕಾರ ವಿಶೇಷ ತನಿಖಾ ತಂಡ (SIT) ಕ್ಕೆ ವರ್ಗಾಯಿಸಲಾಗಿತ್ತು. ಜುಲೈ 31 […]

Continue Reading

ನಕಲಿ ಚಾ ಹುಡಿ ದಂಧೆ; ಚಹಾ ಪುಡಿಗೂ ಹಾಕ್ತಾರೆ ಡೆಡ್ಲಿ ಕೆಮಿಕಲ್.!

ಸುಳ್ಯ, ಪುತ್ತೂರು ಭಾಗದಲ್ಲಿ ನಕಲಿ ಟೀ ಪುಡಿ ಜಾಲ ಸಕ್ರೀಯ, ಮಾರಕ ರೋಗಕ್ಕೆ ಕಾರಣವಾಗುತ್ತಿದೆ ಚಹಾ ಪುಡಿ ಚಹಾ ನಾವು ಇಷ್ಟಪಟ್ಟು ಕುಡಿಯುವ ಪೇಯ. ಆಹಾರ ಖದೀಮರು ಟೀ ಪುಡಿಯನ್ನು ಬಿಡದೆ ಕಲಬೆರಕೆ ಮಾಡುತ್ತಾರೆ ಅನ್ನುವ ಸ್ಪೋಟಕ ಅಂಶ ಬಯಲಾಗಿದೆ. ರಾಜ್ಯದ ಖಾಸಗಿ ಮಾಧ್ಯಮವೊಂದು ಇತ್ತೀಚೆಗೆ ಟೀ ಮಾಫಿಯಾದ ಸಮಗ್ರ ವಿವರಣೆಯನ್ನು ಬಯಲಿಗೆ ತಂದಿತ್ತು. ಟೀ ಪುಡಿಗೆ ಕೃತಕ ಬಣ್ಣ ಬಳಸಿ ದೊಡ್ಡ ಮಟ್ಟದಲ್ಲಿ ವಿತರಿಸುವ ಜಾಲ ಕರಾವಳಿಯಲ್ಲಿ ಸಕ್ರೀಯವಾಗಿದೆ. ಟೀ ಪುಡಿಯ ಆಕರ್ಷಕ ಬಣ್ಣಕ್ಕೆ ಮೈ […]

Continue Reading

ಜಮೀನಿನ ಮೂಲ ದಾಖಲೆಗಾಗಿ ಹದಿನೈದು ವರ್ಷಗಳಿಂದ ಹೋರಾಟ ನಡೆಸುತ್ತಿರುವ ವಿಟ್ಲದ ಮಾಂಕು ಕೊರಗ..

ಬಂಟ್ವಾಳ ತಾಲೂಕು ಕಛೇರಿಯ ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯಬೇಕೇ.? ಅಗಸ್ಟ್ 15ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಜಮೀನಿನ ದಾಖಲೆಗಳ ಯಥಾಪ್ರತಿ ನೀಡುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಹೌದು.. ಕಂದಾಯ ಇಲಾಖೆ ಎಂಬುದು ಅದ್ಯಾವ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂಬುದಕ್ಕೆ ವಿಟ್ಲದ ಮಾಂಕು ಕೊರಗ ಎಂಬವರ ಹದಿನೈದು ವರ್ಷಗಳ ಹೋರಾಟವೇ ಸಾಕ್ಷಿಯಾಗಿದೆ. ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಲಪದವು ನಿವಾಸಿ ಮಾಂಕು ಕೊರಗ ಹಾಗೂ ಪತ್ನಿ ಹೆಸರಿಗೆ 2010ರಲ್ಲಿ ಅಂದಿನ ವಿಟ್ಲ ಕ್ಷೇತ್ರದ ಶಾಸಕ ಪದ್ಮನಾಭ ಕೊಟ್ಟಾರಿಯವರ ಶಿಫಾರಸ್ಸಿನಿಂದಾಗಿ […]

Continue Reading

ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ, ಹಕ್ಕು ಪ್ರಾಪ್ತಿಗೆ ಹೋರಾಟ ಅನಿವಾರ್ಯ: ಬಿ.ಎಂ ಭಟ್

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಸಮಗ್ರ ಅಭಿವೃದ್ಧಿ, ಪ್ರಭುತ್ವದ ಧಾಳಿ, ದಬ್ಬಾಳಿಕೆ ವಿರೋಧಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶವು ಇಂದು ನಗರದ ನಾಸಿಕ್ ಬಂಗೇರ ಸಭಾಭವನದಲ್ಲಿ ಜರಗಿತು. ಸುಮಾರು 250ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷರೂ, ವಕೀಲರೂ ಆದ ಬಿ.ಎಂ ಭಟ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ದೇಶದಲ್ಲಿ ಐದು ಕೋಟಿಗೂ ಹೆಚ್ಚು ಬೀದಿ […]

Continue Reading

ವರದಿ ಫಲಶ್ರುತಿ: ಕೊನೆಗೂ ಎಚ್ಚೆತ್ತ ಮಲ್ಲೂರು ಗ್ರಾಮ ಪಂಚಾಯತ್

ರಾಶಿ ರಾಶಿ ಕಸಕ್ಕೆ ಮುಕ್ತಿ; ಶಾಶ್ವತ ಪರಿಹಾರಕ್ಕೆ ಪಂಚಾಯತ್ ಗಮನ ಹರಿಸಲಿ ನಿನ್ನೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ಮಲ್ಲೂರು ಗ್ರಾಮ ಪಂಚಾಯತ್ ನ ಬೇಜವಾಬ್ದಾರಿ, ನಿರ್ಲಕ್ಷ್ಯತನದ ಬಗ್ಗೆ ಸಮಗ್ರ ವರದಿ ಮಾಡಿತ್ತು. ಮಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬದ್ರಿಯಾನಗರ ಚರ್ಚ್ ಬಳಿ ರಾಶಿ ರಾಶಿ ಕಸ ವಿಲೇವಾರಿ ಮಾಡದೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಬಗ್ಗೆ, ಜನವಸತಿ ಪ್ರದೇಶದಲ್ಲಿ ರಾಶಿ ರಾಶಿ ಕಸ ಇದ್ದರೂ ವಿಲೇವಾರಿ ಮಾಡದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸಮಗ್ರ ವರದಿ ಪ್ರಕಟಿಸಿತ್ತು. ಇದೀಗ […]

Continue Reading

ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಮೂಲದ ಮಂಗಳೂರಿನ ತಲಪಾಡಿ ನಿವಾಸಿ ಅಕ್ಬರ್ ಸೊಹೈಬ್ (24) ಬಂಧಿತ ಆರೋಪಿಯಾಗಿದ್ದಾನೆ. ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದ ಪೊಲೀಸ್ ತಂಡ ಅಗಸ್ಟ್ 4 ರಂದು ಹಾಸನದ ಬಿಟ್ಟಗೌಡನಹಳ್ಳಿ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:98/2020, ಎಸ್.ಸಿ ಸಂಖ್ಯೆ:5025/2021 ಕಲಂ 341,392,397,511,120-B ಐ.ಪಿ.ಸಿ ಹಾಗೂ ಅ.ಕ್ರ:109/2020, ಸಿ.ಸಿ ಸಂಖ್ಯೆ:276/2022 ಕಲಂ: […]

Continue Reading

ಜನವಸತಿ ಪ್ರದೇಶದಲ್ಲೇ ರಾಶಿ ರಾಶಿ ಕಸ. ಮಲ್ಲೂರು ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಹೈರಾಣು.!

ಪಕ್ಕದಲ್ಲೇ ಆರೋಗ್ಯ ಕೇಂದ್ರ ಇದ್ದರೂ ಗಡದ್ದಾಗಿ ನಿದ್ರೆಗೆ ಜಾರಿದೆ.. ಸಾಂಕ್ರಾಮಿಕ ರೋಗ ಹರಡಿದರೆ ಯಾರು ಹೊಣೆ.? ಆಟಕ್ಕುಂಟು ಲೆಕ್ಕಕ್ಕಿಲ್ಲ ಪಂ. ಅಧ್ಯಕ್ಷೆ.! ಇದು ಮಲ್ಲೂರು ಗ್ರಾಮ ಪಂಚಾಯತ್ ಕಥೆಯೋ.. ಕರ್ಮಕಥೆಯೋ ಒಂದೂ ತಿಳಿಯುತ್ತಿಲ್ಲ. ಯಾರ ಶಾಪವೋ ಗೊತ್ತಿಲ್ಲ. ಉಳಾಯಿಬೆಟ್ಟು -ಮಲ್ಲೂರು ಜಂಟಿಯಾಗಿ ಇದ್ದಾಗ ಅಭಿವೃದ್ಧಿಯ ದಾಪುಗಾಲಿಗೆ ತೆರೆದಿದ್ದ ಗ್ರಾಮ ಪಂಚಾಯತ್, ಮಲ್ಲೂರಿಗೆ ಪ್ರತ್ಯೇಕ ಗ್ರಾಮ ಪಂಚಾಯತ್ ಆದ ನಂತರವಂತೂ ಅಭಿವೃದ್ಧಿಗೆ ಮಂಕು ಕವಿದಿದೆ. ಜನಪ್ರತಿನಿಧಿಗಳೆನಿಸಿಕೊಂಡವರ ನಿರ್ಲಕ್ಷ್ಯದ ಪರಮಾವಧಿ ಅಭಿವೃದ್ಧಿಗೆ ಗ್ರಹಣ ಬಡಿದಿದೆ. ಜನಸಾಮಾನ್ಯರು ಹೈರಣಾಗಿದ್ದಾರೆ. ಜನಸಾಮಾನ್ಯರ ಸಮಸ್ಯೆಗೆ […]

Continue Reading